Translate in your Language

Tuesday, June 23, 2015

ಚಿತ್ರಸಂಗೀತದ ಮೈಲಿಗಲ್ಲು ಹಂಸಲೇಖ

‘ಹಂಸಲೇಖ’ರು ಕನ್ನಡ ಚಿತ್ರರಂಗದ ಮಹಾನ್ ಪ್ರತಿಭೆ.  ಹಂಸಲೇಖ ಅವರು  ಜೂನ್ 23, 1951ರ ವರ್ಷದಲ್ಲಿ ಗೋವಿಂದರಾಜು ಗಂಗರಾಜುವಾಗಿ ಮೈಸೂರಿನಲ್ಲಿ  ಜನಿಸಿದರು. 

‘ತ್ರಿವೇಣಿ’ ಚಿತ್ರದಲ್ಲಿ ಬರವಣಿಗೆಯ ಮೂಲಕ ಚಿತ್ರರಂಗಕ್ಕೆ ಬಂದ ಹಂಸಲೇಖರು ಮುಂದೆ ಒಂದೆರಡು ಪುಟ್ಟ ಕೆಲಸಗಳನ್ನು ಅಲ್ಲಿ ಇಲ್ಲಿ ಮಾಡಿದ್ದರೂ ಅವರು ಪ್ರಖ್ಯಾತರಾದದ್ದು ‘ಪ್ರೇಮಲೋಕ’ ಚಿತ್ರದಲ್ಲಿ. 'ನೀನಾ ಭಗವಂತ, ಜಗಕುಪಕರಿಸಿ ನನಗಪಕರಿಸೋ ಜಗದೋದ್ಧಾರಕ ನೀನೇನಾ' ಎಂಬಂತಹ ಸಾಹಿತ್ಯದಿಂದ ಅಲ್ಲಲ್ಲಿ ಮಿಂಚಿದ್ದವರು.  ಕನ್ನಡದ ಪ್ರಸಿದ್ಧ ನಿರ್ಮಾಪಕರಾದ ಎನ್. ವೀರಸ್ವಾಮಿಯವರ ಪುತ್ರ ಚಿನಕುರಳಿ ವ್ಯಕ್ತಿತ್ವದ ರವಿಚಂದ್ರನ್ ಆಗ ತಾನೇ ಚಿತ್ರರಂಗದಲ್ಲಿ ಹತ್ತು ಹಲವು ಪ್ರಯತ್ನಗಳನ್ನು ನಡೆಸಿದ್ದರು.  ಇಂತಹ ಪ್ರಯತ್ನದಲ್ಲಿ ಅವರಿಗೆ ‘ಗ್ರೀಸ್ 2’ ಪ್ರೇರಣೆಯಿಂದ  ಕನ್ನಡದಲ್ಲೊಂದು ಹಾಡುಗಳ ಮೂಲಕ ನಡೆಯುವ ಪ್ರೇಮಕತೆಯನ್ನು ಹೇಳುವ ಆಶಯದಲ್ಲಿದ್ದಾಗ ‘ಹಂಸಲೇಖ’ರು ಅವರಿಗೆ ಜೊತೆಯಾದರು.  'ಯಾರೇ ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ ಏಕೆ ನಗುವೆ' ಎಂಬ ಹಾಡಿನ ಧ್ವನಿಮುದ್ರಣದ ಸಮಯದಲ್ಲಿ ಅಲ್ಲಿದ್ದ ಹಂಸಲೇಖರು ಆ ಹಾಡಿನ ವಿಸ್ತರಣೆಯಾದ 'ಯಾರೇ, ಯಾರೇ..' ಎಂಬ ಸಲಹೆ ಕೊಟ್ಟಾಗ ಅವರು ರವಿಚಂದ್ರನ್ ಅವರಿಗೆ ಪ್ರಿಯರಾಗಿಬಿಟ್ಟರು.

Thursday, June 18, 2015

ಸಿದ್ಧಯ್ಯ ಪುರಾಣಿಕ ಅವರ 98ನೇ ಹುಟ್ಟಿದ ಹಬ್ಬದ ಸವಿ ನೆನಪಿನಲ್ಲಿ


  • ಹೊತ್ತಿತೋ ಹೊತ್ತಿತೋ ಕನ್ನಡದ ದೀಪ...
  • ಹಣ್ಣಿನಲಿ ಬೆಣ್ಣೆಯಲಿ ಕೆನೆ ಮೊಸರು ಹಾಲಿನಲಿ...
  • ಪ್ರಕೃತಿಯೇ ಗುರು ಗಗನ ಲಿಂಗವು...
  • ಓದಿ ಬ್ರಾಹ್ಮಣನಾಗು ಕಾದು ಕ್ಷತ್ರಿಯಾನಾಗು...   
               ಇವು ಸಿದ್ಧಯ್ಯ ಪುರಾಣಿಕ ಅವರ ಜನಪ್ರಿಯ ರಚನೆಗಳು
ಸಿದ್ಧಯ್ಯ ಪುರಾಣಿಕರು ಜನಿಸಿದ್ದು 18ನೇ ಜೂನ್ 1918 ರಲ್ಲಿ.  ಕೊಪ್ಪಳ  ಜಿಲ್ಲೆಯ ಯಲಬುರುಗಿ ತಾಲ್ಲೂಕಿನ ದ್ಯಾಂಪುರ ಪುರಾಣಿಕರು ಹುಟ್ಟಿದ ಊರು.  ಶ್ರೀ ಪಂಡಿತ ಕಲ್ಲಿನಾಥ ಶಾಸ್ತ್ರೀ ಪುರಾಣಿಕ ಹಾಗೂ ಶ್ರೀಮತಿ ದಾನಮ್ಮ ಪುರಾಣಿಕರಿಗೆ ಜನಿಸಿದ ಐದು ಮಕ್ಕಳಲ್ಲಿ ಹಿರಿಯವರು ಡಾ. ಸಿದ್ಧಯ್ಯ ಪುರಾಣಿಕರು.

Tuesday, June 16, 2015

ಡಾ. ಹೆಚ್.ನರಸಿಂಹಯ್ಯಅವರ 95ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

H. Narasimhaiah (ಡಾ. ಹೆಚ್.ನರಸಿಂಹಯ್ಯ) physicist, educator, freedom fighter and rationalist
Born in Hossur on 6th June 1921 (೬ನೆ ಜೂನ್ ೧೯೨೧ ) , a village near Gauribidanur in Karnataka, India. His parents were poor, illiterate and belonged to a disadvantaged caste. Upon completion of elementary education, he left for Bangalore where he joined the National High School, Basavanagudi, in 1935. He received his B.Sc.(Honors) and Master's degree in Physics with first class from Central College of Bangalore (1946). The same year Narasimhaiah started his academic career as a lecturer in National College, Bangalore.

He taught from 1946 until 1957 when he proceeded to Columbus, Ohio to get his PhD degree in Nuclear physics from Ohio State University(1960).  ನರಸಿಂಹಯ್ಯ ,ಅಮೇರಿಕಾದಲ್ಲಿ ಇದ್ದ ನಾಲ್ಕೂ ವರ್ಷಗಳು ಪ್ರತಿನಿತ್ಯ ಬೆಳಗ್ಗೆ, ಮಧ್ಯಾನ ತಿಂದದ್ದು ಬರಿ ಉಪ್ಪಿಟ್ಟು. ಒಂದೆಡೆ  ಆವರೆ  ಹೇಳುವಂತೆ ಪ್ರಪಂಚದಲ್ಲಿಯೇ ವಿಶ್ವ ದಾಖಲೆ ಮಾಡಿದ್ದೇನೆ ಎಂದು ಆವರೆ ಹೇಳುತ್ತಾರೆ .

Wednesday, June 10, 2015

ಡಿ ಕೆ ರವಿ ಅವರ ಮೂವತ್ತಾರನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ !

Sri D K Ravi with his Pet
ಡಿ. ಕೆ. ರವಿ (ಜನನ: ಜೂನ್ 10, 1979 - ನಿಧನ: ಮಾರ್ಚ್ 16 2015) ಕರ್ನಾಟಕ ಕಂಡ ನಿಷ್ಟಾವಂತ ಐ.ಎ.ಎಸ್ ಅಧಿಕಾರಿ. ಅಲ್ಪಾವಧಿಯಲ್ಲಿಏ ರಾಜ್ಯದ ಸರಿ ಸುಮಾರು ಎಲ್ಲಾ ಜಿಲ್ಲೆ-ತಾಲೂಕು-ಗ್ರಾಮಗಳಲ್ಲಿಯ ಅಷ್ಟೇ ಏಕೆ ದೇಶದಾದ್ಯಂತ ಸಂಚಲನ ಮೂಡಿಸಿದ ಅದ್ಯಮ್ಮ್ಯ ಚೇತನ ಡಿ ಕೆ ರವಿ.
ಇಂದು ಅವರು ಬದುಕಿದ್ದಿದ್ದರೆ ರಾಜ್ಯಾದಂತ ಕನ್ನಡಿಗರು ಡಿ ಕೆ ರವಿ ಅವರ  36ನೇ ಹುಟ್ಟುಹಬ್ಬವನ್ನು ಅದ್ದೂರಿಯಿಂದ ಆಚರಿಸುತ್ತಿದ್ದರು ! 

ಈ ನಾಡಿನ ಪಾಪಿಗಳು-ಬ್ರಷ್ಟರು-ಧನಪಿಶಾಚಿಗಳು ಅವರ ನಿಷ್ಟಾವಂತ ಸೇವೆಯಿಂದ ಎಲ್ಲಿ ತಮ್ಮ ಬುಡಕ್ಕೆ ಬೆಂಕಿ ಬೀಳುತ್ತದೋ ಎಂದು ಅವರನ್ನು ನಿಗೂಡವಾಗಿ ಮಾರ್ಚ್ ೧೬, ೨೦೧೫ ರಂದು ಸಾಯಿಸಿದರು.ನಮ್ಮ ರಾಜ್ಯ ಸರ್ಕಾರವೂ ಕೊಲೆಗಾರರ ಬೆಂಬಲಕ್ಕೆ ನಿಂತಂತೆ ಸಾಕ್ಷಿ ನಾಶ ವಾಗುವವರೆಗೂ ಸುಮ್ಮನಿದ್ದು ನಂತರ ರಾಜ್ಯದ ಜನತೆಯ ಒತ್ತಡಕ್ಕೆ ಮಣಿದು ಅವರ ಸಾವಿನ ತನಿಕೆಯನ್ನು ಸಿ.ಬಿ.ಐ ಗೆ ಒಪ್ಪಿಸಿರುವುದು ಅನುಮಾನಾಸ್ಪದ ವಿಷಯ ! 
ಸಿ.ಬಿ.ಐ ನ  ಪ್ರಾಮಾಣಿಕ ತನಿಕೆ ಯಾಗಲಿ,  ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ನಾಡಿನ ಪ್ರಜೆಗಳೆಲ್ಲರ ಕಳಕಳಿ !

ಡಿ ಕೆ ರವಿ ಕುರಿತ ಇತರ ಲೇಖನಗಳು

Tuesday, June 9, 2015

ಡಿ.ಕೆ ರವಿಯವರ Inspirational Speech at Swamy Vivekananda School !

ನಮ್ಮ ರವಿ ಅಸ್ತಂಗತವಾದಾಗ ! ಡಿ.ಕೆ ರವಿ ಅವರ ಸಾವಿನ ಆಘಾತದ ಸುದ್ದಿ !

ಜನ ಮೆಚ್ಚಿದ ಡಿ.ಸಿ !

 ಡಿ.ಕೆ ರವಿಯವರನ್ನು ಮೆಚ್ಚದ ಕನ್ನಡಿಗನಿಲ್ಲ ! !

ಹೊಟ್ಟೆಗೆ ಏನು ತಿನ್ನುತ್ತಾರೆ...?

ಹೀಗೊಂದು ಪ್ರಶ್ನೆ ಕಟ್ಟ ಕಡೆಗೆ ಉಳಿಯುತ್ತದೆ, ಡಿ ಕೆ ರವಿಯವರ ಪ್ರಕರಣದಲ್ಲಿ ಇನ್ನಿಲ್ಲದ ಸುಳ್ಳು ಬರೆದ ಪ್ರಜಾವಾಣಿ, ಕರ್ನಾಟಕದ ಜನತೆಯ ಸಂಪೂರ್ಣ ವಿಶ್ವಾಸ ಕಳೆದುಕೊಂಡಿತು...!
೪೪ ಬಾರಿ ಡಿ ಕೆ ರವಿಯವರು ಒಬ್ಬ ಮಹಿಳಾ ಅಧಿಕಾರಿಗೆ ಕರೆ ಮಾಡಿದ್ದರಂತೆ...! ಹೀಗೆ ಹೇಳಿತ್ತು ಪ್ರಜಾವಾಣಿ....! ಯಾವಾಗ ಸಿ ಬಿ ಐ ಸತ್ಯ ಹೊರಹಾಕಲು ಶುರುವಿಟ್ಟುಕೊಂಡಿತೋ ,ಇವರ ಹಣೆಬರಹ ಒಂದೋಂದಾಗೆ ಬರಲು ಶುರುವಾಗಿದೆ.
ಈಗ ರಾ.ಮಠದ ಶ್ರೀಗಳ ವಿರುದ್ದ ವರದಿಯ ಸರದಿ.
ನೀರಿಗೆ ಇಳಿದ ಮೇಲೆ ಛಳಿಯೇನು ಮಳೆಯೇನು..? ವಿಶ್ವಾಸಾರ್ಹತೆ ಮಣ್ಣುಪಾಲಾದ ಮೇಲೆ ಗೌರವದ ಹಂಗೆನು...? ಹಾಗೊಂದು ಮನಸ್ತಿತಿಗೆ ಪ್ರಜಾವಾಣಿ ಬಂದು ನಿಂತಿದೆ...! ಇನ್ನಿಲ್ಲದ ಅಪಸವ್ಯಗಳ ಬರೆಯುತ್ತಿದೆ, ಸತ್ಯದ ತಲೆ ಮೇಲೆಯೇ ಪ್ರಹಾರ...!
ನಡೆದಿದ್ದು ಇಷ್ಟು ...
ರಾಮಚಂದ್ರಾಪುರ ಮಠದ ಶ್ರೀಗಳು , ಕೊಲ್ಲೂರಿನ ಮೂಕಾಂಬಿಕೆಗೆ ಸಲ್ಲಿಸುವ ಪೂಜೆಗೆ ತಡೆ ಒಡ್ಡುವಂತೆ ಶೃಂಗೇರಿ ಸ್ವಾಮಿಗಳು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು, ಸಂವಿಧಾನದ ಆಶಯದಂತೆ ನೆಡೆಯಬೇಕಾದ ಸರ್ಕಾರ ,ಎಲ್ಲಾ ಕಾನೂನಾತ್ಮಕ ಅಂಶಗಳ ಬದಿಗೊತ್ತಿ, ತಡೆ ನೀಡಿತ್ತು, ಆದರೆ ಇದನ್ನು ಪ್ರಶ್ನಿಸಿ ಕೊಲ್ಲೂರಿನ ಅರ್ಚಕ ಉಡುಪಿ ನ್ಯಾಯಲಯದಲ್ಲಿ, ಸರ್ಕಾರಿ ಆಜ್ನೆಗೆ ತಡೆ ತಂದರೆ, ಅದೇ ಸಮಯದಲ್ಲಿ ಕಾಂತರಾಜ್ ಎಂಬುವವರು ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ, ಮಠದ ಅಧಿಕೃತ ವ್ಯಕ್ತಿ ಅಲ್ಲ ಎಂಬ ಕಾರಣಕ್ಕೆ ವಜಾಗೊಂಡಿತು. ಸ್ವತಃ ಸ್ವಾಮೀಜಿಯವರು, ಅಥವಾ ಅಧಿಕೃತ ವ್ಯಕ್ತಿಗಳು ಅರ್ಜಿ ಸಲ್ಲಿಸಿದರೆ ಪರಿಶೀಲಿಸಬಹುದು ಎಂದು ಹೇಳಿತು.
ಆದರೇ ಇವನ್ನೆಲ್ಲಾ ಮುಚ್ಚಿಟ್ಟು ಪ್ರಜಾವಾಣಿ ತನ್ನದೇ ಹೊಸಕತೆ ಬರೆದಿದೆ....! ಡಿ ಕೆ ರವಿಯವರ ಬಗ್ಗೆ ಬರದಂತೆ....!
ಅರ್ಧ ಶತಮಾನ ಇತಿಹಾಸ ಇರುವ ಪತ್ರಿಕೆಯ ಗೌರವವನ್ನು ನಾಮಾರ್ಧಗೊಳಿಸಿದ್ದಾರೆ...!
-ಪ್ರಶಾಂತ್ ಹೆಗಡೆ

ರಾಜಧರ್ಮ ಪಾಲಿಸಿ !

ಹೀಗೊಂದು ಮಾತು ಹೇಳಿದ್ದು ಮಾಜಿ ಪ್ರಧಾನಿ, ಭಾರತದ ಅಸಲಿ ಭಾರತರತ್ನ ವಾಜಪೇಯಿಯವರು.

ಗೋಧ್ರಾ ಹತ್ಯಾಕಾಂಡ ನೆಡೆಯುತ್ತಿರುತ್ತದೆ ಬೇಕಾದರೆ, ಅಂದಿನ ಸಿ ಎಂ ಮೋದಿಯವರಿಗೆ ಹೇಳಿದ ಮಾತು, ಅವರ ಮಾತನ್ನು ಅಕ್ಷರಶಃ ಪಾಲಿಸಿದ್ದಕ್ಕೆ, ಇಂದು ಮೊದಿಯವರು ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದಾರೆ ಎಂದರೆ, ಉತ್ಪ್ರೇಕ್ಷೆ ಅಲ್ಲ .
*********************
ಸಿದ್ದರಾಮಯ್ಯ ಸರ್ಕಾರ ಎತ್ತಸಾಗುತ್ತಿದೆ....?
ಮೊದಲು ಎಡವಿದ್ದು ಸಚಿವ ಸಂಪುಟ ರಚನೆ ಆಗಬೇಕಾದರೇ...! ಮೊದಲು ಶುರುವಾಗಿದ್ದು ಆಂತರಿಕ ಎದುರಾಳಿಗಳ ಬಗ್ಗು ಬಡಿಯುವ ಯತ್ನದಿಂದ, ಕಾಗೋಡು ತಿಮ್ಮಪ್ಪರಂತಃ ಶುದ್ದ ಚಾರಿತ್ರ್ಯದ ೮೩ರ ಯುವ ಉತ್ಸಾಹದ ಹಿರಿಯರ ಕಡಗಣನೆಯಿಂದ ಶುರುವಾದರೆ, ಪರಮೇಶ್ವರ್ ಪರಿಸ್ತಿತಿ, ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬತಾಯಿತು, ಒಟ್ಟಿನಲ್ಲಿ ಕರ್ನಾಟಕದ ಅಭಿವೃದ್ಧಯೊಂದಿಗೆ ,ಸಿದ್ಧರಾಮಯ್ಯರ ವರ್ಚಸ್ಸು ಕೂಡ ಅಧೋಗತಿಗೆ ಹೊಗಿದೆ ಎಂದು ಹೇಳಲು ಯಾವ ರಾಜಕೀಯ ಪಂಡಿತರ ಅವಶ್ಯವಿಲ್ಲ.
ಬೇಕೆ ತುಷ್ಟೀಕರಣ ನೀತಿ...?
ಪ್ರಾಯಶಃ ಸಿದ್ದರಾಮಯ್ಯರ ರಾಜಕೀಯ ಸಲಹೆಗಾರರ ಯಡವಟ್ಟುತನಗಳೇ , ಇಂದು ಕಾಂಗ್ರೆಸ್ ಕಾರ್ಯಕರ್ತರು ಮುಖಮುಚ್ಚಿಕೊಂಡು ಓಡಾಡುವಂತೆ ಮಾಡುತ್ತಿದೆ, ಅಲ್ಪಸಂಖ್ಯಾತರ ಓಟುಗಳೇ ನಮಗೆ ಆಧಾರ, ಎಂಬ ಶುದ್ದ ಮೂರ್ಖತನದ ಆಲೋಚನೆಯೆ , ಇಂದು ಪಿ ಎಫ್ ಐ ,ಕೆ ಎಫ್ ಡಿ ಎಂಬಂತಹ ಸಂಘಟನೆಗಳ ವಿರುದ್ಧ ಇರುವ ಪ್ರಕರಣಗಳ ಹಿಂತೆಗತಕ್ಕೆ ಕಾರಣ, ಇದರ ಪರಿಣಾಮವೇನಾಗುತ್ತದೆ ಎಂಬುದರ ಕಲ್ಪನೆಯೂ ಇಲ್ಲ, ಇದರಿಂದ ಆಗುವುದಿಷ್ಟೇ, ಬಹುಸಂಖ್ಯಾತರ ಏಕೀಕರಣವಾಗುತ್ತದೆ, ಕಾಂಗ್ರೆಸ್ ಎಂಬುದು ಹಿಂದೂ ವಿರೋಧಿ ಪಕ್ಷ ಎಂಬ ಭಾವ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಮೂರು ಓಟು ಸೇರಿದರೆ,ಆರು ಓಟು ಕಳೆದಿರುತ್ತದೆ.
ಇನ್ನು ಡಿ ಕೆ ರವಿಯಂತಃ ದಕ್ಷ ಅಧಿಕಾರಿಗಳಿಗಳಿಗೆ ಒಂದೋ ಸಾಯುವ ಆಯ್ಕೆ ಇಲ್ಲವೇ ಅಮಾನತಿನ, ಅವಮಾನದ ಆಯ್ಕೆ , ಈಪರಿಯ ಹಿಂಸೆ ದಕ್ಷ ಅಧಿಕಾರಿಗಳು ತಮ್ಮ ಜೀವಮಾನವಿಡೀ ಕಂಡಿರಲಿಲ್ಲ ಸಾಧ್ಯವಿಲ್ಲ. ಅಂತಃ ಕೆಟ್ಟ ವ್ಯವಸ್ಥೆ
ಆಢಳಿತ ಹೀಗೆ ಮುಂದುವರೆದರೆ, ಸಿದ್ದರಾಮಯ್ಯ ಮುಂದಿನ "ಪಪ್ಪು " ಆಗುವುದರಲ್ಲಿ ಆಶ್ಚರ್ಯವಿಲ್ಲ. ದನಕಾಯಲು ಉಪಯೋಗವಿಲ್ಲದವರ ಬಳಿ ರಾಜಕೀಯ ಸಲಹೆ ತೆಗೆದುಕೊಂಡರೆ , ಇದಕ್ಕಿಂತ ಒಳ್ಳೆಯ ಆಢಳಿತ ನೀಡಲು ಸಾಧ್ಯವೇ...?
-ಪ್ರಶಾಂತ್ ಹೆಗಡೆ

ಜನರ ನೆನಪಿನ ಶಕ್ತಿ ತಾತ್ಕಾಲಿಕ ಎಂಬ ಅಸಡ್ಡೆಯೇ...?

ಇತ್ತೀಚೆಗೆ ಫಲದ ಎಂಬ ಎಂಬ ಕಂಪನಿಯ ಮೇಲೆ ಸಿ ಐ ಡಿ ಯ ಅಧಿಕಾರಿಗಳು ದಾಳಿ ನೆಡೆಸಿ ಅಮಾಯಕ ೩೪ ಮಕ್ಕಳನ್ನು ರಕ್ಷಿಸಿದ್ದರು, ಈ ಪ್ರಕರಣ ಈಗ ಬಹುತೇಕ ತಣ್ಣಗಾಗಿ ಹೋಗಿದೆ.
ಬಹಳ ನೋವಾಗುತ್ತದೆ, ಯಾವುದೋ ಅನಕ್ಷರಸ್ತ ಬಡ ಗ್ಯಾರೆಜ್ನವನು ಬಾಲ ಕಾರ್ಮಿಕರ ಕಾನೂನು ತಿಳಿಯದೇ ಬಾಲ ಕಾರ್ಮಿಕರ ಇಟ್ಟುಕೊಂಡಿದ್ದರೆ, ಆತನ ಇಡೀ ಸಂಸಾರವೇ ಬೀದಿಗೆ ಬರುವಂತೆ ಮಾಡುತ್ತದೆ ನಮ್ಮ ವ್ಯವಸ್ಥೆ, ಆದರೆ ಎಲ್ಲಾ ಕಾನೂನು ತಿಳಿದಿರುವ ಸೋ ಕಾಲ್ಡರ್ ಗಣ್ಯರು ಎನ್ನಿಸಿಕೊಂಡಿರುವವರು ಕಾನೂನಿಗೆ ಸವಾಲು ಎಸೆಯುವಂತೆ, ಬಾಲ ಕಾರ್ಮಿಕರ ನಿಯಮಿಸಿಕೊಂಡಿದ್ದರೆ , ಯಾವ ಸಂಘಟನೆಗಳಾಗಲಿ, ಮಕ್ಕಳ ಇಲಾಖೆಯಾಗಲಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಏಕೆ ಈ ತಾರತಮ್ಯ....? ಬಡಮಕ್ಖಳ ಜೀವನವೆಂದರೆ ಏಕೆ ಇಷ್ಟು ಅಸಡ್ಡೆ ..? ನ್ಯಾಯಕ್ಕಾಗಿ ಈ ಸಂಘಟನೆಗಳು ಹೋರಾಟ ಮಾಡಬೇಕೆಂದಿದ್ದರೆ ಮಾಧ್ಯಮಗಳಲ್ಲಿ "ಘಟನೆ" ವಿಜೃಂಭಿಸಲೇ ಬೇಕೆ...? ಇಲ್ಲದಿದ್ದರೆ ಇವರುಗಳ ಆತ್ಮ ,ಹೃದಯ ಕಲುಕುವುದೇ ಇಲ್ಲವೇ...?
ಪ್ರಾಯಶಃ ಈ ಕೇಸ್ ಮುಚ್ಚಿ ಹಾಕುವ ಹುನ್ನಾರ ನೆಡೆಯುತ್ತಿದೆ, ಬಲಿಷ್ಠರಿಗೆ ಕಾನೂನು ಅನ್ವಯವಾಗದು ಎಂಬ ಇರಾದೆ ಇರಬೇಕು, ಮೇಲಾಗಿ ಕೇಸ್ ಮುಚ್ಚಿಹಾಕಲು ಕೇಂದ್ರ ಸಚಿವರೊಬ್ವರ ಒತ್ತಡವಿದೆ ಎಂಬಂತಹ ಮಾತುಗಳು ತೆರೆಮರೆಯಲ್ಲಿ ಕಾಣಿಸಿಕೊಳ್ಳುತಿದೆ.
ಅದೇನೆ ಆಗಲಿ ,ಅದೆಂತಹ ವ್ಯಕ್ತಿಗಳ ಒತ್ತಡಗಳು ಜನ ಸಾಮಾನ್ಯರ ಹೋರಾಟದ ಇದಿರು ನಿಲ್ಲಲಾರದು, ಹಾಗಾಗಿ ಫೇಸ್ ಬುಕ್ ಅಂಗಳವನ್ನು "ಬಾಲ ಕಾರ್ಮಿಕರ " ರಕ್ಷಣೆಗಾಗಿ ಬಳಸೋಣ, ನಮ್ಮ ಕೂಗು ಕೇಂದ್ರದ ನಾಯಕರ ಕಿವಿ ಮುಟ್ಟಿಸೋಣ, ಇದಕ್ಕೆ ನಿಮ್ಮಲ್ಲರ ಸಹಾಕಾರ ಇದ್ದೆ ಇರುತ್ತದೆ ಎಂಬುದು ನನ್ನ ಅಚಲ ನಂಬಿಕೆ.
ಈ ಪ್ರಕರಣವನ್ನು ,ಮಾನ್ಯ ಪ್ರಧಾನಿಗಳ ಗಮನಕ್ಕೆ ತರುವುದಕ್ಕಾಗಿ, ನಮ್ಮ ಟೀಮ್ ಪಿಟಿಷನ್ ಒಂದನ್ನು ತಯಾರು ಮಾಡುತ್ತಿದ್ದಾರೆ , ಅದಕ್ಕೆ ತಾವೆಲ್ಲರೂ ಸಹಿ ಮಾಡುವ ಮೂಲಕ ಹಾಗೂ ಶೇರ್ ಮಾಡುವ ಮೂಲಕ ಬಾಲ ಕಾರ್ಮಿಕ ಮುಕ್ತ ಕರ್ನಾಟಕ್ಕೆ ಸಂಕಲ್ಪಿಸಿ.
ಇಂತಿ
ಪ್ರಶಾಂತ್ ಹೆಗಡೆ
ಆವಿನಹಳ್ಳಿ