Translate in your Language

Tuesday, December 22, 2015

ಶ್ರೀನಿವಾಸ ರಾಮಾನುಜನ್ ಅವರ 129ನೇ ಹುಟ್ಟು ಹಬ್ಬದ ಸವಿನೆನಪಿನಲ್ಲಿ


ಭಾರತದ ಮಹಾನ್ ಮೇಧಾವಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರು ಜನಿಸಿದ ದಿನ ಡಿಸೆಂಬರ್ 22, 1887.   ಈ ಮಹಾನ್ ಗಣಿತಜ್ಞರು ಜನಿಸಿದ ದಿನವನ್ನು ಭಾರತದ ರಾಷ್ಟ್ರೀಯ ಗಣಿತದ ದಿನವನ್ನಾಗಿ ಆಚರಿಸಲಾಗುತ್ತಿದೆ. 

ಒಮ್ಮೆ ಆಸ್ಪತ್ರೆಯಲ್ಲಿದ್ದ ಒಬ್ಬ ಗೆಳೆಯನನ್ನು ನೋಡಲು ಒಬ್ಬ ಆಗಂತುಕ ಆಗಮಿಸಿದ.  “ನೀನು ಹೇಗಿದ್ದೀಯ?”  ಎಂದು ಆಗಂತುಕ ಆತುರ ಮತ್ತು ಒಲವಿನ ದನಿಯಲ್ಲಿ ಕೇಳಿದ.

“ಪರವಾಗಿಲ್ಲ, ನಿಮಗೆ ಧನ್ಯವಾದ”  ಹಾಸಿಗೆಯಲ್ಲಿ ಮಲಗಿದ್ದ ರೋಗಿ ಉತ್ತರಿಸಿದ. 

ಆದರೆ ಆತನಿಗೆ ಇದರಿಂದ ತೃಪ್ತಿಯಾಗಲಿಲ್ಲ.  ರೋಗಿಯ ಮುಖ ಮಾರಕ ವ್ಯಾಧಿಯ ವಿರುದ್ಧ ಆತನ ಬಲವಾದ ಹೋರಾಟವನ್ನು ಸೂಚಿಸುತ್ತಿತ್ತು.  ಕೆಲವು ಕ್ಷಣಗಳ ಬಳಿಕ ಆತ ಮತ್ತೆ ಮುಂದುವರೆಸಿದ:

Saturday, December 19, 2015

ರಾಜಕೀಯದಲ್ಲೊಬ್ಬ ಮಹಾಸಾಧಕ ನಜೀರ್ ಸಾಬ್-ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ

ನೀರ್ ಸಾಬ್ ಎಂದೆ ಕನ್ನಡ ಜನಮನಕ್ಕೆ ಪರಿಚಿತರಾದ ಅಬ್ದುಲ್ನಜೀರ್ ಸಾಬ್ ಹುಟ್ಟಿದ್ದು (ದಿನಾಂಕ 19ನೇ ಡಿಸೆಂಬರ್ 1934) ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ 
 25 ವರುಷಗಳ ಹಿಂದೆ ಅಂದರೆ ಅಕ್ಟೋಬರ್ 24, 1988 ಸಂಜೆ ಆವತ್ತಿನ ಜನತಾದಳ ಸರಕಾರದ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿಯವರು ಕಿಡ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ವಿವಿಐಪಿ ವಾರ್ಡ್‌ಗೆ ಆಗಮಿಸಿದ್ದರು.  ತಮ್ಮ ಸಚಿವ ಸಂಪುಟದ ಅತ್ಯಂತ ಗೌರವಾನ್ವಿತ ಸಹೋದ್ಯೋಗಿಯ ಬದುಕಿನ ಅಂತಿಮ ಕ್ಷಣಗಳಲ್ಲಿ ಸಾಂತ್ವನ ಹೇಳಲು ಬಂದಿದ್ದರು.  ಪುಪ್ಪುಸ ಕ್ಯಾನ್ಸರಿನ ಉಲ್ಬಣಾವಸ್ಥೆಯಲ್ಲಿ ಬಾಯಿಗೆ ಆಕ್ಸಿಜನ್ ಮಾಸ್ ಧರಿಸಿ ಉಸಿರಾಡುವುದಕ್ಕೂ ಅಪಾರ ಯಾತನೆ ಅನುಭವಿಸುತ್ತ ಕುರ್ಚಿಯ ಮೇಲೆ ಕೂತಿದ್ದ ಆ ಗಣ್ಯ ರೋಗಿ ಇನ್ನಾರೂ ಅಲ್ಲ. ಇಡೀ ದೇಶಕ್ಕೇ ಮಾದರಿಯಾದ ಕರ್ನಾಟಕದ ಪಂಚಾಯತ್‌ರಾಜ್ ವ್ಯವಸ್ಥೆಯ ರೂವಾರಿಯೆನಿಸಿದ್ದ ನೀರ್ ಸಾಬ್ ಎಂದೇ ಸಾರ್ವಜನಿಕರ ಮನೆಮತಾಗಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್ ನಜೀರ್ ಸಾಬ್...

Saturday, December 12, 2015

ರಜನೀಕಾಂತ್ ಅವರಿಗೆ 68ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಡಿಸೆಂಬರ್ 12, 1949 ಬೆಂಗಳೂರಿನಲ್ಲಿ ಮರಾಠಿ ಸಂಸ್ಕಾರದ ಮನೆಯಲ್ಲಿ ಒಂದು ಗಂಡು ಮಗು ಜನಿಸಿತು.  ಆ ಮಗುವಿಗೆ ಶಿವಾಜಿ ರಾವ್ ಎಂದು ಹೆಸರಿಡಲಾಯಿತು.  ಮಗು ಐದನೆಯ ವಯಸ್ಸಿನಲ್ಲೇ ತಾಯಿಯ ಪ್ರೀತಿಯಿಂದ ವಂಚಿತವಾಯಿತು.  ಪ್ರಾಥಮಿಕ ಶಿಕ್ಷಣವನ್ನು ಆಚಾರ್ಯ ಪಾಠಶಾಲೆಯಲ್ಲೂ, ಮುಂದೆ ರಾಮಕೃಷ್ಣ ವಿದ್ಯಾಶಾಲೆಯಲ್ಲೂ ಓದಿ ಹುಡುಗ ಒಂದಷ್ಟು ಕೂಲಿ ಕೆಲಸ ಮಾಡಿ ಬದುಕನ್ನು ಬಂದಷ್ಟೇ ಭಾಗ್ಯ ಎಂದುಕೊಂಡು ನಡೆಸತೊಡಗಿದ. 1968ರಿಂದ 1973ರ ಅವಧಿಯಲ್ಲಿ  ಚೆನ್ನೈ ಮತ್ತು ಬೆಂಗಳೂರಿನಲ್ಲಿ ಎಲ್ಲೋ ಒಂದು ಕಡೆ ನೆಲೆ ಸಿಗಲಿ ಎಂದು ಅತ್ತಿಂದಿತ್ತ ಅಲೆದಾಡುತ್ತಲೇ ಕಾಲ ತಳ್ಳಿದ ಹುಡುಗ. ಕೊನೆಗೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಒಂದು ನೆಲೆ ಸಿಕ್ಕಿತು ಅಂದುಕೊಂಡ.  ಸಿನಿಮಾ ಹುಚ್ಚು.  ಈತನ ವರಸೆಗಳನ್ನು ನೋಡಿದ ರಾಜ್ ಬಹದ್ದೂರ್ ಎಂಬ ಗೆಳೆಯ ನೀನು ಮದ್ರಾಸು ಫಿಲಂ ಇನ್ಸ್ಟಿಟ್ಯೂಟಿನಲ್ಲಿ ತರಬೇತಿ ಪಡಿ ಎಂದು ಹುರುದುಂಬಿಸಿ ಆತನಿಗೆ ಎರಡು ವರ್ಷ ಬೆಂಗಾವಲಾಗಿ ನಿಂತ.  ಮುಂದೆ ನಡೆದದ್ದು ಇತಿಹಾಸ ಎನ್ನುತ್ತೀರ.  ಉಹುಂ!

Saturday, December 5, 2015

ಜಿ.ಪಿ.ರಾಜರತ್ನಂ ಅವರ 108ನೇ ಹುಟ್ಟು ಹಬ್ಬದ ಸವಿನೆನಪಿನಲ್ಲಿ

ಜಿ.ಪಿ.ರಾಜರತ್ನಂ
ಜಿ.ಪಿ.ರಾಜರತ್ನಂರವರು 1908ರ ಡಿಸೆಂಬರ್ 5 ರಂದು ರಾಮನಗರದಲ್ಲಿ ಜನಿಸಿದರು. ತಂದೆ ಜಿ.ಕೆ. ಗೋಪಾಲಕೃಷ್ಣ ಅಯ್ಯಂಗಾರ್. ೧೯೨೮ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿ; ೧೯೩೧ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿ ಪಡೆದರು. ಮಹಾರಾಜ ಕಾಲೇಜಿನಲ್ಲಿ ಕೆಲವು ಕಾಲ ಅಧ್ಯಾಪಕರಾಗಿದ್ದರು. ಆರಂಭದಲ್ಲಿ ಇವರು ಶಿಶುವಿಹಾರ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಕೆಲಸ ಮಾಡಿದರು. ಅನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಇಲಾಖೆಯಲ್ಲಿ ಇವರಿಗೊಂದು ಪಂಡಿತ ಹುದ್ದೆ ದೊರೆಯಿತು. ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಇವರು ಮುಂದೆ ಕನ್ನಡ ಉಪಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿ ೧೯೬೪ರಲ್ಲಿ ನಿವೃತ್ತರಾದರು.

Sunday, November 1, 2015

ಕಸ್ತೂರಿ ಶಂಕರ್ ಅವರಿಗೆ 65ನೇ ಹುಟ್ಟುಹಬ್ಬದ ಶುಭಾಶಯಗಳು

ಶ್ರೀಮತಿ.ಕಸ್ತೂರಿ ಶಂಕರ್
ಕನ್ನಡದ ಕಸ್ತೂರಿ ಶಂಕರ್ ಹುಟ್ಟಿದ್ದು ಕನ್ನಡ ರಾಜ್ಯೋತ್ಸವ ದಿನ  ನವೆಂಬರ್ 1 ರಂದು, ಹುಟ್ಟಿದ ದಿನ, ಇಟ್ಟ ಹೆಸರು ಮತ್ತು ಅವರು ಹಾಡಿರುವ ಹಾಡುಗಳು ಎಲ್ಲವೂ ಕನ್ನಡ ಕಸ್ತೂರಿಗೆ ಅನ್ವರ್ಥಕವೇ, 
ಕನ್ನಡದ ಸುಪ್ರಸಿದ್ಧ ಗಾಯಕಿ ಕಸ್ತೂರಿ ಶಂಕರ್ ಅವರು 1950ರ ನವೆಂಬರ್ 1ರ ದಿನದಂದು ಮೈಸೂರಿನಲ್ಲಿ ಜನಿಸಿದರು.  ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರರೂ,  ಉತ್ತಮ ಬರಹಗಾರರೂ ಆದ  ಜಿ.ಸಿ. ಶಂಕರಪ್ಪನವರು.  ತಾಯಿ ಗಿರಿಜಾ ಶಂಕರ್. ಅಪ್ಪಟ ಗಾಂಧೀವಾದಿಯಾಗಿದ್ದ ಶಂಕರಪ್ಪನವರು ಕಸ್ತೂರಿಬಾ ಗಾಂಧಿ ಅವರ ನೆನಪಿನಲ್ಲಿ ಅವರಿಗೆ ಕಸ್ತೂರಿ ಎಂದು ಹೆಸರಿಟ್ಟರಂತೆ.  ಕಸ್ತೂರಿ ಅವರು ಚಿಕ್ಕಂದಿನಿಂದಲೇ ಭಕ್ತಿಗೀತೆಗಳನ್ನೂ, ತಂದೆಯವರು ರಚಿಸಿದ್ದ ಭಕ್ತಿಗೀತೆಗಳನ್ನೂ ಹಾಡುತ್ತಿದ್ದರು.

Saturday, October 17, 2015

ಅನಿಲ್ ಕುಂಬ್ಳೆ ಅವರ 45ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

Anil Kumble
ನಮ್ಮ,  ಕುಂಬ್ಳೆ ಅವರು ಹುಟ್ಟಿದ ದಿನ ಅಕ್ಟೋಬರ್ 17, 1970. ಕುಂಬ್ಳೆ ಎಂದರೆ ಅದೆಂತದ್ದೋ ರೋಮಾಂಚನ.  ಬಾಲ್ ಹಿಡಿದು ಜಿಂಕೆಯಂತೆ ಚಿಮ್ಮುವ ಅವರ ಬೌಲಿಂಗ್ ವೈಖರಿಯನ್ನು ನೋಡುವುದೇ ಒಂದು ಸೊಗಸು.  ಬ್ಯಾಟಿಂಗ್ನಲ್ಲಿ ಕೂಡ ಭಾರತದ ಏಳು ವಿಕೆಟ್ ಪತನವಾಗಿದ್ದರೂ, ಇನ್ನೂ ಕುಂಬ್ಳೆ ಇದ್ದಾರೆ ನೋಡೋಣ ಇರಿ, ಎಂಬಷ್ಟು ಭರವಸೆ ಹುಟ್ಟಿಸುತ್ತಿದ್ದ  ಆಟಗಾರ. ಒಂದೆರಡು ವರ್ಷದ ಹಿಂದೆ,  ಭಾರತ ವಿಶ್ವ  ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಸ್ಥಾನದಲ್ಲಿ ಅಲಂಕೃತವಾಗಿತ್ತು ಎಂದರೆ, ಕುಂಬ್ಳೆ ಅಂತಹ ಬೌಲರ್ ಕಳೆದ ಎರಡು ದಶಕಗಳಲ್ಲಿ ನೀಡಿದ ಅಮೋಘ ಕೊಡುಗೆ ಕೂಡ ಅದಕ್ಕೆ ಉತ್ತಮ ಬುನಾದಿ ಹಾಕಿದೆ ಎಂಬುದು ಎಲ್ಲ ಕ್ರೀಡಾಭಿಮಾನಿಗಳೂ ಒಪ್ಪುವ ವಿಷಯ.  

ಇತ್ತೀಚಿನ ವರ್ಷದಲ್ಲಿ ವಿದೇಶದಲ್ಲಿ ನಡೆದ ಟೆಸ್ಟ್ ಸರಣಿಗಳಲ್ಲಿ  ಸೋತು ಸುಣ್ಣವಾದ ಬಾರತ ತಂಡ, ಕುಂಬ್ಳೆ ಅಂಥಹ ಬೌಲರ್  ನಮ್ಮಲ್ಲಿ ಇಲ್ಲದಿದ್ದರೆ ಏನಾಗುತ್ತದೆ ಎಂಬುದನ್ನು ನಿರೂಪಿಸಿದ ನೈಜ ಸ್ಥಿತಿ ಕೂಡಾ ಹೌದು. 

Saturday, October 10, 2015

ಶಿವರಾಮ ಕಾರಂತ ಅವರ 114 ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ


ಕಾರಂತರು ಹುಟ್ಟಿದ್ದು ೧೯೦೨ ರ ಅಕ್ಟೋಬರ್ ೧೦ನೇ ತಾರೀಖಿನಂದು ಸಾಲಿಗ್ರಾಮದಲ್ಲಿ ಜನಿಸಿದರು

ಕಾರಂತರು ಮಾಡಿದ ಕೆಲಸ, ಬರೆದ ಬರಹಗಳನ್ನು ನೋಡಿದರೆ, ಒಬ್ಬರೇ ವ್ಯಕ್ತಿ, ಒಂದೇ ಜೀವನದಲ್ಲಿ ಇಷ್ಟೆಲ್ಲ ಮಾಡಲು ಸಾಧ್ಯವೆ ಎಂದು ಬೆರಗುಪಡುವಂತಾಗುತ್ತದೆ.  ಸಮಯದ ಅಭಾವದ ಬಗ್ಗೆ ನಾವೆಲ್ಲ ಗೊಣಗುಟ್ಟುವ ಪರಿಯ ಬಗ್ಗೆ ಡಾ. ಕೋಟ ಶಿವರಾಮ ಕಾರಂತರು ಹೇಳುತ್ತಾರೆ,.  “....ನಾನು ಸಮಯದ ಅಭಾವವನ್ನು ಕುರಿತು ಎಂದೂ ನೆಪ ಹೇಳಿದವನಲ್ಲ.  ಪ್ರತಿದಿನ ರಾತ್ರಿ ನಾನು ಒಂಭತ್ತು ತಾಸುಗಳ ನಿದ್ದೆ ಸಾಲದೆ ಹಗಲು ಸಹ ಒಂದು ತಾಸು ನಿದ್ದೆ ಮಾಡುತ್ತೇನೆ.  ಅಥವಾ ಮನಸ್ಸು ಬಂದರೆ ಇನ್ನೂ ತುಸು ಹೆಚ್ಚಾಗಿ ನಿದ್ದೆ ಮಾಡುವಷ್ಟು ಅವಕಾಶವಿದೆ ಎಂದು ತಿಳಿದಿದ್ದೇನೆ.  ಸಮಯ ಸಾಲದೆಯೆ ನನ್ನ ಯಾವ ಕೆಲಸವೂ ಈ ತನಕ ಕೆಟ್ಟದ್ದು ಕಾಣಿಸುವುದಿಲ್ಲ.  ನನಗಿರುವ ಕಷ್ಟ – ಕೈಯಲ್ಲಿ ಒಂದಲ್ಲ ಒಂದು ಕೆಲಸವಿಲ್ಲದಿದ್ದರೆ ಸಮಯ ಕಳೆಯುವುದು ಹೇಗೆ ಎಂಬ ಚಿಂತೆ!  ಇಂಥದೇ ನಿಶ್ಚಿತ ಕೆಲಸವನ್ನು ಮಾಡಬೇಕು ಎಂದು ಮನಸ್ಸಿಗೆ ಹೊಳೆಯದೆ ಹೋಯಿತಾದರೆ ಒಂದಲ್ಲ ಒಂದು ಪುಸ್ತಕವನ್ನು ತೆರೆದು ಓದಲು ಎತ್ತಿಕೊಳ್ಳುತ್ತೇನೆ.  ಅದಕ್ಕಾಗಿ ಆಗಾಗ ಒಳ್ಳೆಯ ಪುಸ್ತಕ ತರಿಸಿಕೊಳ್ಳುತ್ತೇನೆ.  ಅದಕ್ಕೆ ವಿಷಯಗಳ ಗೊತ್ತು ಗುರಿಯಿಲ್ಲ.  ಹಾಗೆ ತರಿಸಿಕೊಂಡು ಓದಿದ ಪುಸ್ತಕಗಳಲ್ಲಿ ಕೆಲವು ರುಚಿಸುತ್ತವೆ.  ಕೆಲವು ರುಚಿಸುವುದಿಲ್ಲ.  ಒಳ್ಳೆಯ ಪುಸ್ತಕಗಳು ಕೈಗೆ ಸಿಕ್ಕಿದರೆ – ಆಗ ಬೇರೊಂದೇ ಚಿಂತನೆ ಮೂಡುತ್ತದೆ. 

Friday, September 18, 2015

ವಿಷ್ಣುವರ್ಧನ್ ಅವರ 67ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಸಂಪಿಗೆ ಮೂಗಿನ ಸ್ಪುರದ್ರೂಪಿ ನಟ  ವಿಷ್ಣುವರ್ಧನ್ ನಮ್ಮ ಕಾಲಮಾನದ ಯುವಕ ಯುವತಿಯರಿಗೆ ಮೋಡಿ ಮಾಡಿದ ನಾಯಕನಟ.    ಸೆಪ್ಟೆಂಬರ್ 18, 1950,
ಅವರು ಹುಟ್ಟಿದ ದಿನ.  
ಚಿತ್ರರಂಗದಲ್ಲಿ  ತಮ್ಮ ಸೌಂಧರ್ಯ,  ಕೆಲವೊಂದು ವಿಶಿಷ್ಟ ಪಾತ್ರಗಳು ಮತ್ತು ಶಿಸ್ತಿನ ಕಾರ್ಯನಿರ್ವಹಣೆಗೆ ಅವರು ಹೆಸರಾಗಿದ್ದವರು.  ಚಿತ್ರರಂಗವೆಂಬ ಬಹುದೊಡ್ಡ ಸಾಗರದಲ್ಲಿ ಅನೇಕ ಜನ ತಮ್ಮ ಪ್ರತಿಭೆ ಮತ್ತು ಇನ್ನಿತರ ಸಾಮರ್ಥ್ಯಗಳಿಂದ ಹೆಸರು ಮಾಡಿದ್ದಾರೆ.  ಆದರೆ ಕೆಲವೊಂದು ಕಲಾವಿದರು ಯಾವುದೇ ರೀತಿಯ ಪ್ರಮುಖ ಪಾತ್ರಕ್ಕೂ ಹೊಂದಬಲ್ಲ  ವರ್ಚಸ್ಸನ್ನು ತಮಗೆ ಸ್ವಾಭಾವಿಕವೋ ಎಂಬಂತೆ  ಹೊತ್ತು ತಂದಂತಿರುತ್ತಾರೆ.    ಇಂತಹ ಕೆಲವೊಂದು ಅಪರೂಪದ ವರ್ಚಸ್ವಿ ಕಲಾವಿದರಲ್ಲಿ ವಿಷ್ಣುವರ್ಧನ್ ಒಬ್ಬರು. 

Tuesday, September 8, 2015

ಕೆ.ಪಿ.ಪೂರ್ಣಚಂದ್ರ ತೇಜಸ್ವಿಅವರ 77ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು 1938 ಸೆಪ್ಟೆಂಬರ್ 8 ರಂದು ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು. ತಂದೆ ಕೆ.ವಿ.ಪುಟ್ಟಪ್ಪ(ಕುವೆಂಪು), ತಾಯಿ ಹೇಮಾವತಿ. ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ ಇವರ ಪೂರ್ಣ ಹೆಸರು. ಶಿವಮೊಗ್ಗ ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಬಿ.ಎ. (ಅನರ‍್ಸ) ಹಾಘೂ ಎಂ.ಎ. ಪದವಿಗಳನ್ನು ಪಡೆದರು. ೧೯೬೬ ನವೆಂಬರ್ ೨೭ ರಂದು ರಾಜೇಶ್ವರಿ ಎಂಬುವರೊಡನೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ತೇಜಸ್ವಿಯವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನೆಲೆಸಿದ್ದರು. ಇವರು ಕೃಷಿಯ ಜೊತೆಗೆ ಸಾಹಿತ್ಯ ಕೃಷಿಯನ್ನು ನಡೆಸಿಕೊಂಡು ಬಂದಿದ್ದರು. 


Friday, September 4, 2015

ಅನಂತನಾಗ್ ಅವರಿಗೆ 68ನೇ ಹುಟ್ಟು ಹಬ್ಬದ ಶುಭಾಶಯಗಳು

ಸ್ಪುರದ್ರೂಪಿ ಸದಾ ಹಸನ್ಮುಖಿಯಾಗಿರುವ ಅನಂತನಾಗ್ ಅವರ 68ನೇ (ಜನನ: 4ನೇ ಸೆಪ್ಟೆಂಬರ್ 1948) ಹುಟ್ಟು ಹಬ್ಬದ ಶುಭಾಶಯಗಳು
ಈಗಿನ ಪೈಪೋಟಿ ಯುಗದಲ್ಲಿಯೂ ಯಾವ ಪಾತ್ರವಾದರೂ ಲೀಲಾಜಾಲವಾಗಿ ನಿಭಾಯಿಸುತ್ತ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ನಿಲ್ಲುವ ಸುಂದರ ನಟ ಅನಂತನಾಗರಕಟ್ಟೆ,  

Saturday, August 15, 2015

ಸುಹಾಸಿನಿ ಅವರ 54ನೇ ಹುಟ್ಟುಹಬ್ಬದ ಶುಭಾಶಯಗಳು

Suhasini
ಸುಹಾಸಿನಿ ಅವರ ಹುಟ್ಟಿದ್ದು  ಆಗಸ್ಟ್ 15,1961 ರಂದು.  ಸುಹಾಸಿನಿ ಎಂದರೆ ಅಲ್ಲೊಂದು ಮಂದಹಾಸ.  ಸುಹಾಸಿನಿ ಎಂದರೆ  ಸಹಜತೆ.  ಸರಳತೆ.  ಚಿತ್ರರಂಗದಂತಹ ತಳುಕಿನ ಲೋಕದಲ್ಲಿ ಪೂರ್ಣ ವಿಭಿನ್ನವಾಗಿದ್ದೂ ವಿಶಿಷ್ಟರೆಂದರೆ ಸುಹಾಸಿನಿ.  ಅವರು ಸಿನಿಮಾ ಕ್ಷೇತ್ರದಲ್ಲಿ ಕ್ಯಾಮರಾ ಹಿಂದೆ ಕೆಲಸ ಮಾಡಬೇಕು ಅಂತ ಬಂದರೆ ಸಿನಿಮಾದ ಜನ ಅವರನ್ನು ಕ್ಯಾಮರಾ ಮುಂದೆ ತಂದು ನಿಲ್ಲಿಸಿದರು.  ಅಂದು ‘ನೆಂಜತ್ತೆ ಕಿಳ್ಳಾದೆ’ ಚಿತ್ರದಲ್ಲಿ ಆಕಸ್ಮಿಕವಾಗಿ ಕ್ಯಾಮರಾ ಮುಂದೆ ಬಂದ ಸುಹಾಸಿನಿ ಇಂದು ಮಹಾನ್ ತಾರೆಯಾಗಿ, ದಕ್ಷಿಣ ಭಾರತದ ಎಲ್ಲಾ ಚಿತ್ರಗಳಲ್ಲೂ ಜನಸಾಗರಗಳ  ಮನವನ್ನು ಗೆದ್ದು, ನಟನೆ, ನಿರ್ದೇಶನ, ನಿರ್ಮಾಣ, ಹೀಗೆ ಹೋದಲ್ಲೆಲ್ಲಾ ತಮ್ಮ ಪ್ರತಿಭೆಯ ಸುಗಂಧವನ್ನು ಪಸರಿಸಿದವರು.

Thursday, August 13, 2015

ಶ್ರೀದೇವಿ ಅವರ ೫೨ನೇ ಹುಟ್ಟು ಹಬ್ಬದ ಶುಭಾಶಯಗಳು

Sridevi

ಶ್ರೀದೇವಿ ಭಾರತ ಚಲನಚಿತ್ರರಂಗ ಕಂಡ ಪ್ರತಿಭಾನ್ವಿತ ನಟಿಯರಲ್ಲೊಬ್ಬರು.  ಅವರು ಆಗಸ್ಟ್ 13, 1963ರ ವರ್ಷದಲ್ಲಿ ಜನಿಸಿದರು.  ಇನ್ನೂ ನಾಲ್ಕು ವರ್ಷವಿದ್ದಾಗಲೇ ಅವರು ಚಿತ್ರರಂಗದಲ್ಲಿ ಬಾಲನಟಿಯಾಗಿ ಹೊರಹೊಮ್ಮಿದ್ದರು.  1975ರ ಸಮಯದಲ್ಲಿ ತೆರೆಕಂಡ ಪ್ರಖ್ಯಾತ ಹಿಂದೀ ಚಲನಚಿತ್ರ ‘ಜೂಲಿ’ಯಲ್ಲಿಯೂ ಅವರು ಬಾಲನಟಿಯಾಗಿ ಅಭಿನಯಿಸಿದ್ದರು.  ಕನ್ನಡ ಚಿತ್ರರಂಗದಲ್ಲಿಯೂ ಅವರು ಬಾಲನಟಿಯಾಗಿ ಭಕ್ತ ಕುಂಬಾರ, ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಚಿತ್ರಗಳಲ್ಲಿ ನಟಿಸಿದ್ದಲ್ಲದೆ ಹೆಣ್ಣು ಸಂಸಾರದ ಕಣ್ಣು ಎಂಬ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ನಟಿಸಿದ್ದರು.  ರಜನೀಕಾಂತ್, ಅಂಬರೀಷ್ ಮುಂತಾದವರು ನಟಿಸಿದ್ದ ‘ಪ್ರಿಯಾ’ ಎಂಬ ಕನ್ನಡ  ಚಿತ್ರದಲ್ಲಿ ಅವರು ನಾಯಕಿಯಾಗಿಯೂ ಅಭಿನಯಿಸಿದ್ದರು.

Monday, August 3, 2015

ಯಶವಂತ ಚಿತ್ತಾಲ ಅವರ 87ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ

Yashvanth Chittaala
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಇರುವ ಒಂದು ಸಣ್ಣ ಊರು ಹನೇಹಳ್ಳಿ. ಇಲ್ಲಿ ಹುಟ್ಟಿ ಬೆಳೆದವರು ಯಶವಂತ ವಿಠೋಬಾ ಚಿತ್ತಾಲ.  ಅವರು ಹುಟ್ಟಿದ ದಿನ ಆಗಸ್ಟ್ 3, 1928. ಯಶವಂತ ಚಿತ್ತಾಲರ ಅಣ್ಣ ಗಂಗಾಧರ ಚಿತ್ತಾಲ. ಅಣ್ಣ ಕವಿಯಾದರೆ ತಮ್ಮ ಯಶವಂತ ನಮ್ಮ ಒಬ್ಬ ಶ್ರೇಷ್ಠ ಕಥೆಗಾರ, ಕಾದಂಬರಿಕಾರ.

Friday, July 24, 2015

ನರಸಿಂಹರಾಜು ಅವರ 93ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ !

T R Narashimaraju
ಕನ್ನಡ ಚಿತ್ರರಂಗದ ಚಾರ್ಲಿ ಚಾಪ್ಲಿನ್ ಎಂದೇ ಹೆಸರಾದ ಟಿ ಆರ್ ನರಸಿಂಹರಾಜು (ಜನನ ಜುಲೈ 24, 1923, ನಿಧನ:ಜುಲಯ್ 11, 1979) ಅವರ 93ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ 
ನರಸಿಂಹರಾಜು ಅವರು ಹುಟ್ಟಿದ್ದು ತುಮಕೂರು ಜಿಲ್ಲೆಯ ತಿಪಟೂರು ನಲ್ಲಿ. ತಂದೆ  ರಾಮರಾಜು ತಾಯಿ ವೆಂಕಟಲಕ್ಸ್ಮಿ. ಅವರ ಮೊಟ್ಟ ಮೊದಲ ಚಿತ್ರವೇ ಬೇಡರ ಕಣ್ಣಪ್ಪ (೧೯೫೪ರಲ್ಲಿ)್, ಸುಮಾರು ೨೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಲಿದಿರುವ ಶ್ರೇಷ್ಟ ಹಾಸ್ಯ ನಟ ನರಸಿಂಹರಾಜು

Tuesday, June 23, 2015

ಚಿತ್ರಸಂಗೀತದ ಮೈಲಿಗಲ್ಲು ಹಂಸಲೇಖ

‘ಹಂಸಲೇಖ’ರು ಕನ್ನಡ ಚಿತ್ರರಂಗದ ಮಹಾನ್ ಪ್ರತಿಭೆ.  ಹಂಸಲೇಖ ಅವರು  ಜೂನ್ 23, 1951ರ ವರ್ಷದಲ್ಲಿ ಗೋವಿಂದರಾಜು ಗಂಗರಾಜುವಾಗಿ ಮೈಸೂರಿನಲ್ಲಿ  ಜನಿಸಿದರು. 

‘ತ್ರಿವೇಣಿ’ ಚಿತ್ರದಲ್ಲಿ ಬರವಣಿಗೆಯ ಮೂಲಕ ಚಿತ್ರರಂಗಕ್ಕೆ ಬಂದ ಹಂಸಲೇಖರು ಮುಂದೆ ಒಂದೆರಡು ಪುಟ್ಟ ಕೆಲಸಗಳನ್ನು ಅಲ್ಲಿ ಇಲ್ಲಿ ಮಾಡಿದ್ದರೂ ಅವರು ಪ್ರಖ್ಯಾತರಾದದ್ದು ‘ಪ್ರೇಮಲೋಕ’ ಚಿತ್ರದಲ್ಲಿ. 'ನೀನಾ ಭಗವಂತ, ಜಗಕುಪಕರಿಸಿ ನನಗಪಕರಿಸೋ ಜಗದೋದ್ಧಾರಕ ನೀನೇನಾ' ಎಂಬಂತಹ ಸಾಹಿತ್ಯದಿಂದ ಅಲ್ಲಲ್ಲಿ ಮಿಂಚಿದ್ದವರು.  ಕನ್ನಡದ ಪ್ರಸಿದ್ಧ ನಿರ್ಮಾಪಕರಾದ ಎನ್. ವೀರಸ್ವಾಮಿಯವರ ಪುತ್ರ ಚಿನಕುರಳಿ ವ್ಯಕ್ತಿತ್ವದ ರವಿಚಂದ್ರನ್ ಆಗ ತಾನೇ ಚಿತ್ರರಂಗದಲ್ಲಿ ಹತ್ತು ಹಲವು ಪ್ರಯತ್ನಗಳನ್ನು ನಡೆಸಿದ್ದರು.  ಇಂತಹ ಪ್ರಯತ್ನದಲ್ಲಿ ಅವರಿಗೆ ‘ಗ್ರೀಸ್ 2’ ಪ್ರೇರಣೆಯಿಂದ  ಕನ್ನಡದಲ್ಲೊಂದು ಹಾಡುಗಳ ಮೂಲಕ ನಡೆಯುವ ಪ್ರೇಮಕತೆಯನ್ನು ಹೇಳುವ ಆಶಯದಲ್ಲಿದ್ದಾಗ ‘ಹಂಸಲೇಖ’ರು ಅವರಿಗೆ ಜೊತೆಯಾದರು.  'ಯಾರೇ ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ ಏಕೆ ನಗುವೆ' ಎಂಬ ಹಾಡಿನ ಧ್ವನಿಮುದ್ರಣದ ಸಮಯದಲ್ಲಿ ಅಲ್ಲಿದ್ದ ಹಂಸಲೇಖರು ಆ ಹಾಡಿನ ವಿಸ್ತರಣೆಯಾದ 'ಯಾರೇ, ಯಾರೇ..' ಎಂಬ ಸಲಹೆ ಕೊಟ್ಟಾಗ ಅವರು ರವಿಚಂದ್ರನ್ ಅವರಿಗೆ ಪ್ರಿಯರಾಗಿಬಿಟ್ಟರು.

Thursday, June 18, 2015

ಸಿದ್ಧಯ್ಯ ಪುರಾಣಿಕ ಅವರ 98ನೇ ಹುಟ್ಟಿದ ಹಬ್ಬದ ಸವಿ ನೆನಪಿನಲ್ಲಿ


  • ಹೊತ್ತಿತೋ ಹೊತ್ತಿತೋ ಕನ್ನಡದ ದೀಪ...
  • ಹಣ್ಣಿನಲಿ ಬೆಣ್ಣೆಯಲಿ ಕೆನೆ ಮೊಸರು ಹಾಲಿನಲಿ...
  • ಪ್ರಕೃತಿಯೇ ಗುರು ಗಗನ ಲಿಂಗವು...
  • ಓದಿ ಬ್ರಾಹ್ಮಣನಾಗು ಕಾದು ಕ್ಷತ್ರಿಯಾನಾಗು...   
               ಇವು ಸಿದ್ಧಯ್ಯ ಪುರಾಣಿಕ ಅವರ ಜನಪ್ರಿಯ ರಚನೆಗಳು
ಸಿದ್ಧಯ್ಯ ಪುರಾಣಿಕರು ಜನಿಸಿದ್ದು 18ನೇ ಜೂನ್ 1918 ರಲ್ಲಿ.  ಕೊಪ್ಪಳ  ಜಿಲ್ಲೆಯ ಯಲಬುರುಗಿ ತಾಲ್ಲೂಕಿನ ದ್ಯಾಂಪುರ ಪುರಾಣಿಕರು ಹುಟ್ಟಿದ ಊರು.  ಶ್ರೀ ಪಂಡಿತ ಕಲ್ಲಿನಾಥ ಶಾಸ್ತ್ರೀ ಪುರಾಣಿಕ ಹಾಗೂ ಶ್ರೀಮತಿ ದಾನಮ್ಮ ಪುರಾಣಿಕರಿಗೆ ಜನಿಸಿದ ಐದು ಮಕ್ಕಳಲ್ಲಿ ಹಿರಿಯವರು ಡಾ. ಸಿದ್ಧಯ್ಯ ಪುರಾಣಿಕರು.

Tuesday, June 16, 2015

ಡಾ. ಹೆಚ್.ನರಸಿಂಹಯ್ಯಅವರ 95ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

H. Narasimhaiah (ಡಾ. ಹೆಚ್.ನರಸಿಂಹಯ್ಯ) physicist, educator, freedom fighter and rationalist
Born in Hossur on 6th June 1921 (೬ನೆ ಜೂನ್ ೧೯೨೧ ) , a village near Gauribidanur in Karnataka, India. His parents were poor, illiterate and belonged to a disadvantaged caste. Upon completion of elementary education, he left for Bangalore where he joined the National High School, Basavanagudi, in 1935. He received his B.Sc.(Honors) and Master's degree in Physics with first class from Central College of Bangalore (1946). The same year Narasimhaiah started his academic career as a lecturer in National College, Bangalore.

He taught from 1946 until 1957 when he proceeded to Columbus, Ohio to get his PhD degree in Nuclear physics from Ohio State University(1960).  ನರಸಿಂಹಯ್ಯ ,ಅಮೇರಿಕಾದಲ್ಲಿ ಇದ್ದ ನಾಲ್ಕೂ ವರ್ಷಗಳು ಪ್ರತಿನಿತ್ಯ ಬೆಳಗ್ಗೆ, ಮಧ್ಯಾನ ತಿಂದದ್ದು ಬರಿ ಉಪ್ಪಿಟ್ಟು. ಒಂದೆಡೆ  ಆವರೆ  ಹೇಳುವಂತೆ ಪ್ರಪಂಚದಲ್ಲಿಯೇ ವಿಶ್ವ ದಾಖಲೆ ಮಾಡಿದ್ದೇನೆ ಎಂದು ಆವರೆ ಹೇಳುತ್ತಾರೆ .

Wednesday, June 10, 2015

ಡಿ ಕೆ ರವಿ ಅವರ ಮೂವತ್ತಾರನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ !

Sri D K Ravi with his Pet
ಡಿ. ಕೆ. ರವಿ (ಜನನ: ಜೂನ್ 10, 1979 - ನಿಧನ: ಮಾರ್ಚ್ 16 2015) ಕರ್ನಾಟಕ ಕಂಡ ನಿಷ್ಟಾವಂತ ಐ.ಎ.ಎಸ್ ಅಧಿಕಾರಿ. ಅಲ್ಪಾವಧಿಯಲ್ಲಿಏ ರಾಜ್ಯದ ಸರಿ ಸುಮಾರು ಎಲ್ಲಾ ಜಿಲ್ಲೆ-ತಾಲೂಕು-ಗ್ರಾಮಗಳಲ್ಲಿಯ ಅಷ್ಟೇ ಏಕೆ ದೇಶದಾದ್ಯಂತ ಸಂಚಲನ ಮೂಡಿಸಿದ ಅದ್ಯಮ್ಮ್ಯ ಚೇತನ ಡಿ ಕೆ ರವಿ.
ಇಂದು ಅವರು ಬದುಕಿದ್ದಿದ್ದರೆ ರಾಜ್ಯಾದಂತ ಕನ್ನಡಿಗರು ಡಿ ಕೆ ರವಿ ಅವರ  36ನೇ ಹುಟ್ಟುಹಬ್ಬವನ್ನು ಅದ್ದೂರಿಯಿಂದ ಆಚರಿಸುತ್ತಿದ್ದರು ! 

ಈ ನಾಡಿನ ಪಾಪಿಗಳು-ಬ್ರಷ್ಟರು-ಧನಪಿಶಾಚಿಗಳು ಅವರ ನಿಷ್ಟಾವಂತ ಸೇವೆಯಿಂದ ಎಲ್ಲಿ ತಮ್ಮ ಬುಡಕ್ಕೆ ಬೆಂಕಿ ಬೀಳುತ್ತದೋ ಎಂದು ಅವರನ್ನು ನಿಗೂಡವಾಗಿ ಮಾರ್ಚ್ ೧೬, ೨೦೧೫ ರಂದು ಸಾಯಿಸಿದರು.ನಮ್ಮ ರಾಜ್ಯ ಸರ್ಕಾರವೂ ಕೊಲೆಗಾರರ ಬೆಂಬಲಕ್ಕೆ ನಿಂತಂತೆ ಸಾಕ್ಷಿ ನಾಶ ವಾಗುವವರೆಗೂ ಸುಮ್ಮನಿದ್ದು ನಂತರ ರಾಜ್ಯದ ಜನತೆಯ ಒತ್ತಡಕ್ಕೆ ಮಣಿದು ಅವರ ಸಾವಿನ ತನಿಕೆಯನ್ನು ಸಿ.ಬಿ.ಐ ಗೆ ಒಪ್ಪಿಸಿರುವುದು ಅನುಮಾನಾಸ್ಪದ ವಿಷಯ ! 
ಸಿ.ಬಿ.ಐ ನ  ಪ್ರಾಮಾಣಿಕ ತನಿಕೆ ಯಾಗಲಿ,  ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ನಾಡಿನ ಪ್ರಜೆಗಳೆಲ್ಲರ ಕಳಕಳಿ !

ಡಿ ಕೆ ರವಿ ಕುರಿತ ಇತರ ಲೇಖನಗಳು

Tuesday, June 9, 2015

ಡಿ.ಕೆ ರವಿಯವರ Inspirational Speech at Swamy Vivekananda School !

ನಮ್ಮ ರವಿ ಅಸ್ತಂಗತವಾದಾಗ ! ಡಿ.ಕೆ ರವಿ ಅವರ ಸಾವಿನ ಆಘಾತದ ಸುದ್ದಿ !

ಜನ ಮೆಚ್ಚಿದ ಡಿ.ಸಿ !

 ಡಿ.ಕೆ ರವಿಯವರನ್ನು ಮೆಚ್ಚದ ಕನ್ನಡಿಗನಿಲ್ಲ ! !

ಹೊಟ್ಟೆಗೆ ಏನು ತಿನ್ನುತ್ತಾರೆ...?

ಹೀಗೊಂದು ಪ್ರಶ್ನೆ ಕಟ್ಟ ಕಡೆಗೆ ಉಳಿಯುತ್ತದೆ, ಡಿ ಕೆ ರವಿಯವರ ಪ್ರಕರಣದಲ್ಲಿ ಇನ್ನಿಲ್ಲದ ಸುಳ್ಳು ಬರೆದ ಪ್ರಜಾವಾಣಿ, ಕರ್ನಾಟಕದ ಜನತೆಯ ಸಂಪೂರ್ಣ ವಿಶ್ವಾಸ ಕಳೆದುಕೊಂಡಿತು...!
೪೪ ಬಾರಿ ಡಿ ಕೆ ರವಿಯವರು ಒಬ್ಬ ಮಹಿಳಾ ಅಧಿಕಾರಿಗೆ ಕರೆ ಮಾಡಿದ್ದರಂತೆ...! ಹೀಗೆ ಹೇಳಿತ್ತು ಪ್ರಜಾವಾಣಿ....! ಯಾವಾಗ ಸಿ ಬಿ ಐ ಸತ್ಯ ಹೊರಹಾಕಲು ಶುರುವಿಟ್ಟುಕೊಂಡಿತೋ ,ಇವರ ಹಣೆಬರಹ ಒಂದೋಂದಾಗೆ ಬರಲು ಶುರುವಾಗಿದೆ.
ಈಗ ರಾ.ಮಠದ ಶ್ರೀಗಳ ವಿರುದ್ದ ವರದಿಯ ಸರದಿ.
ನೀರಿಗೆ ಇಳಿದ ಮೇಲೆ ಛಳಿಯೇನು ಮಳೆಯೇನು..? ವಿಶ್ವಾಸಾರ್ಹತೆ ಮಣ್ಣುಪಾಲಾದ ಮೇಲೆ ಗೌರವದ ಹಂಗೆನು...? ಹಾಗೊಂದು ಮನಸ್ತಿತಿಗೆ ಪ್ರಜಾವಾಣಿ ಬಂದು ನಿಂತಿದೆ...! ಇನ್ನಿಲ್ಲದ ಅಪಸವ್ಯಗಳ ಬರೆಯುತ್ತಿದೆ, ಸತ್ಯದ ತಲೆ ಮೇಲೆಯೇ ಪ್ರಹಾರ...!
ನಡೆದಿದ್ದು ಇಷ್ಟು ...
ರಾಮಚಂದ್ರಾಪುರ ಮಠದ ಶ್ರೀಗಳು , ಕೊಲ್ಲೂರಿನ ಮೂಕಾಂಬಿಕೆಗೆ ಸಲ್ಲಿಸುವ ಪೂಜೆಗೆ ತಡೆ ಒಡ್ಡುವಂತೆ ಶೃಂಗೇರಿ ಸ್ವಾಮಿಗಳು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು, ಸಂವಿಧಾನದ ಆಶಯದಂತೆ ನೆಡೆಯಬೇಕಾದ ಸರ್ಕಾರ ,ಎಲ್ಲಾ ಕಾನೂನಾತ್ಮಕ ಅಂಶಗಳ ಬದಿಗೊತ್ತಿ, ತಡೆ ನೀಡಿತ್ತು, ಆದರೆ ಇದನ್ನು ಪ್ರಶ್ನಿಸಿ ಕೊಲ್ಲೂರಿನ ಅರ್ಚಕ ಉಡುಪಿ ನ್ಯಾಯಲಯದಲ್ಲಿ, ಸರ್ಕಾರಿ ಆಜ್ನೆಗೆ ತಡೆ ತಂದರೆ, ಅದೇ ಸಮಯದಲ್ಲಿ ಕಾಂತರಾಜ್ ಎಂಬುವವರು ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ, ಮಠದ ಅಧಿಕೃತ ವ್ಯಕ್ತಿ ಅಲ್ಲ ಎಂಬ ಕಾರಣಕ್ಕೆ ವಜಾಗೊಂಡಿತು. ಸ್ವತಃ ಸ್ವಾಮೀಜಿಯವರು, ಅಥವಾ ಅಧಿಕೃತ ವ್ಯಕ್ತಿಗಳು ಅರ್ಜಿ ಸಲ್ಲಿಸಿದರೆ ಪರಿಶೀಲಿಸಬಹುದು ಎಂದು ಹೇಳಿತು.
ಆದರೇ ಇವನ್ನೆಲ್ಲಾ ಮುಚ್ಚಿಟ್ಟು ಪ್ರಜಾವಾಣಿ ತನ್ನದೇ ಹೊಸಕತೆ ಬರೆದಿದೆ....! ಡಿ ಕೆ ರವಿಯವರ ಬಗ್ಗೆ ಬರದಂತೆ....!
ಅರ್ಧ ಶತಮಾನ ಇತಿಹಾಸ ಇರುವ ಪತ್ರಿಕೆಯ ಗೌರವವನ್ನು ನಾಮಾರ್ಧಗೊಳಿಸಿದ್ದಾರೆ...!
-ಪ್ರಶಾಂತ್ ಹೆಗಡೆ

ರಾಜಧರ್ಮ ಪಾಲಿಸಿ !

ಹೀಗೊಂದು ಮಾತು ಹೇಳಿದ್ದು ಮಾಜಿ ಪ್ರಧಾನಿ, ಭಾರತದ ಅಸಲಿ ಭಾರತರತ್ನ ವಾಜಪೇಯಿಯವರು.

ಗೋಧ್ರಾ ಹತ್ಯಾಕಾಂಡ ನೆಡೆಯುತ್ತಿರುತ್ತದೆ ಬೇಕಾದರೆ, ಅಂದಿನ ಸಿ ಎಂ ಮೋದಿಯವರಿಗೆ ಹೇಳಿದ ಮಾತು, ಅವರ ಮಾತನ್ನು ಅಕ್ಷರಶಃ ಪಾಲಿಸಿದ್ದಕ್ಕೆ, ಇಂದು ಮೊದಿಯವರು ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದಾರೆ ಎಂದರೆ, ಉತ್ಪ್ರೇಕ್ಷೆ ಅಲ್ಲ .
*********************
ಸಿದ್ದರಾಮಯ್ಯ ಸರ್ಕಾರ ಎತ್ತಸಾಗುತ್ತಿದೆ....?
ಮೊದಲು ಎಡವಿದ್ದು ಸಚಿವ ಸಂಪುಟ ರಚನೆ ಆಗಬೇಕಾದರೇ...! ಮೊದಲು ಶುರುವಾಗಿದ್ದು ಆಂತರಿಕ ಎದುರಾಳಿಗಳ ಬಗ್ಗು ಬಡಿಯುವ ಯತ್ನದಿಂದ, ಕಾಗೋಡು ತಿಮ್ಮಪ್ಪರಂತಃ ಶುದ್ದ ಚಾರಿತ್ರ್ಯದ ೮೩ರ ಯುವ ಉತ್ಸಾಹದ ಹಿರಿಯರ ಕಡಗಣನೆಯಿಂದ ಶುರುವಾದರೆ, ಪರಮೇಶ್ವರ್ ಪರಿಸ್ತಿತಿ, ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬತಾಯಿತು, ಒಟ್ಟಿನಲ್ಲಿ ಕರ್ನಾಟಕದ ಅಭಿವೃದ್ಧಯೊಂದಿಗೆ ,ಸಿದ್ಧರಾಮಯ್ಯರ ವರ್ಚಸ್ಸು ಕೂಡ ಅಧೋಗತಿಗೆ ಹೊಗಿದೆ ಎಂದು ಹೇಳಲು ಯಾವ ರಾಜಕೀಯ ಪಂಡಿತರ ಅವಶ್ಯವಿಲ್ಲ.
ಬೇಕೆ ತುಷ್ಟೀಕರಣ ನೀತಿ...?
ಪ್ರಾಯಶಃ ಸಿದ್ದರಾಮಯ್ಯರ ರಾಜಕೀಯ ಸಲಹೆಗಾರರ ಯಡವಟ್ಟುತನಗಳೇ , ಇಂದು ಕಾಂಗ್ರೆಸ್ ಕಾರ್ಯಕರ್ತರು ಮುಖಮುಚ್ಚಿಕೊಂಡು ಓಡಾಡುವಂತೆ ಮಾಡುತ್ತಿದೆ, ಅಲ್ಪಸಂಖ್ಯಾತರ ಓಟುಗಳೇ ನಮಗೆ ಆಧಾರ, ಎಂಬ ಶುದ್ದ ಮೂರ್ಖತನದ ಆಲೋಚನೆಯೆ , ಇಂದು ಪಿ ಎಫ್ ಐ ,ಕೆ ಎಫ್ ಡಿ ಎಂಬಂತಹ ಸಂಘಟನೆಗಳ ವಿರುದ್ಧ ಇರುವ ಪ್ರಕರಣಗಳ ಹಿಂತೆಗತಕ್ಕೆ ಕಾರಣ, ಇದರ ಪರಿಣಾಮವೇನಾಗುತ್ತದೆ ಎಂಬುದರ ಕಲ್ಪನೆಯೂ ಇಲ್ಲ, ಇದರಿಂದ ಆಗುವುದಿಷ್ಟೇ, ಬಹುಸಂಖ್ಯಾತರ ಏಕೀಕರಣವಾಗುತ್ತದೆ, ಕಾಂಗ್ರೆಸ್ ಎಂಬುದು ಹಿಂದೂ ವಿರೋಧಿ ಪಕ್ಷ ಎಂಬ ಭಾವ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಮೂರು ಓಟು ಸೇರಿದರೆ,ಆರು ಓಟು ಕಳೆದಿರುತ್ತದೆ.
ಇನ್ನು ಡಿ ಕೆ ರವಿಯಂತಃ ದಕ್ಷ ಅಧಿಕಾರಿಗಳಿಗಳಿಗೆ ಒಂದೋ ಸಾಯುವ ಆಯ್ಕೆ ಇಲ್ಲವೇ ಅಮಾನತಿನ, ಅವಮಾನದ ಆಯ್ಕೆ , ಈಪರಿಯ ಹಿಂಸೆ ದಕ್ಷ ಅಧಿಕಾರಿಗಳು ತಮ್ಮ ಜೀವಮಾನವಿಡೀ ಕಂಡಿರಲಿಲ್ಲ ಸಾಧ್ಯವಿಲ್ಲ. ಅಂತಃ ಕೆಟ್ಟ ವ್ಯವಸ್ಥೆ
ಆಢಳಿತ ಹೀಗೆ ಮುಂದುವರೆದರೆ, ಸಿದ್ದರಾಮಯ್ಯ ಮುಂದಿನ "ಪಪ್ಪು " ಆಗುವುದರಲ್ಲಿ ಆಶ್ಚರ್ಯವಿಲ್ಲ. ದನಕಾಯಲು ಉಪಯೋಗವಿಲ್ಲದವರ ಬಳಿ ರಾಜಕೀಯ ಸಲಹೆ ತೆಗೆದುಕೊಂಡರೆ , ಇದಕ್ಕಿಂತ ಒಳ್ಳೆಯ ಆಢಳಿತ ನೀಡಲು ಸಾಧ್ಯವೇ...?
-ಪ್ರಶಾಂತ್ ಹೆಗಡೆ

ಜನರ ನೆನಪಿನ ಶಕ್ತಿ ತಾತ್ಕಾಲಿಕ ಎಂಬ ಅಸಡ್ಡೆಯೇ...?

ಇತ್ತೀಚೆಗೆ ಫಲದ ಎಂಬ ಎಂಬ ಕಂಪನಿಯ ಮೇಲೆ ಸಿ ಐ ಡಿ ಯ ಅಧಿಕಾರಿಗಳು ದಾಳಿ ನೆಡೆಸಿ ಅಮಾಯಕ ೩೪ ಮಕ್ಕಳನ್ನು ರಕ್ಷಿಸಿದ್ದರು, ಈ ಪ್ರಕರಣ ಈಗ ಬಹುತೇಕ ತಣ್ಣಗಾಗಿ ಹೋಗಿದೆ.
ಬಹಳ ನೋವಾಗುತ್ತದೆ, ಯಾವುದೋ ಅನಕ್ಷರಸ್ತ ಬಡ ಗ್ಯಾರೆಜ್ನವನು ಬಾಲ ಕಾರ್ಮಿಕರ ಕಾನೂನು ತಿಳಿಯದೇ ಬಾಲ ಕಾರ್ಮಿಕರ ಇಟ್ಟುಕೊಂಡಿದ್ದರೆ, ಆತನ ಇಡೀ ಸಂಸಾರವೇ ಬೀದಿಗೆ ಬರುವಂತೆ ಮಾಡುತ್ತದೆ ನಮ್ಮ ವ್ಯವಸ್ಥೆ, ಆದರೆ ಎಲ್ಲಾ ಕಾನೂನು ತಿಳಿದಿರುವ ಸೋ ಕಾಲ್ಡರ್ ಗಣ್ಯರು ಎನ್ನಿಸಿಕೊಂಡಿರುವವರು ಕಾನೂನಿಗೆ ಸವಾಲು ಎಸೆಯುವಂತೆ, ಬಾಲ ಕಾರ್ಮಿಕರ ನಿಯಮಿಸಿಕೊಂಡಿದ್ದರೆ , ಯಾವ ಸಂಘಟನೆಗಳಾಗಲಿ, ಮಕ್ಕಳ ಇಲಾಖೆಯಾಗಲಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಏಕೆ ಈ ತಾರತಮ್ಯ....? ಬಡಮಕ್ಖಳ ಜೀವನವೆಂದರೆ ಏಕೆ ಇಷ್ಟು ಅಸಡ್ಡೆ ..? ನ್ಯಾಯಕ್ಕಾಗಿ ಈ ಸಂಘಟನೆಗಳು ಹೋರಾಟ ಮಾಡಬೇಕೆಂದಿದ್ದರೆ ಮಾಧ್ಯಮಗಳಲ್ಲಿ "ಘಟನೆ" ವಿಜೃಂಭಿಸಲೇ ಬೇಕೆ...? ಇಲ್ಲದಿದ್ದರೆ ಇವರುಗಳ ಆತ್ಮ ,ಹೃದಯ ಕಲುಕುವುದೇ ಇಲ್ಲವೇ...?
ಪ್ರಾಯಶಃ ಈ ಕೇಸ್ ಮುಚ್ಚಿ ಹಾಕುವ ಹುನ್ನಾರ ನೆಡೆಯುತ್ತಿದೆ, ಬಲಿಷ್ಠರಿಗೆ ಕಾನೂನು ಅನ್ವಯವಾಗದು ಎಂಬ ಇರಾದೆ ಇರಬೇಕು, ಮೇಲಾಗಿ ಕೇಸ್ ಮುಚ್ಚಿಹಾಕಲು ಕೇಂದ್ರ ಸಚಿವರೊಬ್ವರ ಒತ್ತಡವಿದೆ ಎಂಬಂತಹ ಮಾತುಗಳು ತೆರೆಮರೆಯಲ್ಲಿ ಕಾಣಿಸಿಕೊಳ್ಳುತಿದೆ.
ಅದೇನೆ ಆಗಲಿ ,ಅದೆಂತಹ ವ್ಯಕ್ತಿಗಳ ಒತ್ತಡಗಳು ಜನ ಸಾಮಾನ್ಯರ ಹೋರಾಟದ ಇದಿರು ನಿಲ್ಲಲಾರದು, ಹಾಗಾಗಿ ಫೇಸ್ ಬುಕ್ ಅಂಗಳವನ್ನು "ಬಾಲ ಕಾರ್ಮಿಕರ " ರಕ್ಷಣೆಗಾಗಿ ಬಳಸೋಣ, ನಮ್ಮ ಕೂಗು ಕೇಂದ್ರದ ನಾಯಕರ ಕಿವಿ ಮುಟ್ಟಿಸೋಣ, ಇದಕ್ಕೆ ನಿಮ್ಮಲ್ಲರ ಸಹಾಕಾರ ಇದ್ದೆ ಇರುತ್ತದೆ ಎಂಬುದು ನನ್ನ ಅಚಲ ನಂಬಿಕೆ.
ಈ ಪ್ರಕರಣವನ್ನು ,ಮಾನ್ಯ ಪ್ರಧಾನಿಗಳ ಗಮನಕ್ಕೆ ತರುವುದಕ್ಕಾಗಿ, ನಮ್ಮ ಟೀಮ್ ಪಿಟಿಷನ್ ಒಂದನ್ನು ತಯಾರು ಮಾಡುತ್ತಿದ್ದಾರೆ , ಅದಕ್ಕೆ ತಾವೆಲ್ಲರೂ ಸಹಿ ಮಾಡುವ ಮೂಲಕ ಹಾಗೂ ಶೇರ್ ಮಾಡುವ ಮೂಲಕ ಬಾಲ ಕಾರ್ಮಿಕ ಮುಕ್ತ ಕರ್ನಾಟಕ್ಕೆ ಸಂಕಲ್ಪಿಸಿ.
ಇಂತಿ
ಪ್ರಶಾಂತ್ ಹೆಗಡೆ
ಆವಿನಹಳ್ಳಿ

Thursday, April 30, 2015

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರಿಗೆ 54ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು:


ಕ್ರೇಜಿಸ್ಟಾರ್‌ ರವಿಚಂದ್ರನ್‌ (ಜನನ: ಮೇ 30, 1961)

"ಪ್ರೇಮಲೋಕ"ದ ಮೂಲಕ ಕನ್ನಡ ಚಿತ್ರರಂಗದಲ್ಲಿಯೇ ಹೊಸತನದ ಸೃಷ್ಟಿಸಿ ಭಾರತೀಯ ಚಿತ್ರರಂಗವೇ ಕನ್ನಡದತ್ತ ಹುಭ್ಭೇರಿಸಿ ನೋಡುವಂತೆ ಮಾಡಿದ ಕೀರ್ತಿ  ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರದು.ಇದಕ್ಕೂ ಮುನ್ನವೇ ನಾಯಕ ನಟನಾಗಿ ಫ್ರಳಯಾಂತಕ, ನಾನೆ ರಾಜ, ನಾನು ನನ್ನ ಹೆಂಡತಿ ಮುಂತಾದ ಚಿತ್ರಗಳಲ್ಲಿ ಮಿಂಚಿ ಕನ್ನಡ ಚಿತ್ರರಸಿಕರ ಮನದಲ್ಲಿ ನೆಲೆಯೂರಿದ ಕ್ರೇಜಿಸ್ಟಾರ್‌ ರವಿಚಂದ್ರನ್‌  ಅವರಿಗೆ ೫೪ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಎಲ್ಲಾ ಚಿತ್ರಗಳಲ್ಲಿ ಇಷ್ಟ್ವಾಗೋ ಗೀತೆಗಳು, ಝಗಮಗಿಸುವ ಅದ್ದೂರಿ ಸೆಟ್ಗಳಲ್ಲಿಯ ದೃಶ್ಯಗಳು ಸದಾ ಪ್ರೇಕ್ಷಕರ ಮನದಲ್ಲಿ ನೆಲೆಯೂರಿಬಿಡುತ್ತಿದ್ದವು.  ಪ್ರಳಯಾಂತಕ ಚಿತ್ರದ "ಮುಂದೆ ನೀ ಹೋದಾಗ ಹಿಂದೆ ನಾ ಬರುವೆ..." ಆ ಕಾಲದ ಪಡ್ಡೆ ಹುಡುಗರೆಲ್ಲರ ಬಾಯಲ್ಲಿ ನಲಿದಾಡುತಿತ್ತು

ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಇದೊಂದು ಹಬ್ಬ. "ಪ್ರೇಮಲೋಕ'ದ ದೊರೆಗೆ ಶುಭಕೋರಲು ಅವರ ಮನೆಮುಂದೆ ಅಭಿಮಾನಿಗಳು ಸೇರುವುದೇನು ಹೊಸದಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರವಿಚಂದ್ರನ್‌, ತಮ್ಮ ಸಿನಿಮಾ ಕೆಲಸಗಳಲ್ಲೇ ಬಿಝಿಯಾಗುತ್ತಾರೆ. ಅದೇನೇ ಆದರೂ ಅವರ ಅಭಿಮಾನಿಗಳು ಮಾತ್ರ ಕೇಕ್‌ ಹಿಡಿದು ಕ್ರೇಜಿಸ್ಟಾರ್‌ ಮನೆಗೆ ಹೋಗಿ ವಿಶ್‌ ಮಾಡದೇ ಬರುವುದಿಲ್ಲ.

Friday, April 24, 2015

ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ 86 ನೇ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ನಟಸಾರ್ವಭೌಮ ಡಾ. ರಾಜ್‌ಕುಮಾರ್ (ಜನನ: ಏಪ್ರಿಲ್ 24, 1929 - ಮರಣ: ಏಪ್ರಿಲ್ 12, 2006
ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. Read more

Thursday, April 16, 2015

ಜಗತ್ತಿನ ಹಾಸ್ಯ ಚಕ್ರವರ್ತಿ ಚಾಪ್ಲಿನ್ ಅವರ 126ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ !

ನಮ್ಮ ದೇಶದ ಖ್ಯಾತ ನಟರಾದ ರಾಜಕಪೂರ್, ಕಮಲಹಾಸನ್, ರಜನಿಕಾಂತ, ಆಮಿರಖಾನ್,  ಅಷ್ಟೇ ಏಕೆ  ಜಗತ್ತಿನ ಅದ್ವಿತೀಯ ನಟರಿಗೆಲ್ಲಾ ಮೆಚ್ಚುವ ಜಗತ್ತಿನ ಏಕೈಕ ನಟ/ನಿರ್ದೇಶಕ/ನಿರ್ಮಾಪಕ  "ಚಾರ್ಲಿ ಚಾಪ್ಲಿನ್" ಈ ಶತಮಾನ ಕಂಡ ಜಗತ್ತಿನ  ಅತ್ಯಂತ ಶ್ರೇಷ್ಟ ಹಾಸ್ಯ ಚಕ್ರವರ್ತಿ. 

ಅದ್ಭುತ ನಟನೆ, ವಿಚಿತ್ರ ಮ್ಯಾನರಿಸಂ ಮತ್ತು ಹಾವಭಾವಗಳಿಂದ ಇಡೀ ಜಗತ್ತನ್ನು ನಕ್ಕು ನಲಿಸಿದ ಹಾಸ್ಯ ಚಕ್ರವರ್ತಿ (ಸರ್ ಚಾರ್ಲ್ಸ್ ಸ್ಪೆನ್ಸರ್ ಚಾರ್ಲಿ ಚಾಪ್ಲಿನ್) ಚಾರ್ಲಿ ಚಾಂಪ್ಲಿನ್ ಹುಟ್ಟಿ ಏಪ್ರಿಲ್ 16ಕ್ಕೆ ಭರ್ತಿ 126 ವರ್ಷ. ಚಾಪ್ಲಿನ್ ಜನಿಸಿದ್ದು 1889ರ ಏಪ್ರಿಲ್ 16ರಂದು ಲಂಡನ್ ನಲ್ಲಿ. ಚಾಪ್ಲಿನ್ ಇಂದಿಗೂ ಜೀವಂತ. ಎಂದಿಗೂ ನಕ್ಕುನಗಿಸುತ್ತಲೇ ಇರುತ್ತಾರೆ ಅವರ ಚಿತ್ರಗಳ ಮುಖಾಂತರ.  ಮೂಕಿ ಚಿತ್ರದಿಂದ ಟಾಕಿ ಚಿತ್ರದವರೆಗೂ ಹಾಸ್ಯ ನಟ ಮತ್ತು ಚಿತ್ರ ನಿರ್ದೇಶಕನಾಗಿ ಬೆಳೆದ ಪರಿ ಅಮೋಘ. ಅವನು ಸಂಗೀತ ನಿರ್ದೇಶಕ ಕೂಡ ಆಗಿದ್ದ. ಮನದೊಳಗೆ ನೋವಿನ ಸಾವಿರ ಕಂತೆಗಳನ್ನಿಟ್ಟುಕೊಂಡರೂ ಜನಮಾನಸದಲ್ಲಿ ನಗುವಿನ ಹಣತೆಯನ್ನು ಮೂಡಿಸಿದ ಅವನಿಗೆ ಇಡೀ ಜಗತ್ತೇ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಿದೆ. ಸೀರಿಯಸ್ ಟ್ರಾಂಪ್ ಚಾರ್ಲಿಗೆ ಶುಭಾಶಯ ಹೇಳುತ್ತಿರುವ ನಮ್ಮ ಜತೆ ನೀವೂ ಸೇರಿಕೊಳ್ಳಿರಿ. ಪುಟ್ಟಮಕ್ಕಳಿಂದ ಹಿಡಿದು ಮುದುಕರವರೆಗೂ ಚಾಪ್ಲಿನ್ ನನ್ನು ಇಷ್ಟಪಡದವರು ಇರಲಿಕ್ಕಿಲ್ಲ. ಸಮಾಜದ ಅಂಕುಡೊಂಕುಗಳನ್ನು, ಯಾಂತ್ರಿಕ ಬದುಕನ್ನು, ಮುಖವಾಡಗಳನ್ನು ಬೆತ್ತಲೆಗೊಳಿಸುವುದರಲ್ಲಿ ಚಾರ್ಲಿ ನಿಸ್ಸೀಮ. ದಿ ಸರ್ಕಸ್ ಎಂಬ ಸಿನಿಮಾದಲ್ಲಿ ಸಿಂಹದ ಬೋನಿನೊಳಗೆ ಸಿಕ್ಕಿ ಅನುಭವಿಸಿದ ಪರಿಪಾಟಲು, ದಿ ಗ್ರೇಟ್ ಡಿಕ್ಟೇಟರ್ ಚಿತ್ರದಲ್ಲಿ ಹಿಟ್ಲರ್ ನ ಬಗ್ಗೆ ಒಂದು ಬಲೂನ್ ಮೂಲಕ ಮಾಡಿದ ವಿಡಂಬನೆ, ಸರ್ಕಸ್ ಸಿನಿಮಾದಲ್ಲಿನ ಅತ್ಯದ್ಬುತ ನಟನೆ ನಾವಂತೂ ಮರೆಯುವುದಿಲ್ಲ. ಚಾಪ್ಲಿನ್ ಪ್ರಮುಖ ಚಿತ್ರಗಳೆಂದರೆ ದಿ ಕಿಡ್(1920), ಗೋಲ್ಡ್ ರಷ್(1924), ದಿ ಸರ್ಕಸ್(1928), ಸಿಟಿ ಲೈಟ್ಸ್(1931), ಮಾಡರ್ನ್ ಟೈಮ್ಸ್(1936), ದಿ ಗ್ರೇಟ್ ಡೈರೆಕ್ಟರ್(1940) ಲಥಮ್ ಲೈಟ್(1952). ಇವರು 1940ರವರೆಗೆ ಕೇವಲ ಮೂಕಿ ಚಿತ್ರದಲ್ಲೇ ಜಗತ್ತನ್ನು ನಗಿಸಿದರು. "ನಮ್ಮ ಸಮಸ್ಯೆಯಂತೆ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ", "ಬದುಕಿನಲ್ಲಿ ನಗದ ದಿನ ವ್ಯರ್ಥ" ಮತ್ತು "ನನಗೆ ಮಳೆಯಲ್ಲಿ ನಡೆಯಲು ಇಷ್ಟ, ಯಾಕೆಂದರೆ ನಾನು ಅಳುವುದು ಯಾರಿಗೂ ಕಾಣದು" ಎಂಬುದು ಆತ ಉದುರಿಸಿದ ಕೆಲವು ಅಣಿಮುತ್ತುಗಳು. 

Monday, March 30, 2015

Crazy Star V Ravichandran Movies Complete List

SlYearMovieCo-stars
11982Khadeema KallaruPrabhakar, Ambarish
21983ChakravyuhaAmbika, Ambarish
31984PralayanthakaAmbika, Jai Jagdeesh
41984Premigala SavaalPrabhakar
51984Nane RajaAmbika, Ambarish
61985Saavira SulluLokesh, Radha

Monday, February 16, 2015

ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಗುದೀಪ್ ಅವರಿಗೆ 39ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು



ಕನ್ನಡದ ಗಜ-ಅಜಾನುಭಾಹು ಸ್ಪುರದ್ರೂಪಿ ನಾಯಕ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್  ತುಗುದೀಪ್ ಅವರಿಗೆ ೩೮ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು






ಅವರು ಜನಿಸಿದ್ದು ಫೆಬ್ರವರಿ ೧೬ , ೧೯೭೭, ಮೈಸೂರಿನಲ್ಲಿ. ಇವರ ತಂದೆ ತುಗೂದೀಪ್ ಶ್ರೀನಿವಾಸ್ ತಾಯಿ ಮೀನ ತೂಗುದೀಪ್. ಇವರ ಬಾಲ್ಯ- ವಿದ್ಯಬ್ಯಾಸ ಎಲ್ಲವೂ  ಮೈಸೂರಿನಲ್ಲಿ.  ಮೈಸೂರು ದರ್ಶನ್ ಗೆ ತುಂಬಾ ಇಷ್ಟವಾದ ಸ್ಥಳ. ಅವರ ಫಾರ್ಮ್ ನಲ್ಲಿ ಅವರ ಹಲವಾರು ನೆಚ್ಚಿನ ಪ್ರಾಣಿ-ಪಕ್ಷಿಗಳನ್ನು ಸಾಕಿ ಅವುಗಳ ಆರೈಕೆಯಲ್ಲಿ ತಮ್ಮ ಬಿಡುವಿನ ಸಮಯ ಕಳೆಯುತ್ತಾರೆ, ಅವರ ಪ್ರಾಣಿ ಪ್ರೀತಿ ಕನ್ನಡಿಗರೆಲ್ಲರಿಗೂ ಅಚ್ಚು-ಮೆಚ್ಚು,

Thursday, January 8, 2015

ರಾಕಿಂಗ್ ಸ್ಟಾರ್ "ಯಶ್" 29ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಮಂಡ್ಯ ಮೂಲದ ಯಶ್ (ಜನನ: 8ನೇ ಜನವರಿ, 1986) ಅವರ ಮೂಲ ಹೆಸರು ನವೀನ್  ಕುಮಾರ್ ಗೌಡ, ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸು ಚಿತ್ರದ ಮೂಲಕ ಸ್ಯಾಂಡಲ್-ವುಡ್ ಗೆ ನಾಯಕನಟನಾಗಿ ಪಾದಾರ್ಪಣೆ ಮಾಡಿದ ರಾಕಿಂಗ್ ಸ್ಟಾರ್ "ಯಶ್" ಅವರಿಗೆ 29ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸು ಚಿತ್ರದ ಮೂಲಕ ಸ್ಯಾಂಡಲ್-ವುಡ್ ಗೆ ನಾಯಕನಟನಾಗಿ ಪಾದಾರ್ಪಣೆ ಮಾಡಿದ ರಾಕಿಂಗ್ ಸ್ಟಾರ್ "ಯಶ್" ಅವರಿಗೆ ೨೯ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು
ಅವರ ಎಲ್ಲಾ ಚಿತ್ರಗಳೂ ಸತತವಾಗಿ ಭರ್ಜರಿ ಜಯಭೇರಿಸುವ ಮೂಲಕ ಕನ್ನಡ ಚಿತ್ರರಸಿಕರಿಗೆ ಮನರಂಜನೆ ನೀಡುತ್ತಿರುವ ಯಶ್ ಅವರು ಇತ್ತೀಚಿನ ಜನಮಾನಸದಲ್ಲಿ ಅಚ್ಚೊತ್ತಿರುವ ಬಹು ಬೇಡಿಕೆ ಹುಟ್ಟಿಸಿರುವ ನಾಯಕ ನಟ
ಜನನ: 8ನೇ ಜನವರಿ, 1986

ಯಶ್ 'ರಾಮಾಚಾರಿ' ಮುಂದೆ ಕೇಕೆ ಹಾಕಲಿಲ್ಲ ಆಮೀರ್ 'ಪಿಕೆ'