Translate in your Language

Thursday, December 25, 2014

ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಹುಟ್ಟುಹಬ್ಬದಂದು ಭಾರತ ರತ್ನ ಘೋಷಣೆ

ಬಿಜೆಪಿಯ ಸೌಮ್ಯವಾದಿ ನಾಯಕ, ಅಜಾತಶತ್ರು ಮತ್ತು ವಾಗ್ಮಿಯಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಸ್ವಾತಂತ್ರ್ಯ ಸೇನಾನಿ, ಶಿಕ್ಷಣತಜ್ಞ ದಿವಂಗತ ಮದನ್ ಮೋಹನ್ ಮಾಳವೀಯ (ಮರಣೋತ್ತರ) ಅವರನ್ನು ಈ ಬಾರಿಯ ದೇಶದ ಅತ್ಯುನ್ನತ ನಾಗರಿಕ ಗೌರವವಾದ 'ಭಾರತರತ್ನ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬಿಜೆಪಿಯ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ವಾಜಪೇಯಿ 1998ರಿಂದ 2004ರ ಅವಧಿಯಲ್ಲಿ ಸರಕಾರ ನಡೆಸಿದವರು. ಬಿಜೆಪಿಯ 'ಜಾತ್ಯತೀತ ಮುಖ'ವಾಗಿ ಗಮನ ಸೆಳೆದ ಅವರು, ಅಜಾತ ಶತ್ರುವೆಂದೇ ಅಭಿಮಾನಿಗಳಿಂದ ಕರೆಸಿಕೊಂಡಿದ್ದಾರೆ. 23 ರಾಜಕೀಯ ಪಕ್ಷಗಳ ಮೈತ್ರಿಕೂಟದ ಸರಕಾರವನ್ನು ನಿಭಾಯಿಸಿದ ಅವರು, ಮೈತ್ರಿಧರ್ಮದ ಅನುಪಾಲನೆಯಲ್ಲಿ ಆದರ್ಶ ಮಾದರಿ ಎಂದೆನಿಸಿಕೊಂಡಿದ್ದರು. 1957ರಿಂದ 2009ರವರೆಗೆ ಅವರು ಲೋಕಸಭಾ ಸದಸ್ಯರಾಗಿದ್ದರು.

Saturday, December 13, 2014

ಜ್ಯೂಲಿ-ಲಕ್ಷ್ಮಿ ಅವರಿಗೆ 63ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು


Born on : December 13, 1952


ತಮ್ಮ ೧೫ನೇ ವಯಸ್ಸಿನಲ್ಲಿಯೇ ನಟನೆಗಿಳಿದ ಲಕ್ಷ್ಮಿಯವರ ಮೊದಲ ಚಿತ್ರ ತಮಿಳಿನ "ಜೀವನಾಂಶಂ"೧೯೬೮ರಲ್ಲಿ ತೆರೆ ಕಂಡಿತು.ಇದೇ ವರ್ಷದಲ್ಲಿ ತೆರೆ ಕಂಡ ಕನ್ನಡ ಚಿತ್ರ "ಗೋವಾದಲ್ಲಿ C I D-999" ಅವರ ಕನ್ನಡದ ಮೊದಲ ಚಿತ್ರ ಅದೂ ಡಾ. ರಾಜ್-ಕುಮಾರ್ ಜೊತೆಗೆ,ಅವರು ನಟಿಸಿದ  ಮೊದಲ ಮಳಯಾಳಮ್ ಚಿತ್ರ "ಚಟ್ಟಾಕ್ಕ್ಕಾರಿ" ಲಕ್ಷ್ಮಿಯವರಿಗೆ ದೇಶಾದ್ಯಂತ ಹೆಸರು ತಂದುಕೊಟ್ಟಿತು. ಲಕ್ಷ್ಮಿಯವರ  ತೆಲುಗಿನ ಮೊದಲ ಚಿತ್ರ "ಭಾಂಧವ್ವ್ಯಲು" , ನಂತರ ಅವರು ತಿರುಗಿ ನೋಡಿದ್ದೇ ಇಲ್ಲ, ಕನ್ನಡ, ತೆಲುಗು, ತಮಿಳು, ಮಳಯಾಳಮ್, ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ಜನಮೆಚ್ಚುಗೆ ಗಳಿಸಿದರು,

"ಜ್ಯೂಲಿ" ಹಿಂದಿ ಚಲನಚಿತ್ರ ದಲ್ಲಿ ಲಕ್ಷ್ಮಿ



ಅವರ ಹಿಂದಿ ಚಲನಚಿತ್ರ "ಜ್ಯೂಲಿ" ಅವರಿಗೆ ಅತ್ಯಂತ ಜನಪ್ರಿಯತೆಯನ್ನು ತಂದು ಕೊಟ್ಟ ಚಿತ್ರ ವಾಗಿದ್ದು ನಂತರ ಜ್ಯೂಲಿ-ಲಕ್ಷ್ಮಿ ಎಂದೇ ಖ್ಯಾತಿಯಾದರು.

Friday, December 12, 2014

ರಜನಿಕಾಂತ್ ಅವರ 65ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

1950 ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಮರಾಠಿ ಕುಟುಂಬವೊಂದರಲ್ಲಿ ಹುಟ್ಟಿದ ರಜನಿಕಾಂತ್ ಅವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್. ಇಬ್ಬರು ಅಣ್ಣಂದಿರು ಮತ್ತು ಓರ್ವ ಅಕ್ಕನ ಮುದ್ದಿನ ತಮ್ಮ ಈ ‘ತಲೈವಾ’ .

ಬೆಂಗಳೂರಿನ ಹನುಮಂತನಗರ ತೆಕ್ಕೆಯಲ್ಲಿರುವ ಗವಿಪುರಂ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ  ಶಿಕ್ಷಣ ಪಡೆದ ಶಿವಾಜಿಗೆ ಕ್ರಿಕೆಟ್, ಫುಟ್ಬಾಲ್ ಮತ್ತು ಬ್ಯಾಸ್ಕೆಟ್ಬಾಲ್ ಕ್ರೀಡೆಗಳಲ್ಲಿ ಅತೀವ ಆಸಕ್ತಿಯಿತ್ತು. ಇದೇ ಅವಧಿಯಲ್ಲಿ ರಾಮಕೃಷ್ಣ ಮಠದ ಸಾಂಗತ್ಯವೂ ದೊರೆತು, ವೇದಗಳು, ಭಾರತೀಯ ಸಂಪ್ರದಾಯ ಮತ್ತು ಇತಿಹಾಸಿಕ ಕಲಿಕೆಗೆ ಒಡ್ಡಿಕೊಂಡರು, ಅಧ್ಯಾತ್ಮ ಪ್ರಜ್ಞೆಯೂ ಮೊಳೆಯಿತು. ಕಲಿಕೆಯ ಆಸಕ್ತಿ ಮತ್ತಷ್ಟು ವಿಸ್ತರಿಸಿ, ಮಠದಲ್ಲಿ ಪ್ರದರ್ಶನಗೊಂಡ ಮಹಾಭಾರತ ನಾಟಕದಲ್ಲಿ ಏಕಲವ್ಯನ ಸ್ನೇಹಿತನ ಪಾತ್ರವನ್ನು ನಿರ್ವಹಿಸಿದರು, ಇದಕ್ಕೆ ಪ್ರೇಕ್ಷಕರ ಮೆಚ್ಚುಗೆಯೂ ದೊರೆಯಿತು. ವರಕವಿ ದ.ರಾ.ಬೇಂದ್ರೆಯವರೂ ಅವರ ಪೈಕೆ ಒಬ್ಬರಾಗಿದ್ದರು.

Friday, November 28, 2014

P.ರವಿಶಂಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು


P Ravishankar.jpg
ಡೈಲಾಗ್ ಕಿಂಗ್ ಸಾಯಿಕುಮಾರ ತಮ್ಮ ಸದ್ಯಕ್ಕೆ ಕನ್ನಡದ ಅತಿ ಬೇಡಿಕೆಯ ಖಳನಾಯಕನಾಗಿ ಮಿಂಚುತ್ತಿರುವ ರವಿಶಂಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

Sunday, November 9, 2014

ಕನ್ನಡ ಚಿತ್ರರಂಗದ ದೃವತಾರೆ ಶಂಕರ್ ನಾಗ್ ಅವರ 61ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಮತ್ತೆ ಹುಟ್ಟಿಬಾ ಶಂಕರ್
ಶಂಕರ್ ನಾಗ್ (ಜನನ: ನವೆಂಬೆರ್ ೯, ೧೯೫೪)ಇಂದು ನಮ್ಮೊಂದಿಗಿದ್ದಿದ್ದರೆ ಅವರಿಗೆ ೬೦ ವರ್ಷಗಳು ತುಂಬಿರುತಿದ್ದವು, ಕನ್ನಡ ನಾಡಿನಲ್ಲಿ ಯಲ್ಲದೆ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಶಂಕರ್ ಅವರ ೬೦ನೇ ಹುಟ್ಟುಹಬ್ಬದ ಸಂಭ್ರಮ ಎಲ್ಲರಲ್ಲೂ ಸಂತೋಷ-ಉಲ್ಲಾಸ-ಉತ್ಸಾಹಗಳು ಅಭಿಮಾನಿಗಳಲ್ಲಿ ತುಂಬಿರುತ್ತಿದ್ದವೋ ಏನೋ ಈಗ ಶಂಕರ್ ವಿಧಿಯ ಅವಸರದ ಕರೆಗೆ ಬಲಿಯಾಗಿ ನಮ್ಮನ್ನಗಲಿದ್ದಾರೆ (ನಿಧನ:ಸೆಪ್ಟೆಂಬೆರ್ ೩೦,೧೯೯೦
ಹಾಗಾಗಿ ಅವರ ಸಾಧನೆ, ಕನಸುಗಳು, ಅವರ ಜೀವನೊತ್ಸಾಹಗಳನ್ನು ನೆನೆಯುತ್ತ ಅವರಿಗೆ ಭಗವಂತ ಕನ್ನಡನಾಡಿನಲ್ಲಿಯೇ ಮರುಜನ್ಮವಿತ್ತು ನಮ್ಮೆಲ್ಲರನ್ನು ಹರಸಲಿ ಎಂದು ಪ್ರಾರ್ಥಿಸೋಣ.
ಶಂಕರ್ ನಾಗ್ ಜನ್ಮೋತ್ಸವ

Tuesday, November 4, 2014

ಶಕುಂತಲಾದೇವಿ!! ಅವರ ೮೫ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಶಾಲೆಯ ಮೆಟ್ಟಿಲೇರದೆ ಗಣಿತ ಕರಗತ ಮಾಡಿಕೊಂಡ ಅಸಾಮಾನ್ಯ ಸಾಧಕಿ ಶಕುಂತಲಾದೇವಿ!!
ಮಾನವ ಕಂಪ್ಯೂಟರ್’ ಎಂದೇ ಖ್ಯಾತರಾದ ಶಕುಂತಲಾದೇವಿಯವರು 1929 ನವೆಂಬರ್ 4ರಂದು ಬೆಂಗಳೂರಿನಲ್ಲಿ ಹುಟ್ಟಿದರು. ಇವರ ತಂದೆ ಸಂಪ್ರದಾಯ ದತ್ತವಾಗಿ ಬಂದ ದೇವಸ್ಥಾನದ ಪೂಜವೃತ್ತಿಯನ್ನು ಧಿಕ್ಕರಿಸಿ ಸರ್ಕಸ್ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು. ಸರ್ಕಸ್ ಕಂಪನಿಯಲ್ಲಿ ಟ್ರಪೀಜ್ ಹುದ್ದೆ, ಟೈಟ್ ರೋಪ್ ಪ್ರದರ್ಶನ, ಸಿಂಹ ಪಳಗಿಸುವ ವಿದ್ಯೆ ಮತ್ತು ಮಾನವ ಕ್ಯಾನನ್ಬಾಲ್  ಹುದ್ದೆಗಳನ್ನು ನಿರ್ವಹಿಸುತ್ತಿದ್ದರು. ಶಕುಂತಲದೇವಿಯವರು ಮೂರು ವರ್ಷದವರಿದ್ದಾಗಲೇ ತಂದೆಯ ಜೊತೆ ಸರ್ಕಸ್ ಕಂಪನಿಗೆ ಹೋಗಲು ಪ್ರಾರಂಭಿಸಿದರು. ಆ ಚಿಕ್ಕ ವಯಸ್ಸಿನಲ್ಲಿಯೇ ಇಸ್ಪೀಟಿನೆಲೆಯ ಟ್ರಿಕ್ಸ್-ನಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದರು. ಇಸ್ಪೀಟಿನೆಲೆಯನ್ನು ಕಲೆಸಿ ಬೇಕೆಂದ ಎಲೆಯನ್ನು ಕ್ಷಣಾರ್ಧದಲ್ಲಿ ಎತ್ತಿಕೊಂಡು ಮಗಳ ಚಾಣಾಕ್ಷತೆ ಮತ್ತು ಅಗಾಧ   ಜ್ಞಾಪಕಶಕ್ತಿಯನ್ನು ಕಂಡ ತಂದೆ ಅಚ್ಚರಿಗೊಂಡರು. 

   ಅವರು ತಮ್ಮ ವೃತ್ತಿಗೆ ಗುಡ್ ಬೈ ಹೇಳಿ ಮಗಳೊಂದಿಗೆ ಬೀದಿಗಳನ್ನು ಸುತ್ತಿ ಶಕುಂತಲದೇವಿಯವರ ಚಾಕಚಕ್ಯತೆಯ ಪ್ರದರ್ಶವನ್ನು ಜನರಿಗೆ ತೋರಿಸಿದ್ದರು. ಅಂತಾರಾಷ್ಟ್ರೀಯ  ಮಟ್ಟಕ್ಕೆ ಬೆಳೆಯುವ ಸಾಮರ್ಥ್ಯ ಹೊಂದಿದ್ದ ಶಕುಂತಲದೇವಿಯವರಿಗೆ ತಂದೆಯೇ ಗುರು, ಹಸಿವೆಯೇ ಪಠ್ಯ, ಬೀದಿಯೇ ಪಾಠಶಾಲೆಯಾಯಿತು.

Thursday, October 23, 2014

ಶೋಭಾ ಕರಂದ್ಲಾಜೆ ಅವರಿಗೆ 48ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ನಮ್ಮ ನಾಡಿನ ದಿಟ್ಟ. ಸಹೃದಯ, ಸೇವಾ ಮನೋಭಾವದ ಮಹಿಳಾ ರಾಜಕಾರಿಣಿ ಶೋಭಾ ಕರಂದ್ಲಾಜೆ ಅವರಿಗೆ ೪೮ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು
Date of Birth: October 23, 1966

ಅವರ ಪರಿಚಯ ಅವರದೇ ಮಾತಿನಲ್ಲಿ
ನಾನು ಶೋಭಾ ಕರಂದ್ಲಾಜೆ, ನೀವೆಲ್ಲರೂ ನನ್ನನ್ನು ಶೋಭ ಅಂತ ಕರೆಯಬಹುದು. ನನ್ನನ್ನು ನನ್ನ ಮನೆಯಲ್ಲಿ ಮತ್ತು ಊರಿನಲ್ಲಿ ‘ಬೇಬಿ’ ಅಂತ ಕರೆಯುತ್ತಾರೆ. ಆ ಊರಿಗೆ ನಾನು ‘ಬೇಬಿ’ ಯಾಗಿರುವುದೇ ನನಗೆ ಇಷ್ಟ. ಅಷ್ಟು ಮುಗ್ದ ಜನ ನನ್ನ ಊರಿನವರು ಮತ್ತು ಮನೆಯವರು. ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಚಾರ್ವಾಕ ಅನ್ನುವ ಪುಟ್ಟ ಗ್ರಾಮ. ಕಾಡು, ಬೆಟ್ಟ, ಗುಡ್ಡದ ಪ್ರದೇಶ. ಕೃಷಿಯೇ ನಮ್ಮೂರಿನ ಜೀವನಾಧಾರ. ಅಡಿಕೆ, ತೆಂಗು, ಗೇರು, ಕರಿಮೆಣಸು, ಪ್ರಮುಖ ಬೆಳೆಗಳು. ನಾನು ಹುಟ್ಟುವ ಕಾಲಕ್ಕೇನೇ ನಾವು ಅಡಿಕೆ, ತೆಂಗು ಬೆಳೆಯುತ್ತಿದ್ದೆವು. ನಮ್ಮದು ಮಧ್ಯಮ ವರ್ಗದ ಕುಟುಂಬ, ನನ್ನ ಹಿರಿಯರು ಕೃಷಿಕ ಕುಟುಂಬದವರು.

Wednesday, October 8, 2014

ಯೋಗರಾಜ್ ಭಟ್ ಅವರಿಗೆ 43ನೇ ಹುಟ್ಟು ಹಬ್ಬದ ಶುಭ ಹಾರೈಕೆಗಳು

  ಪತ್ನಿ ಮತ್ತು ಮಕ್ಕಳೊಂದಿಗೆ ಯೋಗರಾಜ್ ಭಟ್ 
(Born 8th Oct, 1972)

ತಮ್ಮ ವಿಚಿತ್ರ ಶೈಲಿಯಿಂದ ಸಧ್ಯ ಪ್ರಚಲಿತ ಚಿತ್ರ ನಿರ್ದೇಶಕರು ಮತ್ತು ಚಿತ್ರ ಸಾಹಿತಿಯಾಗಿ ಜನರ ಮನಸ್ಸಿನಲ್ಲಿ ಅಚ್ಚೊತ್ತಿರುವ
 ಯೋಗರಾಜ್ ಭಟ್ 
ಅವರಿಗೆ ೪೩ ನೇ ಹುಟ್ಟುಹಬ್ಬದ ಶುಭಾಶಯಗಳು, 
ಅವರ ಮುಂದಿನ ಎಲ್ಲ ಕಾರ್ಯಗಳು ಅದ್ದೂರಿ ಯಶಸ್ವಿಯಾಗಲೆಂದು ಹರಸುವ ಅವರ ಅಭಿಮಾನಿ ಬಳಗದಿಂದ ಹಾರೈಕೆಗಳು

ಚೆಂದುಟಿಯ ಪಕ್ಕದಲಿ ..ಹಾಡಿಗೆ ಮುಂಚೆ ಬರುವ ಭಟ್ಟರ ಡೈಲಾಗ್ ನ ಸ್ಯಾಂಪಲ್ ಈ ಸಂದರ್ಭದಲ್ಲಿ.
ಚಿತ್ರ: ಡ್ರಾಮಾ (2012), ಸಂಗೀತ: ವೀ ಹರಿಕೃಷ್ಣ, ಸಾಹಿತ್ಯ: ಯೋಗರಾಜ್ ಭಟ್ಟ್
ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ.. , ಬರಿ ಪೋಲಿ ಕನಸ..
ಮಾಮೂಲಿಕತೆಯ ತಾರುಣ್ಯ ಗೀತೆಯಲಿ ಉತ್ತರ ಕಮ್ಮಿ, ಪ್ರಶ್ನೆಯೇ.. ಜಾಸ್ತಿ..
ದಾರೀಲಿ ಕೈ-ಕಟ್ಟಿ ನಿಂತಿರಲೇ, ಹೃದಯಾನ ಸಂಪೂರ್ಣ ಬಿಚ್ಚಿಡಲೇ ..
ಮುಂಗುರುಳ ಸ್ಪ್ರಿಂಗ್ಅಲ್ಲಿ ಜೋತಾಡಲೇ.. ಕಣ್ಣ ರೆಪ್ಪೆಯ ಮೇಲೆ ಮಲಗಿರಲೇ..
ಆಸೆಗಳೆನಿಸಿ ಕೈ-ಬೆರಳು ಸವಿದಿದೆ, ಎಲ್ಲ ಹೇಳಿದರು ಇನ್ನೇನು ಉಳಿದಿದೆ..
ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ… , ಬರಿ ಪೋಲಿ ಕನಸ…
ಎಲ್ಲಿಯೂ ಹೋಗದ ನಿಂತ ಬಸ್ಸಲ್ಲಿ ಸಿಟೊಂದ ಹಿಡಿದವನು ನಾನು..
ಇಳಿ ಸಂಜೆಯಲಿ ನಾನು ನನ್ನ ನಂಬರಿಗೆನೆ ಮಾಡುವೆನು ಫೋನು..
ಈ ನಡುವೆ ಹೀಗೆ ಎಲ್ಲಿಯೋ ನೋಡುವೆನು, ಎಲ್ಲಿಗೋ ಹೋಗುವೆನು, ಏನನ್ನೋ ಕಾಯುವೆನು..
ನಿ ಸಿಕ್ಕರೂ… ಸಿಗದಿದ್ದರೂ… , ಎದೆತುಂಬ ಹಾಡುವೆನು….
ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ… , ಬರಿ ಪೋಲಿ ಕನಸ…


ಉಪಯುಕ್ತ ಕೊಂಡಿಗಳು
ಯೋಗರಾಜ್ ಭಟ್  ಅವರ ಜನಪ್ರಿಯ ಚಿತ್ರಗೀತೆಗಳು
ದುನಿಯ ಸೂರಿ ಮತ್ತು ಯೋಗರಾಜ್ ಭಟ್ ಇತ್ತೀಚಿನ ಜನಪ್ರಿಯ ನಿರ್ದೇಶಕರು 
Most Peculiar & also Popular Film Director Yogaraj Bhat



Tuesday, October 7, 2014

ಇಂದು ಡಿ.ವಿ.ಗುಂಡಪ್ಪನವರು ದೈಹಿಕವಾಗಿ ನಮ್ಮನ್ನಗಲಿದ ದಿನ

ಜನನ : ಮಾರ್ಚ್ 17, 1887 - ನಿಧನ: ಅಕ್ಟೋಬರ್ 7, 1975
ಡಿವಿಜಿ ಎಂಬ ಉಪನಾಮದಿಂದಲೇ ಖ್ಯಾತರಾದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು (ಡಿ.ವಿ.ಗುಂಡಪ್ಪ) ಜನಮನದಲ್ಲಿ ಹಸಿರಾಗಿ ಉಳಿದಿರುವುದು ಅವರ ಅನುಪಮ ಹಾಗೂ ವಿಚಾರಪೂರ್ಣ ಲೇಖನ, ಬರಹಗಳಿಂದ. ಆದರೆ, ಡಿವಿಜಿ ಸಮಾಜಸೇವೆ, ಪತ್ರಿಕೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಮಾಡಿದ ವ್ಯವಸಾಯ ಅವರ ಸಾಹಿತ್ಯ ಸೇವೆಯಷ್ಟೇ ಮಿಗಿಲು. Read More

ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗ ಭಾವಾರ್ಥ ಸಹಿತ

ಸಂಗೀತ ಕಟ್ಟಿ ಅವರಿಗೆ 45ನೇ ಹುಟ್ಟು ಹಬ್ಬದ ಶುಭಾಶಯಗಳು

(Born on 7th Oct, 1970)
ಸಂಗೀತಾ ಕಟ್ಟಿಯವರು ಕರ್ನಾಟಕದ ಧಾರವಾಡದಲ್ಲಿ ಅಕ್ಟೋಬರ್ ೭, ೧೯೭೦ರಂದು ಹುಟ್ಟಿದರು. ಇವರು ಡಾ. ಎಚ್. ಎ. ಕಟ್ಟಿ ಮತ್ತು ಶ್ರೀಮತಿ ಭಾರತಿ ಇವರ ಮಗಳು.

ಇವರು ದಸರೆಯ ಸರಸ್ವತೀಪೂಜೆಯ ದಿನ ಹುಟ್ಟಿದ್ದು.

ಈ ಅದ್ಬುತ ಗಾನ ಕೋಗಿಲೆ ಸದಾ ಅರೋಗ್ಯವಂತರಾಗಿ ಸುಖ-ಸಂತೋಷದಿಂದ ನೂರು ಕಾಲ ಹಾಡುತ್ತಾ ಕನ್ನಡ ಸಂಗೀತ ರಸಿಕರ ಮನ ತಣಿಸಲಿ ಎಂದು ಹಾರೈಸೋಣ

ಸಂಗೀತ ಕಟ್ಟಿ  ಹಾಡಿದ ಗೀತೆಗಳು

Saturday, October 4, 2014

ಹುಯಿಲಗೋಳ ನಾರಾಯಣರಾಯರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

(Born on 4th Oct, 1884,)
ಹುಯಿಲಗೋಳ ನಾರಾಯಣರಾಯರು (೧೮೮೪-೧೯೭೧) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕರ್ನಾಟಕ ನಾಡಗೀತೆಯೆನಿಸಿದ್ದ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಯನ್ನು ರಚಿಸಿದವರು.

೧೮೮೪ ಅಕ್ಟೋಬರ್ ೪ ರಂದು ಜನಿಸಿದರು. ಇವರ ತಂದೆ ಕೃಷ್ಣರಾವ್, ತಾಯಿ ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗು ಧಾರವಾಡಗಳಲ್ಲಿ ಪೂರೈಸಿದರು. ೧೯೦೨ ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಸೇರಿದರು. ೧೯೦೭ ರಲ್ಲಿ ಪದವಿಯನ್ನು ಪಡೆದ ಬಳಿಕ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ ತೆರಳಿ,ಕಾನೂನು ಪದವಿಯನ್ನು ಪಡೆದು ೧೯೧೧ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.

ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ,ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ಜೈ ಕರ್ನಾಟಕ ವೃತ್ತ , ಪ್ರಭಾತ , ಧನಂಜಯ ಮೊದಲಾದವುಗಳಲ್ಲಿ ಪ್ರಕಟವಾಗಿವೆ.

ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನು ರಚಿಸಿದ್ದರು. ನಾರಾಯಣ ರಾಯರು ಮೂಡಲು ಹರಿಯಿತು ಎಂಬ ಕಾದಂಬರಿಯನ್ನೂ ಬರೆದಿದ್ದರೆಂದು ತಿಳಿದು ಬಂದಿದೆ. ಆದರೆ ಈ ಕಾದಂಬರಿಯ ಹಸ್ತಪ್ರತಿ ಈಗ ಲಭ್ಯವಿಲ್ಲ.

ನಾಟಕಗಳು
ಹುಯಿಲಗೋಳ ನಾರಾಯಣರು ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ನಾಟಕಗಳನ್ನು ರಚಿಸಿದ್ದಾರೆ. ಅವುಗಳ ಪಟ್ಟಿ ಕೆಳಕಂಡಂತಿವೆ.

ವಜ್ರಮುಕುಟ (೧೯೧೦)
ಕನಕವಿಲಾಸ (೧೯೧೩)
ಪ್ರೇಮಾರ್ಜುನ(೧೯೧೨)
ಮೋಹಹರಿ(೧೯೧೪)
ಅಜ್ಞಾತವಾಸ(೧೯೧೫)
ಪ್ರೇಮವಿಜಯ(೧೯೧೬)
ಸಂಗೀತ ಕುಮಾರರಾಮ ಚರಿತ(೧೯೧೭)
ವಿದ್ಯಾರಣ್ಯ(೧೯೨೧)
ಭಾರತಸಂಧಾನ(೧೯೧೮)
ಉತ್ತರ ಗೋಗ್ರಹಣ(೧೯೨೨)
ಸ್ತ್ರೀಧರ್ಮರಹಸ್ಯ(೧೯೧೯)
ಶಿಕ್ಷಣಸಂಭ್ರಮ(೧೯೨೦)
ಪತಿತೋದ್ಧಾರ(೧೯೫೨)

ಮುಂಬಯಿ ಸರಕಾರವು ಪತಿತೋದ್ಧಾರ ನಾಟಕಕ್ಕೆ ೧೯೫೪ರಲ್ಲಿ ಬಹುಮಾನ ನೀಡಿತು.

೧೯೫೪ರಲ್ಲಿ ಇವರ “ ಪತಿತೋದ್ಧಾರ” ನಾಟಕಕ್ಕೆ ಮುಂಬಯಿ ಸರಕಾರದ ಬಹುಮಾನ ದೊರೆಯಿತು. ನಾರಾಯಣರಾಯರ ಸಂಗಡಿಗರು ಅಥವಾ ನಾಟ್ಯವಿಲಾಸಿಗಳು ಆಡಿದ ಇವರ ನಾಟಕಗಳ ಸಂಪಾದನೆಯನ್ನು ಸಮಾಜಶಿಕ್ಷಣ ಮತ್ತು ಸುಧಾರಣೆಗೆ ವಿನಿಯೋಗಿಸಲು ಇವರು ಉದ್ದೇಶಿಸಿದ್ದರು. ಅದರಂತೆ ಗದಗಿನಲ್ಲಿ ವಿಧ್ಯಾದಾನ ಸಮಿತಿ ಯಿಂದ ಪ್ರೌಢಶಾಲೆಯೊಂದು ನಿರ್ಮಾಣವಾಯಿತು.

ನಾರಾಯಣರಾಯರು ಅನೇಕ ಸಾಮಾಜಿಕ ಸಂಘಟನೆಗಳಲ್ಲಿಯೂ ಸೇವೆ ಸಲ್ಲಿಸಿದ್ದರು.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹುಯಿಲಗೋಳ ನಾರಾಯಣರು ರಚಿಸಿದ ಗೀತೆ ಕರ್ನಾಟಕ ರಾಜ್ಯದ ನಾಡಗೀತೆಯೆಂದು ಖ್ಯಾತಿ ಪಡೆದಿತ್ತು. ಈ ಗೀತೆಯನ್ನು ಬೆಳಗಾವಿಯಲ್ಲಿ ಜರುಗಿದ, ೧೯೨೪ರ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತುಮಹಾತ್ಮ ಗಾಂಧಿಯವರುಈ ಅಧಿವೇಶನದ ಅಧ್ಯಕ್ಷರಾಗಿದ್ದರು. ಈ ಗೀತೆಯನ್ನು ೧೯೨೪ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಆಗಿನ್ನೂ ಬಾಲಕಿಯಾಗಿದ್ದ ಪದ್ಮಭೂಷಣ ಪ್ರಶಸ್ತಿ ಗಳಿಸಿದ್ದ ಗಂಗೂಬಾಯಿ ಹಾನಗಲ್ ಈ ಗೀತೆಯನ್ನು ಅಂದು ಹಾಡಿದ್ದರು.

Tuesday, September 30, 2014

ಸೆಪ್ಟೆಂಬರ್ 30, 1990: ಶಂಕರ್ ನಾಗ್ ಅವರ ಜೀವವನ್ನು ಆ ವಿಧಿ ಬಲಿ ತೆಗೆದು ಕೊಂಡ ದಿನವಿದು

ಕನ್ನಡದ ಕಣ್ಮಣಿ, ಆಟೋರಾಜ ಶಂಕರ್ ನಾಗ್ ನಿಧನರಾಗಿ ಇಂದಿಗೆ ೨೪ ವರ್ಷಗಳು 
ಸೆಪ್ಟೆಂಬರ್ 30 ಕನ್ನಡಿಗರು ಎಂದೂ ನಿರೀಕ್ಷಿಸಿರದ ದುರಂತವೊಂದು ನಡೆದು ಹೋದ ದಿನ, 30-9-1990ರ ಭಾನುವಾರ ಮುಂಜಾನೆ ಬೆಂಗಳೂರಿನಿಂದ ಧಾರವಾಡದ ಲೋಕಪುರಕ್ಕೆ ಬೆಳಗಿನ ಜಾವ 5ಗಂಟೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ದಾವಣಗೆರೆಯ ಆನೆಗೋಡು ಗ್ರಾಮದ ಬಳಿ ರಸ್ತೆ ಅಪಘಾತದಲ್ಲಿ ಮಡಿದರು, ಕಾಲನ ತೆಕ್ಕೆಗೆ ಶಂಕರ್‌ನಾಗ್‌ ತೆರಳಿ 23 ವರ್ಷಗಳೇ ಸಂದವು. ಶಂಕರ್‌ನಾಗ್‌ ಅವರ ಸಾಧನೆ, ಛಲ, ಗುರಿ ಇವುಗಳು ಇಂದಿನ ತರುಣ ಪೀಳಿಗೆಗೆ ಮಾದರಿಯಾಗಿದೆ. ಅದಕ್ಕಾಗಿಯೇ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಶಂಕರ್‌ನಾಗ್‌ ನೆಲೆಸಿದ್ದಾರೆ. 
ಮತ್ತೆ ಹುಟ್ಟಿ ಬಾ ಶಂಕರ್.....

ಶಂಕರ್ ನಾಗ್ ಅವರ ಜೀವನ ಚರಿತ್ರೆ ಮತ್ತು ಇತರ ಲೇಖನಗಳು




Saturday, September 20, 2014

ದೇವರಾಜ ಅವರಿಗೆ 55 ನೇ ಹುಟ್ಟು ಹಬ್ಬದ ಸಿಹಿ ಹಾರೈಕೆಗಳು

Born: 20 September 1960
ಖಳನಾಯಕರಾಗಿ ಚಿತ್ರರಂಗವನ್ನು ಪ್ರವೇಶಿಸಿ ನಂತರ ಕ್ರಮೇಣವಾಗಿ ನಾಯಕಪಾತ್ರಗಳ ಕಡೆಗೂ ವಾಲಿಕೊಂಡ ದೇವರಾಜ್‌ ಅಪ್ಪಟ ರಂಗಭೂಮಿಯ ಪ್ರಾಡಕ್ಟು. ನಟರಾದ ಅವಿನಾಶ್‌, ದೇವರಾಜ್‌ ಮತ್ತು ಶಂಕರ್‌ನಾಗ್‌ರವರ ಸಂಕೇತ್‌ ಸ್ಟುಡಿಯೋದಲ್ಲಿ ಸೇವೆ ಸಲ್ಲಿಸಿದ ಜಗದೀಶ್‌ ಮಲ್ನಾಡ್‌ ಈ ಮ‌ೂವರೂ ಹೆಚ್ಚೂಕಮ್ಮಿ ಒಂದೇ ಕಾಲಘಟ್ಟದಲ್ಲಿ ಚಿತ್ರರಂಗವನ್ನು ಪ್ರವೇಶಿಸಿದರು. 'ತ್ರಿಶೂಲ' ಎಂಬ ಚಿತ್ರದಲ್ಲಿ ಈ ಮ‌ೂವರೂ ಕಾಣಿಸಿಕೊಂಡಿದ್ದರು ಎಂಬುದು ವಿಶೇಷ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಾಯಕನಿಂದ ಒದೆ ತಿನ್ನುವ ಖಳನಾಯಕನ ಪಾತ್ರದಲ್ಲಿಯೇ ಆರಂಭಿಕ ವರ್ಷಗಳಲ್ಲಿ ಕಾಣಿಸಿಕೊಂಡ ದೇವರಾಜ್‌ 'ತರ್ಕ', 'ಉತ್ಕರ್ಷ', 'ಆಗಂತುಕ', 'ಹೆಂಡ್ತಿಗ್ಹೇಳ್ಬೇಡಿ' ಮೊದಲಾದ ಚಿತ್ರಗಳಲ್ಲಿ ಜನಮನವನ್ನು ಸೂರೆಗೊಂಡರು. ಅವರ ಅಭಿನಯಕ್ಕೆ ಒಂದು ಹೊಸ ಆಯಾಮ ಸಿಕ್ಕಿದ್ದು 'ಹುಲಿಯಾ' ಚಿತ್ರದಲ್ಲಿನ ಅವರ ಪಾತ್ರನಿರ್ವಹಣೆಯಿಂದ ಎನ್ನಬಹುದು.

Friday, September 19, 2014

ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ 47ನೇ ಹುಟ್ಟುಹಬ್ಬದ ಶುಭಾಶಯಗಳು

ಜನನ: ಸೆಪ್ಟೆಂಬರ್ 19, 1968

ವಿಶಿಷ್ಟ ಮ್ಯಾನರಿಸಂನಿಂದ ವಿಭಿನ್ನ ಸಿನಿಮಾಗಳ ಟ್ರೆಂಡ್‌ಅನ್ನೇ ಹುಟ್ಟುಹಾಕಿದ ಉಪೇಂದ್ರ ಅವರಿಗೂ ಇಂದು ಹುಟ್ಟುಹಬ್ಬದ ಸಂಭ್ರಮ. ನಾಳೆ (ಸೆ.19) ಇವರ ಅಭಿನಯದ ಸೂಪರ್ ರಂಗ್ ಚಿತ್ರ ಬಿಡುಗಡೆ ಆಗುತ್ತಿರುವುದು ಇವರ ಅಭಿಮಾನಿಗಳಿಗೆ ಖುಷಿ ಹೆಚ್ಚಾಗಲು ಮತ್ತೊಂದು ಕಾರಣ.

ಈ ಚಿತ್ರದ ಕುರಿತು ಇವರಿಗೆ ತುಂಬ ನಿರೀಕ್ಷೆಗಳಿವೆ. ಚಿತ್ರದಿಂದ ಚಿತ್ರಕ್ಕೆ ಪ್ರೇಕ್ಷಕ ತಮ್ಮನ್ನು ಬೆಳೆಸುತ್ತಲೇ ಬಂದಿದ್ದರಿಂದ, ಸೂಪರ್ ರಂಗನೂ ಸೂಪರ್ ಆಗಿಯೇ ತೆರೆಯ ಮೇಲೆ ಮಿಂಚುತ್ತಾನೆ ಎಂದು ಈ ಉಪ್ಪಿ ಬಲವಾಗಿ ನಂಬಿದ್ದಾರೆ.

ಇಂಥ ವಿಶೇಷ ಸಂದರ್ಭದಲ್ಲಿ ಉಪ್ಪಿ, ಮತ್ತಷ್ಟು ವಿಭಿನ್ನ ಸಿನಿಮಾಗಳನ್ನು ನೀಡಲಿ ಎಂದು ಇವರ ಅಭಿಮಾನಿಗಳು ನಿರೀಕ್ಷಿಸುವುದೂ ಸಹಜವೆ. ಅದನ್ನು ಸಾಕಾರಗೊಳಿಸುವತ್ತ ಉಪ್ಪಿ ಮುಂದೆ ಮುಂದೆ ಸಾಗಲಿ.

ವೀಕ್ಸಿಸಿ ಉಪೇಂದ್ರ ರವರು ವೀಕ್ ಎಂಡ್ ವಿಥ್ ರಮೇಶ್ ದಲ್ಲಿ (Part-1)


Thursday, September 18, 2014

ಇವತ್ತು ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಇಬ್ಬರು ಕನ್ನಡ ದಿಗ್ಗಜರ ಹುಟ್ಟು ಹಬ್ಬದ ಶುಭಾಶಯಗಳು

ಅವರ 65ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ
(ಜನನ: ಸೆಪ್ಟೆಂಬರ್ 18,1950, 
ನಿಧನ: ಡಿಸೆಂಬರ್ 30,  2009)

ಅವರಿಗೆ 47ನೇ ಹುಟ್ಟುಹಬ್ಬದ ಶುಭಾಶಯಗಳು
(ಜನನ: ಸೆಪ್ಟೆಂಬರ್ 18,1968)

ನೂರೊಂದು ನೆನಪು ಎದೆಯಾಳದಿಂದ... ಎಂದು ತೆರೆಯ ಮೇಲೆ ಹಾಡುತ್ತ ಪ್ರೇಕ್ಷಕರನ್ನು ಭಾವುಕಗೊಳಿಸಿದ ನಟ ವಿಷ್ಣುವರ್ಧನ್ ಮತ್ತೆ ನೆನಪಾಗುತ್ತಿದ್ದಾರೆ.

ಹೌದು, ಇಂದು (ಸೆ.18) ಅವರ ಜನ್ಮದಿನ. ಅವರ ಅಭಿಮಾನಿಗಳಿಗೆ ಒಂದು ರೀತಿಯ ಹಬ್ಬದಂಥ ಸಂತೋಷ ತಂದರೆ, ಒಳಗೊಳಗೇ ಮತ್ತೆಲ್ಲೋ ತಮ್ಮ ನಾಯಕನನ್ನು ಕಳೆದುಕೊಂಡ ಸಂಕಟವೂ ಸುಳಿದಾಡುತ್ತದೆ.

ಇನ್ನೂರು ಚಿತ್ರಗಳಲ್ಲಿ ನಟಿಸಿ, ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿದ ಈ ನಟ ಇಂದು ಇದ್ದಿದ್ದರೆ ಕನ್ನಡ ಚಿತ್ರರಂಗದಲ್ಲಿ ಇನ್ನೊಂದಿಷ್ಟು ಚೆಂದನೆಯ ಚಿತ್ರಗಳು ಬರುತ್ತಿದ್ದವೊ ಏನೊ. ಅವರು ಇಂದಿಗೂ ಜನಮಾನಸದಲ್ಲಿ ಹಚ್ಚಹಸಿರಾಗಿ ನಿಲ್ಲಲು ಮತ್ತೊಂದು ಕಾರಣ ಅವರ ಮೇರು ವ್ಯಕ್ತಿತ್ವ.

Wednesday, September 17, 2014

ಪಂಡಿತ್ ಪುಟ್ಟರಾಜ ಗವಾಯಿ ಯವರು ನಮ್ಮನ್ನಗಲಿ ಇಂದಿಗೆ ೪ ವರ್ಷಗಳು ಕಳೆದವು,

ಪಂಡಿತ್ ಪುಟ್ಟರಾಜ ಗವಾಯಿ ಯವರು ನಮ್ಮನ್ನಗಲಿ ಇಂದಿಗೆ ೪ ವರ್ಷಗಳು ಕಳೆದವು, ಆದರೆ ಅವರ ಸಾಧನೆ ಮಾತ್ರ ಎಲ್ಲಾ ಕಾಲಕ್ಕೂ ಅಮರ, ಅದಮ್ಯ ಚೇತನಕ್ಕೆ ನಮ್ಮ ನಮನ 
 ಪಂಡಿತ್ ಪುಟ್ಟರಾಜ ಗವಾಯಿ (3 March 1914 – 17 September 2010) ಅವರ ಸಾಧನೆಗಳ ಒಂದು ಕಿರು ಪರಿಚಯ

ಡಾ.ಪಂ.ಪುಟ್ಟಾರಾಜ ಕವಿ ಗವಾಯಿಗಳಾವರು ಹುಟ್ಟಿದ್ದು ತಮ್ಮ ತಾಯಿಯ ತವರೂರಾದ 'ದೇವಗಿರಿಯಲ್ಲಿ ದಿನಾಂಕ ೧೯೧೪ ಮಾರ್ಚ ೩.ರಂದು ಇವರ ಮೂಲಊರುವೆಂಕಟಾಪುರ.ವೆಂಕಟಾಪುರದಲ್ಲಿ ಇವರು ಹಿರೇಮಠದವರು.ವೆಂಕಟಾಪುರದ ಹಿರೇಮಠದ ಶಾಖಾ ಮಠ ಹಾನಗಲ್ಲ ತಾಲೂಕಿನ ದೇವರ ಹೊಸಪೇಟಿಯಲ್ಲಿ ಇತ್ತು.ಇವರ ಪೂರ್ವಿಕರು ಈ ಹೊಸಪೇಟೆಗೆ ಹೋಗಿ ಬಂದು ಅಲ್ಲಿನ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ಪಂಚಾಕ್ಷರಿ ಗವಾಯಿ ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ ಯಾರು ತಿಳಿದಿದ್ದರು?

ನರೇಂದ್ರ ಮೋದಿ ಅವರಿಗೆ 64 ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ನಮ್ಮ ದೇಶದ ಹೊಸ ಆಶಾಕಿರಣ, ಯುವ ಶಕ್ತಿಯ ಉತ್ತೇಜಕ, ಕನಸುಗಾರ
ಸಾಮಾನ್ಯ ಭಾರತೀಯನ ಆಶಾಜ್ಯೋತಿ ನಮ್ಮ ಪ್ರಧಾನಿ
ಶ್ರೀಯುತ ನರೇಂದ್ರ ಮೋದಿ 
ಅವರಿಗೆ 64 ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು
ನಿಮ್ಮ ನಿಸ್ವಾರ್ಥ ಸೇವೆಯಿಂದ ನಮ್ಮ ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಕೆಲವು ದುಷ್ಟ ಶಕ್ತಿಗಳು ನಿಮ್ಮ ಹೆಸರಿಗೆ ಕಳಂಕ ತರುವ ಪ್ರಯತ್ನಗಳನ್ನು ಸದಾ ಮಾಡುತ್ತಲೇ ಬಂದಿವೆ. ಆದರೆ ಅದಾವುದನ್ನು ಲೆಕ್ಕಿಸದೆ ನಿಮ್ಮ ಗುರಿಯತ್ತ ಮುಂದೆ ಸಾಗಲು ಭಾರತೀಯರಾದ ನಾವೆಲ್ಲರೂ ನಿಮ್ಮ ಒತ್ತಾಸೆಯಾಗಿ ಬೆಂಬಲಕ್ಕಿದ್ದೇವೆ 

ಕಲಾವಿದನೊಬ್ಬನ ಕುಂಚದಿಂದ ಅರಳಿದ ನ.ಮೋ ಮತ್ತವರ ತಾಯಿ



ನಿಮಗೆ ಸದಾ ಆ ದೇವರು ಆಯಸ್ಸು, ಆರೋಗ್ಯ ಮತ್ತಷ್ಟು ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇವೆ !
ನರೇಂದ್ರ ಮೋದಿ  ಅವರು ತಮ್ಮ ೬೪ನೇ ಹುಟ್ಟುಹಬ್ಬದ ಶುಭದಿನದಂದು ತಮ್ಮ ತಾಯಿಯ ಆಶೀರ್ವಾದ ಪಡೆಯುತ್ತಿರುವುದು

Tuesday, September 16, 2014

ಸರ್ ಎಮ್. ವಿಶ್ವೇಶ್ವರಯ್ಯ ಅವರ 155 ನೇ ಹುಟ್ಟು ಹಬ್ಬದ ಸವಿನೆನಪಿನಲ್ಲಿ

(ಜನನ: 15th Sept, 1860, ನಿಧನ:12th April 1962)

 ದೇಶ-ಕಾಲಗಳನ್ನು ಮೀರಿದ ಅವರ ಸಾಧನೆ ಸಾರ್ವತ್ರಿಕವಾಗಿ ಸ್ತುಥ್ಯಾರ್ಹ, ಕನ್ನಡ ನಾಡಿನ ಜನತೆ ಅವರ ಜನಪರ ಕಾಳಜಿಯಿಂದ ಸಲ್ಲಿಸಿದ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ


ಸರ್ ಎಮ್. ವಿಶ್ವೇಶ್ವರಯ್ಯ ಅವರು ಮತ್ತೆ ಕನ್ನಡನಾಡಿನಲ್ಲಿ ಹುಟ್ಟಿಬರಲಿ ಎಂದು ಪ್ರಾರ್ಥಿಸೋಣ
ಸರ್ ಎಮ್. ವಿಶ್ವೇಶ್ವರಯ್ಯ ಅವರ ಜೀವನ ಚರಿತ್ರೆ ಮತ್ತು ಇತರ ಲೇಖನಗಳಿಗಾಗಿ

Wednesday, September 10, 2014

ರಮೇಶ್ ಅರವಿಂದ್ ಅವರಿಗೆ ೫೦ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

ಕನ್ನಡದ ತ್ಯಾಗರಾಜ, ಪ್ರತಿಭಾವಂತ ನಟ
ರಮೇಶ್ ಅರವಿಂದ್ 
ಅವರಿಗೆ ೫೦ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

ಅವರ ಚೊಚ್ಚಲ ಕನ್ನಡ ಸಿನಿಮಾ ಸುಂದರ ಸ್ವಪ್ನಗಳು ಚಿತ್ರದಲ್ಲಿನ ಅಭಿನಯ ಕನ್ನಡ ಜನತೆಗೆ ಪರಿಚಯಸಿತು.
ಹೂಮಳೆ, ಓ ಮಲ್ಲಿಗೆ ಮತ್ತು ಅಮೃತ ವರ್ಷಣಿ ಚಿತ್ರದ ಅದ್ಭುತ ನಟನೆ ಎಂಥವರನ್ನು ಮಂತ್ರ ಮುಗ್ದ ರನ್ನಾಗಿಸುತ್ತದೆ
ಅವರಿಗೆ ಕನ್ನಡ ಚಿತ್ರರಂಗ ಹೆಚ್ಚಿನ ಅವಕಾಶಗಳನ್ನು ಕೊಟ್ಟು ಅವರ ಮಾರ್ದವ ಸೂಸುವ ನಟನೆ ಕನ್ನಡ ಜನತೆಗೆ ನೀಡಲಿ 

Monday, September 8, 2014

ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

(September 8, 1938 – April 5, 2007)
ಕನ್ನಡ ಸಾಹಿತ್ಯ ಹಾಗೂ ಆಡಿಯೋ ಮಾರುಕಟ್ಟೆ ಕ್ಷೇತ್ರದಲ್ಲೇ ವಿನೂತನ ಪ್ರಯೋಗವಾದ 'ಕೇಳಿ ಕಥೆಯ' ಆಡಿಯೋ ಪುಸ್ತಕವು ಜನಮನಗೆದ್ದ ಸಾಹಿತಿ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಮುನ್ನಾ ದಿನ ಲೋಕಾರ್ಪಣೆಗೊಳ್ಳುತ್ತಿದೆ. ಅಂದು ಸಂಜೆ ಅವಿರತ ಪ್ರತಿಷ್ಠಾನ ವಿಶಿಷ್ಟವಾಗಿ ತೇಜಸ್ವಿ ಅವರ ಹುಟ್ಟುಹಬ್ಬ ಆಚರಿಸುತ್ತಿದೆ. ಕೇಳಿಕಥೆಯ ಇನ್ನೂ ಬಿಡುಗಡೆ ಏಕೆ ಆಗಿಲ್ಲ ಎಂದು ಜನ ಕೇಳುವ ಪ್ರಶ್ನೆಗೆ ವಿಡಿಯೋ ರೂಪದಲ್ಲಿ ಕೇಳಿಕಥೆಯ ತಂಡ ಉತ್ತರ ನೀಡಿದೆ ಇದೇ ಸೆಪ್ಟೆಂಬರ್ 07 ರಂದು ಗಡಿನಾಡ ಕನ್ನಡ ಮಕ್ಕಳ ಪುಟಾಣಿ ಕೈಗಳಿಂದ ಹೊರಬರಲಿದೆ "ಕೇಳಿ ಕಥೆಯ" ಜೊತೆಗೆ, ಕನ್ನಡದ ಮೌಖಿಕ ಕಥನ ಪರಂಪರೆಯ ನೇರ ಪ್ರಾತ್ಯಕ್ಷಿಕೆ ಹರಿಕಥೆ, ಕಂಸಾಲೆ ಮತ್ತು ನೀಲಗಾರರ ಪದಗಳ ಪಲುಕುಗಳು. 

ನಮ್ಮೆಲ್ಲರ ಪ್ರೀತಿಯ ತೇಜಸ್ವಿಯಿಂದ, ಯುವ ಲೇಖಕ ವಿಕ್ರಮ್ ಹತ್ವಾರ್ ನ ಕತೆಯೂ ಸೇರಿದಂತೆ ಇದರಲ್ಲಿ ಆರು ಕತೆಗಳಿವೆ. ಹಿರಿಯ ನಿರ್ದೇಶಕ ನಾಗಾಭರಣ ರಿಂದ ರಕ್ಷಿತ್ ಶೆಟ್ಟಿಯ ತನಕ ಆರು ವಿಶಿಷ್ಠ ದನಿಗಳು ಈ ಕತೆಗಳನ್ನ ಓದಿವೆ.ಈ ಆಡಿಯೋ ಸಿಡಿ ಯಿಂದ ಬರುವ ಸಂಪೂರ್ಣ ಲಾಭ ಅವಿರತ ಪ್ರತಿಷ್ಠಾನದ ಮೂಲಕ ಗಡಿನಾಡ ಕನ್ನಡ ಮಕ್ಕಳ ಶಿಕ್ಷಣಕ್ಕೆ ಮೀಸಲು. 

Thursday, September 4, 2014

ಅನಂತನಾಗ್ ಅವರಿಗೆ 66ನೇ ಹುಟ್ಟು ಹಬ್ಬದ ಶುಭಾಶಯಗಳು

(Born: 4th September 1948)  

ಸ್ಪುರದ್ರೂಪಿ, ಪ್ರತಿಭಾವಂತ ನಟ  ಅನಂತನಾಗ್ 
ಅವರಿಗೆ ೬೬ನೇ ಹುಟ್ಟು ಹಬ್ಬದ ಶುಭಾಶಯಗಳು
ನಮ್ಮ ಚಿತ್ರರಂಗದಲ್ಲಿನ ಅತ್ಯದ್ಬುತ ಚತುರ ನಟ ನೆಂದರೆ ತಪ್ಪಾಗಲಾರದು, ಎಲ್ಲಾ ಚಿತ್ರಗಳಿಗೂ ಇವರು ಬೇಕು ಯಾಕೆಂದರೆ ಇವರಿದ್ದರೆ ಪ್ರೇಕ್ಷಕರಿಗೆ ಅವರ ನಟನೆ-ಮಾತಿನ ವೈಖರಿ ನೋಡುವುದೇ ಒಂದು ಆನಂದ ಹಾಗೆಯೇ ಚಿತ್ರದ ಗಲ್ಲಾ-ಪೆಟ್ಟಿಗೆಯ ಯಶಸ್ಸಿಗೂ ಇವರು ಕಾರಣರಾಗುತ್ತಾರೆ
]

ಬೆಳದಿಂಗಳ ಬಾಲೆ ಚಿತ್ರದಲ್ಲಿನ ಅವರ  ಅತ್ಯದ್ಬುತ ಅಭಿನಯ ಕನ್ನಡ ಪ್ರೇಕ್ಷಕ ಎಂದಿಗೂ ಮರೆಯಲಾರ.
ಉಂಡು ಹೋದ-ಕೊಂಡು ಹೋದ, ಬರ, ನಾ ನಿನ್ನ ಮರೆಯಾರೆ, ಬಯಲು ದಾರಿ, ಬೆಂಕಿಯ ಬಲೆ, ನಾರದ ವಿಜಯ, ಇತ್ಯಾದಿ ಚಿತ್ರಗಳ ಅಭಿನಯ ನಮ್ಮ ನೆನಪಿನಾಳದಲ್ಲಿ ಅಚ್ಚಳಿಯದೇ ಉಳಿಯುತ್ತವೆ

ಅವರು ಆರೋಗ್ಯದಿಂದ ಇನ್ನೂ ನೂರು ಕಾಲ ಕನ್ನಡ ಜನತೆಯನ್ನು 
ತಮ್ಮ ಅಭಿನಯದಿಂದ ರಂಜಿಸಲಿ

Tuesday, September 2, 2014

ನಮ್ಮ ನೆಚ್ಚಿನ ಕಿಚ್ಚ ಸುದೀಪ್ ಅವರಿಗೆ ೪೧ನೇ ಹುಟ್ಟುಹಬ್ಬದ ಶುಭಾಶಯಗಳು


ಬಿಗ್-ಭಾಸ್ ಕಿಚ್ಚ  ಸುದೀಪ್ ಅವರು ಸದಾ ಚಿಲುಮೆಯ ಬುಗ್ಗೆಯಂತೆ ಚಿಮ್ಮುತ್ತಾ   & ಅವರ ಸ್ಟಾರ್-ಗಿರಿ ಸದಾ ದೇಶಾದ್ಯಂತ ಮಿನುಗುತ್ತಿರಲಿ ಎಂದು ಹಾರೈಸೋಣ




ಕಿಚ್ಚ ಸುದೀಪ್ ಕುರಿತ ಕೆಲವು ಕುತೂಹಲಕರ ಸಂಗತಿಗಳು
ಕನ್ನಡದ ಕಿಚ್ಚ-ಹುಚ್ಚ-ಪಾರ್ಥ-ಚಂದು-ವಾಲಿ-ವೀರಮದಕರಿ-ಕೆಂಪೇಗೌಡ-ವಿಷ್ಣುವರ್ಧನ
ಕನ್ನಡದ ಮೋಸ್ಟ್ ಸೇಲಬಲ್ ಸ್ಟಾರ್ ಸುದೀಪ್ ಅವರಿಗೆ ಇಂದು (ಸೆ.2) ಹುಟ್ಟುಹಬ್ಬದ ಸಂಭ್ರಮ. ತಮ್ಮ ಮೈಕಟ್ಟನ್ನು ತುಂಬ ಜತನದಿಂದ ಕಾಪಾಡಿಕೊಂಡು ಬಂದಿರುವ ಸುದೀಪ್ ಅವರಿಗೆ 41 ಎಂದರೆ ಯಾರೂ ನಂಬಲ್ಲ. ಅವರ ಜೀವನೋತ್ಸಾಹ, ನೇರ ಮಾತುಗಳು ಎಂತಹವರನ್ನು ಬೆರಗಾಗಿಸುತ್ತವೆ.

ನಮ್ಮ ನೆಚ್ಚಿನ ಕಿಚ್ಚ ಸುದೀಪ್ ಅವರಿಗೆ ೪೧ನೇ ಹುಟ್ಟುಹಬ್ಬದ ಶುಭಾಶಯಗಳು


ಬಿಗ್-ಭಾಸ್ ಕಿಚ್ಚ  ಸುದೀಪ್ ಅವರು ಸದಾ ಚಿಲುಮೆಯ ಬುಗ್ಗೆಯಂತೆ ಚಿಮ್ಮುತ್ತಾ   & ಅವರ ಸ್ಟಾರ್-ಗಿರಿ ಸದಾ ದೇಶಾದ್ಯಂತ ಮಿನುಗುತ್ತಿರಲಿ ಎಂದು ಹಾರೈಸೋಣ




ಕಿಚ್ಚ ಸುದೀಪ್ ಕುರಿತ ಕೆಲವು ಕುತೂಹಲಕರ ಸಂಗತಿಗಳು
ಕನ್ನಡದ ಕಿಚ್ಚ-ಹುಚ್ಚ-ಪಾರ್ಥ-ಚಂದು-ವಾಲಿ-ವೀರಮದಕರಿ-ಕೆಂಪೇಗೌಡ-ವಿಷ್ಣುವರ್ಧನ
ಕನ್ನಡದ ಮೋಸ್ಟ್ ಸೇಲಬಲ್ ಸ್ಟಾರ್ ಸುದೀಪ್ ಅವರಿಗೆ ಇಂದು (ಸೆ.2) ಹುಟ್ಟುಹಬ್ಬದ ಸಂಭ್ರಮ. ತಮ್ಮ ಮೈಕಟ್ಟನ್ನು ತುಂಬ ಜತನದಿಂದ ಕಾಪಾಡಿಕೊಂಡು ಬಂದಿರುವ ಸುದೀಪ್ ಅವರಿಗೆ 41 ಎಂದರೆ ಯಾರೂ ನಂಬಲ್ಲ. ಅವರ ಜೀವನೋತ್ಸಾಹ, ನೇರ ಮಾತುಗಳು ಎಂತಹವರನ್ನು ಬೆರಗಾಗಿಸುತ್ತವೆ.

Saturday, August 23, 2014

ಕನ್ನಡಕ್ಕೆ ೬ನೇ ಜ್ನಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೇಷ್ಠ ಸಾಹಿತಿ ಡಾ. ಯು.ಆರ್ ಅನಂತಮೂರ್ತಿ ಇನ್ನಿಲ್ಲ !

ಸಾಹಿತ್ಯದ ಹಲವು ಪ್ರಾಕಾರಗಳಲ್ಲಿ ತಮ್ಮ ಶ್ರೇಷ್ಠ ತೆಯನ್ನು ಮೆರೆದಿದ್ದಲ್ಲದೇ  ನೇರ-ನಿಷ್ಟುರ ವಿವಾದಾತ್ಮಕ ಹೇಳಿಕೆಗಳಿಂದಲೂ ನಾಡಿನ ಏಳಿಗೆಗಾಗಿ ಶ್ರಮಿಸಿದ 
ಕನ್ನಡಕ್ಕೆ ೬ನೇ ಜ್ನಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೇಷ್ಠ ಸಾಹಿತಿ ಡಾ. ಯು.ಆರ್ ಅನಂತಮೂರ್ತಿ ನಮ್ಮನ್ನು ಅಗಲಿದ್ದಾರೆ  ನಮ್ಮ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಅಪಾರ ನಷ್ಠ ವಾಗಿದೆ. ಅವರ ಆತ್ಮಕ್ಕೆ  ಶಾಂತಿ ದೊರಕಲೆಂದು ಆ ದೇವರಲ್ಲಿ ಪ್ರಾರ್ಥಿಸೋಣ 


ಯು.ಆರ್.ಅನಂತಮೂರ್ತಿ ಅವರ ಜೀವನ ಚರಿತ್ರೆ


Wednesday, August 20, 2014

ಎಂ. ಪಿ. ಶಂಕರ್ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಜನನ: 20 ಆಗಸ್ಟ್,  1935 ನಿಧನ: 17 ಜುಲೈ 2008
ಅಗಾಧ ಮೈಕಟ್ಟಿನ ಅಜಾನುಬಾಹು ಎಂ. ಪಿ. ಶಂಕರ್ ಕನ್ನಡ ಚಿತ್ರರಂಗದ ಚಿರಸ್ಮರಣೀಯ ಕಲಾವಿದರಲ್ಲಿ ಒಬ್ಬರು. ‘ನಾರದ ವಿಜಯ’ ಎಂಬ ಚಿತ್ರದಲ್ಲಿ ‘ಮಾಂಸಪರ್ವತ’ (ಗುರ್ರ್ ಪಾದ)ಎಂದು ನಾರದ ಪಾತ್ರಧಾರಿಯಾದ ಅನಂತ್ ನಾಗ್ ಅವರಿಂದ ಕರೆಯಲ್ಪಟ್ಟ ಈ ಚಿತ್ರರಂಗದ ಅವಿಸ್ಮರಣೀಯ ಪಾತ್ರಧಾರಿ, ಪ್ರತಿಭೆ ಮತ್ತು ಸಾಧನೆಗಳ ಪರ್ವತವೂ ಹೌದು. ಈ ಮೈಸೂರು ಪುಟ್ಟಲಿಂಗಪ್ಪ ಶಂಕರ್ ಅವರು ಜನಿಸಿದ್ದು ಆಗಸ್ಟ್ 20, 1935ರಲ್ಲಿ. 

ಕುಸ್ತಿ ಪೈಲ್ವಾನರಂತಿದ್ದ ಎಂ. ಪಿ. ಶಂಕರ್ ಅವರು ನಿಜಕ್ಕೂ ಪೈಲ್ವಾನರಾಗಿ ಸಾಧನೆ ಮೆರೆದು ಮೈಸೂರು ದಸರಾ ಸ್ಪರ್ಧೆಗಳಲ್ಲಿ ಹಲವಾರು ಸ್ಪರ್ಧೆಗಳನ್ನು ಗೆದ್ದಿದ್ದವರು. ‘ರತ್ನಮಂಜರಿ’ ಚಿತ್ರದಿಂದ ಪ್ರಾರಂಭಗೊಂಡ ಎಂ. ಪಿ. ಶಂಕರ್ ಅವರ ಚಿತ್ರ ಜೀವನದಲ್ಲಿ ಅವರು ಹೆಚ್ಚು ನಿರ್ವಹಿಸಿದ್ದು ಖಳನಾಯಕ ಪಾತ್ರಗಳನ್ನೇ. ಎಂ. ಪಿ. ಶಂಕರ್ ಅವರ ಪ್ರತಿಭಾ ಸಾಮರ್ಥ್ಯವನ್ನೂ, ಅವರಿಗೆ ಕುಸ್ತಿಯಲ್ಲಿ ಇದ್ದ ಹುರುಪುಗಳನ್ನು ಅರಿತಿದ್ದ ಪುಟ್ಟಣ್ಣ ಕಣಗಾಲರು ಅವರಿಗೆ ತಮ್ಮ ಪ್ರಸಿದ್ಧ ಚಿತ್ರಗಳಲ್ಲಿ ಒಂದಾದ ‘ನಾಗರಹಾವು’ದಲ್ಲಿ ಕುಸ್ತಿ ಗರಡಿಯ ಮುಖ್ಯಸ್ಥರ ಪಾತ್ರವನ್ನು ಕೊಟ್ಟಿದ್ದರು. “ನಾಷ್ಟಾ ಮಾಡಿರುವ ಮುಖ ನೋಡು ಅಂತ ವಿಷ್ಣುವರ್ಧನ್ ಅವರಿಗೆ ಒಂದು ರಾಶಿ ದೋಸೆ ಮತ್ತು ಅದರ ಮೇಲೆ ದೊಡ್ಡ ಬೆಣ್ಣೆಯ ಗುಡ್ಡೆಯನ್ನು ಇಟ್ಟು ಚೆನ್ನಾಗಿ ತಿನ್ನು, ಕುಸ್ತಿ ಮಾಡೋನು ಚೆನ್ನಾಗಿ ತಿನ್ಬೇಕು” ಎಂದು ನುಡಿದ ಚಿತ್ರದುರ್ಗದ ನಾಯಕನೇ ತಾನಾಗಿ ಮೂರ್ತಿವೆತ್ತ ಆ ಪಾತ್ರವನ್ನು ಜನ ಹೇಗೆ ತಾನೇ ಮರೆತಾರು.

ಎಸ್.ಎಲ್. ಭೈರಪ್ಪ ಅವರ 84ನೇ ಹುಟ್ಟು ಹಬ್ಬದ ಶುಭಾಶಯಗಳು

ಜನನ: 20ನೇ ಆಗಸ್ಟ್,1931, ಜನನ ಸ್ಥಳ: ಸಂತೇಶಿವರ, ಹಾಸನ ಜಿಲ್ಲೆ, ಕರ್ನಾಟಕ, ಭಾರತ
ಸಾಹಿತ್ಯದ ವಿಧ(ಗಳು): ಕಥೆ, ಕಾದಂಬರಿ, ಇತಿಹಾಸ
ಪ್ರಭಾವಗಳು: ಗೊರೂರು ರಾಮಸ್ವಾಮಿ ಅಯ್ಯಂಗಾರ್, ಆದಿ ಶಂಕರಾಚಾರ್ಯ, ಮಹಾತ್ಮ ಗಾಂಧಿ, ಆನಂದ ಕೆ.ಕುಮಾರಸ್ವಾಮಿ, ರಾಮಕೃಷ್ಣ ಪರಮಹಂಸ , ಸ್ವಾಮಿ ವಿವೇಕಾನಂದ

"ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ" ಆಧುನಿಕ ಕನ್ನಡ ಸಾಹಿತ್ಯದಲ್ಲಿ ಇವರ ಕಾದಂಬರಿ ಪ್ರಕಾರ ಹುಲುಸಾಗಿ ಬೆಳೆದು ಅತಿ ಹೆಚ್ಚು ಓದುಗರನ್ನು ತಲುಪಿದೆ. ಒಟ್ಟಾರೆ ಇಪ್ಪತ್ತನೆಯ ಶತಮಾನ "ಕಾದಂಬರಿ ಯುಗ" ಅನ್ನಿಸಲು ಇವರ ಕೊಡುಗೆಯು ಅಪಾರವಾಗಿದೆ. ಈ ಪರಂಪರೆಯಲ್ಲಿ ಜನ ಮನ ಮುಟ್ಟಿದ ಸಾಹಿತಿಗಳು ಬರೆದೇ ಬದುಕನ್ನು ರೂಪಿಸಿ ಕೊಂಡವರಿದ್ದಾರೆ. ಇದಲ್ಲದೆ ಬದುಕಿಗೊಂದು ವೃತ್ತಿಯಿದ್ದು ವಿವಿಧ ಓದುಗರ ನಡುವೆ ಕನ್ನಡ ಸಾಹಿತ್ಯಕ್ಕೆ ಭಾಷೆ, ವಸ್ತು, ವಿನ್ಯಾಸದ ಹೊಸತು ಕೊಟ್ಟವರೂ ಇದ್ದಾರೆ. ಬರವಣಿಗೆ ಪ್ರವೃತ್ತಿಯಾಗಿಸಿಕೊಂಡು, ಅಕಾಡೆಮಿಕ್ ಆಗಿದ್ದೂ, ಹೆಚ್ಚು ಓದುಗರನ್ನು ತಲುಪಿದ ಜನಪ್ರಿಯ ಕಾದಂಬರಿಕಾರರೆಂದರೆ ಡಾ| ಎಸ್.ಎಲ್. ಭೈರಪ್ಪ ಅವರು. ತಾವು ಆಯ್ಕೆ ಮಾಡಿಕೊಂಡ ವಸ್ತು, ಅದನ್ನು ನಡೆಸುವ ರೀತಿ, ಅದಕ್ಕೊಂದು ಅಂತ್ಯ ಕೊಡುವ ಲೇಖಕನ ಮನೋಸ್ಥಿತಿ ಬಗ್ಗೆ ಚರ್ಚೆಗಳಲ್ಲಿ ಭಿನ್ನ ಅಭಿಪ್ರಾಯಗಳೂ ಇವೆ. ಇಂಥ ಸಂದರ್ಭದಲ್ಲೂ ಭೈರಪ್ಪನವರ ಕಾದಂಬರಿಗಳು ಬಹು ಓದುಗರ ಚರ್ಚೆಯಲ್ಲಿರುತ್ತವೆ. ಮಾಧ್ಯಮಗಳಲ್ಲಿ ವಿಮರ್ಶೆ ಮೂಲಕ ಭಿನ್ನಾಭಿಪ್ರಾಯಗಳು ಆಗಾಗ್ಗೆ ತಲೆದೋರಿದರೂ, ಅದು ಒಂದು ವಲಯದ ಚರ್ಚೆಯೆಂದು ಅಭಿಪ್ರಾಯಪಡುವವರೂ ಇದ್ದಾರೆ

Tuesday, August 19, 2014

ದ್ವಾರಕೀಶ್ ಅವರಿಗೆ 73ನೇ ಹುಟ್ಟು ಹಬ್ಬದ ಶುಭಾಶಯಗಳು



19 August 1942ರಲ್ಲಿ ಜನಿಸಿದ 

ಕರ್ನಾಟಕದ ಕುಳ್ಳ, ಹೆಸರಾಂತ ಹಾಸ್ಯ ನಟ, ನಿರ್ಮಾಪಕ, 
ನಿರ್ದೇಶಕ





ದ್ವಾರಕೀಶ್ ಅವರಿಗೆ



73ನೇ ಹುಟ್ಟು ಹಬ್ಬದ ಶುಭಾಶಯಗಳು




Friday, August 15, 2014

ಜ್ಞಾನಪೀಠ ಪ್ರಶಸ್ತಿ


ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨ ೧೯೬೧ ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ೧೧ ಲಕ್ಷ ರುಪಾಯಿ ಚೆಕ್ ಹಾಗು ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.

ಜ್ಞಾನಪೀಠದ ಹಿನ್ನೆಲೆ

ಅರ್ಜುನ್-ಸರ್ಜಾ ಅವರಿಗೆ 51ನೇ ಹುಟ್ಟುಹಬ್ಬದ ಶುಭಾಶಯಗಳು

ನಮ್ಮ ನೆಚ್ಚಿನ ಕರಾಟೆ ಕಿಂಗ್-ಸಿಂಹದ ಮರಿ-ಪುಟಾಣಿ ಏಜೆಂಟ್
ಅರ್ಜುನ್-ಸರ್ಜಾ 
ಅವರಿಗೆ ೫೧ನೇ ಹುಟ್ಟುಹಬ್ಬದ ಶುಭಾಶಯಗಳು

ಅವರ ಬೃಹತ್ ಗಾತ್ರದ ಶ್ರೀ ಆಂಜನೇಯ ವಿಗ್ರಹದ ಎಲ್ಲಾ ಕೆಲಸಗಳು ಅಡ್ಭುತವಾಗಿ ನೆರವೇರಲಿ. ಬಜರಂಗಬಲಿ ಅವರಿಗೆ ಎಲ್ಲಾ ಯಶಸ್ಸು ಕರುಣಿಸಲಿ ನೂರು ಕಾಲ ಸಂತೋಷದಿಂದ ಬಾಳಲಿ, ಹಾಗು  ಕನ್ನಡದಲ್ಲಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ಅಭಿಮನ್ಯು ಅದ್ಭುತ ಯಶಸ್ಸು ಗಳಿಸಲಿ ಎಂದು ಈ ಸಮಯದಲ್ಲಿ ಹಾರೈಸೋಣ


ವೀರಯೋಧ ಸಂದೀಪ್ ಉನ್ನಿಕೃಷ್ಣನ್ ಅಮರವಾಗಲಿ

We Salute Sandeep Unnikrishnan
2008ರ ನವೆಂಬರ್ 26ರಂದು ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದ ಕರಾಳ ನೆನಪಿಗೆ ಇಂದಿಗೆ ಐದು ವರ್ಷ ಪೂರ್ಣಗೊಂಡಿದೆ.. ಜೊತೆಗೆ ಬೆಂಗಳೂರು ಮೂಲದ ಭಾರತದ ಹೆಮ್ಮೆಯ ಪುತ್ರ ವೀರಯೋಧ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾದ ದಿನವೂ ಹೌದು.

Saturday, August 9, 2014

ವಿ. ಕೃ. ಗೋಕಾಕ್ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಆಗಸ್ಟ್ 9, 1909 ವಿನಾಯಕ ಕೃಷ್ಣ ಗೋಕಾಕರು ಜನಿಸಿದ ದಿನ. ಡಾ. ವಿನಾಯಕ ಕೃಷ್ಣ ಗೊಕಾಕರೆಂದರೆ ನಮ್ಮ ಕಣ್ಣಮುಂದೆ ನಿಲ್ಲುವ ಚಿತ್ರ ಅಂತರಾಷ್ಟ್ರೀಯ ಖ್ಯಾತಿಯ ಎತ್ತರದ ವ್ಯಕ್ತಿ. ಕನ್ನಡಕದ ಹಿಂದಿನ ಆಳವಾದ ಒಳನೋಟದ ಕಣ್ಣು, ಗಂಭೀರ ಧ್ವನಿ, ಗಂಭೀರ ನಿಲುವು. ಈ ಪರಿಪಕ್ವ ವ್ಯಕ್ತಿತ್ವದ ಹಿಂದೆ ಶೈಕ್ಷಣಿಕ ಕ್ಷೇತ್ರದಲ್ಲಿ ಆಡಳಿತ ನಿರ್ವಹಿಸಿದ ಕುಲಪತಿಯ ವರ್ಚಸ್ಸಿದೆ. ಶಿಕ್ಷಣವೇತ್ತರ ವೈಚಾರಿಕ ಪ್ರಗಲ್ಪತೆ ಇದೆ, ಪ್ರಾಧ್ಯಾಪಕನ ಪ್ರತಿಭೆ ಇದೆ, ಅನುಭವ ತಪಸ್ಸಿದೆ, ಅನುಭಾವ ಸಿದ್ಧಿಯಿದೆ, ಪ್ರಪಂಚ ಪಯಣಿಗನ ವಿಶಾಲ ಜ್ಞಾನವಿದೆ, ಬೌದ್ಧಿಕ ಔನ್ನತ್ಯವಿದೆ, ಸೃಜನ ಕವಿಯ ಅಂತಃಸ್ಫುರಣವಿದೆ, ಯೋಗಿಯ ನಿಷ್ಕಾಮ ಬುದ್ಧಿಯಿದೆ. 


ಧಾರವಾಡದಲ್ಲಿ ಪ್ರಪ್ರಥಮ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಗೋಕಾಕರು ಮುಂದೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲು ಪರೀಕ್ಷೆಗೆ ಕುಳಿತರು. ಅವರಿಗೆ ಅಲ್ಲಿ ಯಶಸ್ಸು ಪಡೆಯುವ ಸಂಪೂರ್ಣ ಭರವಸೆ ಇತ್ತು. ಇನ್ನೂ ಮೌಖಿಕ ಪರೀಕ್ಷೆ ಆಗುವುದರಲ್ಲಿತ್ತು. ತತ್ಪೂರ್ವದಲ್ಲಿ ಕಾಂಟಿನೆಂಟಲ್ ಪ್ರವಾಸಕ್ಕೆಂದು ಹೊರಟರೆ ದಾರಿಯಲ್ಲಿ ಎಡಿನ್ ಬರೋದಲ್ಲಿ ತೀವ್ರತರವಾದ ಕರುಳು ಬೇನೆಯಿಂದ ಬಳಲುತ್ತಾ ಚಿಕಿತ್ಸೆಗೆ ಒಳಗಾಗಬೇಕಾಯಿತು. ವೈವಾ ತಪ್ಪಿ ಹೋಗಿ ಆಕ್ಸ್ ಫರ್ಡ್ ಪ್ರಥಮ ದರ್ಜೆಯ ಉತ್ತೀರ್ಣತೆಯ ಆಸೆ ಹುಸಿಯಾಯಿತು ಎಂದುಕೊಂಡರು. ಗೋಕಾಕರ ಲಿಖಿತ ಪರೀಕ್ಷೆಯ ಉಜ್ವಲತೆ ಎಷ್ಟು ಶ್ರೇಷ್ಠವಾಗಿತ್ತೆಂದರೆ ವೈವಾ ಪರೀಕ್ಷೆ ಇಲ್ಲದೆಯೇ ಆಕ್ಸ್ ಫರ್ಡ್ ಪರಿಣತರು ಗೋಕಾಕರನ್ನು ಶ್ರೇಷ್ಠ ದರ್ಜೆಯ ಉತ್ತೀರ್ಣತೆಗೆ ಪರಿಗಣಿಸಿದರು.

Wednesday, August 6, 2014

ಜಿ ಪಿ ರಾಜರತ್ನಂ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

G P Rajaratnam
'ಜಿ. ಪಿ. ರಾಜರತ್ನಂ'ರವರು ಹಲವು ಪ್ರಕಾರಗಳಲ್ಲಿ ಸುಮಾರು ೨೯೫ ಗ್ರಂಥಗಳನ್ನು ರಚಿಸಿರುವ ರಾಜರತ್ನಂರವರ ಸಾದನೆ ಅದ್ವಿತೀಯವಾದುದು

'ಜಿ. ಪಿ. ರಾಜರತ್ನಂ'(೧೯೦೪-೧೯೭೯) ರವರು ಮೂಲತಹ ಚಾಮರಾಜ ನಗರ ಜಿಲ್ಲೆಯ ಗುಂಡ್ಲು ಪೇಟೆಯವರು.ಇವರ ಪೂರ್ವಜರು ತಮಿಳುನಾಡಿನ ನಾಗ ಪಟ್ಟಣಕ್ಕೆ ಸೇರಿದ ತಿರುಕ್ಕಣ್ಣಾ ಪುರ ಎಂಬ ಅಗ್ರಹಾರದಿಂದ ೧೯೦೬ ರಲ್ಲಿ ಮೈಸೂರಿಗೆ ಬಂದರು. ಹೆಸರಾಂತ ಗುಂಡ್ಲು ಪಂಡಿತ ವಂಶ ದಲ್ಲಿ ಡಿಸೆಂಬರ್ 5, 1904 ರಂದು ರಾಮನಗರದಲ್ಲಿ ಜನಿಸಿದರು.ಮೊದಲಿಗೆ ಇವರ ಹೆಸರು ಜಿ.ಪಿ.ರಾಜಯ್ಯಂಗಾರ್ ಎಂದಿತ್ತು.ಇವರು ಲೋಯರ್ ಸೆಕೆಂಡರಿ ಓದುತ್ತಿದ್ದಾಗ ಚೇಷ್ಟೆಗಾಗಿ ಶಾಲೆಯ ಗುಮಾಸ್ತರನ್ನು ಪುಸಲಾಯಿಸಿ ತಮ್ಮ ಹೆಸರನ್ನು ಗಿ.ಪಿ.ರಾಜರತ್ನಂ ಎಂದು ತಿದ್ದಿಕೊಂಡಿದ್ದರು. ತಂದೆ ಆ ಭಾಗದಲ್ಲಿ ಉತ್ತಮ ಶಿಕ್ಷಕರೆಂದು ಹೆಸರು ಮಾಡಿದ್ದ ಜಿ.ಪಿ.ಗೋಪಾಲ ಕೃಷ್ಣ ಅಯ್ಯಂಗಾರ್ , ತಾಯಿಯ ಪ್ರೀತಿ ಇಲ್ಲದೆ ಬೆಳೆದ ರಾಜರತ್ನಂಗೆ,
ತಂದೆಯೇ ಎಲ್ಲವೂ ಆಗಿದ್ದರು. ಅಜ್ಜಿಯ ಅಕ್ಕರೆಯಲ್ಲೂ ರಾಜರತ್ನಂ ಬೆಳೆದರು. ತಂದೆ ಬಡ ಮೇಸ್ಟ್ರು. ಸ್ವಾತಂತ್ರ್ಯ ಪೂರ್ವದಲ್ಲೇ (೧೯೩೧ರಲ್ಲಿ) ರಾಜರತ್ನಂ ಎಂ. ಎ (ಕನ್ನಡ) ದಲ್ಲಿ ಮುಗಿಸಿ, ಶಿಶು ವಿಹಾರ ಹಾಗೂ ತಂದೆಯ ಶಾಲೆಯಲ್ಲಿ ಆರಂಭಿಕ ಮೇಸ್ಟ್ರು ಆದರು. ಇದರ ಅನುಭವದ ಫಲವೇ ಮಕ್ಕಳ ಕುರಿತು ಬರೆದ `ತುತ್ತೂರಿ' ಶಿಶು ಗೀತೆ ಸಂಕಲನ'. ಕ್ರಮೇಣ ಆ ಕೆಲಸ ತೃಪ್ತವಾಗದೆ ಹೈದರಾಬಾದಿಗೂ ಕೆಲಸ ಹುಡುಕಿ ಹೋಗಿದ್ದುಂಟು. ಅಲ್ಲಿಂದ ನಿರಾಶರಾಗಿ ಬೆಂಗಳೂರಿಗೆ ಬಂದು ಜನಗಣತಿ ಕಛೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ರಾಜರತ್ನಂರವರಿಗೆ 'ಸಾಹಿತ್ಯ ಸೇವೆ' ಮುಂದುವರೆಸಲು ಉಪದೇಶಿಸಿದರು. ಅದರ ಫಲವೇ ಮುಂದೆ 'ರಾಜರತ್ನಂ' ಅವರಿಂದ 'ಉತ್ತಮ ಸಾಹಿತ್ಯ ನಿರ್ಮಾಣ'ಕ್ಕೆ ದಾರಿಯಾಯಿತು. ಬೌದ್ಧ ಸಾಹಿತ್ಯ ಇಂಥ ಉಪಯುಕ್ತ ಸಾಹಿತ್ಯದಲ್ಲೊಂದು 'ಮಿಂಚು'.
ಮಡದಿಯ ಸಾವಿನಿಂದ ಧೃತಿಗೆಟ್ಟರು

Sunday, August 3, 2014

ಯಶವಂತ ಚಿತ್ತಾಲರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಜನನ: ಆಗಸ್ಟ್ 3, 1928, ನಿಧನ: ಮಾರ್ಚ್ 22, 2014
ಕನ್ನಡದ ಪ್ರತಿಭಾನ್ವಿತ, ಸೃಜನಶೀಲ ಗದ್ಯ ಲೇಖಕರಾದ ಯಶವಂತ ಚಿತ್ತಾಲರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹನೇನಹಳ್ಳಿ. ತಂದೆ ವಿಠೋಬ, ತಾಯಿ ರುಕ್ಮಿಣಿ. (ಇವರ ಅಣ್ಣನೇ ಪ್ರಸಿದ್ಧ ಕವಿ ಗಂಗಾಧರ ಚಿತ್ತಾಲರು) ಪ್ರಾರಂಭಿಕ ವಿದ್ಯಾಭ್ಯಾಸ ಹನೇನಹಳ್ಳಿ, ಕುಮಟಾಗಳಲ್ಲಿ. ಉನ್ನತ ವಿದ್ಯಾಭ್ಯಾಸ ಧಾರವಾಡ ಮತ್ತು ಅಮೆರಿಕ. ೧೯೭೨ರಲ್ಲಿ ಅಮೆರಿಕದ ಸ್ಟೀವನ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ನಡೆಸಿ ರಾಸಾಯನಿಕ ತಂತ್ರಜ್ಞಾನದಲ್ಲಿ ಪಡೆದ ಸ್ನಾತಕೋತ್ತರ ಪದವಿ.

ಉದ್ಯೋಗಿಯಾಗಿ ಸೇರಿದ್ದು ಮುಂಬಯಿಯ ಬೇಕ್‌ಲೈಟ್ ಹೈಲ್ಯಾಮ್ ಲಿ. ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಪ್ಲಾಸ್ಟಿಕ್ ಅಂಡ್ ರಬ್ಬರ್ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಮುಂಬಯಿಯ ಇಂಡಿಯನ್ ಪ್ಲಾಸ್ಟಿಕ್ ಮತ್ತು ಅಮೆರಿಕದ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಸಂಸ್ಥೆಯಲ್ಲಿ ನಡೆಸಿದ ಹಲವಾರು ಸಂಶೋಧನೆಗಳು.

Tuesday, July 29, 2014

ಟಿ. ಪಿ. ಕೈಲಾಸಂ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಜನನ: ಜುಲೈ 29, 1884- ನಿಧನ: 23 ನವೆಂಬರ್ 1946
ಕನ್ನಡಕ್ಕೊಬ್ಬರೇ ಕೈಲಾಸಂ” ಎಂಬುದು ಪ್ರಸಿದ್ಧ ಮಾತು. ಒಮ್ಮೆ ಕೈಲಾಸಂರ ಆತ್ಮೀಯರೂ, ಅಭಿಮಾನಿಯೂ ಆಗಿದ್ದ ಅ.ನ.ಕೃ ಅವರು ತಮ್ಮದೊಂದು ಲೇಖನದಲ್ಲಿ ಕೈಲಾಸಂರನ್ನು ಕುರಿತು ಅವರು ಜಗತ್ತಿನ ನಾಟಕ ಸಾಹಿತ್ಯದಲ್ಲಿ ಶ್ರೇಷ್ಠ ವಿಡಂಬನಕಾರರ ಪೈಕಿ ಆರನೆಯ ಸ್ಥಾನದಲ್ಲಿದ್ದಾರೆ ಎಂದು ಹೇಳಿ, ಉಳಿದವರು ಮೊಲಿಯರ್, ಅರಿಸ್ಟೋಫೆನಿಸ್, ವಾಲ್ಟೇರ್, ಸ್ವಿಫ್ಟ್ ಹಾಗೂ ಬರ್ನಾಡ್ ಷಾ ಎಂದು ಬರೆದಿದ್ದರು. ಇದಕ್ಕೆ ಉದಾಹರಣೆಯಾಗಿ ಅವರು ಕೈಲಾಸಂ ಅವರ ‘ನಮ್ ಬ್ರಾಹ್ಮಣ್ಕೆ’, ‘ಟೊಳ್ಳುಗಟ್ಟಿ’, ‘ತಾಳೀ ಕಟ್ಟೋಕ್ಕೂಲೀನೇ?’, ‘ಬಂಡ್ವಾಳ್ವಿಲ್ಲದ ಬಡಾಯಿ’, ‘ಹೋಂರೂಲು’ ನಾಟಕಗಳ ಹಲವಾರು ಸನ್ನಿವೇಶಗಳನ್ನು ಉದ್ಘರಿಸುತ್ತಿದ್ದರು. 

ಕೈಲಾಸಂ ಅವರು ಈ ಲೋಕವನ್ನಗಲಿ ಸುಮಾರು ಏಳು ದಶಕಗಳೇ ಕಳೆದಿವೆ. ಅಂದರೆ ಇಂದಿನ ವೃದ್ಧರಲ್ಲೂ ಬಹಳಷ್ಟು ಜನ ಅವರ ಕಾಲದಲ್ಲಿ ಇರಲಿಲ್ಲ. ಹಾಗಿದ್ದರೂ ಕೈಲಾಸಂ ಅವರ ಕುರಿತ ಬರಹಗಳು, ಅವರು ಜೋಕುಗಳು, ಉತ್ಸಾಹ ಉಕ್ಕಿಸುವ ಪದ್ಯದ ಧಾಟಿಗಳು ಇವುಗಳೆಲ್ಲದರಿಂದ ಅವರು ಒಂದು ಪ್ರೀತಿಪಾತ್ರ ಕಥಾನಕವಾಗಿ ನಮ್ಮ ನಡುವೆ ಉಳಿದಿದ್ದಾರೆ. 

ಅಮರಶಿಲ್ಪಿ ಜಕ್ಕಣಚಾರ್ಯ

ಬೇಲೂರು, ಹಳೆಬೀಡು ಮತ್ತು ಸೋಮನಾಥಪುರಗಳ ವಾಸ್ತು ಶಿಲ್ಪ, ಮೂರ್ತಿಶಿಲ್ಪಗಳು ಎಷ್ಟು ಆಶ್ಚರ್ಯಕರವಾಗಿರುವವೋ, ಅಷ್ಟೇ ಆಶ್ಚರ್ಯಕರ ಶಿಲ್ಪಿ ಜಕ್ಕಣಚಾರ್ಯರ ಜೀವನ ಸಂಗತಿಗಳು. ಭಾರತದ ಶಿಲ್ಪಿಗಳು ವೈಯುಕ್ತಿಕ ಅಭಿವೃದ್ದಿ, ಹಣ ಮತ್ತು ಕೀರ್ತಿಗಳಾಸೆಗೆ ಎಂದೂ ಒಳಗಾಗಿಲ್ಲ. ಹಾಗಂತಲೇ ಬಹಳ ಶಿಲ್ಪಿಗಳು ತಾವು ನಿರ್ಮಿಸಿದ ಶಿಲ್ಪಕೃತಿಗಳ ಮೇಲೆ ತಮ್ಮ ನಾಮ ಲಿಖಿತ ಬಳಸಿಕೊಂಡಿಲ್ಲ, ಕಾರಣವಿಷ್ಟೆ " ಮಾಡುವುದನ್ನು ಮಾಡಿಬಿಟ್ಟೆ" ಎಂಬ ತೃಪ್ತ ಮನೋಭಾವದ ಜೀವನವೇ ಅವರಿಗೆ ಬೇಕಾಗಿದ್ದಿತು. ಹೆಸರಿನ ಭ್ರಮೆ, ಕೀರ್ತಿ ಇವು ಅವರಿಗೆ ಅಮುಖ್ಯ.


ಶಿಲ್ಪದಲ್ಲಿ ಚಾರಿತ್ರಿಕ ಅಂಶವಿದೆ ಮತ್ತು ತಾದಾತ್ಮೆಯ ತಪಸ್ಸೂ ಇರುತ್ತದೆ ಶೀಲ+ಸಮಾಧೌ = ಶಿಲ್ಪ, ಕಾಯಾ, ವಾಚಾ, ಮನಸಾ ಪರಿಶುದ್ದತೆಯನ್ನು ಕಾಯ್ದುಕೊಂಡು ಶಿಲ್ಪ-ಕೆತ್ತನೆಯಲ್ಲಿ ತೊಡಗಿದಾಗ ಸಮಾಧಿ ಸ್ತಿತಿಯನ್ನ ತಲುಪಿಬಿಡುವ ಸಾಧ್ಯತೆಯ ಕಾರಣ ಶಿಲ್ಪಿ ಆಧ್ಯಾತ್ಮ ಸಾಧಕನಾಗಿಬಿಡುತ್ತಾನೆ. ಶಿಲ್ಪಿಯು ತನ್ನ ತಪ್ಪಸ್ಸಿನ ಶಕ್ತಿಯನ್ನೆಲ್ಲಾ ತಾನು ಕೆತ್ತುವ ಮೂರ್ತಿಯಲ್ಲಿ ಧಾರೆಯೆರೆದಿರುತ್ತಾನೆ, ಹಾಗಂತ ಆ ಮೂರ್ತಿ ವರ ನೀಡುವ ಶಕ್ತಿಯನ್ನು ಪಡೆದಿರುತ್ತದೆ ಅಂತಲೇ ಅರ್ಥ.

Monday, July 28, 2014

ಬಿ.ಆರ್. ಪಂತುಲು ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಜನನ: 1911 ಜುಲೈ 28 - ನಿಧನ: ಅಕ್ಟೋಬರ್ 8, 1974

“ಸ್ವಾಮಿ ದೇವನೆ ಲೋಕಪಾಲನೆ ತೇನಮೋಸ್ತು ನಮೋಸ್ತುತೆ” ಎಂದು ಮಕ್ಕಳಿಗೆ ಪಾಠ ಹೇಳಿಕೊಟ್ಟು ನಮಗೆ ಇಷ್ಟವಾಗಿರುವ ಮೇಷ್ಟರ ಹಾಗೆ ಇವರೂ ಕೂಡಾ ಎಂದು ಭಾವ ಹುಟ್ಟಿಸಿದ ‘ಸ್ಕೂಲ್ ಮಾಸ್ಟರ್’ ಎಂದೇ ಪ್ರಿಯರಾದ ಬಿ.ಆರ್. ಪಂತುಲು ಅವರು ಕನ್ನಡಿಗರಿಗೆ ಮಾತ್ರವಲ್ಲ, ದಕ್ಷಿಣ ಭಾರತ ಚಿತ್ರರಂಗಕ್ಕೇ ಒಂದು ಅವಿಸ್ಮರಣೀಯ ನೆನಪು. ಅವರು ಶ್ರೀಕೃಷ್ಣದೇವರಾಯ ಚಿತ್ರದಲ್ಲಿ ಮಂತ್ರಿ ತಿಮ್ಮರಸುವಾಗಿ ಕಂಗೊಳಿಸಿದ ರೀತಿ ಅವಿಸ್ಮರಣೀಯವಾದುದು. “ಒಂದರಿಂದ ಇಪ್ಪತ್ತೊಂದರವರೆಗೆ ಜಂಜಾಟ, ಬಂಡಾಟ” ಎಂದು ಅವರ ಮೊದಲ ತೇದಿಯಲ್ಲಿ ಮೂಡಿದ ಹಾಡು, ಅಂದಿನ ಎಲ್ಲಾ ಮಧ್ಯಮ ಮತ್ತು ಕೆಳವರ್ಗದ ಜನಕ್ಕೆ ಇದು ನಮ್ಮ ಜೀವನವೇ ಎಂದು ಅನ್ವಯಿಸಿಕೊಳ್ಳುವಷ್ಟು ಪ್ರಖ್ಯಾತವಾಗಿತ್ತು. ಕರ್ಣನಂತಹವನಿಗೇ ಹೀಗಾಯಿತಲ್ಲಾ ಎಂದು ಸ್ವಯಂ ಕೃಷ್ಣನೇ ಶೋಕಿಸುವ ಈ ಸೃಷ್ಟಿಯ ಪರಿ ಆತ್ಮೀಯವಾಗಿತ್ತು. ಕನ್ನಡ ಚಿತ್ರರಂಗದ ಸುವರ್ಣಯುಗದ ಹರಿಕಾರ, ಬೆಳ್ಳಿತೆರೆಯ ಗಾರುಡಿಗರೆಂದೇ ಅವರು ಪ್ರಸಿದ್ಧಿ. 

Friday, July 25, 2014

ಎಚ್ ಎಲ್ ಎನ್ ಸಿಂಹ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ


ಜನನ:ಜುಲೈ 25, 1906


ಡಾ. ರಾಜ್ ಕುಮಾರ್ ಅಲ್ಲದೆ ಡಾ. ಜಿ.ವಿ.ಅಯ್ಯರ್, ನರಸಿಂಹ ರಾಜು, ರಾಜಾ ಸುಲೋಚನ, ಡಾ. ಹೊನ್ನಪ್ಪ ಭಾಗವತರ್, ರಾಜಾ ಶಂಕರ್, ಬಿ, ಹನುಮಂತಾಚಾರ್ ಇಂತಹ ಮಹಾನ್ ಪ್ರತಿಭೆಗಳ ಗಣಿಗಳನ್ನು ಸಹಾ ಸಿಂಹರು ಚಿತ್ರರಂಗಕ್ಕೆ ತಂದರು.

ಎಚ್ ಎಲ್ ಎನ್ ಸಿಂಹ ಅವರು ಜನಿಸಿದ್ದು ಜುಲೈ ೨೫, ೧೯೦೬ರ ವರ್ಷದಲ್ಲಿ. ಊರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾದಹಳ್ಳಿ ಗ್ರಾಮ. ತಂದೆ ನರಸಿಂಹಯ್ಯನವರು ಮತ್ತು ತಾಯಿ ಲಕ್ಷ್ಮಮ್ಮನವರು.

ಸಿಂಹರು ಶಾಲೆಯಲ್ಲಿ ಓದಿದ್ದಕ್ಕಿಂತ ರಂಗದಲ್ಲಿ ಕಲಿತದ್ದೇ ಹೆಚ್ಚು. ನಾಟಕ ಶೀರೋಮಣಿ ವರದಾಚಾರ್ಯರ ನಾಟಕ ಕಂಪನಿಯಲ್ಲಿ ಬಾಲನಟನಾಗಿ ಅಭಿನಯಿಸತೊಡಗಿದ ಅವರು ಭಕ್ತ ಮಾರ್ಕಂಡೇಯ ನಾಟಕದಲ್ಲಿ ಮಾರ್ಕಂಡೇಯನಾಗಿ ಅದ್ಭುತ ನಟನಾಕೌಶಲ ಪ್ರದರ್ಶಿಸಿದ್ದರು.

ಯುವಕರಾಗಿದ್ದ ಸಿಂಹ ಅವರು ತಾವೇ ಹಲವಾರು ನಾಟಕಗಳನ್ನು ಬರೆದು ಪ್ರಸಿದ್ಧ ರಂಗಭೂಮಿ ಕಲಾವಿದರಾದ ಮಹಮ್ಮದ್ ಪೀರ್ ಅವರೊಂದಿಗೆ ರಂಗಪ್ರದರ್ಶನಗಳಿಗೆ ಅಳವಡಿಸಿದರು. ಮುಂದೆ ಟೈಗರ್ ವರದಾಚಾರ್ಯರ ಕಂಪೆನಿಯನ್ನು ಸೇರಿದ ಸಿಂಹರು ಹಲವಾರು ಸಣ್ಣ ಸಣ್ಣ ಪಾತ್ರಗಳಲ್ಲಿ ಅಭಿನಯಿಸತೊಡಗಿದರು. ಈ ಈರ್ವರು ಸೇರಿ ಸ್ಥಾಪಿಸಿದ ಸಂಸ್ಥೆ 'ಚಂದ್ರಕಲಾ ನಾಟಕ ಮಂಡಳಿ'. ನಂತರದಲ್ಲಿ ಸಿ.ಬಿ. ಮಲ್ಲಪ್ಪ, ಗುರುಕರ್, ಗುಬ್ಬಿ, ಪೀರ್ ಮುಂತಾದ ನಾಟಕ ಕಂಪೆನಿಗಳಲ್ಲಿ ಸೇರಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವುದರೊಂದಿಗೆ ಸಿಂಹರು ಪ್ರತಿಷ್ಟಿತ ನಟರಾಗಿ ಜನಪ್ರಿಯರಾದರು.

Thursday, July 24, 2014

ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಜನನ: 24 ಜುಲೈ, 1923 – ನಿಧನ:11 ಜುಲೈ, 1979
ಅಭಿನಯ ಹಾಸ್ಯದ ಮೂಲಕವೇ ಕನ್ನಡಚಿತ್ರ ರಸಿಕರನ್ನು ನಕ್ಕುನಗಿಸಿದ ಧೀಮಂತ ನಟ ನರಸಿಂಹರಾಜು. ಕನ್ನಡಚಿತ್ರರಂಗ ಕಂಡ ಅಪ್ರತಿಮ ಕಲಾವಿದರಲ್ಲಿ ನರಸಿಂಹರಾಜು ಅವರು ಪ್ರಮುಖರು. 1926ರಿಂದ 1979ರವರೆಗೆ ರಂಗಭೂಮಿ ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ನರಸಿಂಹರಾಜು ಹಾಸ್ಯನಟರಾಗಿ ಎಷ್ಟರ ಮಟ್ಟಿಗೆ ಬೆಳೆದರೆಂದರೆ, ರಾಜ್ ಕುಮಾರ್ ನಾಯಕ ನಟರಾದರೆ, ಅವರ ಗೆಳೆಯನ ಪಾತ್ರಕ್ಕೆ ನರಸಿಂಹರಾಜು ಆಯ್ಕೆಯಾಗುತ್ತಿದ್ದರು. ನಾಯಕನ ಗೆಳೆಯ, ಸಹೋದ್ಯೋಗಿ, ಸಹಾಯಕ ಹೀಗೆ ಯಾವುದಾದರೂ ಒಂದು ಪಾತ್ರ ಸೃಷ್ಟಿಸಿ ನರಸಿಂಹ ರಾಜು ಅವರಿಗೆ ಅವಕಾಶ ನೀಡಲಾಗುತ್ತಿತ್ತು.

ನರಸಿಂಹರಾಜು ಅವರು ಹುಟ್ಟಿದ್ದು ತುಮಕೂರು ಜಿಲ್ಲೆ ತಿಪಟೂರಿನಲ್ಲಿ.  ಚಿಕ್ಕಪ್ಪನ ಪ್ರೋತ್ಸಾಹದಿಂದ ಚಿಕ್ಕಂದಿನಲ್ಲಿಯೇ ರಂಗಭೂಮಿ ಪ್ರವೇಶಿಸಿದ ನರಸಿಂಹರಾಜು ಬಾಲನಟನಾಗಿ ಖ್ಯಾತಿ ಪಡೆದರು. 1954ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನರಸಿಂಹ ರಾಜು ನಟಿಸಿದ ಮೊದಲ ಚಿತ್ರ ಬೇಡರಕಣ್ಣಪ್ಪ. ರಾಜ್ ಕುಮಾರ್ ನಾಯಕ ನಟರಾದ ಮೊದಲ ಚಿತ್ರವೂ ಆದ ಬೇಡರ ಕಣ್ಣಪ್ಪದಲ್ಲಿ  ಕಾಶಿ ಪಾತ್ರದಲ್ಲಿ ಕಾಣಿಸಿಕೊಂಡ ನರಸಿಂಹ ರಾಜು ಮತ್ತೆ ಹಿಂತಿರುಗಿ ನೋಡಲೇ ಇಲ್ಲ.

Friday, July 4, 2014

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಹುಟ್ಟು ಹಬ್ಬದ ನೆನಪಿನಲ್ಲಿ

Goruru Ramaswamy Ayyengar
ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್  ಅವರು 1904ರ ಜುಲೈ 4ರಂದು ಹಾಸನ ಜಿಲ್ಲೆಯ ಗೊರೂರು ಗ್ರಾಮದಲ್ಲಿ ಜನಿಸಿದರು.  ಅವರ ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷಮ್ಮನವರು.  ತಮ್ಮ ಹಳ್ಳಿಯಲ್ಲಿ ಲೋಯರ್ ಸೆಕೆಂಡರಿ ಶಿಕ್ಷಣವನ್ನು ಮುಗಿಸಿದ ಗೊರೂರರು ಹಾಸನದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಗಾಂಧೀಜಿಯ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿದರು.

 ಅನಂತರ ಅವರು ಗಾಂಧೀಜಿಯ ಆಶ್ರಮವನ್ನು ಸೇರಿ, ಗುಜರಾತಿನ ವಿದ್ಯಾಪೀಠದ ವಿದ್ಯಾರ್ಥಿಯಾದರು.  ಬಳಿಕ ಮದ್ರಾಸಿನ "ಲೋಕಮಿತ್ರ" ಮತ್ತು "ಭಾರತಿ" ಪತ್ರಿಕೆಗಳ ಕನ್ನಡ ಸಮಾಚಾರ ಲೇಖಕರಾಗಿ ಸ್ವಲ್ಪಕಾಲ ಕೆಲಸಮಾಡಿ, ಕೆಂಗೇರಿಯ ಗುರುಕುಲಾಶ್ರಮವನ್ನು ಸೇರಿದರು.  ಹರಿಜನೋದ್ಧಾರ ಅದರ ಮುಖ್ಯ ಕಾರ್ಯವಾಗಿತ್ತು.   ಅದನ್ನು ಗೊರೂರರು ಶ್ರದ್ಧೆಯಿಂದ ನಿರ್ವಹಿಸಿದರು.  ಆಮೇಲೆ ಬೆಂಗಳೂರಿನ ಅಖಿಲ ಭಾರತ ಚರಕ ಸಂಘದ ಖಾದಿ ವಸ್ತ್ರಾಲಯದ ಸಂಚಾಲಕರಾದರು.  ಅಲ್ಲಿಯೇ ಅವರ ಸಾಹಿತ್ಯ ಸೇವೆ ಮೊದಲಾಯಿತು.  1933ರಲ್ಲಿ ಗೊರೂರರು ತಮ್ಮ ಗ್ರಾಮಕ್ಕೆ ಮರಳಿ, ಮೈಸೂರು ಗ್ರಾಮ ಸೇವಾಸಂಘವನ್ನು ಸ್ಥಾಪಿಸಿ, ಖಾದಿ ಪ್ರಚಾರ, ಹರಿಜನೋದ್ಧಾರ, ವಯಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆಗಳು ಮುಂತಾದ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿದರು.  1942ರ "ಚಲೇ ಜಾವ್" ಚಳವಳಿಯಲ್ಲಿ ಅವರು ಭಾಗವಹಿಸಿ, ತುರಂಗವಾಸವನ್ನು ಅನುಭವಿಸಿದರು.  ಸ್ವಾತಂತ್ರ್ಯ ಬಂದ ಮೇಲೆ ಮೈಸೂರಿನಲ್ಲಿ ಪ್ರಜಾ ಸರ್ಕಾರ ಸ್ಥಾಪನೆಗಾಗಿ ನಡೆದ ಚಳವಳಿಯಲ್ಲೂ ಭಾಗವಹಿಸಿದರು.  ಅದು ಸ್ಥಾಪಿತವಾದ ಮೇಲೆ ಸುಮಾರು ಹನ್ನೆರಡು ವರ್ಷ ಕಾಲ ರಾಜ್ಯದ ವಿಧಾನಪರಿಷತ್ತಿನ ಸದಸ್ಯರಾಗಿದ್ದರು.  ಈ ಅವಧಿಯಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ಅವರು ದುಡಿದರು.

Friday, June 6, 2014

ಮಾಸ್ತಿ ವೆಂಕಟೇಶ ಅಯ್ಯಂಗಾರ-ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

Masti Venkatesh Ayyengar
ಮಾಸ್ತಿ ವೆಂಕಟೇಶ ಅಯ್ಯಂಗಾರರು (ಜೂನ್ 6, 1891-ಜೂನ್ 6, 1986)-ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು. ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಜೂನ್ ೬ ೧೮೯೧ ರಲ್ಲಿ ಜನಿಸಿದರು. ಮೆಟ್ರಿಕ್ಯುಲೇಷನ್(೧೯೦೭), ಎಫ್.ಎ (೧೯೦೯), ಬಿ.ಎ (ಮದರಾಸು ವಿಶ್ವವಿದ್ಯಾಲಯ ೧೯೧೨), ಮೈಸೂರು ಸಿವಿಲ್ ಸರ್ವಿಸ್ (೧೯೧೩), ಎಂ.ಎ (ಮದರಾಸು)

ಜೀವನ
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಹಳ್ಳಿಯಲ್ಲಿ ೧೮೯೧ರ ಜೂನ್ ೬ರಂದು ಹುಟ್ಟಿದರು. ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಬಡತನವಿತ್ತು. ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ಕುಟುಂಬ ಅವರ ಪೂರ್ವಿಕರದು. ಮಾಸ್ತಿ ವೆಂಕಟೇಶ ಅಯ್ಯಂಗಾ ರ್ "ಪೆರಿಯಾತ್" ಎಂದರೆ ದೊಡ್ಡ ಮನೆಯವರು. ಅವರ ವಿದ್ಯಾಭ್ಯಾಸ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು. ಅವರ ಹಿರಿಯರು ಬಹು ಜನಕ್ಕೆ ಅನ್ನ ಹಾಕಿ ಹೆಸರು ಗಳಿಸಿದ್ದರಾದರೂ ಅವರು ವಾರದ ಮನೆಗಳಲ್ಲಿ ಊಟಮಾಡಿ ವಿದ್ಯಾಭ್ಯಾಸ ಮಾಡಬೇಕಾಯಿತು. ಹೊಂಗೇನಳ್ಳಿ, ಯಲಂದೂರು, ಶಿವಾರಪಟ್ಟಣ, ಮಳವಳ್ಳಿ, ಮೈಸೂರು, ಕಡೆಗೆ ಮದರಾಸು ಹೀಗೆ ನಾನಾ ಕಡೆಗಳಲ್ಲಿ ತಮ್ಮ ಬಂಧುಗಳ ನೆರವಿನಿಂದ ವಿದ್ಯಾಭ್ಯಾಸ ಮಾಡಿ ಎಂ.ಎ ಪದವಿ ಗಳಿಸಿದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 123ನೇ ಜನ್ಮದಿನದ ಸವಿನೆನಪುಗಳೊಂದಿಗೆ

ಮಾಸ್ತಿ ವೆಂಕಟೇಶ ಅಯ್ಯಂಗಾರರು (ಜೂನ್ ೬ ೧೮೯೧-ಜೂನ್ ೬ ೧೯೮೬)-Born: June 6, 1891-Died: June 6, 1986)
ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ
ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು. ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಜೂನ್ ೬ ೧೮೯೧ ರಲ್ಲಿ ಜನಿಸಿದರು. ಮೆಟ್ರಿಕ್ಯುಲೇಷನ್(೧೯೦೭), ಎಫ್.ಎ (೧೯೦೯), ಬಿ.ಎ (ಮದರಾಸು ವಿಶ್ವವಿದ್ಯಾಲಯ ೧೯೧೨), ಮೈಸೂರು ಸಿವಿಲ್ ಸರ್ವಿಸ್ (೧೯೧೩), ಎಂ.ಎ (ಮದರಾಸು)

ಜೀವನ
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಹಳ್ಳಿಯಲ್ಲಿ ೧೮೯೧ರ ಜೂನ್ ೬ರಂದು ಹುಟ್ಟಿದರು. ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಬಡತನವಿತ್ತು. ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ಕುಟುಂಬ ಅವರ ಪೂರ್ವಿಕರದು. ಮಾಸ್ತಿ ವೆಂಕಟೇಶ ಅಯ್ಯಂಗಾ ರ್ "ಪೆರಿಯಾತ್" ಎಂದರೆ ದೊಡ್ಡ ಮನೆಯವರು. ಅವರ ವಿದ್ಯಾಭ್ಯಾಸ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು. ಅವರ ಹಿರಿಯರು ಬಹು ಜನಕ್ಕೆ ಅನ್ನ ಹಾಕಿ ಹೆಸರು ಗಳಿಸಿದ್ದರಾದರೂ ಅವರು ವಾರದ ಮನೆಗಳಲ್ಲಿ ಊಟಮಾಡಿ ವಿದ್ಯಾಭ್ಯಾಸ ಮಾಡಬೇಕಾಯಿತು. ಹೊಂಗೇನಳ್ಳಿ, ಯಲಂದೂರು, ಶಿವಾರಪಟ್ಟಣ, ಮಳವಳ್ಳಿ, ಮೈಸೂರು, ಕಡೆಗೆ ಮದರಾಸು ಹೀಗೆ ನಾನಾ ಕಡೆಗಳಲ್ಲಿ ತಮ್ಮ ಬಂಧುಗಳ ನೆರವಿನಿಂದ ವಿದ್ಯಾಭ್ಯಾಸ ಮಾಡಿ ಎಂ.ಎ ಪದವಿ ಗಳಿಸಿದರು. ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಮಾಸ್ತಿ ಯಾವ ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ವನ್ನು ಬೇರೆಯವರಿಗೆ ಬಿಟ್ಟುಕೊಡಲಿಲ್ಲ. ಮದ್ರಾಸಿನಲ್ಲಿ ಇಂಗ್ಲೀಷ್ ಎಂ.ಎ ಮಾಡಿಕೊಂಡು ಚಿನ್ನದ ಪದಕ ಗಳಿಸಿದ ಮಾಸ್ತಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು ಒಂದೂವರೆ ತಿಂಗಳು ಉಪಾಧ್ಯಾಯರಾಗಿದ್ದು ಬೆಂಗಳೂರಿಗೆ ಬಂದು ಸಿವಿಲ್ ಪರೀಕ್ಷೆಗೆ ಕುಳಿತು ಅಲ್ಲಿಯೂ ಪ್ರಥಮರಾಗಿ ತೇರ್ಗಡೆಯಾದರು. ಸರ್ಕಾರದಲ್ಲಿ ಅಸಿಸ್ಟೆಂಟ್ ಕಮೀಶನರಾಗಿ ಕೆಲಸಕ್ಕೆ ಸೇರಿ ಸಮರ್ಪಕವಾಗಿ ಕೆಲಸ ನಿರ್ವಹಿಸಿದರು. ಸಾಹಿತ್ಯ ರಚನೆ ಅವರ ಪ್ರವೃತ್ತಿಯಾಗಿ ಬೆಳೆಯಿತು.

 ವಿಶ್ವವಿದ್ಯಾಲಯ ೧೯೧೪) ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ, ೧೯೧೪ ರಲ್ಲಿ ಮೈಸೂರು ಸರ್ಕಾರದಲ್ಲಿ ಅಸಿಸ್ಟೆಂಟ್ ಕಮಿಷನರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ೧೯೧೪ ರಿಂದ ೧೯೪೩ ರವರೆಗೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾದರು. ೧೯೨೦ ರಲ್ಲಿ ಅವರ ಮೊದಲ ಪುಸ್ತಕ ಕೆಲವು ಸಣ್ಣ ಕಥೆಗಳು ಪ್ರಕಟಗೊಂಡಿತು. ಸಣ್ಣಕತೆ, ನೀಳ್ಗತೆ, ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ, ಸಂಪಾದನೆ, ಅನುವಾದ - ಹೀಗೆ ಕನ್ನಡ ಸಾಹಿತ್ಯದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ.

೧೯೮೩ ರಲ್ಲಿ ಚಿಕವೀರ ರಾಜೇಂದ್ರ ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡ ಮಾಸ್ತಿಯವರು ಕನ್ನಡಕ್ಕೆ ನಾಲ್ಕನೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು. ಜೀವನ ಪರ್ಯಂತ ಕನ್ನಡ ಸೇವೆಯನ್ನು ಮಾಡಿದ ಮಾಸ್ತಿಯವರು ಜೂನ್ ೬ ೧೯೮೬ ರಂದು ನಿಧನ ಹೊಂದಿದರು.

ಸಾಹಿತ್ಯ
೧೯೧೦ ರಲ್ಲಿ ಬರೆದ ರಂಗನ ಮದುವೆ ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ 'ಮಾತುಗಾರ ರಾಮಣ್ಣ' ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ ೧೨೩. ಇದರಲ್ಲಿ ಸಣ್ಣಕತೆಗಳು, ಕಾದಂಬರಿಗಳು, ನಾಟಕಗಳು, ವಿಮರ್ಶೆಗಳು, ಪ್ರಬಂಧಗಳು, ಧಾರ್ಮಿಕ ಕೃತಿಗಳು, ಅನುವಾದ, "ಜೀವನ" ಎಂಬ ಅವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಲೇಖನಗಳು, ಕವಿತೆಗಳ ಸಂಗ್ರಹ, ಕಾವ್ಯ ಸೇರಿವೆ.
೨೦ನೆಯ ಶತಮಾನದ ಆರಂಭದ ಕಾಲ. ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರಲಿಲ್ಲ. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯದಲ್ಲಿ ಗಮನಾರ್ಹ ಕೆಲಸವಾಗಬೇಕಾಗಿದ್ದ ಕಾಲದಲ್ಲಿ ಮಾಸ್ತಿ ಸಾಹಿತ್ಯ ರಚನೆಯ ಕೆಲಸವನ್ನು ಕೈಗೊಂಡರು. ಸಣ್ಣ ಕತೆಗಳ ರಚನೆ ಅವರು ಪ್ರಧಾನವಾಗಿ ಆರಿಸಿಕೊಂಡ ಸಾಹಿತ್ಯ ಪ್ರಕಾರ. ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ಮಾಸ್ತಿ ನೂರಾರು ಸಣ್ಣ ಕತೆಗಳನ್ನು ಬರೆದರು. ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿದರು. ಅವರ ಒಂದು ಸಣ್ಣಕಥೆಯನ್ನು ರಾಜಾಜಿಯವರು ತಮಿಳಿಗೆ ಅನುವಾದಿಸಿದರು. ಇಂಗ್ಲೀಷ್ ಹಾಗೂ ಇತರ ಭಾರತೀಯ ಭಾಷೆಗಳಿಗೆ ಮಾಸ್ತಿ ಅವರ ಸಣ್ಣ ಕತೆಗಳು ಅನುವಾದಗೊಂಡಿವೆ. ದೂರದರ್ಶನದಲ್ಲಿ ಕೆಲವು ಕತೆಗಳು ಅಭಿನಯಿಸಲ್ಪಟ್ಟು ಪ್ರಸಾರವಾಗಿವೆ. ಕಥೆ ಹೇಳುವುದರಲ್ಲಿ ಮಾಸ್ತಿ ಎತ್ತಿದ ಕೈ. ಅವರ ಕಥೆಗಳನ್ನು ಓದುತ್ತಿದ್ದರೆ ಅವು ಕಣ್ಣಿಗೆ ಕಟ್ಟಿದಂತಿರುತ್ತವೆ. "ಸುಬ್ಬಣ್ಣ" ಅವರ ಒಂದು ಖ್ಯಾತ ನೀಳ್ಗತೆ. ಅಪಾರ ಮಾನವೀಯ ಅಂತಃಕರಣವನ್ನು ಕತೆಯಲ್ಲಿ ತುಳುಕಿಸಿದ ಅವರು ಕಥೆಗಳ ರಚನೆಗೆ ಬಳಸಿದ ತಂತ್ರ ಅಪರೂಪದ್ದಾಗಿದೆ. ಸಣ್ಣ ಕಥೆಗಳ ಜನಕರೆಂದೇ ಅವರಿಗೆ ಕರೆಯುತ್ತಿದ್ದ ರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಅವರ ಕಥೆಗಳ ಸಂಕಲನಗಳಿಗೆ ಲಭಿಸಿತು. ಕಥೆ ಹೇಳುವುದು ಒಂದು ಪುಣ್ಯದ ಕೆಲಸವೆಂದು ಅವರು ಭಾವಿಸಿದ್ದರು.
ಮಾಸ್ತಿ ಕಥೆಗಳನ್ನು ಬರೆದಂತೆಯೇ ಕಾದಂಬರಿ, ಕವಿತೆ, ಪ್ರಬಂಧ ಇವುಗಳನ್ನೂ ಬರೆದರು, ನಾಟಕಗಳನ್ನೂ ರಚಿಸಿದರು. ಅವರ ಎಲ್ಲ ಕೃತಿಗಳಲ್ಲೂ ಕುಶಲತೆ, ಸೌಮ್ಯತೆ, ಜೀವನ ದರ್ಶನಗಳನ್ನು ಸ್ಪಷ್ಟವಾಗಿ ಕಾಣಬಹುದು. "ಭಾರತತೀರ್ಥ", "ಆದಿಕವಿ ವಾಲ್ಮೀಕಿ" ಇವು ಭಾರತ ರಾಮಾಯಣಗಳನ್ನು ಕುರಿತು ಬರೆದಿರುವ ಗ್ರಂಥಗಳಾದರೆ "ಶ್ರೀರಾಮ ಪಟ್ಟಾಭಿಷೇಕ" ಅವರ ಒಂದು ಕಾವ್ಯ. ರವೀಂದ್ರನಾಥ ಠಾಕೂರ್, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನೂ, ಪುರಂದರದಾಸ, ಕನಕದಾಸ, ಅನಾರ್ಕಳಿ, ತಿರುಪಾಣಿ, ಶಿವಾಜಿ ಮೊದಲಾದ ನಾಟಕಗಳನ್ನೂ, ಷೇಕ್ಸ್‌ಪಿಯರನ ನಾಟಕಗಳ ಅನುವಾದಗಳನ್ನೂ ಮಾಸ್ತಿ ಪ್ರಕಟಿಸಿದ್ದಾರೆ.
ಮಾಸ್ತಿ ಬರೆದ ಕಾದಂಬರಿಗಳು ಎರಡು. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ಚಿಕವೀರ ರಾಜೇಂದ್ರ - ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು, ಮತ್ತೊಂದು "ಚನ್ನಬಸವನಾಯಕ".
"ಭಾವ" - ಮಾಸ್ತಿ ಅವರ ಆತ್ಮಕಥೆ ಇರುವ ಮೂರು ಸಂಪುಟಗಳ ಗ್ರಂಥ.

ಗೌರವಗಳು
ಮಾಸ್ತಿ ಅವರಿಗೆ ಸಂದ ಗೌರವ, ಪ್ರಶಸ್ತಿಗಳು ಅಪಾರ. "ಮಾಸ್ತಿ ಕನ್ನಡದ ಆಸ್ತಿ" ಎಂಬ ಹೇಳಿಕೆ ಒಂದು ನಾಣ್ಣುಡಿಯಾಗಿದೆ.
ಎಲ್ಲ ಸಾಹಿತಿಗಳಿಗೂ ಅವರು "ಅಣ್ಣ ಮಾಸ್ತಿ"ಯಾಗಿದ್ದರು. ವರಕವಿ ದ ರಾ ಬೇಂದ್ರೆ ಮಾಸ್ತಿಯವರನ್ನು ಹಿರಿಯಣ್ಣ ಎಂದು ಗೌರವಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಾಸ್ತಿ ಸೇವೆ ಸಲ್ಲಿಸಿದರು.
೧೯೨೯ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.
ಮೈಸೂರು ಮಹಾರಾಜರು "ರಾಜಸೇವಾ ಪ್ರಸಕ್ತ" ಎಂದು ಗೌರವಿಸಿದ್ದರು.
೧೯೭೨ರಲ್ಲಿ "ಶ್ರೀನಿವಾಸ" ಎಂಬ ಅವರ ಅಭಿನಂದನಾ ಗ್ರಂಥ ಪ್ರಕಟವಾಯಿತು.
ಮಾಸ್ತಿ ಕನ್ನಡಿಗರಿಗೆ ಒಂದು ಆದರ್ಶ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರಾದರು. ಜಿ ಪಿ ರಾಜರತ್ನಂ, ದ ರಾ ಬೇಂದ್ರೆಯಂತಹವರಿಗೆ ಅವರು ಆದರ್ಶರಾಗಿದ್ದರು.

ಮುಖ್ಯ ಕೃತಿಗಳು
ಸಣ್ಣ ಕತೆಗಳ ಸಂಗ್ರಹ
ರಂಗನ ಮದುವೆ
ಮಾತುಗಾರ ರಾಮಣ್ಣ

ನೀಳ್ಗತೆ
ಸುಬ್ಬಣ್ಣ (೧೯೨೮)
,,,* ಶೇಷಮ್ಮ(೧೯೭೬)

ಕಾವ್ಯ ಸಂಕಲನಗಳು
ಬಿನ್ನಹ(೧೯೨೨)
ಅರುಣ(೧೯೨೪)
ತಾವರೆ(೧೯೩೦)
ಸಂಕ್ರಾಂತಿ(೧೯೬೯)
ನವರಾತ್ರಿ(೫ ಭಾಗ ೧೯೪೪-೧೯೫೩)
ಜೀವನ ಚರಿತ್ರೆ
ರವೀಂದ್ರನಾಥ ಠಾಕೂರ(೧೯೩೫)
ಶ್ರೀ ರಾಮಕೃಷ್ಣ(೧೯೩೬)
ಪ್ರಬಂಧ
ಕನ್ನಡದ ಸೇವೆ(೧೯೩೦)
ವಿಮರ್ಶೆ (೪ ಸಂಪುಟ ೧೯೨೮-೧೯೩೯)
ಜನತೆಯ ಸಂಸ್ಕೃತಿ(೧೯೩೧)
ಜನಪದ ಸಾಹಿತ್ಯ(೧೯೩೭)
ಆರಂಭದ ಆಂಗ್ಲ ಸಾಹಿತ್ಯ(೧೯೭೯)
ನಾಟಕ
ಶಾಂತಾ(೧೯೨೩)
ತಾಳೀಕೋಟೆ(೧೯೨೯)
ಶಿವಛತ್ರಪತಿ(೧೯೩೨)
ಯಶೋಧರಾ(೧೯೩೩)
ಕಾಕನಕೋಟೆ(೧೯೩೮)
ಕಾದಂಬರಿ
ಚೆನ್ನಬಸವ ನಾಯಕ(೧೯೫೦)
ಚಿಕವೀರ ರಾಜೇಂದ್ರ(೧೯೫೬)