Translate in your Language

Thursday, December 25, 2014

ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಹುಟ್ಟುಹಬ್ಬದಂದು ಭಾರತ ರತ್ನ ಘೋಷಣೆ

ಬಿಜೆಪಿಯ ಸೌಮ್ಯವಾದಿ ನಾಯಕ, ಅಜಾತಶತ್ರು ಮತ್ತು ವಾಗ್ಮಿಯಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಸ್ವಾತಂತ್ರ್ಯ ಸೇನಾನಿ, ಶಿಕ್ಷಣತಜ್ಞ ದಿವಂಗತ ಮದನ್ ಮೋಹನ್ ಮಾಳವೀಯ (ಮರಣೋತ್ತರ) ಅವರನ್ನು ಈ ಬಾರಿಯ ದೇಶದ ಅತ್ಯುನ್ನತ ನಾಗರಿಕ ಗೌರವವಾದ 'ಭಾರತರತ್ನ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬಿಜೆಪಿಯ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ವಾಜಪೇಯಿ 1998ರಿಂದ 2004ರ ಅವಧಿಯಲ್ಲಿ ಸರಕಾರ ನಡೆಸಿದವರು. ಬಿಜೆಪಿಯ 'ಜಾತ್ಯತೀತ ಮುಖ'ವಾಗಿ ಗಮನ ಸೆಳೆದ ಅವರು, ಅಜಾತ ಶತ್ರುವೆಂದೇ ಅಭಿಮಾನಿಗಳಿಂದ ಕರೆಸಿಕೊಂಡಿದ್ದಾರೆ. 23 ರಾಜಕೀಯ ಪಕ್ಷಗಳ ಮೈತ್ರಿಕೂಟದ ಸರಕಾರವನ್ನು ನಿಭಾಯಿಸಿದ ಅವರು, ಮೈತ್ರಿಧರ್ಮದ ಅನುಪಾಲನೆಯಲ್ಲಿ ಆದರ್ಶ ಮಾದರಿ ಎಂದೆನಿಸಿಕೊಂಡಿದ್ದರು. 1957ರಿಂದ 2009ರವರೆಗೆ ಅವರು ಲೋಕಸಭಾ ಸದಸ್ಯರಾಗಿದ್ದರು.

Saturday, December 13, 2014

ಜ್ಯೂಲಿ-ಲಕ್ಷ್ಮಿ ಅವರಿಗೆ 63ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು


Born on : December 13, 1952


ತಮ್ಮ ೧೫ನೇ ವಯಸ್ಸಿನಲ್ಲಿಯೇ ನಟನೆಗಿಳಿದ ಲಕ್ಷ್ಮಿಯವರ ಮೊದಲ ಚಿತ್ರ ತಮಿಳಿನ "ಜೀವನಾಂಶಂ"೧೯೬೮ರಲ್ಲಿ ತೆರೆ ಕಂಡಿತು.ಇದೇ ವರ್ಷದಲ್ಲಿ ತೆರೆ ಕಂಡ ಕನ್ನಡ ಚಿತ್ರ "ಗೋವಾದಲ್ಲಿ C I D-999" ಅವರ ಕನ್ನಡದ ಮೊದಲ ಚಿತ್ರ ಅದೂ ಡಾ. ರಾಜ್-ಕುಮಾರ್ ಜೊತೆಗೆ,ಅವರು ನಟಿಸಿದ  ಮೊದಲ ಮಳಯಾಳಮ್ ಚಿತ್ರ "ಚಟ್ಟಾಕ್ಕ್ಕಾರಿ" ಲಕ್ಷ್ಮಿಯವರಿಗೆ ದೇಶಾದ್ಯಂತ ಹೆಸರು ತಂದುಕೊಟ್ಟಿತು. ಲಕ್ಷ್ಮಿಯವರ  ತೆಲುಗಿನ ಮೊದಲ ಚಿತ್ರ "ಭಾಂಧವ್ವ್ಯಲು" , ನಂತರ ಅವರು ತಿರುಗಿ ನೋಡಿದ್ದೇ ಇಲ್ಲ, ಕನ್ನಡ, ತೆಲುಗು, ತಮಿಳು, ಮಳಯಾಳಮ್, ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ಜನಮೆಚ್ಚುಗೆ ಗಳಿಸಿದರು,

"ಜ್ಯೂಲಿ" ಹಿಂದಿ ಚಲನಚಿತ್ರ ದಲ್ಲಿ ಲಕ್ಷ್ಮಿ



ಅವರ ಹಿಂದಿ ಚಲನಚಿತ್ರ "ಜ್ಯೂಲಿ" ಅವರಿಗೆ ಅತ್ಯಂತ ಜನಪ್ರಿಯತೆಯನ್ನು ತಂದು ಕೊಟ್ಟ ಚಿತ್ರ ವಾಗಿದ್ದು ನಂತರ ಜ್ಯೂಲಿ-ಲಕ್ಷ್ಮಿ ಎಂದೇ ಖ್ಯಾತಿಯಾದರು.

Friday, December 12, 2014

ರಜನಿಕಾಂತ್ ಅವರ 65ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

1950 ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಮರಾಠಿ ಕುಟುಂಬವೊಂದರಲ್ಲಿ ಹುಟ್ಟಿದ ರಜನಿಕಾಂತ್ ಅವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್. ಇಬ್ಬರು ಅಣ್ಣಂದಿರು ಮತ್ತು ಓರ್ವ ಅಕ್ಕನ ಮುದ್ದಿನ ತಮ್ಮ ಈ ‘ತಲೈವಾ’ .

ಬೆಂಗಳೂರಿನ ಹನುಮಂತನಗರ ತೆಕ್ಕೆಯಲ್ಲಿರುವ ಗವಿಪುರಂ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ  ಶಿಕ್ಷಣ ಪಡೆದ ಶಿವಾಜಿಗೆ ಕ್ರಿಕೆಟ್, ಫುಟ್ಬಾಲ್ ಮತ್ತು ಬ್ಯಾಸ್ಕೆಟ್ಬಾಲ್ ಕ್ರೀಡೆಗಳಲ್ಲಿ ಅತೀವ ಆಸಕ್ತಿಯಿತ್ತು. ಇದೇ ಅವಧಿಯಲ್ಲಿ ರಾಮಕೃಷ್ಣ ಮಠದ ಸಾಂಗತ್ಯವೂ ದೊರೆತು, ವೇದಗಳು, ಭಾರತೀಯ ಸಂಪ್ರದಾಯ ಮತ್ತು ಇತಿಹಾಸಿಕ ಕಲಿಕೆಗೆ ಒಡ್ಡಿಕೊಂಡರು, ಅಧ್ಯಾತ್ಮ ಪ್ರಜ್ಞೆಯೂ ಮೊಳೆಯಿತು. ಕಲಿಕೆಯ ಆಸಕ್ತಿ ಮತ್ತಷ್ಟು ವಿಸ್ತರಿಸಿ, ಮಠದಲ್ಲಿ ಪ್ರದರ್ಶನಗೊಂಡ ಮಹಾಭಾರತ ನಾಟಕದಲ್ಲಿ ಏಕಲವ್ಯನ ಸ್ನೇಹಿತನ ಪಾತ್ರವನ್ನು ನಿರ್ವಹಿಸಿದರು, ಇದಕ್ಕೆ ಪ್ರೇಕ್ಷಕರ ಮೆಚ್ಚುಗೆಯೂ ದೊರೆಯಿತು. ವರಕವಿ ದ.ರಾ.ಬೇಂದ್ರೆಯವರೂ ಅವರ ಪೈಕೆ ಒಬ್ಬರಾಗಿದ್ದರು.