Translate in your Language

Wednesday, March 30, 2016

ದೇವಿಕಾರಾಣಿ ಅವರ 108ನೇ ಹುಟ್ಟು ಹಬ್ಬದ ಸವಿನೆನಪಿನಲ್ಲಿ !

Beautiful :Devika Rani 
ಭಾರತೀಯ ಚಿತ್ರರಂಗದ ಪ್ರಥಮ ಸಾಲಿನ ಮಹಿಳಾಮಣಿಗಳಲ್ಲಿ ದೇವಿಕಾ ರಾಣಿಯವರ ಹೆಸರು ಶಾಶ್ವತವಾಗಿರುವಂತದ್ದು.  ದೇವಿಕಾ ರಾಣಿಯವರು ಮಾರ್ಚ್ 30, 1908 ರಲ್ಲಿ ವಿಶಾಕಪಟ್ಟಣದ ಬಳಿಯ ವಾಲ್ಟೈರ್ ಎಂಬಲ್ಲಿ ಜನಿಸಿದರು.  ದೇವಿಕಾರಾಣಿಯವರು ರಬೀಂದ್ರನಾಥ ಠಾಗೂರರ ವಂಶದವರು.   ಅವರ ತಂದೆ ಎಂ. ಎನ್. ಚೌಧುರಿಯವರು ಮದ್ರಾಸ್ ರಾಜ್ಯದ ಪ್ರಥಮ ಸರ್ಜನ್ ಜನರಲ್ ಎಂದು ಪ್ರಖ್ಯಾತರಾದವರು.  ಅವರ ತಾಯಿ ಲೀಲಾ.

Thursday, March 17, 2016

ಜಗ್ಗೇಶ್ ಅವರ 53ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

Jaggesh
ನವರಸ ನಾಯಕ ಜಗ್ಗೇಶ್ ಅವರು ಹುಟ್ಟಿದ್ದು 17ನೆ ಮಾರ್ಚ್ 1963 ರಲ್ಲಿ.   ಜೀವನದಲ್ಲಿ ತುಂಬಾ ಕಷ್ಟ ಪಟ್ಟು ಮೇಲೆ ಬಂದ ವ್ಯಕ್ತಿ.  ಎಂಥಹ ಪ್ರಲೋಭನೆಗಳು ಬಂದರೂ ಕನ್ನಡ ಚಿತ್ರರಂಗ ಬಿಟ್ಟು ಹೊರಗಿನ ಭಾಷಾ ಚಿತ್ರರಂಗದತ್ತ ಕಣ್ಣು ಹಾಯಿಸದ ವ್ಯಕ್ತಿ.

ನಮಗೆ ಹಲವು ಕಲಾವಿದರು ಹಲವು ಕಾರಣಕ್ಕಾಗಿ ಇಷ್ಟ ಆಗುತ್ತಾರೆ. ಹಲವು ಕಾರಣಕ್ಕಾಗಿ ಹಲವು ಸಿನಿಮಾಗಳು ಇಷ್ಟ ಆಗುತ್ತವೆ.

Monday, March 7, 2016

ರಾಧಿಕಾ ಪಂಡಿತ್ ಅವರ 32ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

ರಾಧಿಕಾ ಪಂಡಿತ್  ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿ.  ಮೊದಲಿಗೆ ಆಕೆ ಕನ್ನಡದ ಮಣ್ಣಿನ ಪ್ರತಿಭೆ.  ಕನ್ನಡ ಬಲ್ಲ ಪ್ರತಿಭೆ.  ಸುಂದರವಾಗಿ ಕನ್ನಡವನ್ನು ಸಂಭಾಷಿಸುವ ಹುಡುಗಿ.  ಇಂತಹ ವಿಷಯಗಳೆಲ್ಲ ಇಂದಿನ ನಮ್ಮ ಚಿತ್ರರಂಗದಲ್ಲಿ ಅಚ್ಚರಿಯ ಸಂಗತಿ ಎನ್ನುವಂತಾಗಿಬಿಟ್ಟಿದೆ.  ಮಾರ್ಚ್ 7, 1984 ರಾಧಿಕಾ ಪಂಡಿತ್ ಹುಟ್ಟುಹಬ್ಬ.  ಉತ್ತರ ಕನ್ನಡ ಜಿಲ್ಲೆಯಿಂದ  ಮೂಡಿಬಂದ ಈ ಪ್ರತಿಭೆ ಬೆಂಗಳೂರಿನ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸಿದವರು.

ರಾಧಿಕಾ ಪಂಡಿತ್ ಫಿಲ್ಮ್ ಫೇರ್ ಪ್ರಶಸ್ತಿಗಳಿಕೆಯಲ್ಲಿ ಹ್ಯಾಟ್ರಿಕ್ ಮಾಡಿರುವ ಸಾಧನೆ ಮತ್ತು ರಾಜ್ಯಪ್ರಶಸ್ತಿಯೂ ಸೇರಿದಂತೆ ಪಡೆದ ಹಲವಾರು ಗೌರವಗಳಿಂದ ಎಲ್ಲರ ಗಮನ ಸೆಳೆದವರು.

ಸಂತ ಶಿಶುನಾಳ ಶರೀಫ ಅವರ 197ನೇ ಹುಟ್ಟು ಹಬ್ಬದ ಸವಿ-ನೆನಪಿನಲ್ಲಿ

ಗುರುಗೋವಿಂದರ ಜೊತೆ ಶರೀಫಜ್ಜ !
ಶಿಶುನಾಳ ಶರೀಫರು ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುನಾಳ ಗ್ರಾಮದ ದೇವಕಾರ ಮನೆತನದ ಇಮಾಮ ಹಜರತ್ ಸಾಹೇಬ ಮತ್ತು ಹಜ್ಜೂಮ ಇವರ ಮಗನಾಗಿ ಮಾರ್ಚ್ 7, 1819 ರಂದು ಜನಿಸಿದರು.  ಅವರ ಮೂಲ ಹೆಸರು ಮಹಮ್ಮದ ಶರೀಫ.

ಕೂಲಿಮಠದಲ್ಲಿದ್ದು ಮುಲ್ಕೀ ಪರೀಕ್ಷೆಯನ್ನು ಪಾಸುಮಾಡಿದ ನಂತರದಲ್ಲಿ ಶರೀಫರು ಮೋಡಿ ಭಾಷೆಯನ್ನು ಓದಿ ಬರೆಯುವುದಕ್ಕೂ ಕಲಿತುಕೊಂಡರು.

Friday, March 4, 2016

ತಾರಾ ಅವರ 45ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಚಲನಚಿತ್ರರಂಗವೆಂಬ ತಾರೆಗಳ ತೋಟದಲ್ಲಿ ವಿಶಿಷ್ಟರಾದ ತಾರಾ ಅವರ ಹುಟ್ಟಿದ ದಿನ ಮಾರ್ಚ್ 4, 1971.  ಬಹಳ ವರ್ಷಗಳ ಕಾಲ ರಾಷ್ಟ್ರಮಟ್ಟದ ನಟನಾ ಪ್ರಶಸ್ತಿಗಳಲ್ಲಿ ಕನ್ನಡ ಚಿತ್ರರಂಗದ ಹೆಸರು ಮರೆತುಹೋಗಿದ್ದ ಸಮಯದಲ್ಲಿ, ತಾರಾ ಅವರು  ತಮ್ಮ ‘ಹಸೀನಾ’ ಚಿತ್ರದ ಅಭಿನಯದ ಮೂಲಕ ಅದನ್ನು ಕನ್ನಡಕ್ಕೆ  ಮತ್ತೊಮ್ಮೆ ತಂದರು.  
‘ಕ್ರಮ’, ‘ಕರಿಮಲೆಯ ಕಗ್ಗತ್ತಲು’, ‘ಕಾನೂರು ಹೆಗ್ಗಡತಿ’, ‘ಮುಂಜಾನೆಯ ಮಂಜು’, ‘ನಿನಗಾಗಿ’, ‘ಸಯನೈಡ್’, ‘ಈ ಬಂಧನ’  ಹೀಗೆ ಹಲವು ಚಲನಚಿತ್ರಗಳಲ್ಲಿ ರಾಜ್ಯ ಪ್ರಶಸ್ತಿ ಪಡೆದ ತಾರಾ ಕನ್ನಡ ನಾಡು ಕಂಡ ಅಮೂಲ್ಯ ಪ್ರತಿಭೆ.  ಅವರ ಮತದಾನ,  ಸಯನೈಡ್, ಭಾಗೀರಥಿ  ಅಂತ ಚಿತ್ರಗಳೂ ಅಷ್ಟೇ ಪ್ರಸಿದ್ಧ.