Translate in your Language

Thursday, September 18, 2014

ಇವತ್ತು ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಇಬ್ಬರು ಕನ್ನಡ ದಿಗ್ಗಜರ ಹುಟ್ಟು ಹಬ್ಬದ ಶುಭಾಶಯಗಳು

ಅವರ 65ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ
(ಜನನ: ಸೆಪ್ಟೆಂಬರ್ 18,1950, 
ನಿಧನ: ಡಿಸೆಂಬರ್ 30,  2009)

ಅವರಿಗೆ 47ನೇ ಹುಟ್ಟುಹಬ್ಬದ ಶುಭಾಶಯಗಳು
(ಜನನ: ಸೆಪ್ಟೆಂಬರ್ 18,1968)

ನೂರೊಂದು ನೆನಪು ಎದೆಯಾಳದಿಂದ... ಎಂದು ತೆರೆಯ ಮೇಲೆ ಹಾಡುತ್ತ ಪ್ರೇಕ್ಷಕರನ್ನು ಭಾವುಕಗೊಳಿಸಿದ ನಟ ವಿಷ್ಣುವರ್ಧನ್ ಮತ್ತೆ ನೆನಪಾಗುತ್ತಿದ್ದಾರೆ.

ಹೌದು, ಇಂದು (ಸೆ.18) ಅವರ ಜನ್ಮದಿನ. ಅವರ ಅಭಿಮಾನಿಗಳಿಗೆ ಒಂದು ರೀತಿಯ ಹಬ್ಬದಂಥ ಸಂತೋಷ ತಂದರೆ, ಒಳಗೊಳಗೇ ಮತ್ತೆಲ್ಲೋ ತಮ್ಮ ನಾಯಕನನ್ನು ಕಳೆದುಕೊಂಡ ಸಂಕಟವೂ ಸುಳಿದಾಡುತ್ತದೆ.

ಇನ್ನೂರು ಚಿತ್ರಗಳಲ್ಲಿ ನಟಿಸಿ, ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿದ ಈ ನಟ ಇಂದು ಇದ್ದಿದ್ದರೆ ಕನ್ನಡ ಚಿತ್ರರಂಗದಲ್ಲಿ ಇನ್ನೊಂದಿಷ್ಟು ಚೆಂದನೆಯ ಚಿತ್ರಗಳು ಬರುತ್ತಿದ್ದವೊ ಏನೊ. ಅವರು ಇಂದಿಗೂ ಜನಮಾನಸದಲ್ಲಿ ಹಚ್ಚಹಸಿರಾಗಿ ನಿಲ್ಲಲು ಮತ್ತೊಂದು ಕಾರಣ ಅವರ ಮೇರು ವ್ಯಕ್ತಿತ್ವ.
ಸಾಮಾಜಿಕವಾಗಿ ಅನೇಕ ಸೇವೆ ಮಾಡಿದ್ದರೂ ಅವೆಲ್ಲವನ್ನೂ ಎಂದೂ ಹೇಳಿಕೊಂಡಿರಲಿಲ್ಲ ಈ ನಟ. ಆದರೆ ಅವರ ನೆರವನ್ನು ಪಡೆದ ಜನ ಮಾತ್ರ ಅವರನ್ನು ಮರೆತಿಲ್ಲ. ಇಂಥ ಹಿರಿಯ ನಟನ ಸ್ಮಾರಕ ನಿರ್ಮಾಣ ಇನ್ನೂ ಅತಂತ್ರ ಸ್ಥಿತಿಯಲ್ಲೇ ಇದ್ದು, ಅದು ಬೇಗನೆ ಸಾಕಾರಗೊಳ್ಳಲಿ ಎಂದು ಈ ವೇಳೆ ಆಶಿಸಬೇಕಷ್ಟೆ. ಇವರ ಸ್ಫೂರ್ತಿಯಿಂದ ಒಳ್ಳೆಯ ಚಿತ್ರಗಳು ಮತ್ತಷ್ಟು ಕನ್ನಡದಲ್ಲಿ ಬರಲಿ ಎಂದು ಆಶಿಸಬೇಕಷ್ಟೆ. ಅದು ನಾವು ನಿಜವಾಗಿಯೂ ಇವರಿಗೆ ಸಲ್ಲಿಸುವ ಗೌರವ ಆದೀತು.



ಉಪ್ಪಿಗೂ ಇವತ್ತು ಬರ್ತ್‌ಡೇ:
ವಿಶಿಷ್ಟ ಮ್ಯಾನರಿಸಂನಿಂದ ವಿಭಿನ್ನ ಸಿನಿಮಾಗಳ ಟ್ರೆಂಡ್‌ಅನ್ನೇ ಹುಟ್ಟುಹಾಕಿದ ಉಪೇಂದ್ರ ಅವರಿಗೂ ಇಂದು ಹುಟ್ಟುಹಬ್ಬದ ಸಂಭ್ರಮ. ನಾಳೆ (ಸೆ.19) ಇವರ ಅಭಿನಯದ ಸೂಪರ್ ರಂಗ್ ಚಿತ್ರ ಬಿಡುಗಡೆ ಆಗುತ್ತಿರುವುದು ಇವರ ಅಭಿಮಾನಿಗಳಿಗೆ ಖುಷಿ ಹೆಚ್ಚಾಗಲು ಮತ್ತೊಂದು ಕಾರಣ.

ಈ ಚಿತ್ರದ ಕುರಿತು ಇವರಿಗೆ ತುಂಬ ನಿರೀಕ್ಷೆಗಳಿವೆ. ಚಿತ್ರದಿಂದ ಚಿತ್ರಕ್ಕೆ ಪ್ರೇಕ್ಷಕ ತಮ್ಮನ್ನು ಬೆಳೆಸುತ್ತಲೇ ಬಂದಿದ್ದರಿಂದ, ಸೂಪರ್ ರಂಗನೂ ಸೂಪರ್ ಆಗಿಯೇ ತೆರೆಯ ಮೇಲೆ ಮಿಂಚುತ್ತಾನೆ ಎಂದು ಈ ಉಪ್ಪಿ ಬಲವಾಗಿ ನಂಬಿದ್ದಾರೆ.

ಇಂಥ ವಿಶೇಷ ಸಂದರ್ಭದಲ್ಲಿ ಉಪ್ಪಿ, ಮತ್ತಷ್ಟು ವಿಭಿನ್ನ ಸಿನಿಮಾಗಳನ್ನು ನೀಡಲಿ ಎಂದು ಇವರ ಅಭಿಮಾನಿಗಳು ನಿರೀಕ್ಷಿಸುವುದೂ ಸಹಜವೆ. ಅದನ್ನು ಸಾಕಾರಗೊಳಿಸುವತ್ತ ಉಪ್ಪಿ ಮುಂದೆ ಮುಂದೆ ಸಾಗಲಿ.

No comments:

Post a Comment