Translate in your Language

Tuesday, December 6, 2016

ಟಿ ಎನ್ ಸೀತಾರಾಂ ಅವರಿಗೆ 69ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು !

ಟಿ ಎನ್ ಸೀತಾರಾಂ (ತಳಗವಾರ ನಾರಾಯಣರಾವ್  ಸೀತಾರಾಂ) (Born on 6th December 1948) ಇವರ ಟಿ ಎನ್ ಸೀತಾರಾಂ ಇವರ ಹುಟ್ಟೂರು ದೊಡ್ಡಬಳ್ಳಾಪುರ ತಾಲ್ಲೂಕಿನ ತಳಗವಾರ. ಸಮಾಜವಾದಿ ಸಿದ್ದಾಂತದಲ್ಲಿ ನಂಬಿಕೆ ಇಟ್ಟುಕೊಂಡು ಅದರಂತೆ ನೆಡೆದುಕೊಳ್ಳುವ ಕೆಲವೇ ವ್ಯಕ್ತಿಗಳಲ್ಲೊಬ್ಬರು. ಇವರು ಕನ್ನಡದ ಜನಪ್ರಿಯ ನಿರ್ದೇಶಕರಲ್ಲೊಬ್ಬರು. ಇವರ ನಿರ್ದೇಶನದ ಕಿರುತೆರೆ ಧಾರಾವಾಹಿಗಳಾದ ಮಾಯಾಮೃಗ, ಮನ್ವಂತರ, ಮುಕ್ತ ಕನ್ನಡಿಗರಲ್ಲಿ ಬಹಳ ಜನಪ್ರಿಯವಾಗಿದೆ. ಇವರು ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಕಲಾವಿದರು. ಇವರ ಗರಡಿಯಲ್ಲಿ ಪಳಗಿದ ಹಲವಾರು ಕಿರುತೆರೆ ಕಲಾವಿದರು ಚಲನಚಿತ್ರಗಳಲ್ಲಿ ಈಗಲೂ ಮಿಂಚುತಿದ್ದಾರೆ


ಇವರ ನಿರ್ದೇಶನದ ಮೊದಲ ಕನ್ನಡ ಚಲನಚಿತ್ರ: ಮತದಾನ
ಚಲನಚಿತ್ರಗಳು

ಕ್ರೌರ್ಯ (ಕಥೆ, ಚಿತ್ರಕಥೆ)
ಆಸ್ಫೋಟ(ಕಥೆ, ಅಭಿನಯ)
ಧರಣಿಮಂಡಲ ಮಧ್ಯದೊಳಗೆ (ಅಭಿನಯ)
ಮತದಾನ (2001) (ನಿರ್ದೇಶನ)
ಮೀರಾ ಮಾಧವ ರಾಘವ (2007) (ನಿರ್ದೇಶನ)
ವಾಸ್ತು ಪ್ರಕಾರ (ಅಭಿನಯ)
ಕಾಫೀ ತೋಟ (2017) (ನಿರ್ದೇಶನ+ನಿರ್ಮಾಣ)


ಕಿರುತೆರೆ ಧಾರಾವಾಹಿಗಳು
ಮಾಯಾಮೃಗ
ಮನ್ವಂತರ
ಮುಕ್ತ
ಮಳೆಬಿಲ್ಲು
ಕಾಲೇಜು ರಂಗ
ಮುಖಾಮುಖಿ
ಮುಕ್ತ ಮುಕ್ತ
ಮಹಾಪರ್ವ
ನಾಟಕಗಳು

Tuesday, November 22, 2016

ಡಾ. ಬಾಲಮುರಳಿಕೃಷ್ಣ ಇನ್ನಿಲ್ಲ !!


ಕರ್ನಾಟಕ ಶಾಸ್ತ್ರೀಯ ಸಂಗೀತದ ಅದ್ವಿತೀಯ ಗಾಯಕ  ಡಾ. ಎಮ್.ಬಾಲಮುರಳಿಕೃಷ್ಣ ಅವರು ಈ ಸಂಜೆ ವಿಧಿವಶರಾದರು. ಅನಾರೋಗ್ಯದಿಂದ ಬಳಲುತಿದ್ದ ಅವರು ಚನ್ನೈನ ಆಸ್ಪತ್ರೆಯೊಂದರಲ್ಲಿ ತಮ್ಮ ಕೊನೆಯುಸಿರೆಳೆದರು


6-7-1930                                                  22-11-2016
ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ, ಕರ್ನಾಟಕ ಶೈಲಿಯ ಸಂಗೀತಗಾರರಲ್ಲಿ ಒಬ್ಬ ಅದ್ವಿತೀಯರು. ವಾಗ್ಗೇಯಕಾರರಾಗಿಯೂ ಅವರು ಹಲವಾರು ಕೃತಿ ರಚನೆಮಾಡಿದ್ದಾರೆ. ತೆಲುಗು, ತಮಿಳು, ಕನ್ನಡವಲ್ಲದೆ,ಹಲವಾರು ಭಾಷೆಗಳಲ್ಲಿ ಅವರು ಸಂಗೀತ ಕಚೇರಿಗಳನ್ನು ಕೊಟ್ಟಿದ್ದಾರೆ. ಅವರ ಕೊಡುಗೆ 4೦೦ ಕ್ಕೂ ಹೆಚ್ಚು. ಒಟ್ಟು ಇದುವರೆವಿಗೆ, ನಡೆಸಿದ ಸಂಗೀತ ಕಛೇರಿ ಗಳು-18,೦೦೦. ೨೫೦ ಕ್ಕಿಂತಲೂ ಹೆಚ್ಚು, 'ಮ್ಯೂಸಿಕ್ ಕ್ಯಾಸೆಟ್,' ಗಳನ್ನು ಬಿಡುಗಡೆಮಾಡಿದ್ದಾರೆ.

Sunday, September 11, 2016

ಟಿ ಎನ್ ಸೀತಾರಾಮ್ ಮೊಬೈಲ್ ಕಳ್ಕೊಂಡ ಅವಾಂತರ !

ಮನ್ವ೦ತರ ಧಾರಾವಾಹಿ ಮಾಡುತ್ತಿದ್ದಾಗ ನಡೆದ ಘಟನೆ….ನಾನು ೧೦ ಸಾವಿರ ರೂಪಾಯಿನ ಮೊಬೈಲ್ ಒಮ್ಮೆ ಕಳೆದು ಕೊ೦ಡೆ … ಕಳ್ಳತನವಾಗಿದೆ ಎ೦ದು ಪೋಲೀಸ್ ಕ೦ಪ್ಲೆ೦ಟ್ ಕೊಟ್ಟಿದ್ದೆ…

ಸುಮಾರು 15 ವರ್ಷದ ಹಿ೦ದೆ..ಆಗ ಈ ಪತ್ತೆ ಮಾಡುವ ನ೦ಬರ್ ಎಲ್ಲಾ ಇರಲಿಲ್ಲ…3 ದಿನವಾದರೂ ಪತ್ತೆ ಆಗದಿದ್ದಾಗ ಎಸಿಪಿ ಕಡೆಯಿ೦ದ ಒತ್ತಡ ಹಾಕಿಸಿದೆ…
ಎರಡು ದಿನದ ನ೦ತರ ಇಬ್ಬರು ಪೋಲಿಸ್ ನವರು ಮೊಬೈಲ್ ತ೦ದರು…ಅದು ನನ್ನ ಮೊಬೈಲ್ ಅಲ್ಲ…ಯಾವುದೊ ರಿಪೇರಿಗೆ ಬ೦ದಿದ್ದ ಸುಮಾರು ಒ೦ದು 500 ರೂಪಾಯಿಯ ಬೇರೆ ಮೊಬೈಲ್…

’ ಇದು ನನ್ನದಲ್ಲ…ಬೇಡ….” ಎ೦ದೆ..

“ಇಟ್ಕೊಳ್ಳಿ ಸಾರ್….ಹೈಕ್ಲಾಸ್ ಆಗಿದೆ…ಬೆಳಿಗ್ಗೆ ಯಿ೦ದ ಇಬ್ಬರೂ ಸಿಮ್ ಹಾಕ್ಕೊ೦ಡು ಮಾತಾಡಿದ್ದೀವಿ..”

Sunday, September 4, 2016

ಅನಂತನಾಗ್ ಅವರಿಗೆ 69ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು


ಇತ್ತೀಚಿನ "ಗೋಧಿ ಬಣ್ಣ-ಸಾಧಾರಣ ಮೈಕಟ್ಟು" ಚಿತ್ರ ದಲ್ಲಿನ ಅನಂತ್-ನಾಗ್ ಅವರ ನಟನೆ ದೇಶದಾದ್ಯಂತ ಹೆಸರು ಮಾಡಿತು, ಅವರು ನಟಿಸಿದ ಈ ಚಿತ್ರ ಹಿಂದಿಯಲ್ಲಿ ದಿ ಗ್ರೇಟ್ ಅಮಿತಾಬ್ ಬಚ್ಚನ್ ಅವರು ನಟಿಸಲು ಮುಂದಾಗಿರುವುದು ವೀಶೇಷ.
ಅನಂತನಾಗ್ ಅನಂತಸಾಧ್ಯತೆಗಳ ಮೇರು ಕಲಾವಿದ.  ಅನಂತನಾಗ್ ಅವರು ಜನಿಸಿದ್ದು ಸೆಪ್ಟೆಂಬರ್ 4, 1948ರಲ್ಲಿ.  ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ.  ಪ್ರಾರಂಭಿಕ ಓದು ದಕ್ಷಿಣ ಕನ್ನಡದ  ಆನಂದ ಆಶ್ರಮದಲ್ಲಿ.  ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು.  ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್,  ಮರಾಠಿ ರಂಗಭೂಮಿಯನ್ನು ಎಂಟು ವರ್ಷಗಳ ಕಾಲ ಬೆಳಗಿದರು.

Saturday, September 3, 2016

ಜಿ. ವಿ. ಅಯ್ಯರ್ ಅವರ 100ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ


ಕನ್ನಡದ ಚಿತ್ರರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ  ಜಿ. ವಿ. ಅಯ್ಯರ್ ಅವರು ಜನಿಸಿದ್ದು ಅಂದಿನ ಮೈಸೂರು ರಾಜ್ಯದ ನಂಜನಗೂಡಿನನ್ನಲ್ಲಿ 3ನೇ ಸೆಪ್ಟೆಂಬರ್ 1917 ರಂದು.
ಇನ್ನೂ ಚೆನ್ನಾಗಿ ನೆನಪಿದೆ.  ಅದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣಾ ಸಮಾರಂಭ.  ಆ ವರ್ಷ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿದ್ದವರು ಅಖಿಲ ಭಾರತ ಮಟ್ಟದಲ್ಲಿ ಪ್ರಖ್ಯಾತರಾದ  ಕೆ. ಬಾಲಚಂದರ್.  ಕೆ. ಬಾಲಚಂದರ್ ಅವರು ಆ ವರ್ಷದ ಶ್ರೇಷ್ಠ ಚಲನಚಿತ್ರವಾದ ‘ಆದಿ ಶಂಕರಚಾರ್ಯ’ ಚಿತ್ರದ ಹೆಸರು ಹೇಳುತ್ತಾ, ಈ ಚಿತ್ರಕ್ಕೆ  ‘ಸ್ವರ್ಣಕಮಲ’ಕ್ಕಿಂತ ದೊಡ್ಡ ಪ್ರಶಸ್ತಿ ನೀಡಲು ಸಾಧ್ಯವಿದ್ದಿದ್ದರೆ ಚೆನ್ನಿತ್ತು ಎನಿಸುತ್ತಿದೆ ಎಂದರು.  ಆ ಚಿತ್ರದ ನಿರ್ದೇಶಕರು ನಮ್ಮ  ಜಿ. ವಿ. ಅಯ್ಯರ್.   ಜಿ. ವಿ. ಅಯ್ಯರ್ ಅವರು ಇಡೀ ಚಲನಚಿತ್ರರಂಗದಲ್ಲಿ ಮಾಡಿದ ಸಾಧನೆ ಅಂತಿಂತದ್ದಲ್ಲ.  ಇಡೀ ಭಾರತದ ಶ್ರೇಷ್ಠತೆಯನ್ನೇ ಚಲನಚಿತ್ರರಂಗದಲ್ಲಿ ಮೂಡಿಸಲು ಪ್ರಯತ್ನಿಸಿದ ಅದ್ವಿತೀಯರವರು.  ಎಲ್ಲ ರೀತಿಯಲ್ಲೂ ಕನ್ನಡ ಚಿತ್ರರಂಗದ ಭೀಷ್ಮರೆನಿಸಿದ ಆಚಾರ್ಯರವರು.

Friday, September 2, 2016

ಕಿಚ್ಚ ಸುದೀಪ ಅವರಿಗೆ 43ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ನಮ್ಮ ಬಡಾ ಹೈಟಿನ ಬಚ್ಚನ್, ಸಿಸಿಎಲ್ ನಲ್ಲಿ ರನ್ ಸುರಿಮಳೆಗೈಯುವ ರನ್ನ, ಕನ್ನಡಿಗರ ಕೋಟಿಗೊಬ್ಬ, ಕಷ್ಟದಲ್ಲಿರುವವರಿಗೆ ವರದನಾಯಕ, ಕನ್ನಡಿಗರೆಲ್ಲರಿಗೂ ಆಟೋಗ್ರಾಫ್ ಕಾಣಿಕೆ ನೀಡಿದ ಅಭಿನಯ ಚಕ್ರವರ್ತಿ 
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದಂದು ನಾವೆಲ್ಲರೂ ತುಂಬು ಹೃದಯದ ಅಭಿಮಾನದಿಂದ ಶುಭಹಾರೈಸೋಣ

ಇಂದು ಎಲ್ಲೆಡೆ ಇರುವ ಸುದೀಪ್ ಅಭಿಮಾನಿಗಳು ವಿಶೇಷವಾಗಿ ಹುಟ್ಟುಹಬ್ಬ ಆಚರಿಸಲಿದ್ದಾರೆ. ಸುಮಾರು 20 ವರ್ಷಗಳ ಹಿಂದೆ ಕೇವಲ ಒಬ್ಬ ನಟರಾಗಲೂ ಭಾರಿ ಕಷ್ಟಪಟ್ಟಿದ್ದ ಸುದೀಪ್ ಇಂದು ದೇಶದಾದ್ಯಂತ ಪ್ರಸಿದ್ಧರಾಗಿರುವ ಹೊಸ ಸೌತ್ ಇಂಡಿಯಾ ಸ್ಟಾರ್. ಅಂದು ಕೆಲವೇ ಗೆಳೆಯರು ಹಾಗೂ ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಸುದೀಪ್, ಇಂದು ಬೆಳೆದ ಪರಿ ಅಚ್ಚರಿ ಹುಟ್ಟಿಸುವಂತಾದ್ದು. ಇದೀಗ ಅವರ ಹುಟ್ಟುಹಬ್ಬವನ್ನು ಇಡೀ ಭಾರತವೇ ಸಂತೋಷದಿಂದ ಆಚರಿಸುವಂತಾಗಿದೆ. ಅವರ ಕೋಟಿಗೊಬ್ಬ-೨ ನಾಡಿನಾದ್ಯಂತ ಹೌಸ್-ಫುಲ್ ಪ್ರದರ್ಶನವಾಗುತ್ತಿದ್ದು ನಮ್ಮ ಕಿಚ್ಚ ಸ್ಟಾರ್ ಹುಟ್ಟುಹಬ್ಬದಂದು ಅಭಿಮಾನಿಗಳ ದಂಡೇ ಅವರ ಬಳಿ ಧಾವಿಸುತ್ತಿದೆ.

Thursday, August 25, 2016

ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ ಶ್ಲೋಕ

ಮಧುರ ಗೀತೆಗಳು: ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ ಶ್ಲೋಕ: ಕೃಷ್ನಯ ವಾಸುದೇವಾಯ ದೇವಕಿ ನಂದ  ನಾಯಚ ನಂದಗೋಪ  ಕುಮಾರಾಯ ಶ್ರೀ  ಗೋವಿಂದಯ ನಮೋ  ನಮಃ ಕೃಷ್ಣಯ ವಾಸುದೇವಾಯ  ಹರಯೇ  ಪರಮಾತ್ಮನೇ ಪ್ರಣತ ಕ್ಲೇಶ  ನಾಶಾಯ  ಗೋವಿಂದಾಯ...

ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ


ರಾಧಾ-ಕೃಷ್ಣರ ಪ್ರೇಮ ಕಥೆ


ಜಗದೇಕ ಒಡೆಯ ಶ್ರೀಕೃಷ್ಣ ಪರಮಾತ್ಮನ ಹುಟ್ಟುಹಬ್ಬವನ್ನು (Sri Krishna Born On 21-07-3227 BC, Died on 18-02-3102 BCಆಚರಿಸಲು, ಈ ಹಬ್ಬವನ್ನು ದೇಶದೆಲ್ಲೆಡೆ ತುಂಬಾ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯಂದು ಹಿಂದೂಗಳು ಕೃಷ್ಣ ಪರಮಾತ್ಮ ಭೂಮಿಯಲ್ಲಿ ಜನಿಸಿದ ಸಂಭ್ರಮವನ್ನು ಆಚರಿಸುತ್ತಾರೆ.  
ಜನ್ಮಾಷ್ಟಮಿಯ (25th August 2016) ಅರ್ಥವು ತುಂಬಾ ಆಳವಾಗಿ ಬೇರೂರಿದೆ ಮತ್ತು ಪ್ರತಿಯೊಬ್ಬ ಮಾನವನ ಜೀವನದಲ್ಲಿ ಪಾಪಗಳೆಂಬ ಕತ್ತಲೆಯು ಆವರಿಸಿಕೊಂಡಿರುತ್ತದೆ ಎನ್ನುವ ಗಾಢಾರ್ಥವಿದೆ. ನಾವು ಹಲವಾರು ರೀತಿಯ ಕೋಪ, ದುರಾಸೆ, ಭಾಂದವ್ಯ ಮತ್ತು ನೋವಿನಿಂದ ಆವರಿಸಿಕೊಂಡಿರುತ್ತೇವೆ. ಆದರೆ ದೇವರು ಜನ್ಮ ತಾಳಿದಾಗ ಕತ್ತಲೆಯು ದೂರವಾಗುತ್ತದೆ ಮತ್ತು ಪ್ರಾಪಂಚಿಕ ಸುಖಗಳ ಎಲ್ಲಾ ಸರಪಳಿಗಳಿಂದ ಬಿಡುಗಡೆಯಾಗುತ್ತೇವೆ.  
 ಜಗನ್ನಾಟಕ ಸೂತ್ರಧಾರಿ ಕೃಷ್ಣನಿಗೆ ಹದಿನಾರು ಸಾವಿರ ಪತ್ನಿಯರು ಇದ್ದರೇ?

Wednesday, August 24, 2016

ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ಧಿಕ ಶುಭಾಶಯಗಳು

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭದಿನದಂದು ಎಲ್ಲರಿಗೂ ಹಾರ್ಧಿಕ ಶುಭಾಶಯಗಳು
ಜನ್ಮಾಷ್ಟಮಿ ವಿಶೇಷ: ಕಷ್ಟ ಕಾರ್ಪಣ್ಯಕ್ಕೆ ತ್ವರಿತ ಪರಿಹಾರ

ಕೃಷ್ಣ ಜನ್ಮಾಷ್ಟಮಿಯು ಹಿಂದೂಗಳಿಗೆ ಪ್ರಾಮುಖ್ಯ ಹಬ್ಬ. ಈ ಹಬ್ಬವನ್ನು ದೇಶದೆಲ್ಲೆಡೆ ತುಂಬಾ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯಂದು ಹಿಂದೂಗಳು ಕೃಷ್ಣ ಪರಮಾತ್ಮ ಭೂಮಿಯಲ್ಲಿ ಜನಿಸಿದ (Sri Krishna Born On 21-07-3227 BC, Died on 18-02-3102 BC ಸಂಭ್ರಮವನ್ನು ಆಚರಿಸುತ್ತಾರೆ. ಹಿಂದೂ ಪಂಚಾಂಗದ ಭಾದ್ರಪದ ತಿಂಗಳ ಕೃಷ್ಣ ಪಕ್ಷದಂದು ಜನ್ಮಾಷ್ಟಮಿ ಆಚರಿಸಲಾಗುತ್ತದೆ.

ಜನ್ಮಾಷ್ಟಮಿಯ ಅರ್ಥವು ತುಂಬಾ ಆಳವಾಗಿ ಬೇರೂರಿದೆ ಮತ್ತು ಪ್ರತಿಯೊಬ್ಬ ಮಾನವನ ಜೀವನದಲ್ಲಿ ಪಾಪಗಳೆಂಬ ಕತ್ತಲೆಯು ಆವರಿಸಿಕೊಂಡಿರುತ್ತದೆ ಎನ್ನುವ ಗಾಢಾರ್ಥವಿದೆ. ನಾವು ಹಲವಾರು ರೀತಿಯ ಕೋಪ, ದುರಾಸೆ, ಭಾಂದವ್ಯ ಮತ್ತು ನೋವಿನಿಂದ ಆವರಿಸಿಕೊಂಡಿರುತ್ತೇವೆ. ಆದರೆ ದೇವರು ಜನ್ಮ ತಾಳಿದಾಗ ಕತ್ತಲೆಯು ದೂರವಾಗುತ್ತದೆ ಮತ್ತು ಪ್ರಾಪಂಚಿಕ ಸುಖಗಳ ಎಲ್ಲಾ ಸರಪಳಿಗಳಿಂದ ಬಿಡುಗಡೆಯಾಗುತ್ತೇವೆ

Monday, August 22, 2016

ಶ್ರೀ ಕೃಷ್ಣಾವತಾರದ ಸಮಾಪ್ತಿ; ನೀವು ಕೇಳರಿಯದ ಕಥೆಗಳು

ಮಹಾಭಾರತದಲ್ಲಿ, ಪಾ೦ಡವರಿಗೆ ಬೆನ್ನೆಲುಬಿನ೦ತಿದ್ದ ಭಗವಾನ್ ಶ್ರೀ ಕೃಷ್ಣನು ಭಾರತದ ಮಹಾಸ೦ಗ್ರಾಮದ ಬಳಿಕ ಸಾವನ್ನಪ್ಪುತ್ತಾನೆ. ಆತನ ಸಾವಿನ ಕುರಿತಾಗಿ ಅನೇಕ ವಾದವಿವಾದಗಳು ಪ್ರಚಲಿತದಲ್ಲಿವೆ. ಕೆಲವರು ಶ್ರೀ ಕೃಷ್ಣನು ತನ್ನ ನೂರಾ ಇಪ್ಪತ್ತೈದನೆಯ ವಯಸ್ಸಿನಲ್ಲಿ ಮರಣ ಹೊ೦ದಿದನು ಎ೦ದು ನ೦ಬಿದರೆ, ಮತ್ತಿತರರು ಶ್ರೀ ಕೃಷ್ಣನ ಜೀವನದ ಸ೦ಶೋಧನೆಯ ಆಧಾರದ ಮೇಲೆ ಆತನು ಮರಣವನ್ನು ಹೊ೦ದುವಾಗ ಆತನ ವಯಸ್ಸು ಎ೦ಬತ್ತೆ೦ಟಾಗಿತ್ತು ಎ೦ದು ನ೦ಬುತ್ತಾರೆ. ಶ್ರೀ ಕೃಷ್ಣನ ವಯಸ್ಸಿನ ವಿಚಾರವನ್ನು ಕುರಿತ ವಾಗ್ವಾದಗಳ ಹೊರತಾಗಿಯೂ ಕೂಡ, ಶ್ರೀ ಕೃಷ್ಣನ ಮರಣದ ಕುರಿತು ನಮ್ಮ ಸಮಾಜದಲ್ಲಿ ಹಲವಾರು ಊಹಾಪೋಹಗಳು ತೇಲಿ ಬರುತ್ತವೆ. ಆದಾಗ್ಯೂ, ಧಾರ್ಮಿಕ ಪುರಾಣಗಳ ಪ್ರಕಾರ, ಭಗವ೦ತನ ಮರಣದ ಕುರಿತು ಕೇವಲ ಒ೦ದೇ ಒ೦ದು ಕಥೆಯು ಉಲ್ಲೇಖಿಸಲ್ಪಟ್ಟಿದೆ.

ಶ್ರೀ ಕೃಷ್ಣಾವತಾರದ ಸಮಾಪ್ತಿ ಮಹರ್ಷಿಗಳಾದ ವಿಶ್ವಾಮಿತ್ರರು, ಕಣ್ವರು, ಹಾಗೂ ನಾರದರು ದ್ವಾರಕೆಗೆ ಭೇಟಿನೀಡಿದರು. ಆಗ ಅಲ್ಲಿನ ಕೆಲವು ಪು೦ಡ ಯುವಕರು ಓರ್ವ ಹುಡುಗನಿಗೆ ಸ್ತ್ರೀಯ ವೇಷವನ್ನು ತೊಡಿಸಿ, ಆತನನ್ನು ಮಹರ್ಷಿಗಳ ಬಳಿಗೆ ಕರೆದೊಯ್ದು "ಈಕೆಯೀಗ ಗರ್ಭಿಣಿಯು. ಈಕೆಯು ಹಡೆಯಬಹುದಾದ ಮಗುವು ಗ೦ಡೋ ಅಥವಾ ಹೆಣ್ಣೋ ?" ಎ೦ದು ಪ್ರಶ್ನಿಸುತ್ತಾರೆ.

Saturday, August 20, 2016

ಎಂ. ಪಿ. ಶಂಕರ್ ಅವರ 82ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ವನ್ನ್ಯ ಜೀವಿಗಳ ಮತ್ತು ಪರಿಸರದ  ಬಗ್ಗೆ  ಅಪ್ಪರ ಕಾಳಜಿ ಹೊಂದಿದ್ದ, ಅಗಾಧ ಮೈಕಟ್ಟಿನ ಅಜಾನುಬಾಹು ಎಂ. ಪಿ. ಶಂಕರ್ ಕನ್ನಡ ಚಿತ್ರರಂಗದ ಚಿರಸ್ಮರಣೀಯ ಕಲಾವಿದರಲ್ಲಿ ಒಬ್ಬರು.  ‘ನಾರದ ವಿಜಯ’ ಎಂಬ ಚಿತ್ರದಲ್ಲಿ ‘ಮಾಂಸಪರ್ವತ’ ಎಂದು ನಾರದ ಪಾತ್ರಧಾರಿಯಾದ ಅನಂತ್ ನಾಗ್ ಅವರಿಂದ ಕರೆಯಲ್ಪಟ್ಟ ಈ ಚಿತ್ರರಂಗದ ಅವಿಸ್ಮರಣೀಯ ಪಾತ್ರಧಾರಿ,  ಪ್ರತಿಭೆ ಮತ್ತು ಸಾಧನೆಗಳ ಪರ್ವತವೂ ಹೌದು. ಈ ಮೈಸೂರು ಪುಟ್ಟಲಿಂಗಪ್ಪ  ಶಂಕರ್ ಅವರು ಜನಿಸಿದ್ದು ಆಗಸ್ಟ್ 20, 1935ರಲ್ಲಿ. 
ಕುಸ್ತಿ ಪೈಲ್ವಾನರಂತಿದ್ದ ಎಂ. ಪಿ. ಶಂಕರ್ ಅವರು ನಿಜಕ್ಕೂ ಪೈಲ್ವಾನರಾಗಿ ಸಾಧನೆ ಮೆರೆದು ಮೈಸೂರು ದಸರಾ ಸ್ಪರ್ಧೆಗಳಲ್ಲಿ ಹಲವಾರು ಸ್ಪರ್ಧೆಗಳನ್ನು ಗೆದ್ದಿದ್ದವರು.  ‘ರತ್ನಮಂಜರಿ’ ಚಿತ್ರದಿಂದ ಪ್ರಾರಂಭಗೊಂಡ ಚಿತ್ರ ಜೀವನದಲ್ಲಿ ಎಂ. ಪಿ. ಶಂಕರ್ ಅವರು ಹೆಚ್ಚು ನಿರ್ವಹಿಸಿದ್ದು ಖಳನಾಯಕ ಪಾತ್ರಗಳನ್ನೇ.  ಎಂ. ಪಿ. ಶಂಕರ್ ಅವರ ಪ್ರತಿಭಾ ಸಾಮರ್ಥ್ಯವನ್ನೂ,  ಅವರಿಗೆ ಕುಸ್ತಿಯಲ್ಲಿದ್ದ ಹುರುಪುಗಳನ್ನೂ  ಅರಿತಿದ್ದ ಪುಟ್ಟಣ್ಣ ಕಣಗಾಲರು ಅವರಿಗೆ ತಮ್ಮ ಪ್ರಸಿದ್ಧ ಚಿತ್ರಗಳಲ್ಲಿ ಒಂದಾದ ‘ನಾಗರಹಾವು’ದಲ್ಲಿ  ಕುಸ್ತಿ ಗರಡಿಯ ಮುಖ್ಯಸ್ಥರ ಪಾತ್ರವನ್ನು ಕೊಟ್ಟಿದ್ದರು.  “ನಾಷ್ಟಾ ಮಾಡಿರುವ ಮುಖ ನೋಡು ಅಂತ ರಾಮಾಚಾರಿ ಪಾತ್ರಧಾರಿ ವಿಷ್ಣುವರ್ಧನ್ ಅವರಿಗೆ ಒಂದು ರಾಶಿ ದೋಸೆ ಮತ್ತು ಅದರ ಮೇಲೆ ದೊಡ್ಡ ಬೆಣ್ಣೆಯ ಗುಡ್ಡೆಯನ್ನು ಇಟ್ಟು ಚೆನ್ನಾಗಿ ತಿನ್ನು, ಕುಸ್ತಿ ಮಾಡೋನು ಚೆನ್ನಾಗಿ ತಿನ್ಬೇಕು” ಎಂದು ನುಡಿದ ಚಿತ್ರದುರ್ಗದ ನಾಯಕನೇ ತಾನಾಗಿ ಮೂರ್ತಿವೆತ್ತ ಆ ಪಾತ್ರವನ್ನು ಜನ ಹೇಗೆ ತಾನೇ ಮರೆತಾರು. 

Friday, August 19, 2016

ದ್ವಾರಕೀಶ್ ಅವರ 75ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಕನ್ನಡ ಚಿತ್ರರಂಗದ ಮಹಾನ್ ಪ್ರತಿಭೆ ಹಾಸ್ಯ ನಟನೆಯ ಜೊತೆ ಜೊತೆಗೇ  ನಿರ್ಮಾಪಕ, ನಿರ್ದೇಶಕ ನಾಗಿ ಸೇವೆ ಸಲ್ಲಿಸುತ್ತಿರುವ - ಇಂದಿಗೂ ವಿಷ್ಣುವರ್ಧನ-ಚಾರುಲತ ಮುಂತಾದ ಕನ್ನಡ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸುತ್ತಿರುವ ಕರ್ನಾಟಕದ ಮಹಾನ್ ಕುಳ್ಳ -ದ್ವಾರಕೀಶ್
  ನಟನಾಗಿ ಆತ ನಕ್ಕು ನಲಿಸಿದ ಹೃದಯಗಳು ಅಸಂಖ್ಯವಾದದ್ದು.  ನಿರ್ಮಾಪಕನಾಗಿ ಆತ ಕಂಡ ಸಾಹಸ, ಸೋಲು, ಗೆಲುವುಗಳು ಒಂದು ಸಾಮಾನ್ಯ ಜೀವ  ಮಾಡುವಂತದ್ದಲ್ಲ.  ನಿರ್ದೇಶಕನಾಗಿ ಕೂಡಾ ಆತ ಅಲ್ಲಲ್ಲಿ ಸುಂದರ ಕೆಲಸ ಮಾಡಿದವರು.
ದ್ವಾರಕೀಶ್ ಹುಟ್ಟಿದ್ದು ಆಗಸ್ಟ್ 19, 1942ರಲ್ಲಿ.  ಹುಟ್ಟಿದ ಊರು ಹುಣಸೂರು.  ಮೈಸೂರಿನಲ್ಲಿ ಬನುಮಯ್ಯ, ಶಾರದಾ ವಿಲಾಸ್ ಶಾಲೆ, ಸಿಪಿಸಿ ಪಾಲಿಟೆಕ್ನಿಕ್ ಮುಂತಾದೆಡೆಗಳಲ್ಲಿ  ವಿದ್ಯಾಭ್ಯಾಸ ನಡೆಸಿದ ದ್ವಾರಕೀಶ್ ಅವರ ಮನದಲ್ಲಿ  ಯಾವಾಗಲೂ ಸಿನಿಮಾ ಕನಸು ತುಂಬಿ ತುಳುಕುತ್ತಿತ್ತು.  ಇವ ಸಿನಿಮಾಗೆ ಓಡಿ ಹೋಗದಿರಲಿ ಎಂದು ಅವರ ಅಣ್ಣ, ದ್ವಾರಕೀಶ್ ಓದುತ್ತಿದ್ದ ದಿನಗಳಲ್ಲೇ ಈಗಲೂ ಮೈಸೂರಿನ ಗಾಂಧೀ ಚೌಕದಲ್ಲಿ ಅಸ್ಥಿತ್ವದಲ್ಲಿರುವ ಭಾರತ್ ಆಟೋ ಸ್ಪೇರ್ಸ್ ಎಂಬ ಅಂಗಡಿ ಹಾಕಿಕೊಟ್ಟಿದ್ದರು.  ಆದರೆ ದ್ವಾರಕೀಶ್ ಅವರಿಗೆ ಸಿನಿಮ ಖಯಾಲಿ ಹೋಗಲಿಲ್ಲ.  ಅವರ ಸೋದರಮಾವ ಹುಣಸೂರು ಕೃಷ್ಣಮೂರ್ತಿ ಅವರಿಗೆ ದುಂಬಾಲು ಬಿದ್ದಿದ್ದರು.  ಹುಣಸೂರು ಕೃಷ್ಣಮೂರ್ತಿ ಮೊದಲು ಡಿಪ್ಲೋಮಾ ಓದು ಮುಗಿಸು ಆಮೇಲೆ ಸಿನಿಮಾ ಮಾತು ಎಂದರು.  ಮುಂದೆ ಅವರು ಸಿ.ವಿ. ಶಂಕರ್ ನಿರ್ದೇಶನದಲ್ಲಿ  ‘ವೀರಸಂಕಲ್ಪ’ದಲ್ಲಿ  ದ್ವಾರಕೀಶ್ ಅವರಿಗೆ ಮೊದಲ ಅವಕಾಶ ಒಲಿಯುವಂತೆ ಮಾಡಿದರು.

ದ್ವಾರಕೀಶ್ ಅವರ 75ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಕನ್ನಡ ಚಿತ್ರರಂಗದ ಮಹಾನ್ ಪ್ರತಿಭೆ ಹಾಸ್ಯ ನಟನೆಯ ಜೊತೆ ಜೊತೆಗೇ  ನಿರ್ಮಾಪಕ, ನಿರ್ದೇಶಕ ನಾಗಿ ಸೇವೆ ಸಲ್ಲಿಸುತ್ತಿರುವ - ಇಂದಿಗೂ ವಿಷ್ಣುವರ್ಧನ-ಚಾರುಲತ ಮುಂತಾದ ಕನ್ನಡ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸುತ್ತಿರುವ ಕರ್ನಾಟಕದ ಮಹಾನ್ ಕುಳ್ಳ -ದ್ವಾರಕೀಶ್
  ನಟನಾಗಿ ಆತ ನಕ್ಕು ನಲಿಸಿದ ಹೃದಯಗಳು ಅಸಂಖ್ಯವಾದದ್ದು.  ನಿರ್ಮಾಪಕನಾಗಿ ಆತ ಕಂಡ ಸಾಹಸ, ಸೋಲು, ಗೆಲುವುಗಳು ಒಂದು ಸಾಮಾನ್ಯ ಜೀವ  ಮಾಡುವಂತದ್ದಲ್ಲ.  ನಿರ್ದೇಶಕನಾಗಿ ಕೂಡಾ ಆತ ಅಲ್ಲಲ್ಲಿ ಸುಂದರ ಕೆಲಸ ಮಾಡಿದವರು.
ದ್ವಾರಕೀಶ್ ಹುಟ್ಟಿದ್ದು ಆಗಸ್ಟ್ 19, 1942ರಲ್ಲಿ.  ಹುಟ್ಟಿದ ಊರು ಹುಣಸೂರು.  ಮೈಸೂರಿನಲ್ಲಿ ಬನುಮಯ್ಯ, ಶಾರದಾ ವಿಲಾಸ್ ಶಾಲೆ, ಸಿಪಿಸಿ ಪಾಲಿಟೆಕ್ನಿಕ್ ಮುಂತಾದೆಡೆಗಳಲ್ಲಿ  ವಿದ್ಯಾಭ್ಯಾಸ ನಡೆಸಿದ ದ್ವಾರಕೀಶ್ ಅವರ ಮನದಲ್ಲಿ  ಯಾವಾಗಲೂ ಸಿನಿಮಾ ಕನಸು ತುಂಬಿ ತುಳುಕುತ್ತಿತ್ತು.  ಇವ ಸಿನಿಮಾಗೆ ಓಡಿ ಹೋಗದಿರಲಿ ಎಂದು ಅವರ ಅಣ್ಣ, ದ್ವಾರಕೀಶ್ ಓದುತ್ತಿದ್ದ ದಿನಗಳಲ್ಲೇ ಈಗಲೂ ಮೈಸೂರಿನ ಗಾಂಧೀ ಚೌಕದಲ್ಲಿ ಅಸ್ಥಿತ್ವದಲ್ಲಿರುವ ಭಾರತ್ ಆಟೋ ಸ್ಪೇರ್ಸ್ ಎಂಬ ಅಂಗಡಿ ಹಾಕಿಕೊಟ್ಟಿದ್ದರು.  ಆದರೆ ದ್ವಾರಕೀಶ್ ಅವರಿಗೆ ಸಿನಿಮ ಖಯಾಲಿ ಹೋಗಲಿಲ್ಲ.  ಅವರ ಸೋದರಮಾವ ಹುಣಸೂರು ಕೃಷ್ಣಮೂರ್ತಿ ಅವರಿಗೆ ದುಂಬಾಲು ಬಿದ್ದಿದ್ದರು.  ಹುಣಸೂರು ಕೃಷ್ಣಮೂರ್ತಿ ಮೊದಲು ಡಿಪ್ಲೋಮಾ ಓದು ಮುಗಿಸು ಆಮೇಲೆ ಸಿನಿಮಾ ಮಾತು ಎಂದರು.  ಮುಂದೆ ಅವರು ಸಿ.ವಿ. ಶಂಕರ್ ನಿರ್ದೇಶನದಲ್ಲಿ  ‘ವೀರಸಂಕಲ್ಪ’ದಲ್ಲಿ  ದ್ವಾರಕೀಶ್ ಅವರಿಗೆ ಮೊದಲ ಅವಕಾಶ ಒಲಿಯುವಂತೆ ಮಾಡಿದರು.

Sunday, August 14, 2016

ಲೋಕನಾಥ್ ಅವರಿಗೆ 90ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ನಮ್ಮ ಚಲನಚಿತ್ರರಂಗದ ಇತ್ತೀಚಿನ ನಾಯಕ ನಟಿಯರಲ್ಲೊಬ್ಬರಾದ ಸಿಂಧು ಲೋಕನಾಥ್ ಅವರ ತಂದೆ ಲೋಕನಾಥರು ಜನಿಸಿದ್ದು ಆಗಸ್ಟ್ 14, 1927 ರಂದು.
ಭುತಯ್ಯನ ಮಗ ಅಯ್ಯು ಚಿತ್ರದಲ್ಲಿ ಉಪ್ಪಿನಕಾಯಿ ಜಾಡಿಯನ್ನು ಕದ್ದು ಉಪ್ಪಿನಕಾಯಿ ಚಪ್ಪರಿಸಿ ತಿನ್ನುವ ಪಾತ್ರದಲ್ಲಿ ಮೊದಲ ಬಾರಿಗೆ ಕನ್ನಡಿಗರ ಮನೆಮಾತಾದರು ಲೋಕನಾಥ್. ಕನ್ನಡ ಚಿತ್ರರಂಗದ ಕುರಿತು ಚಿಂತಿಸುವಾಗ ನಮ್ಮ ಕಣ್ಮುಂದೆ ಆತ್ಮೀಯವಾಗಿ ಮೂಡುವ ವ್ಯಕ್ತಿಗಳಲ್ಲಿ ಲೋಕನಾಥ್ ಅವರು ಪ್ರಮುಖರು.  

ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಕಾಪಿ ಹೊಡೆದಾಗ ಆತನನ್ನು ಅವಮಾನಿಸಿದ್ದಕ್ಕಾಗಿ, ಆತನಿಂದ ಲೈಟು ಕಂಬಕ್ಕೆ ಕಟ್ಟಲ್ಪಟ್ಟ ಪ್ರಿನ್ಸಿಪಾಲ್ ಶ್ಯಾಮರಾಯರಾಗಿ, ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಚಪ್ಪಲಿ ಹೊಲೆಯುವ ಮಾಚನಾಗಿ; ಅದರಲ್ಲೂ ಬೂತಯ್ಯನ ಮನೆ ಉಪ್ಪಿನಕಾಯಿ ಜಾಡಿ ಕಾಲಿ ಮಾಡುವ ಅವರ ಅಭಿನಯ ಕನ್ನಡ ಚಲನಚಿತ್ರರಂಗ ಇರುವವರೆಗೂ ಅಜರಾಮರ.  ಮಿಂಚಿನ ಓಟ, ಕಾಕನ ಕೋಟೆ, ಕಾಡು ಬೆಳದಿಂಗಳು ಮುಂತಾದ ಕಲಾತ್ಮಕ  ಚಿತ್ರಗಳಲ್ಲಿನ ನಿರ್ವಹಣೆಗೆ, ಒಲವಿನ ಆಸರೆ, ಮನೆ ಮನೆ ಕಥೆ, ಬಂಗಾರದ ಪಂಜರ, ಹೌಸ್ ಫುಲ್ ಅಂತಹ ಅಸಂಖ್ಯಾತ ಪಾತ್ರಗಳಿಗಾಗಿ ಅವರ ಬಗೆಗಿನ ಪ್ರಶಂಸೆಗಳನ್ನು  ಪತ್ರಿಕೆಗಳಿಂದಲೂ ಜನಸಾಮಾನ್ಯರಿಂದಲೂ  ಕಾಣುತ್ತಲೇ ಇದ್ದೇವೆ. ಚಿತ್ರರಂಗವಲ್ಲದೆ ರಂಗಭೂಮಿಯ ಬಹಳಷ್ಟು ಉತ್ತಮ ಪ್ರಯೋಗಗಳಿಗೂ, ಕಿರುತೆರೆಯ ಉತ್ತಮ ಪಾತ್ರಗಳಿಗೂ  ಲೋಕನಾಥರು ಮೆರುಗು ತಂದಿದ್ದಾರೆ.

Friday, August 5, 2016

ವೆಂಕಟೇಶ್ ಪ್ರಸಾದ್ ಅವರಿಗೆ 48ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು


ನಮ್ಮ ನಾಡಿಗೆ ಹೆಸರು ತಂದ ಬೌಲಿಂಗ್ ನಿಪುಣ  ವೆಂಕಟೇಶ್ ಪ್ರಸಾದ್ ಅವರಿಗೆ ೪೮ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು
ಬಾಪು ಕೃಷ್ಣರಾವ್‌ ವೆಂಕಟೇಶ್ ಪ್ರಸಾದ್ (ಜನನ: ಆಗಸ್ಟ್ 5, 1969 ಬೆಂಗಳೂರು, ಕರ್ಣಾಟಕದಲ್ಲಿ) ಭಾರತ ಕ್ರಿಕೆಟ್ ತಂಡದ
ಮಾಜಿ ಆಟಗಾರ.ತಮ್ಮ ಮೊದಲ ಟೆಸ್ಟ್ ಪ೦ದ್ಯವನ್ನು 1996 ರಲ್ಲಿ ಆಡಿದ ಇವರು ಕರ್ಣಾಟಕದವರೇ ಆದ ಜಾವಗಲ್ ಶ್ರೀನಾಥ್ ಜೊತೆ ಭಾರತದ ಬೌಲಿಂಗ್ ಆರಂಭಿಸುತ್ತಿದ್ದರು.

ಭಾರತದ ರಾಷ್ಟ್ರೀಯ ತ೦ಡದಲ್ಲಿ ಆಡಿರುವುದಲ್ಲದೆ, ಕರ್ನಾಟಕದಿ೦ದ ರಣಜಿ ಕ್ರಿಕೆಟ್ ತ೦ಡದ ಪರವಾಗಿ ಆಡಿದ್ದಾರೆ.

Tuesday, July 26, 2016

ಎಸ್.ಎಲ್. ಭೈರಪ್ಪ ಅವರಿಗೆ 85ನೇ ಹುಟ್ಟುಹಬ್ಬದ ಶುಭಾಶಯಗಳು



ಎಸ್.ಎಲ್.ಭೈರಪ್ಪನವರು 1934ರ ಜುಲೈ 26 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ ಜನಿಸಿದರು. ತಂದೆ ಲಿಂಗಣ್ಣಯ್ಯ, ತಾಯಿ ಗೌರಮ್ಮ ಇವರು ಪ್ರಾಥಮಿಕ ಅಭ್ಯಾಸವನ್ನು ಸಂತೇಶಿವರ ಹಾಗೂ ಹತ್ತಿರದ ಗ್ರಾಮಗಳಲ್ಲಿ ಪೂರೈಸಿದರು. ಮೈಸೂರಿಗೆ ಬಂದು ಶಾರದಾ ವಿಲಾಸ ಪ್ರೌಢಶಾಲೆಯಲ್ಲಿ ಓದಿದ ನಂತರ ಮಹಾರಾಜ ಕಾಲೇಜಿನಿಂದ 1957ರಲ್ಲಿ ಬಿ.ಎ. (ಅನರ‍್ಸ್) ಪದವಿ ಗಳಿಸಿದರು. ೧೯೫೮ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ‍್ಯಾಂಕ್ ಗಳಿಸಿ ಎರಡು ಸುವರ್ಣ ಪದಕಗಳೊಂದಿಗೆ ಪಡೆದುಕೊಂಡರು.

Tuesday, July 19, 2016

ಎಂ.ಆರ್. ವಿಠಲ್ ಅವರ ೧೦೮ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಕನ್ನಡ ಚಲನಚಿತ್ರ ನಿರ್ದೇಶಕರಲ್ಲಿ ಪ್ರಮುಖ ಹೆಸರಾದ ಮೈಸೂರು ರಾಘವೇಂದ್ರರಾವ್ ವಿಠಲ್ ಅವರು 1908ರ ಜುಲೈ 19ರಂದು ಜನಿಸಿದರು. ಮೈಸೂರು ಮತ್ತು ಮದ್ರಾಸುಗಳಲ್ಲಿ ಅವರ ವ್ಯಾಸಂಗ ನೆರವೇರಿತು. ಆಟೋಮೊಬೈಲ್ ಮತ್ತು ಇಂಜಿನಿಯರಿಂಗ್ ಪದವೀಧರರಾದ ವಿಠಲ್ ಆ ಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿಯೂ ಹೆಸರು ಮಾಡಿದರು. 1928ರಲ್ಲಿ ಅವರು ಕೊಲ್ಲಾಪುರದಲ್ಲಿ ಸ್ವಂತ ಕಾಲೇಜನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಅವರಿಗೆ ಧ್ವನಿಗ್ರಹಣದ ಬಗ್ಗೆ ಆಸಕ್ತಿ ಬೆಳೆಯಿತು. ಭಾರತೀಯ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಅವರ ಬಳಿ ಚಲನಚಿತ್ರ ಕಲೆಯನ್ನು ಕಲಿತ ಅವರು ಲಾಹೊರಿಗೆ ತೆರಳಿ ಶಬ್ದ ಗ್ರಹಣವನ್ನು ವಿಶೇಷವಾಗಿ ಅಧ್ಯಯನ ಮಾಡಿದರು.


1938 ರಲ್ಲಿ ವಿಠಲ್ 'ಆಗ್' ಎಂಬ ಹಿಂದಿ ಚಿತ್ರವನ್ನು ನಿರ್ದೇಶಿಸಿದರು. ಹಲವಾರು ತಮಿಳು ಮತ್ತು ಮಲೆಯಾಳಂ ಚಿತ್ರಗಳನ್ನೂ ನಿರ್ದೇಶಿಸಿದರು. 1952ರಲ್ಲಿ 'ಬರ್ನಿಂಗ್ ಸಿಟಿ' ಎಂಬ ಫ್ರೆಂಚ್ ಭಾಷೆಯ ಚಿತ್ರವನ್ನು ನಿರ್ದೇಶಿಸಿದರು. ವಿಠಲ್ ಕನ್ನಡ ಚಿತ್ರ್ರರಂಗಕ್ಕೆ ಬಂದಿದ್ದು ತಡವಾಗಿ. 1963ರಲ್ಲಿ ವಾದಿರಾಜ್ ಮತ್ತು ಜವಾಹರ್ ನಿರ್ಮಾಣದ 'ನಂದಾದೀಪ' ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು.  ಅಲ್ಲಿಂದ ಮೊದಲ್ಗೊಂಡಂತೆ ಅವರು  ಕನ್ನಡದಲ್ಲಿ ಅನೇಕ ಹೊಸ ಅಲೆಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

Friday, July 15, 2016

ರಂ.ಶ್ರೀ ಮುಗಳಿ ಅವರ 111ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ರಂ.ಶ್ರೀ. ಮುಗುಳಿ
ರಂ.ಶ್ರೀ. ಮುಗುಳಿಯವರು ಧಾರವಾಡ ಜಿಲ್ಲೆಯ ಹೊಳೆ ಆಲೂರಿನಲ್ಲಿ 1906 ರಲ್ಲಿ ಜುಲೈ 15 ರಂದು ಜನಿಸಿದರು. ಇವರ ತಂದೆ ಶ್ರೀನಿವಾಸರಾಯರು. ತಾಯಿ ಕಮಲಮ್ಮನವರು. ರಸಿಕರಂಗ ಎಂಬುದು ಇವರ ಕಾವ್ಯನಾಮ. ರಂಗನಾಥ ಶ್ರೀನಿವಾಸ ಇವರ ಪೂರ್ಣ ಹೆಸರು. ಇವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಬಿಜಾಪುರದ ಬಾಗಲಕೋಟೆಗಳಲ್ಲಿ ನಡೆಯಿತು. ೧೯೨೪ರಲ್ಲಿ ಧಾರವಾಡಕ್ಕೆ ಬಂದು ಕರ್ನಾಟಕ ಕಾಲೇಜಿನಲ್ಲಿ ೧೯೨೮ರಲ್ಲಿ ಬಿ.ಎ. (ಸಂಕೃತ ಅನರ‍್ಸ್) ೧೯೩೦ರಲ್ಲಿ ಎಂ.ಎ. (ಕನ್ನಡ) ಪದವಿಯನ್ನು ಪಡೆದರು. ಪಡೆದರು. ಇಂಗ್ಲಿಷ್‌ನಲ್ಲಿಯೂ ಎಂ.ಎ. ಪದವಿಯನ್ನು ಪಡೆದರು. ಅನಂತರ ಮುಂಬಯಿಯಲ್ಲಿ ಬಿ.ಟಿ. ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿದರು. ಅನಂತರ ೧೯೩೨ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಹೈಸ್ಕೂಲಿನಲ್ಲಿ ಶಿಕ್ಷಕರಾದರು.

Saturday, July 9, 2016

ಪ್ಯಾರಿಸಿನಲ್ಲಿ ಕಾರ್ನಾಡ್, ಡಂಕನ್ ಕೌಮಾರ್ಯ ಹರಣ!

ಆನ್ ಡಂಕನ್ ಫ್ರೆಂಚ್ ಸಾಹಿತ್ಯದ ವಿದ್ಯಾರ್ಥಿನಿ. ಪ್ಯಾರಿಸ್ಸಿನಲ್ಲಿ ಇವರ ಮಿತ್ರ ಕೃಷ್ಣ ಬಸರೂರ್ ವಾಸಿಸುತ್ತಾನೆ ಎಂದು ತಿಳಿದಾಗ ಅಲ್ಲಿ ಜೊತೆಗೆ ಪ್ರವಾಸ ಮಾಡ ಬಯಸಿದಳು. ಅವಳಿಗೇನೋ ಸಂಶೋಧನೆ ಮಾಡುವುದಿತ್ತು. ಬಸರೂರನ ಮನೆಯಲ್ಲೇ ಇಳಿದುಕೊಂಡರು. ಅವಳಿಗೆ ಫ್ರೆಂಚ್ ಭಾಷೆ ಮಾತ್ರವಲ್ಲ, ಸಾಹಿತ್ಯ, ಇತಿಹಾಸ, ಪೋಲಿ ಜೋಕ್ಸ್ ಕೂಡ ಗೊತ್ತಿದ್ದವಂತೆ. ಅವಳ ಬಾಯ್‌ಫ್ರೆಂಡ್ ರಾಬಿನ್ ಎಂಬವ ಮದುವೆಯಾಗದೆಯೇ ದೇಹಸಂಗ ಬೇಡ ಎಂದು ಹಟ ಹಿಡಿದಿದ್ದ. ಅವಳಿಗೆ ಮದುವೆ ಮುಖ್ಯವಲ್ಲ, ಅನುಭವ ಮುಖ್ಯವಾಗಿತ್ತು. ಆನ್ ಡಂಕನ್ ಹಾಗೂ ಗಿರೀಶ ಇಬ್ಬರೂ ಪ್ಯಾರಿಸ್ಸಿನಲ್ಲಿ ಸಮೀಪ ಬಂದರು. ಇಬ್ಬರ ಕೌಮಾರ್ಯ ಹರಣವಾಗಿತ್ತು. 

Thursday, July 7, 2016

ಸ್ವರ್ಣ ಕಮಲ ಗೆದ್ದ 'ಸಂಸ್ಕಾರ' ಚಿತ್ರದ ಮೇಕಿಂಗ್

ಗಿರೀಶರನ್ನು ನಾಟಕರಂಗದಿಂದ ಚಿತ್ರರಂಗದೆಡೆಗೆ ಕರೆತಂದದ್ದು ಸಂಸ್ಕಾರ ಚಿತ್ರ. ಈ ಚಿತ್ರದ ಆಯ್ಕೆ, ಅದರ ನಿರ್ಮಾಣ, ಪಾತ್ರಗಳ ಶೋಧನೆ-ಆಯ್ಕೆ, ಶೃಂಗೇರಿಯ ಬಳಿ ಮುಕ್ತವಾದ ವಾತಾವರಣದಲ್ಲಿ ಹೊರಾಂಗಣದಲ್ಲೇ ಚಿತ್ರಿಸಿದ್ದು, ಇದನ್ನು ಬ್ಯಾನ್ ಮಾಡಲು ಹೊರಟ ಸರಕಾರವೇ ಬಹುಮಾನ ನೀಡಿದ್ದು, ತಾವು ಅನಿವಾರ್ಯವಾಗಿ ದಿಗ್ದರ್ಶಿಸುವುದನ್ನು ಬಿಟ್ಟು ಮುಖ್ಯಪಾತ್ರ ವಹಿಸಿದ್ದು, ಆಸ್ಟ್ರೇಲಿಯನ್ ಕ್ಯಾಮರಾಮನ್ ಅನಾಯಾಸವಾಗಿ ದೊರೆತದ್ದು ಮೊದಲಾದ ಎಲ್ಲ ವಿವರಗಳನ್ನು ದೀರ್ಘವಾದ ಅಧ್ಯಾಯದಲ್ಲಿ ಗಿರೀಶರು ಅದ್ಭುತವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಇದನ್ನು ಆನಂದಿಸಲು ಮೂಲವನ್ನೇ ಓದುವುದು ವಿಹಿತ. 

ಅತ್ಯಂತ ಸಂಕ್ಷಿಪ್ತವಾಗಿ ಈ ಸಂಸ್ಕಾರ ಚಿತ್ರ ಎಲ್ಲರ ಗಮನ ಸೆಳೆದುದರ ಬಗ್ಗೆ ಬರೆಯುವೆ.

Wednesday, July 6, 2016

ಕಾರ್ನಾಡರ ಆತ್ಮಕತೆ : ವಂಶವೃಕ್ಷ ಚಿತ್ರಕತೆ

1970ರಲ್ಲಿ ಆಕ್ಸಫರ್ಡ್ ಯುನಿವರ್ಸಿಟಿ ಪ್ರೆಸ್‌ನೊಂದಿಗಿದ್ದ ಏಳು ವರ್ಷದ ಒಪ್ಪಂದ ಮುಗಿದಿತ್ತು. ಮದ್ರಾಸ್ ಕೆಲಸ ಬಿಟ್ಟು ಧಾರವಾಡದಲ್ಲಿ ನೆಲೆಯೂರುವ ಇಚ್ಛೆಯಿಂದ ಸಾರಸ್ವತಪುರದಲ್ಲಿ, ಒಂದು ಮನೆ ಕೊಂಡರು. ಆ ವೇಳೆಗೆ ಜಿ.ವಿ.ಅಯ್ಯರ್ ಅವರು ಭೈರಪ್ಪನವರ ಲೋಕಪ್ರಿಯ ಕಾದಂಬರಿಯಾದ ವಂಶವೃಕ್ಷವನ್ನು ಆಧರಿಸಿ ಒಂದು ಚಿತ್ರ ತೆಗೆಯಲು ಹೊರಟಿದ್ದರು. ಅದನ್ನು ನಿರ್ದೇಶಿಸಲು ಬಿ.ವಿ.ಕಾರಂತರಿಗೆ ಕೇಳಿದರು. ಕಾರಂತರು ಕಾರ್ನಾಡರನ್ನು ತಮ್ಮೊಂದಿಗೆ ಸೇರಲು ಆಮಂತ್ರಿಸಿದರು. ಸಂಸ್ಕಾರ ಚಿತ್ರದ ಯಶಸ್ಸಿನಿಂದಾಗಿ ಗಿರೀಶರಿಗೆ ಚಿತ್ರಜಗತ್ತಿನಲ್ಲಿ ಆಸಕ್ತಿ ಉಂಟಾಗಿತ್ತು. ಅವರಿಗೆ ಆ ಚಿತ್ರ ನಿರ್ದೇಶಿಸುವ ಅವಕಾಶ ದೊರೆತಿರಲಿಲ್ಲ. ಆದ್ದರಿಂದ ತಮ್ಮನ್ನು ಸಹಾಯಕ ನಿರ್ದೇಶಕ ಮಾಡಲು ಕೇಳಿದರು. ಕಾರಂತರು ಬಹಳ ಸಂತೋಷದಿಂದ ಅವರನ್ನು ಸಹಾಯಕ ಏಕೆ? ಜಂಟಿ ನಿರ್ದೇಶಕರಾಗಿರಿ ಎಂದು ಆಮಂತ್ರಿಸಿದರು. ಆಗ ಭೈರಪ್ಪನವರು ದೆಹಲಿಯಲ್ಲಿದ್ದರು. ಅಯ್ಯರ್, ಕಾರಂತ, ಕಾರ್ನಾಡ ದಿಲ್ಲಿಗೆ ಹೋಗಿ ಲೇಖಕರನ್ನು ಭೆಟ್ಟಿಯಾಗಿ ಚರ್ಚಿಸಿದರು. ವಂಶವೃಕ್ಷವನ್ನು ಚಿತ್ರೀಕರಿಸಲು ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯನವರಂತಹ ಅತಿರಥ- ಮಹಾರಥರೆಲ್ಲ ಹವಣಿಸಿದ್ದರು. ಭೈರಪ್ಪನವರು ಒಪ್ಪಿರಲಿಲ್ಲ. ಈ ವೇಳೆಗೆ ಅಯ್ಯರರ ಜೀವನದಲ್ಲಿ ಕಾರಂತರ ಮರುಪ್ರವೇಶವಾಗಿತ್ತು. ಇಬ್ಬರೂ ಗುಬ್ಬಿ ನಾಟಕ ಕಂಪನಿಯಲ್ಲಿದ್ದರು. ಕಾರಂತರಿಗೆ ಮನೆಯಲ್ಲಿ ಅಡಿಗೆಗೆ ಗತಿಯಿಲ್ಲದಾಗ, ಅಯ್ಯರ್ ಮತ್ತು ಅವರ ಹೆಂಡತಿ ಹೋಟಲ್‌ನಿಂದ ಎರಡು ರೈಸ್-ಪ್ಲೇಟ್ ತರಿಸಿದಾಗ, ಕಾರಂತರೊಂದಿಗೆ ಹಂಚಿಕೊಂಡಿದ್ದರಂತೆ.

Tuesday, July 5, 2016

ಎಲ್ಲಿಯೂ ನಿಲ್ಲದಿರು: ರಾಷ್ಟ್ರಕವಿ ಕುವೆಂಪು


ಎಲ್ಲಿಯೂ ನಿಲ್ಲದಿರು

ಮನೆಯನೆಂದೂ ಕಟ್ಟದಿರು
ಕೊನೆಯನೆಂದೂ ಮುಟ್ಟದಿರು
ಓ ಅನಂತವಾಗಿರು ! 
ಓ ನನ್ನ ಚೇತನಾ, 
ಆಗು ನೀ ಅನಿಕೇತನ ! 

ಸಾವಿರದ ಒಂಬೈನೂರ ನಾಲ್ಕು, ಡಿಸೆಂಬರ್, ಇಪ್ಪತ್ತೊ೦ಭತ್ತರಂದು (29-12-1904) ಕುಪ್ಪಳಿ ವೆಂಕಟಪ್ಪಗೌಡ (ವೆಂಕಟಯ್ಯಗೌಡ) ಪುಟ್ಟಪ್ಪ (ಕೆ. ವಿ. ಪುಟ್ಟಪ್ಪ - ಕುವೆಂಪು) ಜನಿಸಿದರು

ಅಂದರೆ, ಇಂದಿಗೆ ಸುಮಾರು ಒಂದು ನೂರಾ ಹನ್ನೆರಡು ವರ್ಷಗಳ ಹಿಂದೆ ಕ್ರೋಧಿನಾಮ ಸಂವತ್ಸರದ ಮಾರ್ಗಶೀರ್ಷ - ಬಹುಳ ಸಪ್ತಮೀ ಗುರುವಾರದ ಉತ್ತರಾ ನಕ್ಷತ್ರದಲ್ಲಿ. 


Monday, July 4, 2016

ಜಗ್ಗು ದಾದಾ ಕನ್ನಡ ಸೂಪರ್ ಹಿಟ್ ಚಿತ್ರದ ಬಗ್ಗೆ ಕೆಲವು ಮಾತುಗಳು

ಒಂದು ಒಳ್ಳೆ ಸದಭಿರುಚಿಯ ಫ್ಯಾಮಿಲಿ ಎಂಟೆರ್ಟೈನೆರ್. ಕಾಮಿಡಿ-ಆಕ್ಷನ್-ರೋಮ್ಯಾನ್ಸ್-ಸೆಂಟಿಮೆಂಟ್ ಎಲ್ಲದರ ಪರಿಪೂರ್ಣ ಮಿಶ್ರಣ 'ಜಗ್ಗು ದಾದಾ'. ಫ್ಯಾಮಿಲಿ ಆಡಿಯನ್ಸ್ ಟಾರ್ಗೆಟ್ ಮಾಡಿಯೇ ಮಾಡಿರುವ ಈ ಚಿತ್ರ ತಾಂತ್ರಿಕವಾಗಿ ತುಂಬಾ ಸೊಗಸಾಗಿ ಮೂಡಿ ಬಂದಿದೆ.

ನಗೆಯ ರಸದೌತಣ ಕಟ್ಟಿಟ್ಟ ಬುತ್ತಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಸ್ ಮತ್ತು ಕ್ಲಾಸ್ ಅವತಾರಗಳಲ್ಲಿ ಸೂಪರ್ ಆಗಿ ಮಿಂಚಿದ್ದಾರೆ. ಅವರ ಫ್ಯಾನ್ಸ್ ಗೆ ಡಬಲ್ ಧಮಾಖ. ಬೆಡಗಿ ದೀಕ್ಷಾ ಸೇಥ್ ಡಿ ಬಾಸ್ ಗೆ ತುಂಬಾ ಚೆನ್ನಾಗಿಯೇ ಸಾಥ್ ನೀಡಿದ್ದಾರೆ. ರವಿಶಂಕರ್ ಇಲ್ಲಿಯವರೆಗೂ ಕಾಣಸಿಗದ ರೋಲ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಅನಂತ್ ನಾಗ್ , ಊರ್ವಶಿ, ಶರತ್ ಲೋಹಿತಾಶ್ವ, ಸೃಜನ್ ಲೋಕೇಶ್, ರಜತ್ ಬೇದಿ, ಉರ್ಮಿಳ ಹಾಗೂ ಮುಂತಾದವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

Saturday, July 2, 2016

ಯೋಗ ಗುರು ಬಿ. ಕೆ. ಎಸ್ ಅಯ್ಯಂಗಾರ್

ಪ್ರೊ. ಬಿ. ಕೆ. ಎಸ್. ಅಯ್ಯಂಗಾರ್ ಅವರು 1918 ಡಿಸೆಂಬರ್ 14ರಂದು ಕರ್ನಾಟಕದ ಕೋಲಾರ ಜಿಲ್ಲೆಯ ಬೆಳ್ಳೂರು ಗ್ರಾಮದಲ್ಲಿ ಹುಟ್ಟಿದವರು. ಅವರು  ಅತ್ಯಂತ ಬಡ ಕುಟುಂಬದಿಂದ ಬಂದವರು.


ಬಾಲ್ಯದ ಹೆಸರಿನ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಅವರು ಮುಂದೆ  ಪ್ರೊ.ಬಿ.ಕೆ.ಎಸ್. ಅಯ್ಯಂಗಾರ್ ಎಂದು ಪ್ರಸಿದ್ಧರಾದರು.  ಜಗತ್ತಿನ ಎಲ್ಲ ಭಾಷೆ ಮತ್ತು ಸಂಸ್ಕೃತಿಗಳ ನಡುವೆ ‘ಬಿ.ಕೆ.ಎಸ್.ಅಯ್ಯಂಗಾರ್ ಸ್ಕೂಲ್ ಆಫ್ ಯೋಗ’ ಎಂಬ ಪರಿಕಲ್ಪನೆಯನ್ನು ಜನಮಾನಸದಲ್ಲಿ ನೆಲೆಯೂರುವಂತೆ ಮಾಡಿದರು.  ಪ್ರತ್ಯಕ್ಷ ವಾಗಿ ಹಾಗೂ ಪರೋಕ್ಷವಾಗಿ ಬಹುಪಾಲು ಮಂದಿ ಯೋಗ ಶಿಕ್ಷಕರು ಗುರೂಜಿ ಪ್ರೊ.ಬಿ.ಕೆ. ಅಯ್ಯಂಗಾರ್ ಅವರಿಂದ ಪ್ರೇರಿತರಾದವರು. ಇಂದು ವಿಶ್ವದಾದ್ಯಂತ ಯೋಗ ಎಂಬ ಭಾರತೀಯ ಕಲ್ಪನೆಯು ಹೆಚ್ಚು ಹೆಚ್ಚು ಸಾಕಾರಗೊಳ್ಳುವಲ್ಲಿ ಪ್ರೊ. ಬಿ. ಕೆ. ಎಸ್. ಅಯ್ಯಂಗಾರ್ ಅವರ ಕೊಡುಗೆ ಅಪರಿಮಿತವಾದುದು.

ಗೋಲ್ಡನ್ ಸ್ಟಾರ್ ಗಣೇಶ್ ಅವರ 39ನೇ ಹುಟ್ಟುಹಬ್ಬದ ಶುಭಾಶಯಗಳು !

Golden Star Ganesh 
ಕನ್ನಡ ಚಿತ್ರರಂಗದಲ್ಲಿ ರಾಜ್ ಕುಮಾರ್, ವಿಷ್ಣುವರ್ಧನರಂತಹ ಮೇರು ನಟರು ಮರೆಯಾಗಿ, ಕೆಲವೊಂದು ನಟರೆಲ್ಲಾ ಅರೆ ಬರೆ ಗಡ್ಡ ಬಿಟ್ಟು, ಪಕ್ಕದ ರಾಜ್ಯದ ಕೆಲವು  ಹೀರೋಗಳಂತೆ ತಮ್ಮ ಮುಖಕ್ಕೊಪ್ಪುವಂತೆ  ಕಪ್ಪು ಕನ್ನಡಕ ಧರಿಸಿಯೋ,  ಮಚ್ಚು – ಕತ್ತಿ – ಚೈನುಗಳನ್ನು ಹಿಡಿದ ವಕ್ರವದನಾರವಿಂದರಾಗಿಯೋ ವಿಭಿನ್ನ ದಾರಿ ಹಿಡಿದಿದ್ದ ಸಮಯದಲ್ಲಿ, ಅಲ್ಲಲ್ಲಿ ದೂರದರ್ಶನ ಮತ್ತು ಚಿತ್ರರಂಗದಲ್ಲಿನ ಸಣ್ಣಪುಟ್ಟ ಪಾತ್ರಗಳಲ್ಲಿ ಮಿಂಚುತ್ತಿದ್ದ ಗಣೇಶ್ ಎಂಬ ಹುಡುಗ ‘ಮುಂಗಾರು ಮಳೆ’ ಎಂಬ ಯೋಗರಾಜ ಭಟ್ಟರ ದೃಶ್ಯ ಕಾವ್ಯದೊಂದಿಗೆ ಹೊಸ ಭರವಸೆ ತಂದರು.  ಜುಲೈ 2,1977, ಇವರ ಹುಟ್ಟು ಹಬ್ಬ.  ಬೆಂಗಳೂರಿನ ನೆಲಮಂಗಲದ ಅಡಕಮರನಹಳ್ಳಿ ಇವರ ಹುಟ್ಟೂರು. 

Friday, July 1, 2016

ಜೀವರಕ್ಷಕ ವೈದ್ಯರಿಗೆ ವೈದ್ಯದಿನಾಚರಣೆಯ ಹಾರ್ಧಿಕ ಅಭಿನಂದನೆಗಳು


ವೈದ್ಯರ ದಿನ ಶುರುವಾದದ್ದು ಹೀಗೆ:


 ಡಾ.ಬಿದನ್ ಚಂದ್ರ ರಾಯ್ (ಜನನ:ಜುಲೈ 1,1882, ನಿಧನ:ಜುಲೈ 1,1962) ಒಬ್ಬ ಶ್ರೇಷ್ಠ ಸಾಧಕ, ಭಾರತ ಕಂಡ ಹೆಮ್ಮೆಯ ಪ್ರತಿಭೆ ಮತ್ತು ವ್ಯಕ್ತಿತ್ವವುಳ್ಳವರು.ಇಂದಿನ ಸಮಾಜದಲ್ಲಿ ಅಧಿಕಾರ ಸಿಕ್ಕರೆ ತಮ್ಮ ಸ್ವಾರ್ಥ ಸಾಧನೆಗೇ ಹೊಂದಿರುವ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ವ್ಯಕ್ತಿತ್ವದ ಜೊತೆಗೆ ಹಿಂದಿರುವ ಹೆಸರನ್ನೂ ಹಾಳುಮಾಡಿಕೊಳ್ಳುವರೇ ಹೆಚ್ಚು. ಆದರೆ   ಡಾ.ಬಿದನ್ ಚಂದ್ರ ರಾಯ್ ಪಶ್ಚಿಮ ಬಂಗಾಳದ ಮೊದಲ ಮುಖ್ಯಮಂತ್ರಿಯಾಗಿದ್ದುಕೊಂಡು  ಬದುಕಿನುದ್ದಕ್ಕೂ  ಸೇವೆಯನ್ನೇ ಉಸಿರಾಗಿಸಿ ಕೊಂಡಿದ್ದ ಅವರು ವೈದ್ಯಕೀಯ ಇತಿಹಾಸದಲ್ಲಿಯೂ ಹಲವು ದಾಖಲೆಗೆ ಕಾರಣಿಭೂತರಾಗಿದ್ದು ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡವರು.

ಭಾರತೀಯ ವೈದ್ಯಕೀಯ ಸಂಘದ (ಐ.ಎಮ್.ಎ) ಸಂಸ್ತಾಪಕರು ಮತ್ತು ಅದರ ಮೊದಲ ಅಧ್ಯಕ್ಷರಾಗಿದ್ದ ಡಾ.ಬಿದನ್ ಚಂದ್ರ ರಾಯ್ ಅವರು ಭಾರತೀಯ ವೈದ್ಯಕೀಯ ಮಂಡಳಿ (ಎಮ್.ಸಿ.ಇ) ಸ್ತಾಪನೆಯಲ್ಲಿ ಶ್ರಮಿಸಿದ ಅವರ ಸೇವೆಯನ್ನು ನಾವು ಮರೆಯುವಂತಿಲ್ಲ.

ಕನ್ನಡ ಜಾನಪದ ಗಾಯಕಿ: ಬಿ. ಕೆ. ಸುಮಿತ್ರಾ

ಮಕ್ಕಳೊಂದಿಗೆ ಬಿ ಕೆ ಸುಮಿತ್ರ
ಬಿ. ಕೆ . ಸುಮಿತ್ರಾ ಅಂದರೆ ಹಲವು ಸುಮಧುರ ಗೀತೆಗಳ ನಾದ ಸೌರಭದ ತಂಗಾಳಿ ನಮ್ಮನ್ನಾವರಿಸುತ್ತದೆ.  ಕನ್ನಡ ನಾಡಿನಿಂದ ಸಿನಿಮಾ ಗಾಯನ  ಕ್ಷೇತ್ರಕ್ಕೆ ಕಾಲಿಟ್ಟವರಲ್ಲಿ ಖಂಡಿತವಾಗಿ ಅವರು ಅಗ್ರರ ಸಾಲಿನಲ್ಲಿ ನಿಲ್ಲುವವರು.  ಅಷ್ಟೇ ಅಲ್ಲ ಚಿತ್ರರಂಗದ ಪ್ರಮುಖ ಗಾಯಕರ ಸಾಲಿನಲ್ಲಿ ನಿರಂತರ ಶೋಭಾಯಮಾನರು.

ಬಿ.ಕೆ ಸುಮಿತ್ರಾ ಅವರು ಹುಟ್ಟಿದ್ದು ಜುಲೈ 1, 1946 ಚಿಕ್ಕಮಗಳೂರು ಜಿಲ್ಲೆಯ ಬಿಳಿಲುಕೊಪ್ಪ ಗ್ರಾಮದಲ್ಲಿ.  ಮೊದಲು ತಾಯಿ, ನಂತರದಲ್ಲಿ ಸಂಗೀತ ವಿದ್ವಾಂಸ  ಶಾಮಣ್ಣ ಅವರಿಂದ ಸಂಗೀತ ಕಲಿತು ಸಂಗೀತ ಪರೀಕ್ಷೆಗಳಲ್ಲೂ ಉತ್ತೀರ್ಣರಾದ ಬಿ ಕೆ ಸುಮಿತ್ರಾ ಎಂ. ಪ್ರಭಾಕರ್ ಅವರಿಂದ ಸುಗಮಸಂಗೀತ ಕಲಿತರು.  ಎಂ. ಪ್ರಭಾಕರ್ ಅವರ ಸಹೋದರಿ ಪ್ರಸಿದ್ಧ ನಟಿ ಪಂಡರೀಬಾಯಿ ಅವರು ಬಿ. ಕೆ. ಸುಮಿತ್ರಾ ಅವರ ಸಂಗೀತ ಸಾಮರ್ಥ್ಯವನ್ನು  ಚಲನಚಿತ್ರರಂಗದ ಹಲವು ಪ್ರಮುಖರಿಗೆ ಪರಿಚಯ ಮಾಡಿಕೊಟ್ಟರು. 

Sunday, June 26, 2016

ಪ್ರತಿಯೊಬ್ಬ ಭಾರತೀಯರು ಓದಲೇಬೇಕಾದ

 ಎಸ್. ಎಲ್. ಭೈರಪ್ಪನವರ : ಮತಾಂತರ - ಸತ್ಯದ ಮೇಲೆ ಹಲ್ಲೆ -ಸಂಪಾದಕೀಯ: "ಭಾರತೀಯರ ಆತ್ಮಗಳನ್ನು
ಉದ್ಧರಿಸಲು ನೀವು ಬರಬೇಕಾದರೆ ಅಗತ್ಯವಿಲ್ಲ . ನೀವು ಮಾಡಬೇಕಾಗಿರುವುದು  ಬಡತನದಿಂದ  ಅವರನ್ನು ಉದ್ಧರಿಸಬೇಕಾಗಿರುವ  ಕಾರ್ಯ "- ಈ ...

ಮತಾಂತರ ದಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಮುಕ್ತವಾದ ಹಾಗೂ ಬಹಿರಂಗವಾದ ಚರ್ಚೆಗಳು   ನಡೆಯುವುದು ಸ್ವಾಗತಾರ್ಹ  ಭಾತರದಲ್ಲಿ  ಬರುತ್ತಿರುವ ಕೋಮುವಾದ ಹಾಗೂ ಮತಾಂತರದ ಕುರಿತ ಸಾಹಿತ್ಯವನ್ನು  ವಿಮರ್ಶಾತ್ಮಕವಾಗಿ ನೋಡಿದಾಗ  ನನಗೆ  ತೋಚಿದ ಕೆಲವು ವಿಚಾರಗಳನ್ನು  ಇಲ್ಲಿ ಹಂಚಿಕೊಂಡಿದ್ದೇನೆ.ಅಜಕ್ಕಳ  ಗಿರೀಶ ಭಟ್


ಕುಲ-ಕುಲವೆಂದು ಹೊಡೆದಾಡದಿರಿ ಎಂದ ಕನಕದಾಸರು !

ಕನಕದಾಸರೆಂದರೆ ನೆನಪಾಗುವುದು ಸಂಗೀತದ ಮೂಲಕ ಕರ್ಣಾಮೃತ ಒದಗಿಸುವ ಅವರ ನೂರಾರು ರಚನೆಗಳು. ಮೊದಲು ಸಂಸಾರಿಯಾಗಿದ್ದ ಅವರ ಮೂಲ ಹೆಸರು ತಿಮ್ಮಪ್ಪ ನಾಯಕ. ಕನಕದಾಸರು ಹದಿನೈದು – ಹದಿನಾರನೇ ಶತಮಾನಗಳಲ್ಲಿದ್ದ ಜನಪ್ರಿಯವಾದ ಭಕ್ತಿ ಪಂಥದ ಪ್ರಮುಖ ಹರಿದಾಸರಲ್ಲಿ ಒಬ್ಬರು. ಪುರಂದರದಾಸರ ಸಮಕಾಲೀನರಾಗಿದ್ದು  ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಅಮೂಲ್ಯ ಕಾಣಿಕೆಗಳನ್ನಿತ್ತವರು.

ಕನಕದಾಸರು ಜನಿಸಿದ್ದು ಧಾರವಾಡ ಜಿಲ್ಲೆಯ ಬಾಡ ಎಂಬಲ್ಲಿ.  ನಂತರ ಕಾಗಿನೆಲೆಯಲ್ಲಿ ನೆಲೆಸಿದಂತೆ ತೋರುತ್ತದೆ.  ಅದು ಈಗ ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿದೆ.  ಕನಕದಾಸರ ಕೀರ್ತನೆಗಳೆಲ್ಲವೂ ಕಾಗಿನೆಲೆಯ ಆದಿಕೇಶವನ ಅಡಿದಾವಾರೆಗಳಿಗೇ ಅರ್ಪಿತ.  ಅವರು ತಮಗೆ ದೊರೆತ ನಿಧಿಯಿಂದ ಕಾಗಿನೆಲೆಯ ನರಸಿಂಹ ದೇವಾಲಯವನ್ನು ಜೀರ್ಣೋದ್ದಾರ ಮಾಡಿದರು.  ಬಾಡ ಗ್ರಾಮದಲ್ಲಿದ್ದ ಆದಿಕೇಶವ ಮೂರ್ತಿಯನ್ನು ತಂದು ಕಾಗಿನೆಲೆಯಲ್ಲಿ ಪ್ರತಿಷ್ಟಾಪನೆ ಮಾಡಿದರೆಂದು ತಿಳಿದು ಬರುತ್ತದೆ.  ಈ ರೀತಿ ತಿಮ್ಮಪ್ಪ ನಾಯಕನಾಗಿದ್ದವರು ತಮಗೆ ದೊರೆತ ನಿಧಿಯಿಂದ ಕನಕನಾಯಕರೆಂಬ ಹೆಸರನ್ನು ಪಡೆದು ಮುಂದೆ ಕನಕದಾಸರಾಗಿ ಕಂಗೊಳಿಸಿದರು.  ಕನಕರು  ‘ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ’ ಎಂದು ಎಲ್ಲ ಜಾತಿ ಪದ್ಧತಿಗಳ ಮೂಲವನ್ನೇ ಪ್ರಶ್ನಿಸಿದವರು.   ಕನಕದಾಸರು ವ್ಯಾಸರಾಯರ ನೆಚ್ಚಿನ ಶಿಷ್ಯರೂ ಹೌದು. 

Saturday, June 25, 2016

ಭ್ರಷ್ಟರಿಗೆ ದುಸ್ವಪ್ನವಾಗಿ ಕಾಡುವ ಅಣ್ಣಾ ಹಜಾರೆ !

ಇಡೀ ದೇಶವೆಲ್ಲಾ ಹಲವು ಭ್ರಷ್ಟತೆಗಳಿಂದ ನಾರುತ್ತಿರುವ ಸಮಯದಲ್ಲಿ ಅದರ ವಿರುದ್ಧ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿರುವ ಒಂದು ಅಪೂರ್ವ ಕಮಲ ಅಣ್ಣಾ ಹಜಾರೆ.  ಇಂದು ಅವರ ಹುಟ್ಟು ಹಬ್ಬ.  ಅವರು ಜನಿಸಿದ ದಿನ ಜೂನ್ 15, 1938. 

ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ರಾಲೇಗನ್ ಸಿದ್ಧಿ ಎಂಬ ಹಳ್ಳಿ ಎಲ್ಲಾ ಸಿದ್ಧಿಗಳಿಂದ ವಂಚಿತವಾಗಿ ಬರಡುಭೂಮಿಯಾಗಿ ಕ್ಷಾಮರೋಗಗಳಿಗೆ ಸುಲಭದ ತುತ್ತಾಗಿ ಕುಡಿತ, ಕಡುಬಡತನ ಮತ್ತು ಪಟ್ಟಣಗಳಿಗೆ ವಲಸೆ ಹೋಗಲು ಕಾರಣೀಭೂತವಾದ ಆಗರವಾಗಿತ್ತು.  ಅಣ್ಣಾ ಹಜಾರೆಯವರ ಪ್ರೇರಣೆಗಳಿಂದ ಈ ಊರು ನೈಸರ್ಗಿಕವಾಗಿ ಜಲಸಂರಕ್ಷಣೆಯ ವಿಧಾನಗಳನ್ನು ಕಲಿತುಕೊಂಡು ಹಳ್ಳಿಗರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದರ ಜೊತೆಗೆ ‘ರಾಲೆಗನ್ ಸಿದ್ಧಿ’ ಎಂಬ ಹೆಸರನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿದೆ.  ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಅಂದರೆ ಏನು ಎಂಬುದಕ್ಕೆ ಅಣ್ಣಾ ಹಜಾರೆ, ನಮ್ಮ ಹೆಗ್ಗೋಡಿನ ಸುಬ್ಬಣ್ಣ, ಆನಂದವನದ ಬಾಬಾ ಅಮ್ಟೆ, ಬಿಳಿಗಿರಿರಂಗನ ಬೆಟ್ಟದ ಸುದರ್ಶನ್ ಅವರನ್ನು ನೋಡಿ ನಾವು ಅದರಲ್ಲೂ ನಮ್ಮ ರಾಜಕೀಯ, ಆಡಳಿತ ವ್ಯವಸ್ಥೆ ಮತ್ತು ಆರ್ಥಿಕ ತಜ್ಞರು ಕಲಿಯುವುದು ತುಂಬಾ ತುಂಬಾ ಇದೆ.  ‘ರಾಲೇಗನ್ ಸಿದ್ಧಿ’ಯ ಸಿದ್ಧಿ ಪ್ರವರಗಳನ್ನು ಮತ್ತು ಅದು ಸಾಧಿಸಿರುವ ಶ್ರೇಷ್ಠತೆಗಳನ್ನು ಇಡೀ ವಿಶ್ವವೇ ಕಂಡು ಬೆರಗುಗೊಂಡಿರುವುದು ಅಣ್ಣಾ ಹಜಾರೆ ಅವರ ಆತ್ಮವನ್ನು ಅರಿಯಬಲ್ಲವರಿಗೆ ಪ್ರಥಮ ಹೆಜ್ಜೆಯಾಗಬೇಕಾಗುತ್ತದೆ.

Friday, June 24, 2016

ಭಾರತೀಯ ತಂಡಕ್ಕೆ ಅನಿಲ್ ಕುಂಭ್ಳೆ ಕೋಚ್

ಭಾರತೀಯ ತಂಡಕ್ಕೆ ನಮ್ಮ  ಅನಿಲ್ ಕುಂಭ್ಳೆ ಕೋಚ್ ಆಗಿ ಆಯ್ಕೆಯಾಗಿರುವುದು ಕನ್ನಡಿಗರೆಲ್ಲರ ಸಂತೋಷವನ್ನು ಹೆಚ್ಚಿಸಿದೆ.
ಭಾರತೀಯ ಕ್ರಿಕೆಟ್ ತಂಡಕ್ಕೆ ಕನ್ನಡಿಗನೊಬ್ಬ ಕೋಚ್ ಆಗಿರುವ ಅನಿಲ್ ಕುಂಬ್ಳೆ ಅವರು ಮೊದಲ ಕನ್ನಡಿಗ. ಸ್ಪಿನ್ನರ್ ಮಾಂತ್ರಿಕ ಅನಿಲ್ ಕುಂಭ್ಳೆ  ಭಾರತೀಯ ಕ್ರಿಕೆಟ್ ತಂಡಕ್ಕೆ ಹೆಚ್ಚಿನ ಶಕ್ತಿ ತುಂಬುವ ಎಲ್ಲಾ ಗುಣಗಳನ್ನು ಹೊಂದಿರುವ ಶ್ರೇಷ್ಟ ವ್ಯಕ್ತಿ ಅವರಿಗೆ ನಮ್ಮ ಪರವಾಗಿ ಹಾರ್ಧಿಕ ಅಭಿನಂದನೆಗಳು .

ಸ್ವಾಮಿ ವಿವೇಕಾನಂದರ ಅಮರವಾಣಿ !!

ವಿಶ್ವಮಾನವ, ವಿಶ್ವವಿಜೇತ, ವೀರಸಂನ್ಯಾಸಿ ‘ಸ್ವಾಮಿ ವಿವೇಕಾನಂದರು ಜನವರಿ 12, 1863 ರಲ್ಲಿ, ಇದೇ ನಾವು ಹುಟ್ಟಿರುವ ಈ ಪುಣ್ಯಭೂಮಿ - ಭರತಭೂಮಿಯಲ್ಲಿ ಜನಿಸಿದರು.   ನಮ್ಮ ಭರತ ಭೂಮಿಯಲ್ಲಿ ಅಂತದ್ದೇನಿದೆ ಎಂಬುದನ್ನು  ಸ್ವಾಮಿ ವಿವೇಕಾನಂದರ ಮಾತುಗಳಲ್ಲೇ ಅರಿಯುವುದು ಶ್ರೇಷ್ಠವಾದುದು.  ಅವರು ನುಡಿಯುತ್ತಾರೆ “ಜಗತ್ತಿನಲ್ಲಿ ಯಾವುದಾದರೂ ಒಂದು ದೇಶವು ಪುಣ್ಯಭೂಮಿಯೆಂದು ಕರೆಯಿಸಿಕೊಳ್ಳಲು ಅರ್ಹವಾಗಿದ್ದರೆ, ಜೀವಿಗಳು ತಮ್ಮ ಬಾಳಿನ ಕೊನೆಯ ಕರ್ಮವನ್ನು ಸವೆಸಲು ಬರಬೇಕಾದ ಸ್ಥಳವೊಂದಿದ್ದರೆ, ಭಗವಂತನೆಡೆಗೆ ಸಂಚರಿಸುತ್ತಿರುವ ಪ್ರತಿಯೊಬ್ಬ ಜೀವಿಯೂ ತನ್ನ ಕೊನೆಯ ಯಾತ್ರೆಯನ್ನು ಪೂರೈಸುವುದಕ್ಕೆ ಒಂದು ಕರ್ಮಭೂಮಿಗೆ ಬರಬೇಕಾಗಿದ್ದರೆ, ಯಾವುದಾದರೂ ದೇಶದಲ್ಲಿ ಮಾನವ ಕೋಟಿಯ ಮಾಧುರ್ಯ, ಔದಾರ್ಯ, ಪಾವಿತ್ರ್ಯ, ಶಾಂತಿ – ಇವುಗಳಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಧ್ಯಾನದಲ್ಲಿ ಮತ್ತು ಅಂತರ್ಮುಖ ಜೀವನದಲ್ಲಿ ತನ್ನ ಪರಾಕಾಷ್ಠೆಯನ್ನು ಮುಟ್ಟಿದ್ದರೆ ಅದು ಭರತಖಂಡವೇ ಆಗಿದೆ.”  ಇಂಥಹ ಅದಮ್ಯ ನಂಬಿಕೆಯನ್ನು ತಮ್ಮಲ್ಲಿ ತುಂಬಿಕೊಂಡಿದ್ದ ಸ್ವಾಮೀಜಿಯವರು ತಮ್ಮ ಬದುಕಿನ ಮೂಲಕ ಅದನ್ನು ವಿಶ್ವಕ್ಕೆಲ್ಲಾ ಸಾಬೀತು ಮಾಡಿಕೊಟ್ಟರು. 

Thursday, June 23, 2016

ಕನ್ನಡ ಚಿತ್ರಸಂಗೀತದ ಮೈಲಿಗಲ್ಲು:ಹಂಸಲೇಖ


‘ಹಂಸಲೇಖ’ರು ಕನ್ನಡ ಚಿತ್ರರಂಗದ ಮಹಾನ್ ಪ್ರತಿಭೆ.  ಹಂಸಲೇಖ ಅವರು  ಜೂನ್ 23, 1951ರ ವರ್ಷದಲ್ಲಿ ಗೋವಿಂದರಾಜು ಗಂಗರಾಜುವಾಗಿ ಮೈಸೂರಿನಲ್ಲಿ  ಜನಿಸಿದರು. 

‘ತ್ರಿವೇಣಿ’ ಚಿತ್ರದಲ್ಲಿ ಬರವಣಿಗೆಯ ಮೂಲಕ ಚಿತ್ರರಂಗಕ್ಕೆ ಬಂದ ಹಂಸಲೇಖರು ಮುಂದೆ ಒಂದೆರಡು ಪುಟ್ಟ ಕೆಲಸಗಳನ್ನು ಅಲ್ಲಿ ಇಲ್ಲಿ ಮಾಡಿದ್ದರೂ ಅವರು ಪ್ರಖ್ಯಾತರಾದದ್ದು ‘ಪ್ರೇಮಲೋಕ’ ಚಿತ್ರದಲ್ಲಿ. 'ನೀನಾ ಭಗವಂತ, ಜಗಕುಪಕರಿಸಿ ನನಗಪಕರಿಸೋ ಜಗದೋದ್ಧಾರಕ ನೀನೇನಾ' ಎಂಬಂತಹ ಸಾಹಿತ್ಯದಿಂದ ಅಲ್ಲಲ್ಲಿ ಮಿಂಚಿದ್ದವರು.  ಕನ್ನಡದ ಪ್ರಸಿದ್ಧ ನಿರ್ಮಾಪಕರಾದ ಎನ್. ವೀರಸ್ವಾಮಿಯವರ ಪುತ್ರ ಚಿನಕುರಳಿ ವ್ಯಕ್ತಿತ್ವದ ರವಿಚಂದ್ರನ್ ಆಗ ತಾನೇ ಚಿತ್ರರಂಗದಲ್ಲಿ ಹತ್ತು ಹಲವು ಪ್ರಯತ್ನಗಳನ್ನು ನಡೆಸಿದ್ದರು.  ಇಂತಹ ಪ್ರಯತ್ನದಲ್ಲಿ ಅವರಿಗೆ ‘ಗ್ರೀಸ್ 2’ ಪ್ರೇರಣೆಯಿಂದ  ಕನ್ನಡದಲ್ಲೊಂದು ಹಾಡುಗಳ ಮೂಲಕ ನಡೆಯುವ ಪ್ರೇಮಕತೆಯನ್ನು ಹೇಳುವ ಆಶಯದಲ್ಲಿದ್ದಾಗ ‘ಹಂಸಲೇಖ’ರು ಅವರಿಗೆ ಜೊತೆಯಾದರು.  'ಯಾರೇ ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ ಏಕೆ ನಗುವೆ' ಎಂಬ ಹಾಡಿನ ಧ್ವನಿಮುದ್ರಣದ ಸಮಯದಲ್ಲಿ ಅಲ್ಲಿದ್ದ ಹಂಸಲೇಖರು ಆ ಹಾಡಿನ ವಿಸ್ತರಣೆಯಾದ 'ಯಾರೇ, ಯಾರೇ..' ಎಂಬ ಸಲಹೆ ಕೊಟ್ಟಾಗ ಅವರು ರವಿಚಂದ್ರನ್ ಅವರಿಗೆ ಪ್ರಿಯರಾಗಿಬಿಟ್ಟರು.

Thursday, June 16, 2016

ಎ.ಎನ್. ಮೂರ್ತಿರಾವ್ ಅವರ 117ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಎ.ಎನ್. ಮೂರ್ತಿರಾವ್
ಅಕ್ಕಿಹೆಬ್ಬಾಳು ನರಸಿಂಹರಾವ್ ಮೂರ್ತಿರಾವ್ ಇವರ ಪೂರ್ಣ ಹೆಸರು. ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಹೆಬ್ಬಾಳುವಿನಲ್ಲಿ 1900 ಜೂನ್ 16 ರಂದು ಜನಿಸಿದರು. ತಂದೆ ಸುಬ್ಬರಾಯ ತಾಯಿ ಪುಟ್ಟಮ್ಮ. ಮಾಧ್ಯಮಿಕ ಹಂತದವರೆಗೆ ಅಕ್ಕಿಹೆಬ್ಬಾಳುವಿನಲ್ಲಿ ಅಭ್ಯಾಸ ಮಾಡಿದರು. ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ. ಪದವಿ ಪಡೆದರು. ಎಸ್. ರಾಧಾಕೃಷ್ಣನ್ ಅವರು ಇವರಿಗೆ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಬಿ.ಎಂ. ಶ್ರೀಕಂಠಯ್ಯನವರು ಇವರ ಗುರುಗಳಾಗಿದ್ದರು. ೧೯೨೪ರಲ್ಲಿ ಮೂರ್ತಿರಾಯರು ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಟ್ಯೂಟರ್ ಆಗಿ ಕೆಲಕಾಲ ಸೇವೆ ಸಲ್ಲಿಸಿ ೧೯೨೫ರಲ್ಲಿ ಮೈಸೂರು ಮಹಾರಾಜ ಹೈಸ್ಕೂಲಿನ ಅಧ್ಯಾಪಕರಾದರು. ೧೯೨೭ರಲ್ಲಿ ಕಾಲೇಜು ಅಧ್ಯಾಪಕರಾಗಿದ್ದರು. ೧೯೪೦ರಲ್ಲಿ ಉಪ ಪ್ರಾಧ್ಯಾಪಕರಾದರು.

Monday, June 6, 2016

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 126ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ

ಮಾಸ್ತಿ ವೆಂಕಟೇಶ ಅಯ್ಯಂಗಾರ್
ಶಂಕರ್ನಾಗ್ ಅವರ ಮೊದಲ ಕನ್ನಡ ಚಿತ್ರ ಒಂದಾನೊಂದು ಕಾಲದಲ್ಲಿಯ "ನೇಸರ ನೋಡು.. ನೇಸರ ನೋಡೂ.." ಹಾಗು
ಬಾ ಸವಿತಾ ...ಬಾ ಸವಿತಾ ...(ಭಾವಗೀತೆ)
ಒಂದು ದಿನ ಕರಿಹೈದ-(ಚಿತ್ರ: ಕಾಕನ ಕೋಟೆ)
ಬೆಟ್ಟದ ತುದಿಯಲ್ಲಿ.. ಕಾಡುಗಳ ಎದೆಯಲ್ಲಿ...(ಚಿತ್ರ: ಕಾಕನ ಕೋಟೆ)
ಎಂಥ ಸುಂದರ ಹಾಡುಗಳು ಈ ಹಾಡುಗಳನ್ನು ರಚಿಸಿದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್
ಶ್ರೀನಿವಾಸ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಮಾಸ್ತಿ ವೆಂಕಟೇಶ್ ಅಯ್ಯಂಗಾರರು 1891ರ ಜೂನ್ 6ರಂದು ಕೋಲಾರ ಜಿಲ್ಲೆಯ ಮಾಸ್ತಿ ಎಂಬಲ್ಲಿ ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್, ತಾಯಿ ತಿರುಮಲಮ್ಮ. ಇವರ ಪ್ರಾಥಮಿಕ ವಿದ್ಯಾಭ್ಯಾಸ ಶಿವಾರಪಟ್ಟಣ, ಮಳವಳ್ಳಿ, ಕೃಷ್ಣರಾಜ ಪೇಟೆಗಳಲ್ಲೂ, ಪ್ರೌಢಶಾಲಾ ವಿದ್ಯಾಭ್ಯಾಸ ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲಿಯೂ ನಡೆಯಿತು. ಅನಂತರ ಮೈಸೂರಿನ ಮಹಾರಾಜ ಕಾಲೇಜು ಸೇರಿ ಎಫ್.ಎ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ತದನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ೧೯೧೨ರಲ್ಲಿ ಬಿ.ಎ. ಪದವಿ ಪಡೆದರು. ಅನಂತರ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇಂಗ್ಲಿಷ್ ವಿಷಯವನ್ನು ಮುಖ್ಯ ವಿಷಯವನ್ನಾಗಿ ಅಭ್ಯಾಸ ಮಾಡಿ ಎಂ.ಎ. ಪದವಿ ಪಡೆದುಕೊಂಡರು. ೧೯೧೩ರಲ್ಲಿ ಮೈಸೂರಿನ ಸಿವಿಲ್ ಸರ್ವಿಸ್ ಪರೀಕ್ಷೆ ಉತ್ತೀರ್ಣರಾದರು. ಕೆಲಕಾಲ ಬೆಂಗಳೂರು ಮತ್ತು ಮದ್ರಾಸುಗಳಲ್ಲಿ ಉಪನ್ಯಾಸಕರಾಗಿ ದುಡಿದರು.

Thursday, June 2, 2016

ಸಂಗೀತ ಮಾಂತ್ರಿಕ ಇಳಯರಾಜಾ

ಚಿತ್ರಸಂಗೀತ ಲೋಕದ ಮಹಾನ್ ಸಾಧಕರಾದ ಇಳಯರಾಜಾ ಅವರು ಜೂನ್ 2, 1943ರ ವರ್ಷದಲ್ಲಿ ಜನಿಸಿದರು.  ತಮಿಳು, ಕನ್ನಡ, ಮಲಯಾಳಂ, ತೆಲುಗು, ಹಿಂದೀ ಮತ್ತು ಮರಾಠಿ ಚಿತ್ರರಂಗಗಳಲ್ಲಿ ಅವರ  ಸಂಗೀತ ಸಂಯೋಜನೆಯಲ್ಲಿ ಸುಮಧುರ ಗೀತೆಗಳು ಹರಿದು ಬಂದಿವೆ.  ಅವರು ಗಾಯನ ಮತ್ತು ಗೀತರಚನೆಗಳಲ್ಲೂ ಪ್ರಸಿದ್ಧರು.

ಸಿನಿಮಾ ಕ್ಷೇತ್ರ ಹಲವು ಕಾರಣಗಳಿಗೆ ಜನಪ್ರಿಯ.  ಕೆಲವೊಂದು ಕಾರಣಗಳಿಗೆ ಗಣ್ಯವೆನಿಸಿದ್ದರೆ  ಬಹಳಷ್ಟು ಕಾರಣಗಳಿಗೆ ಅಗಣ್ಯ ಕೂಡಾ.  ಆದರೆ, ಕೆಲವೊಂದು ಮಹನೀಯರನ್ನು ಕಂಡಾಗ ಮಾತ್ರ ಅದಕ್ಕೊಂದು ಗೌರವ ಮೂಡುತ್ತದೆ.  ಈ ರೀತಿ ತಾವು ಮಾಡುವ ಕ್ಷೇತ್ರಕ್ಕೆ ಗೌರವ ನೀಡುವ ಮಂದಿ ಹಲವು ಕೋಟಿಗಳಿಗೆ ಒಬ್ಬರು.  ಇಳಯರಾಜಾ ಅಂತಹ ಶ್ರೇಷ್ಠರ ಪಂಕ್ತಿಗೆ ಸೇರಿದವರು.

ಇಳಯರಾಜಾ ಅವರಿಗೆ ೭೪ನೇ ಹುಟ್ಟುಹಬ್ಬದ ಶುಭಾಶಯಗಳು

ಇಳಯರಾಜಾ
ಕೇಳದೆ ನಿಮಗೀಗ ದೂರದಲ್ಲಿ ಯಾರೋ......(ಗೀತಾ)
ಯಾವ ಶಿಲ್ಪಿ ಕಂಡ ಕನಸು ನೀನು..(ಪಲ್ಲವಿ-ಅನು ಪಲ್ಲವಿ)
ನಮ್ಮೂರಮಂದಾರ ಹೂವೆ, 
ಸಿಹಿ ಗಾಳಿ..ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ
ಆ ದಿನಗಳು, ಜನ್ಮ ಜನ್ಮದ ಅನುಬಂಧ ......ಇಂಥಾ ಚಿತ್ರಗಳ ಹಾಡುಗಳನ್ನು ಕನ್ನಡಿಗರು ಮರೆಯಲಾದೀತೆ ?

ಚಿತ್ರಸಂಗೀತ ಲೋಕದ ಮಹಾನ್ ಸಾಧಕರಾದ ಇಳಯರಾಜಾ ಅವರು ಜೂನ್ 2, 1943ರ ವರ್ಷದಲ್ಲಿ ಜನಿಸಿದರು.  ತಮಿಳು, ಕನ್ನಡ, ಮಲಯಾಳಂ, ತೆಲುಗು, ಹಿಂದೀ ಮತ್ತು ಮರಾಠಿ ಚಿತ್ರರಂಗಗಳಲ್ಲಿ ಅವರ  ಸಂಗೀತ ಸಂಯೋಜನೆಯಲ್ಲಿ ಸುಮಧುರ ಗೀತೆಗಳು ಹರಿದು ಬಂದಿವೆ.  ಅವರು ಗಾಯನ ಮತ್ತು ಗೀತರಚನೆಗಳಲ್ಲೂ ಪ್ರಸಿದ್ಧರು.

ಸಿನಿಮಾ ಕ್ಷೇತ್ರ ಹಲವು ಕಾರಣಗಳಿಗೆ ಜನಪ್ರಿಯ.  ಕೆಲವೊಂದು ಕಾರಣಗಳಿಗೆ ಗಣ್ಯವೆನಿಸಿದ್ದರೆ  ಬಹಳಷ್ಟು ಕಾರಣಗಳಿಗೆ ಅಗಣ್ಯ ಕೂಡಾ.  ಆದರೆ, ಕೆಲವೊಂದು ಮಹನೀಯರನ್ನು ಕಂಡಾಗ ಮಾತ್ರ ಅದಕ್ಕೊಂದು ಗೌರವ ಮೂಡುತ್ತದೆ.  ಈ ರೀತಿ ತಾವು ಮಾಡುವ ಕ್ಷೇತ್ರಕ್ಕೆ ಗೌರವ ನೀಡುವ ಮಂದಿ ಹಲವು ಕೋಟಿಗಳಿಗೆ ಒಬ್ಬರು.  ಇಳಯರಾಜಾ ಅಂತಹ ಶ್ರೇಷ್ಠರ ಪಂಕ್ತಿಗೆ ಸೇರಿದವರು.

Monday, May 30, 2016

ರವಿಚಂದ್ರನ್ ಅವರ 56ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು




ನಮ್ಮ ವಿ. ರವಿಚಂದ್ರನ್ ಹುಟ್ಟಿದ ಹಬ್ಬ.  ಅವರು ಹುಟ್ಟಿದ್ದು ಮೇ 30, 1961 ರಲ್ಲಿ.  ಹೆಸರಾಂತ ಚಲನಚಿತ್ರಗಳ ನಿರ್ಮಾಪಕ, ವಿತರಕರಾದ ಎನ್.  ವೀರಸ್ವಾಮಿ ಅವರ ಪುತ್ರ ರವಿಚಂದ್ರನ್.    ಪ್ರಾರಂಭದಲ್ಲಿ ಅಲ್ಲೊಂದು ಇಲ್ಲೊಂದು ಪಾತ್ರಗಳನ್ನು ಮಾಡುತ್ತಾ ತಾನು ಭಾಗವಹಿಸಿದ್ದ ಒಂದೊಂದು ಚಿತ್ರದಲ್ಲೂ ಇನಿತಿನಿತು ಕಲಿಯುತ್ತ ಬಂದ ಈ ಹುಡುಗ ‘ಗ್ರೀಸ್ 2’ ಎಂಬಂತಹ ಚಿತ್ರವನ್ನು ನೆನಪಿಸುವ ‘ಪ್ರೇಮಲೋಕ’ ಎಂಬ ಚಿತ್ರವನ್ನು ಮಾಡಿ ಮನೆಮಾತಾಗಿ ಬಿಟ್ಟರು.  ಆತನ ಯಶಸ್ಸಿನ ಹಾದಿ ‘ಅಂಜದ ಗಂಡು’, ‘ರಣಧೀರ’ ಮುಂತಾದ ಯಶಸ್ವೀ ಚಿತ್ರಗಳನ್ನು ತಂದಿತು.  ರವಿಚಂದ್ರನ್ ತಮಗೆ ಅಭಿಮಾನಿಗಳು ನೀಡಿರುವ ಬಿರುದಿನಂತೆ ಒಬ್ಬ ಮಹಾನ್ ‘ಕನಸುಗಾರ’. ಕ್ರೇಜಿ ಸ್ಟಾರ್

ಹಿರಿಯ ನಟರೊಂದಿಗೆ ರವಿಚಂದ್ರನ್
ರವಿಚಂದ್ರನ್ ಚಿತ್ರಗಳನ್ನು ನೋಡಿದಾಗಲೆಲ್ಲಾ ಏನೋ ಒಂದು ಅಪೂರ್ಣತೆಯಿದೆ ಎಂದು ಅನಿಸುವುದರ ಜೊತೆಗೆ ಇಲ್ಲೂ ಏನೋ ಹೊಸತು ಕಾಣುತ್ತಿದೆ, ಒಂದಷ್ಟು ವೈಭವೀಕರಣ ಇದೆ, ಅರ್ಥ ತಾತ್ಪರ್ಯಗಳ ಗೋಜಿಗೆ ಹೋಗದಿದ್ದರೆ ಒಂದಷ್ಟು ಗುನುಗೋಣ ಎನಿಸುವ ಹಾಡುಗಳಿವೆ, ನಮ್ಮ ಸೆನ್ಸಾರ್ ಮಂಡಳಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎಂದು ಕೆಲವೊಮ್ಮೆ ಸಂದೇಹ ಉಕ್ಕಿಸುವ ಸನ್ನಿವೇಶಗಳಿವೆ ಇವೆಲ್ಲಾ ನೆನಪಾಗುತ್ತೆ.  ಇವರು  ಪೆದ್ದು ಪೆದ್ದಾಗಿ ನಟಿಸಿದ ‘ರಾಮಾಚಾರಿ’, ಒಂದಷ್ಟು ತಾಳ್ಮೆ ಗಾಂಭೀರ್ಯತೆಯಿಂದ ನಟಿಸಿದ್ದ ‘ಕನಸುಗಾರ’, ‘ಯಾರೇ ನೀನು ಚೆಲುವೆ’’ ಅಂತಹ ಚಿತ್ರಗಳು,  ‘ಪ್ರೇಮ ಲೋಕ’ದಲ್ಲಿ ಆತ ಕೆಲವೊಂದು ಪ್ರಮುಖ ನಟ ನಟಿಯರನ್ನು ಬೆರೆಸಿ ಸೃಷ್ಟಿಸಿದ ಕೆಲವು ಹಾಡುಗಳು ಇತ್ಯಾದಿಗಳು ಆತನನ್ನು ಮೆಚ್ಚುವಂತೆ ಕೂಡಾ ಮಾಡುತ್ತೆ.

ರವಿಚಂದ್ರನ್ ಎಷ್ಟು ಸಿನಿಮಾದಲ್ಲಿ ಗೆದ್ದಿದ್ದಾರೋ ಅದಕ್ಕೆ ಮಿಗಿಲಾದ ಚಿತ್ರಗಳು ಸೋತಿವೆ ಎಂಬುದು ಕೂಡಾ ನಿಜ.  ಆತ ನಿರ್ಮಿಸಿದ ಪರಭಾಷಾ ಸರಕುಗಳು ಜಯಗಳಿಸುವ ಹಾಗೆ ಆತನ ‘ಏಕಾಂಗಿ’ಯಂತಹ ಹೊಸ ಪ್ರಯತ್ನಗಳು ಮನಸೆಳೆಯಲಿಲ್ಲ.  ಇಷ್ಟಾದರೂ ಕಳೆದ ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ಚಿತ್ರರಂಗದಲ್ಲಿದ್ದು ಇಂದೂ ಕೂಡಾ ಆತ ಸೋಲು ಗೆಲುವುಗಳ ಪರಿಧಿಯಾಚೆಗೆ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಾಮಾನ್ಯವಾದ ಮಾತೇನಲ್ಲ.

ಹಂಸಲೇಖ ಅಂತಹ ಮಹಾನ್ ಪ್ರತಿಭೆಯನ್ನು ಕನ್ನಡ ಚಿತ್ರರಂಗಕ್ಕೆ ದೊರಕಿಸಿಕೊಟ್ಟದ್ದು, ಜ್ಯೂಲಿ ಚಾವ್ಲಾಳನ್ನು ಮೊದಲು ಪ್ರಸಿದ್ಧಿ ಪಡಿಸಿದ್ದು, ಖುಷ್ಬೂಗೆ ಅಮೋಘ ಪ್ರಸಿದ್ಧಿ ತಂದಿದ್ದು, ಶಿಲ್ಪಾ ಶೆಟ್ಟಿಗೆ ಕೂಡಾ  ಸುಂದರವಾಗಿ ಚಿತ್ರಗಳಲ್ಲಿ ಕಾಣಬಲ್ಲಳು  ಎಂದು ತೋರಿದ್ದು ಇವೆಲ್ಲಾ ರವಿಯ ಗರಿಮೆಗಳೇ.  ಇಷ್ಟಾಗಿಯೂ ಈತ ತನ್ನ ಚಿತ್ರಗಳಲ್ಲಿ ಯಾವುದೋ ವೈಭವೀಕರಣ ತುರುಕಿ ಯಶಸ್ಸನ್ನು ಹುಡುಕುತ್ತಿರುವುದರ ಜೊತೆ ಜೊತೆಗೆ ಸೃಜನಶೀಲತೆಯಲ್ಲಿ ಮತ್ತಷ್ಟು ಪ್ರಯತ್ನಿಸಬಹುದಿತ್ತು ಎಂದು ಅನಿಸದಿರದು. 

ಈ ಹಿಂದೆ ತಮ್ಮ ತಮ್ಮನನ್ನು ಚಿತ್ರರಂಗಕ್ಕೆ ತರಲು ಯತ್ನಿಸಿದ್ದ ರವಿಚಂದ್ರನ್ ಇದೀಗ ತಮ್ಮ ಪುತ್ರರನ್ನು ಚಿತ್ರರಂಗಕ್ಕೆ ತರುವ ಯತ್ನದಲ್ಲಿದ್ದಾರೆ.  ತಮ್ಮ ಮಕ್ಕಳನ್ನು ಮುಂದೆ ತಂದು ತಾವು ಮುಂಬರುವ ದಿನಗಳಲ್ಲಿ ಹಿಂದೆ ಸರಿಯುವ ಮಾತನ್ನು ಕೂಡಾ ಇತ್ತೀಚೆಗೆ ಹೇಳಿದ್ದಾರೆ.


ಈ ಉತ್ಸಾಹೀ ರವಿಚಂದ್ರನ್ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿ ಅವರಿಂದ ಉತ್ತಮ ಚಿತ್ರಗಳು ಮೂಡಲಿ ಎಂದು ಹಾರೈಸೋಣ.

Sunday, May 29, 2016

ರೆಬಲ್ ಸ್ಟಾರ್ ಅಂಬರೀಶ್ ಅವರ 64ನೇ ಹುಟ್ಟು ಹಬ್ಬದ ಶುಭಾಶಯಗಳು


ಅಂಬರೀಶ್ ಅವರಿಗೆ ವಯಸ್ಸು ಅರವತ್ನಾಲ್ಕಾಯಿತು.   ಅವರು ಚಿತ್ರರಂಗದಲ್ಲೇ ತಮ್ಮ ನಲವತ್ನಾಲ್ಕು   ವರ್ಷಗಳನ್ನು ತುಂಬಿದವರು.    ಅವರು ಹುಟ್ಟಿದ್ದು ಮೇ 29, 1952ರಲ್ಲಿ.  ನಾಗರಹಾವು ಚಿತ್ರದಲ್ಲಿ ಜಲೀಲನಾಗಿ "ಏ ಬುಲ್-ಬುಲ್ ಮಾತಾಡಕಿಲ್ವ ?" ಅಂತ ಬಂದ ಈ ಹುಡುಗನ ಈ ಚಹರೆಗೂ, ಮಹಾರಾಜನ ಮೈಕಟ್ಟನ್ನು ಬೆಳೆಸಿ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರುವ ಇಂದಿನ ಅಂಬಿಗೂ ಅಜಗಜಾಂತರವಿದೆ.  ಒಂದು ರೀತಿಯಲ್ಲಿ ಅದು ಅಂದಿನ ಮಳವಳ್ಳಿ ಅಮರನಾಥ ಹುಚ್ಚೇಗೌಡನಿಗೂ ಇಂದಿನ ಜನಪ್ರತಿನಿದಿ, ಜನಪ್ರಿಯ ನಟ ಅಂಬರೀಶ್ ಅವರಿಗೂ ಇರುವ ಅಗಾಧತೆಯ ಪ್ರತೀಕವೂ ಹೌದು. 

Wednesday, May 11, 2016

ಜಿಡ್ಡು ಕೃಷ್ಣಮೂರ್ತಿ ಅವರ 122ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಜಿಡ್ಡು ಕೃಷ್ಣಮೂರ್ತಿ:(1885-1986)
ಜೆ ಕೃಷ್ಣಮೂರ್ತಿ ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 11ನೇ ಮೇ 1895ರಲ್ಲಿ ಜನಿಸಿದರು.  1909ರ ವರ್ಷದಲ್ಲಿ ಕೃಷ್ಣಮೂರ್ತಿಯವರನ್ನು ಬೋಧಿಸತ್ವ ಅಂತಃಕರಣದ ಮೈತ್ರೇಯ ಅವತಾರಿ - ವಿಶ್ವಗುರು ಎಂದು ಪ್ರಚಾರ ನೀಡಲಾಯಿತು.
 ಹಿಂದೂ ಧರ್ಮ ಮತ್ತು ಬೌದ್ಧ ತತ್ವಗಳಿಗೆ ಪಾಶ್ಚಾತ್ಯ ಸ್ವರೂಪಗಳ ಮಿಶ್ರಣವನ್ನು ನೀಡಿದ ಥಿಯೋಸೋಫಿಕಲ್ ಸೊಸೈಟಿಯ ಅಧ್ಯಕ್ಷರಾದ ಸ್ವಯಂ ಅನ್ನಿ ಬೆಸೆಂಟ್ ಅವರೇ ಈ ಪ್ರಚಾರವನ್ನು ನೀಡಿದ್ದರು.  ಕೃಷ್ಣಮೂರ್ತಿಯವರಿಗೆ ಈ ವಿಶ್ವಗುರು ಪಟ್ಟಕ್ಕೆ ಸಕಲ ತರಬೇತಿಗಳನ್ನೂ ಅನ್ನಿ ಬೆಸೆಂಟ್ ಮತ್ತವರ ಸಂಗಡಿಗರು ನೀಡಿದ್ದರಾದರೂ, ಇಪ್ಪತ್ತು ವರ್ಷಗಳ ನಂತರದಲ್ಲಿ ಅಂದರೆ 1929ರಲ್ಲಿ ಕೃಷ್ಣಮೂರ್ತಿಯವರು ತಾವು ನೇತೃತ್ವ ವಹಿಸಿದ್ದ ‘ಆರ್ಡರ್ ಆಫ್ ದಿ ಸ್ಟಾರ್ ಇನ್ ಈಸ್ಟ್’ ಸಂಘಟನೆಯನ್ನು ಯಾವ ಮುಲಾಜೂ ಇಲ್ಲದೆ ತೊರೆದ ಧೀಮಂತರಾಗಿಬಿಟ್ಟರು.  ಇದಕ್ಕಾಗಿ ಅವರಿಗೆ ವಹಿಸಿದ್ದ ಸಕಲ ಐಶ್ವರ್ಯ ಸಂಪತ್ತುಗಳನ್ನೂ ಹಿಂದಿರುಗಿಸಿಬಿಟ್ಟರು. ಅಲ್ಲಿಂದ ಮುಂದೆ ಏಕಾಂಗಿಯಾಗಿ ನಡೆದ ಜೆ. ಕೃಷ್ಣಮೂರ್ತಿಯವರು, ತಮ್ಮ  ಮುಂದಿನ ಅರವತ್ತು ವರ್ಷಗಳ ಜೀವಿತಾವಧಿಯಲ್ಲಿ  ವಿಶ್ವದಾದ್ಯಂತ ಸಂಚರಿಸಿ, ಮಾನವ ಸಮಾಜದಲ್ಲಿ ಸ್ವಯಂದಾರ್ಶನಿಕ ಬದಲಾವಣೆಯನ್ನು ತರಲು ಅಪಾರವಾದ ಕೆಲಸ ಮಾಡಿದರು. 

Wednesday, May 4, 2016

ಅನಂತನಾಗ್ ಅವರ ಜೀವನ-ಚಲನಚಿತ್ರ ಇತಿಹಾಸ

 ಅನಂತನಾಗ್ ಅವರ ಮಾತುಗಳಲ್ಲಿಯೇ :ಭಾಗ-1

ವೀಕ್ಸಿಸಿ ಉಪೇಂದ್ರ ರವರು ವೀಕ್ ಎಂಡ್ ವಿಥ್ ರಮೇಶ್ ದಲ್ಲಿ (Part-2)

ವೀಕ್ಸಿಸಿ ಉಪೇಂದ್ರ ರವರು ವೀಕ್ ಎಂಡ್ ವಿಥ್ ರಮೇಶ್ ದಲ್ಲಿ (Part-2)

ಅನಂತನಾಗ್ ಅವರ ಜೀವನ-ಚಲನಚಿತ್ರ ಇತಿಹಾಸ

ಅನಂತನಾಗ್ ಅವರ ಮಾತುಗಳಲ್ಲಿಯೇ :ಭಾಗ-2

ವೀಕ್ಸಿಸಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೀತಿ :

ಅನಂತನಾಗ್ ಅವರ ಜೀವನ-ಚಲನಚಿತ್ರ ಇತಿಹಾಸ ಭಾಗ-3

ಅನಂತನಾಗ್ ಅವರ ಮಾತುಗಳಲ್ಲಿಯೇ :ಭಾಗ-3

Monday, April 25, 2016

ಮಹಾ ಶರಣೆ ಅಕ್ಕಮಹಾದೇವಿ

ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ-
ಎಂಬತ್ತುನಾಲ್ಕು ಲಕ್ಷ ಯೋನಿಯೊಳಗೆ
ಬಂದೆ ಬಂದೆ ಬಾರದ ಭವಗಳನುಂಡೆನುಂಡೆ ಸುಖಾಸುಖಂಗಳ ಹಿಂದಣ ಜನ್ಮಂಗಳು 
ತಾನೇನಾದರಾಗಲಿ ಇಂದು ನೀ ಕರುಣಿಸು  ನ್ನಮಲ್ಲಿಕಾರ್ಜುನ ||

ಹನ್ನೆರಡನೆಯ ಶತಮಾನದಷ್ಟು ಹಿಂದೆಯೆ ಕನ್ನಡನಾಡಿನ ಪರಿಸರದಲ್ಲಿ ತನ್ನ ವೈಚಾರಿಕತೆ ಹಾಗೂ ಆತ್ಮಪ್ರತ್ಯಯದ ಮೂಲಕ ಹೆಣ್ಣಿನ ವ್ಯಕ್ತಿತ್ವಕ್ಕೆ ಒಂದು ಘನತೆ ಗೌರವವನ್ನು ತಂದುಕೊಟ್ಟ ಅಕ್ಕಮಹಾದೇವಿ, ಅಂದು ಬಸವಣ್ಣನವರ ವ್ಯಕ್ತಿ ಕೇಂದ್ರದಲ್ಲಿ ರೂಪುಗೊಂಡ ಶರಣ ಚಳುವಳಿಯ ಮೇಲೆ ಹಾದುಹೋದ ಒಂದು ಉಜ್ವಲವಾದ ಮಿಂಚಿನ ಗೆರೆಯಂತೆ ತೋರುತ್ತಾಳೆ. 
ಮಹಾದೇವಿ ಉಡುತಡಿಯಿಂದ ಶ್ರೀಶೈಲ ಶಿಖರಕ್ಕೆ ಬಿಟ್ಟ ಬೆಳಕಿನ ಬಾಣದಂತೆ ನೇರವಾಗಿ ಹೊರಟ ಹಾದಿಯಲ್ಲಿ, ಕಲ್ಯಾಣದ ಈ ಶರಣಕಿರಣ ಕೇಂದ್ರದಿಂದ ಆಕರ್ಷಿತಳಾಗಿ ಸ್ವಲ್ಪ ಕಾಲ ನಿಂತವಳು. ತನ್ನ ವ್ಯಕ್ತಿತ್ವ ಹಾಗೂ ಅನುಭಾವಿಕ ನಿಲುವುಗಳಿಂದ ಶರಣ ಸಮೂಹವನ್ನು ಬೆರಗುಗೊಳಿಸಿದವಳು.

Sunday, April 24, 2016

ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರ 88ನೇ ಹುಟ್ಟುಹಬ್ಬದ ಶುಭಾಶಯಗಳು !

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಪದ್ಮವಿಭೂಷಣ ಡಾ. ರಾಜ್ ಕುಮಾರ್ ಅವರ ಹುಟ್ಟಿದ ಹಬ್ಬ ಬಂತು.  ನಮ್ಮ ಅಣ್ಣಾವ್ರಿದ್ದ ದಿನದಲ್ಲಿ ಅವರ ಅಭಿಮಾನಿಗಳಿಗೆ ಅದೊಂದು ಅದ್ಧೂರಿಯ ಹಬ್ಬ.  ಇಂದೂ ಅವರ ಕಾಲದಲ್ಲಿ ಬದುಕಿದ ಕನ್ನಡಿಗರೆಲ್ಲರಿಗೆ ಈ ಕ್ಷಣ ಒಂದು ರೀತಿಯಲ್ಲಿ ಮೈನವಿರೇಳಿಸುವ ಸಂದರ್ಭ.   ಅವರು ಹುಟ್ಟಿದ್ದು ಏಪ್ರಿಲ್ 24, 1929ರ ವರ್ಷದಲ್ಲಿ. 
ಈ ಮಹಾನ್ ನಟ ನಮ್ಮನ್ನಗಲಿ ಈ ಏಪ್ರಿಲ್ ೧೨ಕ್ಕೆ  ಬರೊಬ್ಬರಿ ಒಂದು ದಶಕವೇ ಕಳೆದು ಹೋಯಿತು !

ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ಅವರು ತಮ್ಮ ತಂದೆ ಪುಟ್ಟಸ್ವಾಮಯ್ಯ ಅವರ ಜೊತೆ ಗುಬ್ಬೀ ಕಂಪೆನಿ, ಸುಬ್ಬಯ್ಯನಾಯ್ಡು ಅವರ ನಾಟಕ ಮಂಡಳಿಗಳಲ್ಲಿ ಕಷ್ಟಪಟ್ಟು ಬೆವರುಹರಿಸಿ ದುಡಿದು ಎಚ್.ಎಲ್.ಎನ್ ಸಿಂಹ ಅವರ ಬೇಡರ ಕಣ್ಣಪ್ಪ ಚಿತ್ರದಲ್ಲಿ ಅಭಿನಯಿಸಿದಾಗ ಸುಮಾರು 26 ವರ್ಷ.

Friday, April 22, 2016

ಚೇತನ್ ಭಗತ್ ಅವರ 42ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

Chetan Bhagat
ಇಂದು ಭಾರತದ ಪ್ರಖ್ಯಾತ ಲೇಖಕರಾದ ಯುವಕ ಚೇತನ್ ಭಗತ್ ಅವರ ಹುಟ್ಟು ಹಬ್ಬ.  ಅವರು ಹುಟ್ಟಿದ್ದು ಏಪ್ರಿಲ್ 22, 1974ರಲ್ಲಿ. 

ಬಹಳಷ್ಟು ಉತ್ತಮ ಬರಹಗಾರರು ತಮ್ಮ ಹೃದಯವನ್ನು ತೆರೆದಿಡುವುದರಲ್ಲಿ ಮತ್ತು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಿಗೊಳಿಸುವುದರಲ್ಲಿ ಕಲಾತ್ಮಕತೆಯನ್ನು ಹೊರಹೊಮ್ಮಿಸುತ್ತಾರೆ.  ಚೇತನ್ ಭಗತ್ ಇವೆರಡನ್ನೂ ಯಶಸ್ವಿಯಾಗಿ ಮಾಡುತ್ತಿದ್ದಾರೆ ಜೊತೆಗೆ  ಇವೆರಡಕ್ಕೂ ಮೀರಿದ ಇನ್ನೇನನ್ನೋ ಕೂಡಾ ಮಾಡುತ್ತಿದ್ದಾರೆ.   ಚಲನಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಚಲನಚಿತ್ರವಾದ ‘ತ್ರೀ ಈಡಿಯಟ್ಸ್’  ಚಿತ್ರದ ಮೂಲ ಚಿಂತನೆಯ ಆಳ ಚೇತನ್ ಭಗತ್ ಅವರದ್ದು.

ಭಾರತದ ಪ್ರತಿಷ್ಠಿತ ಅಧ್ಯಯನ ಕೇಂದ್ರಗಳಾದ ಐಐಟಿ, ಐಐಮ್ ಗಳಲ್ಲಿ ವಿದ್ಯಾಭ್ಯಾಸದ ಸಾಧನೆ ಮಾಡಿರುವ ಚೇತನ್ ಭಗತ್ ಅವರ ಬುದ್ಧಿವಂತಿಕೆಗೆ ಪ್ರಮಾಣ ಪತ್ರ ಬೇರೇನೂ ಬೇಕಿಲ್ಲ.

Sunday, April 17, 2016

ಪುನೀತ್ ರಾಜ್ ಕುಮಾರ್ ಅವರ 41ನೇ ಹುಟ್ಟೂಹಬ್ಬದ ಹಾರ್ಧಿಕ ಶುಭಾಶಯಗಳು

ರಾಜ್ ಕುಮಾರ್ ಅಂದರೆ ಕನ್ನಡದಲ್ಲಿ ಒಂದು ಅಗಾಧ ಶಕ್ತಿ. ಆ ರಾಜ್ ಕುಮಾರ್ ಅವರ ಮಗನಾಗಿ ಬಂದು ಇಂದು ಕನ್ನಡ ಚಿತ್ರರಂಗದಲ್ಲಿ ಅಪಾರ ಯಶಸ್ಸಿನಿಂದ ಮಿನುಗುತ್ತಿರುವ ಹುಡುಗ ಪುನೀತ್. ಇದೀಗ ಕನ್ನಡಿಗರ ಪವರ್ ಸ್ಟಾರ್, ಇವರ  ಹುಟ್ಟಿದ ದಿನ ದಿನಾಂಕ ಮಾರ್ಚ್ 17, 1975. ಪುನೀತ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳೋಣ.

ಪುನೀತ್ ಬಾಲ್ಯದಲ್ಲೇ ರಾಜ್ ಅವರೊಂದಿಗೆ ಬಾಲನಟನಾಗಿ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡು ಚಿತ್ರರಂಗದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟ ಹುಡುಗ.

Saturday, April 16, 2016

ಬೆಟಗೇರಿ ಕೃಷ್ಣಶರ್ಮ ಅವರ 117ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಬೆಟಗೇರಿ ಕೃಷ್ಣಶರ್ಮ

ಬೆಟಗೇರಿ ಕೃಷ್ಣಶರ್ಮರವರು 1900 ಏಪ್ರಿಲ್ 16 ರಂದು ಗೋಕಾಕ ತಾಲ್ಲೂಕಿನ ಬೆಟಗೇರಿಯಲ್ಲಿ ಜನಿಸಿದರು. ಆನಂದಕಂದ ಇವರ ಕಾವ್ಯನಾಮ ತಮ್ಮ ಹನ್ನರಡನೇ ಮಯಸ್ಸಿಗೆ ತಂದೆಯನ್ನು ಕಳೆದುಕೊಂಡು ಸಂಸಾರದ ಹೊರೆಯನ್ನು ಹೊರಲೇಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿಯೂ ಸಹ ಅಲ್ಪ ಸ್ವಲ್ಪ ಓದು ಕಲಿತ ಕೃಷ್ಣಶರ್ಮರು ಮನೆಯಲ್ಲಿದ್ದರು. ೧೯೧೯ರಲ್ಲಿ ಧಾರವಾಡದಲ್ಲಿ ಜರುಗಿದ ಕರ್ನಾಟಕ ಏಕೀಕರಣ ಸಮ್ಮೇಳನ ಜರುಗಿದಾಗ ಕಾವ್ಯಾನಂದರ ನೇತೃತ್ವದಲ್ಲಿ ಸ್ವಯಂ ಸೇವಕರಾಗಿ ದುಡಿದರು. ಆಗ ಇವರಿಗೆ ಕೆರೂರು ವಾಸುದೇವಾಚಾರ್ಯ, ಹುಯಿಲಗೊಳ ನಾರಾಯಣರಾವ್ ಅವರಂತಹ ಸಂಪರ್ಕ ಅಲ್ಲದೇ ಕನ್ನಡಾಭಿಮಾನವೂ ಬೆಳೆಯಿತು. 

ಚಾರ್ಲಿ ಚಾಪ್ಲಿನ್ ಅವರ 127ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ !

Charlie Chaplin
ಚಾರ್ಲಿ ಚಾಪ್ಲಿನ್ ಹುಟ್ಟಿದ ದಿನ ಏಪ್ರಿಲ್ 16,1889.  ಚಾಪ್ಲಿನ್ ಚಿತ್ರಗಳನ್ನು ಆಸ್ವಾದಿಸಿದ  ನಮಗೆ ಚಾಪ್ಲಿನ್ನನಷ್ಟು  ಆತ್ಮೀಯರು ಮತ್ತೊಬ್ಬರಿದ್ದಾರೆಯೇ ಎನಿಸುತ್ತದೆ.  ಇಡೀ ವಿಶ್ವಕ್ಕೆ ಸಂತೋಷ ಕೊಟ್ಟ ಅಪರೂಪದ ವ್ಯಕ್ತಿ ಆತ.  ಚಾಪ್ಲಿನ್ನನಿಗೆ ಹೇಳಬೇಕೆನಿಸುತ್ತಿದೆ  “ಚಾಪ್ಲಿನ್ ನೀನು ಯಾವ ಲೋಕದಲ್ಲಿದ್ದರೂ ಅಲ್ಲಿನ ಜನರನ್ನು ಸಂತೋಷವಾಗಿ ಇಟ್ಟಿರುವೆ!”

ಚಾರ್ಲಿ ಚಾಪ್ಲಿನ್ ಹುಟ್ಟಿದ್ದು  ವಾಲ್ ವರ್ತ್ ಎಂಬ ಲಂಡನ್ನಿನ ಸಮೀಪದ ಊರಿನಲ್ಲಿ.  ಎಂಬತ್ತೆಂಟು ವರ್ಷ ಬದುಕಿ 1977ರ ಕ್ರಿಸ್ಮಸ್ ದಿನದಂದು ಸ್ವಿಟ್ಸರ್ಲೆಂಡಿನಲ್ಲಿ ನಿಧನನಾದ. 

‘ದಿ ಟ್ರಂಪ್’, ‘ಮಾಡರ್ನ್ ಟೈಮ್ಸ್’, ‘ದಿ ಗ್ರೇಟ್ ಡಿಕ್ಟೇಟರ್’, ‘ಸಿಟಿ ಲೈಟ್ಸ್’, ’ದಿ ಸರ್ಕಸ್’, ‘ಗೋಲ್ಡ್  ರಷ್’ ಮುಂತಾದ ಚಿತ್ರಗಳಲ್ಲಿ ಆತ ನಡೆದದ್ದು, ಕುಣಿದದ್ದು, ಪ್ರೇಮಿಸಿದ್ದು, ಆಟ ಆಡಿದ್ದು, ಪೆಚ್ಚನಂತೆ ನಕ್ಕದ್ದು, ಹೀಗೆ ಆತ ಚಿತ್ರದಲ್ಲಿ  ಮಾಡಿದ್ದು ಮತ್ತು ಮಾಡದೆ ಸುಮ್ಮನಿದ್ದದು  ಎಲ್ಲವೂ ಪ್ರಿಯವೋ ಪ್ರಿಯ. 

Saturday, April 9, 2016

ಪ್ರತಿಮಾದೇವಿ ಅವರ 84ನೇ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ !

Pratima Devi 

ಪ್ರತಿಮಾದೇವಿ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಪ್ರಸಿದ್ಧ ಅಭಿನೇತ್ರಿಯರಲ್ಲಿ ಒಬ್ಬರು.   ‘ಜಗನ್ಮೋಹಿನಿ’ ಚಿತ್ರದಲ್ಲಿ ಹರಿಣಿ ಅವರಿಗೆ ಸರಿಸಾಟಿಯಾದ ಸುಂದರಿಯಾಗಿ,  ‘ದಲ್ಲಾಳಿ’ಯಲ್ಲಿ ರಾಜ್ ಕುಮಾರ್  ಅವರ ಗಯ್ಯಾಳಿ ಪತ್ನಿಯಾಗಿ ಹೀಗೆ ಹಲವಾರು ಚಿತ್ರಗಳಲ್ಲಿ ಅವರು ಚಿತ್ರರಸಿಕರ ಮನಸ್ಸನ್ನು ಗೆದ್ದವರು.  ಪ್ರತಿಮಾದೆವಿಯವರು  ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ಮಾಪಕ ನಿರ್ದೇಶಕ ಮಹಾತ್ಮ ಪಿಕ್ಚರ್ಸ್ ಸಂಸ್ಥೆಯ ಸ್ಥಾಪಕರಾದ ಶಂಕರ್ ಸಿಂಗ್ ಅವರ ಪತ್ನಿ.  ಕನ್ನಡದ ಪ್ರಸಿದ್ಧ ನಿರ್ದೇಶಕ ಎಸ್. ವಿ. ರಾಜೇಂದ್ರಸಿಂಗ್, ಪ್ರಸಿದ್ಧ ನಟಿ ನಿರ್ಮಾಪಕಿ – ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಪ್ರತಿಮಾದೇವಿ ಅವರ ಮಕ್ಕಳು.  ಅವರ ಮೊಮ್ಮಕ್ಕಳು ಸಹಾ ಚಿತ್ರರಂಗದಲ್ಲಿ ಭಾಗವಹಿಸಿದ್ದಾರೆ.  ಹೀಗೆ ಅವರದ್ದು ಸಂಪೂರ್ಣವಾದ ಕಲಾ ಕುಟುಂಬ.

Friday, April 8, 2016

ರೆವರೆಂಡ್ ಫರ್ಡಿನೆಂಡ್ ಕಿಟೆಲ್ ಅವರ 178ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ರೆವರೆಂಡ್ ಫರ್ಡಿನೆಂಡ್ ಕಿಟೆಲರು 1832ರ ಏಪ್ರಿಲ್ 8 ರಂದು ಜರ್ಮನಿಯ ರಾಸ್ಟರ್ ಹಾಫ್ ಎಂಬ ಊರಿನಲ್ಲಿ ಜನಿಸಿದರು.
ರೆವರೆಂಡ್ ಫರ್ಡಿನೆಂಡ್ ಕಿಟೆಲ
ತಂದೆ ಗಾಟಫ್ರೀಟ್ ಕ್ರಿಶ್ಚಿಯನ್ ಕಿಟೆಲ್. ತಾಯಿ ತೆಯಡೋವ್ ಹೆಲೆನ್ ಹಾರ್ಬಟ್ ಫರ್ಡಿನೆಂಡ್ ಕಿಟೆಲರ ಶಾಲಾ ಶಿಕ್ಷಣ ಅಜ್ಜನ ಊರಾದ ಆರಿಶ್‌ನಲ್ಲಿ ನಡೆಯಿತು. ಅನಂತರ ಸ್ವಟ್ಜರ್ಲೆಂಡಿನ ಬಾಸೆಲ್ ನಗರದ ೧೮೫೩ರಲ್ಲಿ ಮಿಷನ್ ಸ್ಕೂಲನ್ನು ಸೇರಿ ಅಲ್ಲಿಯ ಶಿಕ್ಷಣವನ್ನು ಮುಗಿಸಿ ಗುರುದೀಕ್ಷೆ ಪಡೆದುಕೊಂಡರು. ಮಿಷನ್ ಸಂಸ್ಥೆ ಅವರನ್ನು ಭಾರತಕ್ಕೆ ಕಳುಹಿಸಿಕೊಟ್ಟಿತು. ೧೮೫೪ರ ಅಕ್ಟೋಬರ್ ೨೦ ರಂದು ಮಂಗಳೂರಿಗೆ ಮೊದಲು ಬಂದರು. ಅನಂತರ ಧಾರವಾಡದಲ್ಲಿ ನೆಲೆಸಿದರು. 
ಕಿಟೆಲರಿಗೆ ಗ್ರೀಕ್, ಲ್ಯಾಟಿನ್, ಹೀಬ್ರೂ, ಫ್ರೆಂಚ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. ಅದೇ ರೀತಿಯಲ್ಲಿ ಸ್ಥಳೀಯ ಭಾಷೆಯನ್ನು ಕಲಿಯರು ಆಸಕ್ತಿವಹಿಸಿದರು. ಆ ಕಾರಣಕ್ಕಾಗಿ ಕಿಟೆಲರು ಆ ಕಾಲಕ್ಕೆ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದ ಮಂಗಳೂರಿಗೆ ಹೋದರು. ಅಲ್ಲಿ ಕನ್ನಡ ಭಾಷೆಯ ಅಧ್ಯಯನ ಮಾತ್ರವಲ್ಲದೆ ಜೊತೆಯಲ್ಲಿ ಸಂಸ್ಕೃತ, ತುಳು, ಮಲೆಯಾಳಂ ಭಾಷೆಗಳನ್ನು ಪರಿಚಯ ಮಾಡಿಕೊಂಡರು.

Sunday, April 3, 2016

ಪ್ರಭುದೇವ ಅವರ 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ

Dancing Miracle Prabhudeva 
ಭಾರತೀಯ ಚಿತ್ರರಂಗ ಕಂಡ ಅಪೂರ್ವ ಪ್ರತಿಭೆಗಳಲ್ಲಿ ಒಬ್ಬರಾದ ಪ್ರಭುದೇವ ಏಪ್ರಿಲ್ 3, 1973 ರಲ್ಲಿ ಮೈಸೂರಿನಲ್ಲಿ ಜನಿಸಿದರು.  ನಾಟ್ಯದಲ್ಲಂತೂ ಆತ ಮಾಡದಂತಹ ನಾಟ್ಯವೇ ಇಲ್ಲ.  ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆತ ಹೆಜ್ಜೆ ಇಟ್ಟದ್ದೆಲ್ಲಾ ನಾಟ್ಯವೇ.   ಸಾಮಾನ್ಯವಾಗಿ ಒಬ್ಬ ನಟ ಜನಪ್ರಿಯನಾದಾಗ ಅದಕ್ಕೆ ಹೋಲಿಕೆಗಳೂ ಹುಟ್ಟಿಕೊಳ್ಳುತ್ತವೆ.  ಪ್ರಭುದೇವನನ್ನು ಕುರಿತು ಹೇಳುವಾಗ ಮೈಖೆಲ್ ಜಾಕ್ಸನ್ ಹೆಸರನ್ನು ಭಾರತೀಯರು ಯೋಚಿಸುವುದು ಅಘೋಷಿತ ವಾಡಿಕೆಯೇ ಆಗಿದೆ.  ಅದೇನೇ ಇರಲಿ ಪ್ರಭುದೇವ ಭಾರತೀಯ ಚಿತ್ರರಸಿಕರ ಮನದಲ್ಲಿ ಮೂಡಿಸಿರುವ ನಾಟ್ಯದ ಕ್ರೇಜ್ ಅನ್ನಲಂತೂ ಅಲ್ಲಗೆಳೆಯುವಂತಿಲ್ಲ. ಸಾಮಾನ್ಯವಾಗಿ ಇಂಥಹ ಕ್ರೇಜ್ ಎಂಬುದು ಕೆಲವೊಂದು ಕಲಾವಿದರ ಬಗ್ಗೆ ಕೆಲವೊಂದು ಸೀಮಿತ ಅವಧಿಗೆ ಕೇಳಿ ಬರುವಂತಹ ಮಾತಾಗಿರುತ್ತದೆ.  ಆದರೆ ಪ್ರಭುದೇವ 1988ರ ವರ್ಷದಲ್ಲಿ ಚಿತ್ರರಂಗಕ್ಕೆ ಬಂದಾಗಲಿಂದ ಸುದೀರ್ಘ ಅವಧಿಯವರೆಗೆ ತಮ್ಮ ಪ್ರತಿಭೆ ಮತ್ತು ಜನಪ್ರಿಯತೆಗಳೆರಡನ್ನೂ ಅಪೂರ್ವವೆಂಬಂತೆ ಕಾಯ್ದುಕೊಂಡಿದ್ದಾರೆಂಬುದು ಅವರ ಹೆಗ್ಗಳಿಕೆ.