Translate in your Language

Monday, November 28, 2011

ನಾನು ಕಂಡಂತೆ ಕಂಬಾರ !

ಚಂದ್ರಶೇಖರ  ಕಂಬಾರ
ನನ್ನ ತಕ್ಷಣದ  ಪ್ರತಿಕ್ರಿಯೆಯಾಗಿ ನಾನು ಹೇಳಿದ್ದು : ಕಂಬಾರ ಕನ್ನಡದ ಒಬ್ಬ ನೈಜ ,ಸಹಜ  ಬರಹಗಾರ .ಕನ್ನಡ  ನುಡಿಯ ಎಲ್ಲ  ಸೂಕ್ಷ್ಮಲಯಗಳನ್ನು ಹಿಡಿದು ಕಾವ್ಯ  ಬರೆಯಬಲ್ಲ  ಒಬ್ ಪ್ರತಿಭಾನ್ವಿತ .ಕಾವ್ಯದಲ್ಲಿ ಸಿಕ್ಕ  ಯಶಸ್ಸು  ಅವರಿಗೆ  ನಾಟಕದಲ್ಲಿ ಸಿಕ್ಕಿಲ್ಲ  ಎಂದು  ನನ್ನ  ಅನಿಸಿಕೆ  ಈ ಪ್ರಶಸ್ತಿಗೆ ಎಲ್ಲ ಬಗೆಯಿಂದಲೂ ಅವರು ಅರ್ಹರು ."
 ಮುಂಭಾರ, ಹಿಂಭಾರ  ಅಲ್ಲ -ಇವನು ಕಂಬಾರ


ನಾನು ಕಂಡಂತೆ  ನನಗೆ ಕಂಡಷ್ಟು -ಚಂದ್ರಶೇಖರ ಪಾಟೀಲ
ಕನ್ನಡಕ್ಕೆ ಎಂಟನೆಯ  ಜ್ಞಾನಪೀಠ ಪ್ರಶಸ್ತಿ ಗೆಳೆಯ ಚಂದ್ರಶೇಖರ  ಕಂಬಾರರಿಗೆ  ಲಭಿಸಿದ  ಸುದ್ಧಿ ನನಗೆ  ತಿಳಿದದ್ದು  ಪತ್ರಕರ್ತ ಮಿತ್ರರಿಂದ.  "ಇದಕ್ಕೆ  ನಿಮ್ಮ ತಕ್ಷಣದ ಪ್ರತಿಕ್ರಿಯೆ  ಏನು?"- ಅಂತ ಅವುರ ಕೇಳಿದಾಗ  ನನಗೆ  ತಕ್ಷಣದ  ಪ್ರತಿಕ್ರಿಯೆ  ಏನು?"-ಅಂತ  ಅವರು ಕೇಳಿದಾಗ  ನನಗೆ  ತಕ್ಷಣ ನೆನಪಾದದ್ದು  :ಕೆಲವು  ವರ್ಷಗಳಹಿಂದೆ ಇದೇ ಪ್ರಶಸ್ತಿ ಯು.ಆರ್.ಅನಂತಮೂರ್ತಿಯವರಿಗೆ  ಬಂದದ್ದು  ಟಿ.ವಿ. ಮೊಲಕ "ಬ್ರೇಕಿಂಗ್ ನ್ಯೂಸ್ "ಆಗಿ  ನನಗೆ ಅಪ್ಪಳಿಸಿದ  ಆ ಸಂಜೆ