Translate in your Language

Tuesday, June 9, 2015

ರಾಜಧರ್ಮ ಪಾಲಿಸಿ !

ಹೀಗೊಂದು ಮಾತು ಹೇಳಿದ್ದು ಮಾಜಿ ಪ್ರಧಾನಿ, ಭಾರತದ ಅಸಲಿ ಭಾರತರತ್ನ ವಾಜಪೇಯಿಯವರು.

ಗೋಧ್ರಾ ಹತ್ಯಾಕಾಂಡ ನೆಡೆಯುತ್ತಿರುತ್ತದೆ ಬೇಕಾದರೆ, ಅಂದಿನ ಸಿ ಎಂ ಮೋದಿಯವರಿಗೆ ಹೇಳಿದ ಮಾತು, ಅವರ ಮಾತನ್ನು ಅಕ್ಷರಶಃ ಪಾಲಿಸಿದ್ದಕ್ಕೆ, ಇಂದು ಮೊದಿಯವರು ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದಾರೆ ಎಂದರೆ, ಉತ್ಪ್ರೇಕ್ಷೆ ಅಲ್ಲ .
*********************
ಸಿದ್ದರಾಮಯ್ಯ ಸರ್ಕಾರ ಎತ್ತಸಾಗುತ್ತಿದೆ....?
ಮೊದಲು ಎಡವಿದ್ದು ಸಚಿವ ಸಂಪುಟ ರಚನೆ ಆಗಬೇಕಾದರೇ...! ಮೊದಲು ಶುರುವಾಗಿದ್ದು ಆಂತರಿಕ ಎದುರಾಳಿಗಳ ಬಗ್ಗು ಬಡಿಯುವ ಯತ್ನದಿಂದ, ಕಾಗೋಡು ತಿಮ್ಮಪ್ಪರಂತಃ ಶುದ್ದ ಚಾರಿತ್ರ್ಯದ ೮೩ರ ಯುವ ಉತ್ಸಾಹದ ಹಿರಿಯರ ಕಡಗಣನೆಯಿಂದ ಶುರುವಾದರೆ, ಪರಮೇಶ್ವರ್ ಪರಿಸ್ತಿತಿ, ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬತಾಯಿತು, ಒಟ್ಟಿನಲ್ಲಿ ಕರ್ನಾಟಕದ ಅಭಿವೃದ್ಧಯೊಂದಿಗೆ ,ಸಿದ್ಧರಾಮಯ್ಯರ ವರ್ಚಸ್ಸು ಕೂಡ ಅಧೋಗತಿಗೆ ಹೊಗಿದೆ ಎಂದು ಹೇಳಲು ಯಾವ ರಾಜಕೀಯ ಪಂಡಿತರ ಅವಶ್ಯವಿಲ್ಲ.
ಬೇಕೆ ತುಷ್ಟೀಕರಣ ನೀತಿ...?
ಪ್ರಾಯಶಃ ಸಿದ್ದರಾಮಯ್ಯರ ರಾಜಕೀಯ ಸಲಹೆಗಾರರ ಯಡವಟ್ಟುತನಗಳೇ , ಇಂದು ಕಾಂಗ್ರೆಸ್ ಕಾರ್ಯಕರ್ತರು ಮುಖಮುಚ್ಚಿಕೊಂಡು ಓಡಾಡುವಂತೆ ಮಾಡುತ್ತಿದೆ, ಅಲ್ಪಸಂಖ್ಯಾತರ ಓಟುಗಳೇ ನಮಗೆ ಆಧಾರ, ಎಂಬ ಶುದ್ದ ಮೂರ್ಖತನದ ಆಲೋಚನೆಯೆ , ಇಂದು ಪಿ ಎಫ್ ಐ ,ಕೆ ಎಫ್ ಡಿ ಎಂಬಂತಹ ಸಂಘಟನೆಗಳ ವಿರುದ್ಧ ಇರುವ ಪ್ರಕರಣಗಳ ಹಿಂತೆಗತಕ್ಕೆ ಕಾರಣ, ಇದರ ಪರಿಣಾಮವೇನಾಗುತ್ತದೆ ಎಂಬುದರ ಕಲ್ಪನೆಯೂ ಇಲ್ಲ, ಇದರಿಂದ ಆಗುವುದಿಷ್ಟೇ, ಬಹುಸಂಖ್ಯಾತರ ಏಕೀಕರಣವಾಗುತ್ತದೆ, ಕಾಂಗ್ರೆಸ್ ಎಂಬುದು ಹಿಂದೂ ವಿರೋಧಿ ಪಕ್ಷ ಎಂಬ ಭಾವ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಮೂರು ಓಟು ಸೇರಿದರೆ,ಆರು ಓಟು ಕಳೆದಿರುತ್ತದೆ.
ಇನ್ನು ಡಿ ಕೆ ರವಿಯಂತಃ ದಕ್ಷ ಅಧಿಕಾರಿಗಳಿಗಳಿಗೆ ಒಂದೋ ಸಾಯುವ ಆಯ್ಕೆ ಇಲ್ಲವೇ ಅಮಾನತಿನ, ಅವಮಾನದ ಆಯ್ಕೆ , ಈಪರಿಯ ಹಿಂಸೆ ದಕ್ಷ ಅಧಿಕಾರಿಗಳು ತಮ್ಮ ಜೀವಮಾನವಿಡೀ ಕಂಡಿರಲಿಲ್ಲ ಸಾಧ್ಯವಿಲ್ಲ. ಅಂತಃ ಕೆಟ್ಟ ವ್ಯವಸ್ಥೆ
ಆಢಳಿತ ಹೀಗೆ ಮುಂದುವರೆದರೆ, ಸಿದ್ದರಾಮಯ್ಯ ಮುಂದಿನ "ಪಪ್ಪು " ಆಗುವುದರಲ್ಲಿ ಆಶ್ಚರ್ಯವಿಲ್ಲ. ದನಕಾಯಲು ಉಪಯೋಗವಿಲ್ಲದವರ ಬಳಿ ರಾಜಕೀಯ ಸಲಹೆ ತೆಗೆದುಕೊಂಡರೆ , ಇದಕ್ಕಿಂತ ಒಳ್ಳೆಯ ಆಢಳಿತ ನೀಡಲು ಸಾಧ್ಯವೇ...?
-ಪ್ರಶಾಂತ್ ಹೆಗಡೆ

No comments:

Post a Comment