Translate in your Language

Thursday, April 30, 2015

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರಿಗೆ 54ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು:


ಕ್ರೇಜಿಸ್ಟಾರ್‌ ರವಿಚಂದ್ರನ್‌ (ಜನನ: ಮೇ 30, 1961)

"ಪ್ರೇಮಲೋಕ"ದ ಮೂಲಕ ಕನ್ನಡ ಚಿತ್ರರಂಗದಲ್ಲಿಯೇ ಹೊಸತನದ ಸೃಷ್ಟಿಸಿ ಭಾರತೀಯ ಚಿತ್ರರಂಗವೇ ಕನ್ನಡದತ್ತ ಹುಭ್ಭೇರಿಸಿ ನೋಡುವಂತೆ ಮಾಡಿದ ಕೀರ್ತಿ  ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರದು.ಇದಕ್ಕೂ ಮುನ್ನವೇ ನಾಯಕ ನಟನಾಗಿ ಫ್ರಳಯಾಂತಕ, ನಾನೆ ರಾಜ, ನಾನು ನನ್ನ ಹೆಂಡತಿ ಮುಂತಾದ ಚಿತ್ರಗಳಲ್ಲಿ ಮಿಂಚಿ ಕನ್ನಡ ಚಿತ್ರರಸಿಕರ ಮನದಲ್ಲಿ ನೆಲೆಯೂರಿದ ಕ್ರೇಜಿಸ್ಟಾರ್‌ ರವಿಚಂದ್ರನ್‌  ಅವರಿಗೆ ೫೪ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಎಲ್ಲಾ ಚಿತ್ರಗಳಲ್ಲಿ ಇಷ್ಟ್ವಾಗೋ ಗೀತೆಗಳು, ಝಗಮಗಿಸುವ ಅದ್ದೂರಿ ಸೆಟ್ಗಳಲ್ಲಿಯ ದೃಶ್ಯಗಳು ಸದಾ ಪ್ರೇಕ್ಷಕರ ಮನದಲ್ಲಿ ನೆಲೆಯೂರಿಬಿಡುತ್ತಿದ್ದವು.  ಪ್ರಳಯಾಂತಕ ಚಿತ್ರದ "ಮುಂದೆ ನೀ ಹೋದಾಗ ಹಿಂದೆ ನಾ ಬರುವೆ..." ಆ ಕಾಲದ ಪಡ್ಡೆ ಹುಡುಗರೆಲ್ಲರ ಬಾಯಲ್ಲಿ ನಲಿದಾಡುತಿತ್ತು

ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಇದೊಂದು ಹಬ್ಬ. "ಪ್ರೇಮಲೋಕ'ದ ದೊರೆಗೆ ಶುಭಕೋರಲು ಅವರ ಮನೆಮುಂದೆ ಅಭಿಮಾನಿಗಳು ಸೇರುವುದೇನು ಹೊಸದಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರವಿಚಂದ್ರನ್‌, ತಮ್ಮ ಸಿನಿಮಾ ಕೆಲಸಗಳಲ್ಲೇ ಬಿಝಿಯಾಗುತ್ತಾರೆ. ಅದೇನೇ ಆದರೂ ಅವರ ಅಭಿಮಾನಿಗಳು ಮಾತ್ರ ಕೇಕ್‌ ಹಿಡಿದು ಕ್ರೇಜಿಸ್ಟಾರ್‌ ಮನೆಗೆ ಹೋಗಿ ವಿಶ್‌ ಮಾಡದೇ ಬರುವುದಿಲ್ಲ.


ಅದು ಅಭಿಮಾನಿಗಳ ಪ್ರೀತಿ. ಸದ್ಯ ರವಿಚಂದ್ರನ್‌ ತಮ್ಮದೇ ನಿರ್ದೇಶನದ "ಅಪೂರ್ವ'ದಲ್ಲಿ ಬಿಝಿಯಾಗಿದ್ದಾರೆ. ಎಲ್ಲವೂ ಅಂ ದುಕೊಂಡಂತೆ ಆಗಿದ್ದರೆ ಅವರ ಹುಟ್ಟುಹಬ್ಬಕ್ಕೆ "ಅಪೂರ್ವ' ತೆರೆಕಾಣಬೇಕಿತ್ತು. ಆದರೆ, ಚಿತ್ರದ ಕೆಲಸಗಳು ಮುಗಿದಿಲ್ಲ. ಚಿತ್ರದ ಸ್ಪೆಷಲ್‌ ಎಫೆಕ್ಟ್ನಿಂದ ಹಿಡಿದು ಪ್ರತಿಯೊಂದು ವಿಭಾಗದಲ್ಲೂ ರವಿಚಂದ್ರನ್‌ ಅವರೇ ಕುಳಿತು ಮಾಡಿಸುತ್ತಿದ್ದಾರೆ. ಇದು ಅವರ ಕನಸಿನ ಚಿತ್ರವಾದ್ದರಿಂದ ಅದು ಹೀಗೆಯೇ ಬರಬೇಕೆಂಬ ಕಾರಣಕ್ಕೆ ಎಲ್ಲವನ್ನು ಪಕ್ಕಾ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್‌ ಅವರ ಗೆಟಪ್‌ ಕೂಡಾ ಭಿನ್ನವಾಗಿದ್ದು,

ಅರುವತ್ತು ವರ್ಷದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಲಿಫ್ಟ್ನಲ್ಲೇ ನಡೆದಿದೆ. ಇತ್ತ ಕಡೆ ರವಿಚಂದ್ರನ್‌ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ. ಕಿರುತೆರೆಯ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿರುವ ರವಿಚಂದ್ರನ್‌ ಇತ್ತ ಕಡೆ ರೇಡಿಯೋದಲ್ಲೂ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಒಂದಲ್ಲ, ಒಂದು ಕೆಲಸದಲ್ಲಿ ಸದಾ ಬಿಝಿಯಾಗಿರುವ ರವಿಚಂದ್ರನ್‌ ಅವರಿಗೆ ಹ್ಯಾಪಿ ಬರ್ತ್‌ಡೇ ...
ಅಭಿಮಾನಿಗಳ ಸಮ್ಮುಖದಲ್ಲಿ ರವಿಚಂದ್ರನ್‌ ಹುಟ್ಟುಹಬ್ಬ
ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಶನಿವಾರ ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ 54 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇಂದು ಮುಂಜಾನೆ ಕುಟುಂಬದವರ ಜತೆ ಸಂಭ್ರಮ ಹಂಚಿಕೊಂಡ ರವಿಚಂದ್ರನ್‌ಗೆ, ಅವರ ಪತ್ನಿ, ಇಬ್ಬರು ಪುತ್ರರು, ಪುತ್ರಿ ಹಾಗು ಸಹೋದರ ಬಾಲಾಜಿ ಅವರು ಸಿಹಿ ತಿನಿಸುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದರು. ಇದಾದ ಬಳಿಕ ಅಭಿಮಾನಿ ವಸತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿಮಾನಿಗಳ ದಂಡೇ ಸೇರಿತ್ತು. ರವಿಚಂದ್ರನ್‌ ಅವರ ಬರುವಿಕೆಗೆ ಕಾದು ನಿಂತಿದ್ದ ಅಭಿಮಾನಿಗಳು, ರವಿಚಂದ್ರನ್‌ ಅವರ ಕಾರು ಅಭಿಮಾನಿ ವಸತಿಗೆ ಬರುತ್ತಿದ್ದಂತೆಯೇ, ಜೈಕಾರ ಹಾಕುವ ಮೂಲಕ ಅವರನ್ನು ಸ್ವಾಗತಿಸಿದರು. ಕಲರ್‌ಫ‌ುಲ್‌ ಆಗಿ ಸಿಂಗರಿಸಿದ್ದ ವೇದಿಕೆಯ ಮೇಲೆ ರವಿಚಂದ್ರನ್‌ ಅವರು ಹೋಗಿದ್ದೇ ತಡ, ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಬೃಹತ್‌ ಕೇಕ್‌ವೊಂದನ್ನು ಇಟ್ಟು, ರವಿಚಂದ್ರನ್‌ ಅವರಿಂದ ಕತ್ತರಿಸುವ ಮೂಲಕ ಬರ್ತ್‌ಡೇ ಆಚರಿಸಿ, ಸಂಭ್ರಮಪಟ್ಟರು. ಇದೇ ಸಂದರ್ಭದಲ್ಲಿ ಅನೇಕ ಅಭಿಮಾನಿಗಳು ರವಿಚಂದ್ರನ್‌ ಜತೆಗೆ ಫೋಟೋ ತೆಗೆಸಿಕೊಂಡು ಸಂತಸ ಪಟ್ಟರು.


ದೂರದ ಊರುಗಳಿಂದಲೂ ಆಗಮಿಸಿದ್ದ ಅದೆಷ್ಟೋ ಅಭಿಮಾನಿಗಳು ರವಿಚಂದ್ರನ್‌ ಅವರ ಪಕ್ಕ ನಿಂತು, ಅವರ ಕೈ ಕುಲುಕಿ ಫೋಟೋ ತೆಗೆಸಿಕೊಳ್ಳುವ ಮೂಲಕ ಬಹಳ ವರ್ಷಗಳ ಆಸೆಯನ್ನು ಈಡೇರಿಸಿಕೊಂಡರು. ಅನೇಕ ಅಭಿಮಾನಿಗಳು ರವಿಚಂದ್ರನ್‌ ಅವರಿಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಮೈಸೂರು ಪೇಟ ತೊಡಿಸಿದರು. ಇನ್ನೂ ಕೆಲವರು ರವಿಚಂದ್ರನ್‌ ಭಾವಚಿತ್ರವುಳ್ಳ ದೊಡ್ಡದೊಂದು ಫೋಟೋ ನೀಡಿದರು. ಅಭಿಮಾನಿಗಳೆಲ್ಲ ಸೇರಿ, ರವಿಚಂದ್ರನ್‌ ಅವರಿಗೆ ಗಿಟಾರ್‌ವೊಂದನ್ನು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕ ನಿರ್ಮಾಪಕರು, ನಿರ್ದೇಶಕರು ಆಗಮಿಸಿದ್ದರು. "ಮುಂಗಾರು ಮಳೆ-2' ನಿರ್ಮಾಪಕ ಗಂಗಾಧರ್‌, ಕಲಾವಿದ ಶಿವಕುಮಾರ್‌, ಕ್ಯಾಮೆರಾಮೆನ್‌ ಸೀತಾರಾಮ್‌, ಬುಲೆಟ್‌ ಪ್ರಕಾಶ್‌,ರಘುರಾಮ್‌ ಸೇರಿದಂತೆ ಹಲವರು ಆಗಮಿಸಿ ಶುಭಕೋರಿದರು.


No comments:

Post a Comment