Translate in your Language

Saturday, July 29, 2017

ಕನ್ನಡಕ್ಕೊಬ್ಬನೇ ಕೈಲಾಸಂ

ಟಿ ಪಿ ಕೈಲಾಸಂ (1884 - 1946) ರ 133ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ

""ನಕ್ಕು ನಗಿಸುವಾತ ಸಾವಿರ್ಜನಕ್ತ್ರಾತ"" 
."ಕರ್ನಾಟಕ ಪ್ರಹಸನ ಪಿತಾಮಹ". ತ್ಯಾಗರಾಜ ಪರಮಶಿವ ಕೈಲಾಸಂ ಕನ್ನಡದ ಜನರ ಮನ ಮನೆಗಳಲ್ಲಿ ಚಿರಕಾಲ ಉಳಿಯುವ, ಜನಪ್ರಿಯ ಹೆಸರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಆಧುನಿಕ ರಂಗಭೂಮಿಯ ಹರಿಕಾರರೆಂದೇ ಕರೆಯಲ್ಪಟ್ಟ ಇ‌ವರ ಹಾಸ್ಯ ಚಟಾಕಿಗಳು ಇಂದಿಗೂ ಜನರನ್ನು ನಗಿಸುತ್ತಾ ನಲಿಸುತ್ತಾ ಇವೆ. ಕನ್ನಡ ರಂಗಭೂಮಿಯನ್ನು ಸಾಂಪ್ರದಾಯಿಕತೆಯ ಸಂಕೋಲೆಗಳಿಂದ ಹೊರಗೆಳೆದು ತಂದು ಅದಕ್ಕೆ ಹೊಸ ತಿರುವನ್ನು ಆಯಾಮಗಳನ್ನು ತಂದು ಕೊಟ್ಟ ಹಿರಿಮೆ ಅವರದು.

ಬಾಲ್ಯ
ಕೈಲಾಸಂರವರು ತಮಿಳು ಮೂಲದ ಉನ್ನತ ಮಟ್ಟದ ಮನೆತನದಿಂದ ಬಂದವರು. ಅವರ ತಂದೆ ಆಗಿನ ಕಾಲಕ್ಕೆ ಬಹು ದೊಡ್ಡ ಹೆಸರು ಮಾಡಿದ್ದ ಜಸ್ಟಿಸ್ ಪರಮಶಿವ ಅಯ್ಯರ್, ತಾಯಿ ಕಮಲಮ್ಮ. ಬೆಂಗಳೂರಿನಲ್ಲಿ ಹುಟ್ಟಿದ ಕೈಲಾಸಂ ಅವರ ಬಾಲ್ಯ ಜೀವನ ಅತ್ಯಂತ ಶಿಸ್ತಿನಿಂದ ಕಳೆಯಿತು. ವಿದ್ಯಾಭ್ಯಾಸ ನಡೆದುದು ಬೆಂಗಳೂರು, ಮೈಸೂರು, ಹಾಸನಗಳಲ್ಲಿ. ಮೆಟ್ರಿಕ್ಯುಲೇಷನ್ ಪಾಸು ಮಾಡಿದ್ದು ಮದರಾಸಿನ ಹಿಂದು ಹೈಸ್ಕೂಲಿನಲ್ಲಿ.

Saturday, July 1, 2017

ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ದಿನ

ಜುಲೈ 1ರ ದಿನ ‘ಚಾರ್ಟರ್ಡ್ ಅಕೌಂಟೆಂಟ್’ಗಳ ದಿನವೆಂದು ಪರಿಗಣಿತವಾಗಿದೆ. ಜುಲೈ 1, 1949ರಂದು ಸಂವಿಧಾನದಡಿಲ್ಲಿನ ಚಾರ್ಟರ್ಡ್ ಅಕೌಂಟೆಂಟ್ ಕಾಯಿದೆಯ ಪ್ರಕಾರ ‘ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ’ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಈ ಸಂಸ್ಥೆಯು ‘ಐಸಿಎಐ(ICAI)’ ಎಂಬ ಕಿರುರೂಪದಿಂದ ಪ್ರಖ್ಯಾತವಾಗಿದೆ. 

ಚಾರ್ಟರ್ಡ್ ಅಕೌಂಟೆಂಟ್ಗಳು ವೃತ್ತಿಪರ ಸಾಂಸ್ಥಿಕ ಲೆಖ್ಖಪತ್ರ ನಿರ್ವಹಣೆ ಮತ್ತು ಲೆಖ್ಖ ಪರಿಶೋಧಕರಾಗಿ ಈ ಸಂಸ್ಥೆಯ ಮೂಲಕ ಪರಿಣತಿಯನ್ನು ಸಾಧಿಸಿರುತ್ತಾರೆ. ಈ ರೀತಿ ಪರಿಣತಿ ಸಾಧಿಸಿರುವ ಅತೀ ಹೆಚ್ಚು ಸದಸ್ಯತ್ವ ಸಂಖ್ಯೆ ಹೊಂದಿರುವ ದೃಷ್ಟಿಯಿಂದ ಈ ಐಸಿಎಐ ಸಂಸ್ಥೆಯು ‘ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ಸ್‘ ನಂತರದಲ್ಲಿ ವಿಶ್ವದ ತನ್ನ ಇತರ ಸಮಾನೋದ್ದೇಶಿತ ಸಂಸ್ಥೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 

Wednesday, June 21, 2017

ಬ್ಯುಟಿಫುಲ್ ಮನಸಿನ ನೀನಾಸಂ ಸತೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

ನೀನಾಸಂ ಎಂಬ ಸೃಜನಶೀಲರ ಗೂಡು ಹಲವು ಹನ್ನೊಂದು ಪ್ರತಿಭೆಗಳನ್ನು ರಂಗಭೂಮಿಗೆ, ಕಿರುತೆರೆಗೆ ಮತ್ತು ಹಿರಿತೆರೆಗೆ ನೀಡಿದೆ. ನೀನಾಸಂ ಅಶ್ವತ್ಥ್‌ರವರು ಈಗಾಗಲೇ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಏಕಪ್ರಕಾರವಾಗಿ ತೊಡಗಿಸಿಕೊಂಡಿರುವುದು ನಿಮಗೆ ಗೊತ್ತೇ ಇದೆ. ಅವರ ಸಾಲಿಗೆ ಈಗ ಹೊಸದಾಗಿ ಸೇರುತ್ತಿದ್ದಾರೆ ನೀನಾಸಂ ಸತೀಶ್‌. 
ಇತ್ತೀಚಿನ ಅವರ ಚಿತ್ರ "ರಾಕೆಟ್" ಮಕಾಡೆ ಮಲಗಿದ ನಂತರ ಬೇಸರಗೊಂಡಿದ್ದ ಸತೀಶ್ ಅವರಿಗೆ ಮರಳಿ ಚೈತನ್ಯ ನೀಡಿದ್ದು "ಬ್ಯುಟಿಫುಲ್-ಮನಸುಗಳ" ಸಕ್ಸಸ್- ನಂತರ ಚೇತರಿಸಿಕೊಂಡ ಸತೀಶ್‌ "ಮಂಡ್ಯದ ಹುಡುಗರು" ಮತ್ತು ಸ್ವಮೇಕ್ ಚಿತ್ರವಾದ "ಟೈಗರ್ ಗಲ್ಲಿ" ಚಿತ್ರಗಳಲ್ಲಿ ನೀನಾಸಂ ಸತೀಶ್ ಚಿತ್ರದಲ್ಲಿ ಬಿಜಿಯಾಗಿರುವ ಅವರು ಈ ವರ್ಷದ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

ನೀವು ಯೋಗರಾಜ ಭಟ್ಟರ 'ಪಂಚರಂಗಿ' ಚಿತ್ರವನ್ನು ನೋಡಿದ್ದೇ ಆದಲ್ಲಿ, ಕುರುಡ ತಂದೆಯ ಜೊತೆಗೆ ಕಿತ್ತಾಡುವ ಬಸ್‌ ಡ್ರೈವರ್ ಪಾತ್ರವನ್ನು ಗಮನಿಸಿರಬಹುದು. ಈ ಪಾತ್ರವನ್ನು ವಹಿಸಿದ್ದು ಇದೇ ನೀನಾಸಂ ಸತೀಶ್‌. 

Saturday, June 10, 2017

ಬ್ಯಾಡ್ಮಿಂಟನ್ ಸಾಧಕ ಪ್ರಕಾಶ್ ಪಡುಕೋಣೆ ಅವರ 63ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಭಾರತದ ಶ್ರೇಷ್ಠ ಕ್ರೀಡಾಪಟುಗಳ ಸಾಲಿನಲ್ಲಿ ಅತ್ಯಂತ ಪ್ರಮುಖ ಹೆಸರು ನಮ್ಮ ಕರ್ನಾಟಕದವರೇ ಆದ ಪ್ರಕಾಶ್ ಪಡುಕೋಣೆ. ಅವರು ಹುಟ್ಟಿದ್ದು ಜೂನ್ 10, 1955ರಲ್ಲಿ. ಆರು ವರ್ಷದ ಹುಡುಗನಾಗಿದ್ದಾಗಲೇ ಆಡಲು ಪ್ರಾರಂಭಿಸಿದ ಪ್ರಕಾಶ್ ತನ್ನ ಏಳನೇ ವಯಸ್ಸಿನಲ್ಲೇ ಕರ್ನಾಟಕ ಕಿರಿಯರ ಬ್ಯಾಡ್ಮಿಂಟನ್ ಚಾಂಪಿಯನ್. 1971ರ ವೇಳೆಗೆ ತಮ್ಮ ಆಟದಲ್ಲಿ ತೀವ್ರ ಬಿರುಸು ಮತ್ತು ಚಾಣಾಕ್ಷತೆಯನ್ನು ಬೆಳೆಸಿಕೊಂಡ ಪ್ರಕಾಶ್ ಒಂದೇ ವರ್ಷದಲ್ಲಿ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಮತ್ತು ಸೀನಿಯರ್ ಚಾಂಪಿಯನ್ ಎರಡೂ ಆದರು. ಮುಂದೆ ಏಳು ವರ್ಷಗಳ ಕಾಲ ಪ್ರಕಾಶ್ ಪಡುಕೋಣೆ ಅವರೇ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್.
ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ 1978ರ ವರ್ಷದಲ್ಲಿ ಕೆನಾಡದಲ್ಲಿ ನಡೆದ ಕಾಮನ್ ವೆಲ್ತ್ ಸ್ಪರ್ಧೆಗಳಲ್ಲಿ ಜಯಗಳಿಸಿದ ಪ್ರಕಾಶ್ ಪಡುಕೋಣೆ, 1979ರಲ್ಲಿ ಲಂಡನ್ನಿನ ಈವನಿಂಗ್ ಆಫ್ ರಾಯಲ್ ಚಾಂಪಿಯನ್ಸ್, 1980ರಲ್ಲಿ ಸ್ವೀಡಿಶ್ ಚಾಂಪಿಯನ್ ಮತ್ತು ಇವುಗಳಿಗೆಲ್ಲಾ ಕಳಶ ಪ್ರಾಯದಂತೆ ಬ್ಯಾಡ್ಮಿಂಟನ್ ಕ್ರೀಡೆಯ ಶ್ರೇಷ್ಠತೆಯ ಕುರುಹೆಂದು ಪರಿಗಣಿತವಾಗಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದು ಈ ಆಟದಲ್ಲಿ ತಮ್ಮ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ತೋರಿದರು. ಇಂಥಹ ಶ್ರೇಷ್ಠ ಸ್ಪರ್ಧೆಗಳಲ್ಲಿ ಗೆದ್ದ ಪ್ರಥಮ ಭಾರತೀಯರೆಂಬುದು ಪ್ರಕಾಶ್ ಅವರಿಗೂ ನಮ್ಮ ಕನ್ನಡ ನಾಡಿಗೂ ಸಂದಿರುವ ಶ್ರೇಷ್ಠ ಗರಿಮೆಯಾಗಿದೆ.

Monday, April 24, 2017

ಕನ್ನಡದ ವರನಟ ಡಾ. ರಾಜ್ ಕುಮಾರ್ ಅವರ 89ನೇ ಹುಟ್ಟುಹಬ್ಬದ ಶುಭಾಶಯಗಳು !

ಈ ಮಹಾನ್ ನಟ ನಮ್ಮನ್ನಗಲಿ ಈ ಏಪ್ರಿಲ್ 12ಕ್ಕೆ  ಬರೊಬ್ಬರಿ 11 ವರ್ಷಗಳು ದಶಕವೇ ಕಳೆದು ಹೋಗಿವೆ
ರಾಜ್ ಅವರ ಬಂಗಾರದ ಮನುಷ್ಯದಿಂದ ಪ್ರಾರಂಭಗೊಂಡ ಬಹುದಿನಗಳ ಓಟದ ಯಶಸ್ಸಿನ ಸಂಭ್ರಮಗಳು ಮುಂದಿನ ಅವರ ಚಿತ್ರಜೀವನದ ಬಹುತೇಕ ಚಿತ್ರಗಳಿಗೆ ಕೂಡಾ ದೊರಕಿತು.

ಯಶಸ್ಸಿನ ಬರದಲ್ಲಿ ಅದುವರೆಗೆ ಶಿಸ್ತಿಗೆ ಹೆಸರಾಗಿದ್ದ ರಾಜ್ ಚಿತ್ರಗಳು ಅಲ್ಪ ಸ್ವಲ್ಪ ಆಚೆ ಈಚೆ ಹೋಗುವ ಲಕ್ಷಣಗಳನ್ನು ಕೂಡಾ ತೋರತೊಡಗಿತ್ತು.  ಬಹದ್ದೂರ್ ಗಂಡು, ರಾಜಾ ನನ್ನ ರಾಜಾ, ತ್ರಿಮೂರ್ತಿದಂತಹ ಚಿತ್ರಗಳ ಹಾಡುಗಳು ಮತ್ತು  ದೃಶ್ಯಾವಳಿಗಳನ್ನು ಕಂಡಿದ್ದವರಿಗೆ ಅದು ನೆನೆಪಿರುತ್ತದೆ.  ಮುಂದೆ  ಅವರ ಕುಟುಂಬವರ್ಗವೇ ಅವರ ಚಿತ್ರಗಳನ್ನು ನಿರ್ಮಿಸುವ, ಉತ್ತಮ ಕತೆಗಳನ್ನು ಆಯುವ ಮಹತ್ವದ ಕಾಯಕವನ್ನು ಸಹಾ ಮಾಡತೊಡಗಿತು.
1968 ರಲ್ಲಿ ಡಾ. ರಾಜ್ ಮನೆಗೆ ಬಂದ ಅತಿಥಿಗಳಿಗೆ ತಮ್ಮ ಕುಟುಂಬದ ಸದಸ್ಯರನ್ನು ಪರಿಚಯಿಸುವ ಪರಿ ನೋಡಿ ಅವರ ಸರಳತೆಯನ್ನು ನಾವು ಗುರ್ತಿಸಬಹುದು(watch this below Video) 


Sunday, April 23, 2017

ಹಾಸ್ಯ ಚಕ್ರವರ್ತಿ: ಬೀchi !


ಬೀchi  ಯವರ 104ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ !!

ಹುಟ್ಟಿದ ತಕ್ಷಣವೇ ತಂದೆಯನ್ನು ತಿಂದುಕೊಂಡಿತು ಎಂದು ಆ ಮಗುವನ್ನು ಮೂರು ದಿನಗಳ ಕಾಲ ಹಗಲು ಇರುಳು ಹೊರಗೆ ಇಟ್ಟಿದ್ದರಂತೆ. ತಂದೆಯನ್ನು ತಿಂದ ಮಗುವಿಗೆ ಬದುಕಲು ಅರ್ಹತೆ ಇಲ್ಲವೆಂದು. ಆದರೆ ಆ ಮಗು ಸಾಯದೇ ಬದುಕುಳಿಯಿತು. ಒಂದು ವೇಳೆ ಆ ಮಗುವೇನಾದರೂ ಉಳಿಯದೇ ಹೋಗಿದ್ದರೆ ಕನ್ನಡ ಸಾಹಿತ್ಯ ಖಂಡಿತವಾಗಿಯೂ ಬಡವಾಗುತ್ತಿತ್ತು ಎನ್ನುವುದು ನಿರ್ವಿವಾದ.  ಆ ಕಂದ ಬೆಳೆದು ದೊಡ್ಡವನಾದ ಮೇಲೆ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿತು. 'ಹಾಸ್ಯಬ್ರಹ್ಮ', ‘ಕನ್ನಡ ಸಾಹಿತ್ಯದ ಬರ್ನಾರ್ಡ್ ಶಾ’ ಎಂದೆಲ್ಲ ಕರೆಸಿಕೊಂಡಿತು. ಬೀಚಿಯವರು ತಮ್ಮ ಆತ್ಮಕಥೆ ‘ನನ್ನ ಭಯಾಗ್ರಫಿ’ಯಲ್ಲಿ ಇದನ್ನು ಹೇಳಿಕೊಂಡಿದ್ದಾರೆ.

Sunday, April 16, 2017

Today is Charlie Chaplins 128th Birth Day


A Good Day to Recollect his 3 Heart Touching

Statements:


(1) Nothing is Permanent

     in this World,

     not even our    Troubles.











(2) I like Walking in

     the Rain, because

     NoBody can see

     my Tears.

(3) The Most Wasted

      Day in Life is the

      Day in which we

      have not Laughed.



                                                             Read More: ಜಗತ್ತಿನ ಹಾಸ್ಯ ಚಕ್ರವರ್ತಿ ಚಾಪ್ಲಿನ್  !

Tuesday, March 28, 2017

Dr. ವೈ ಜಿ ಪರಮೇಶ್ವರ-ಅವರು ಭಾರತೀಯ ಮೊದಲ ಅಂಧ ವೈದ್ಯ !

ವೈ ಜಿ ಪರಮೇಶ್ವರ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಲ್ಲಂಬೆಳಸೆಯಲ್ಲಿ ಜನಿಸಿದರು . ಅವರು ಭಾರತೀಯ ಮೊದಲ ಅಂಧ ವೈದ್ಯರಾಗಿದ್ದುದು ವಿಶೇಷ.  ಮತ್ತು ವಿಶ್ವದ ಶ್ರೇಷ್ಟ ಅಂಧ ವೈದ್ಯರಲ್ಲಿ ಒಬ್ಬರಾಗಿದ್ದರು, ಅಂಧರಾಗಿದ್ದುಕೊಂಡೂ ವೈದ್ಯ ವೃತ್ತಿಯಲ್ಲಿ ನಿರಂತರ ಸೇವೆ ಮಾಡಿದ   ಸಾಧಕರು ವೈ ಜಿ ಪರಮೇಶ್ವರ 

ಆರಂಭಿಕ ಜೀವನ :
ಡಾ Y.G.Parameshwar ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಲ್ಲಂಬೆಳಸೆ ಯಲ್ಲಿ ಜನಿಸಿದರು. ಅವರು ಕರ್ನಾಟಕ ವಿಶ್ವವಿದ್ಯಾಲಯ ರಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದರು ಆದರೆ ಎಂಬಿಬಿಎಸ್ ನ ಅಂತಿಮ ವರ್ಷದಲ್ಲಿ ಇರುವಾಗ ದುರದ್ಷ್ಟವಶಾತ್ ಅವರು ರೆಟಿನಾದ ರಕ್ತಸ್ರಾವದಿಂದಾಗಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡರು.

Tuesday, March 7, 2017

ಭಾರತ-ಆಸ್ಟ್ರೇಲಿಯ ೨ನೇ ಟೆಸ್ಟ್ ಪಂದ್ಯದ Man of the Match ಕೆ. ಎಲ್. ರಾಹುಲ್"

7ನೇ ಮಾರ್ಚ್ 2017ರ ಬೆಂಗಳೂರಿನಲ್ಲಿ ಆಡಿದ ಭಾರತ-ಆಸ್ಟ್ರೇಲಿಯ ೨ನೇ ಟೆಸ್ಟ್ ಪಂದ್ಯದ
ಮ್ಯಾನ್ ಆಫ಼್ ದಿ ಮ್ಯಾಚ್
 "ಕೆ. ಎಲ್. ರಾಹುಲ್"
ಅವರಿಗೆ ಹಾರ್ಧಿಕ ಅಭಿನಂದನೆಗಳು


ಕೆ. ಎಲ್. ರಾಹುಲ್ – INDIAN ಕ್ರಿಕೆಟ್ ಲೋಕದ ಹೊಸ ಬೆಳಕು



Sunday, March 5, 2017

ಕೆ. ಎಲ್. ರಾಹುಲ್ – INDIAN ಕ್ರಿಕೆಟ್ ಲೋಕದ ಹೊಸ ಬೆಳಕು

ಜನನ:ಕೆ.ಎಲ್.ರಾಹುಲ್ 18 ಎಪ್ರಿಲ್ 1992ರಲ್ಲಿ ಮಂಗಳೂರುನಲ್ಲಿ ಜನಿಸಿದರು. ಪೂರ್ತಿ ಹೆಸರು:ಕಣ್ಣೂರು ಲೋಕೇಶ್ ರಾಹುಲ್, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸುರತ್ಕಲ್‍ನ NITK ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದರು. ಶಿಕ್ಷಣವನ್ನು ಸೈಂಟ್ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.
ಉನ್ನತ ಶಿಕ್ಷಣವನ್ನು ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಮುಗಿಸಿದರು.

2004ರಲ್ಲಿ ನಡೆದ 13ವರ್ಷ ವಯೋಮಿತಿಯ ಮೂರು ಕ್ರಿಕೆಟ್ ಪಂದ್ಯಾಟದ 4 ಇನ್ನಿಂಗ್ಸ್ ನಲ್ಲಿ ರಾಹುಲ್ 650 ರನ್ ಪಡೆದು ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿ ಪಡೆದರು. ಬಳಿಕ ವಿವಿಧ ಕ್ರಿಕೆಟ್ ನಲ್ಲಿ ಆಗವಹಿಸಿ, ಯಶಸ್ವಿಯಾಗಿದ್ದರು.
ಬ್ಯಾಟಿಂಗ್ ಶೈಲಿ:ಬಲಗೈ

Monday, February 20, 2017

ಟಿ.ಎನ್.ಸೀತಾರಾಮ್ ನಿರ್ದೇಶನದ ಸಸ್ಪೆನ್ಸ್ ಚಿತ್ರ `ಕಾಫಿ ತೋಟ'

ಕಿರುತೆರೆಯಲ್ಲಿ ನಿರ್ದೇಶಕ, ನಿರ್ಮಾಪಕ ಹಾಗೂ ಕಲಾವಿದರಾಗಿ ಮನೆಮಾತಾಗಿರುವ ಟಿ.ಎನ್.ಸೀತಾರಾಮ್ ಅವರು ಮತ್ತೆ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಮತದಾನ, ಮೀರಾ ಮಾಧವ, ರಾಘವ ಚಿತ್ರಗಳ ನಂತರ ಕಿರುತೆರೆಯಲ್ಲಿ ಬ್ಯೂಸಿಯಾಗಿದ್ದ ಟಿಎನ್‍ಎಸ್ ಈಗ ಮತ್ತೊಂದು ಸಸ್ಪೆನ್ಸ್ ಕಥಾನಕವನ್ನು ಹೊತ್ತು ಹಿರಿತೆರೆಗೆ ಬರುತ್ತಿದ್ದಾರೆ. ಟಿಎನ್‍ಎಸ್ ಅವರ ನಿರ್ದೇಶನದ ಮೂರನೇ ಸಿನಿಮಾ ಕಾಫಿ ತೋಟ ಕಳೆದ ಶುಕ್ರವಾರ ಅದ್ದೂರಿಯಾಗಿ ಸೆಟ್ಟೇರಿದೆ. ಒಬ್ಬ ಲಾಯರ್, ಇನ್ನೊಬ್ಬ ಕಾಫಿ ಎಸ್ಟೇಟ್ ಮಾಲೀಕ, ಅವನ ಮಗಳು ಹೀಗೆ ಒಂದು ತ್ರಿಕೋನ ಪ್ರೇಮಕಥೆಯಂತೆ ಭಾಸವಾಗುವ ಅಂಶಗಳನ್ನು ಸೇರಿಸಿ ಟಿಎನ್‍ಎಸ್ ಕಾಫಿ ತೋಟ ಎಂಬ ಚಿತ್ರವನ್ನು ತೆರೆಮೇಲೆ ತರುತ್ತಿದ್ದಾರೆ. ದಿನಾ ಬೆಳಿಗ್ಗೆ ಎಲ್ಲರೂ ಕುಡಿಯುವ ಕಾಫಿ ತುಂಬ ಇಷ್ಟದ ಸಂಗತಿ. ಅದರ ಪರಿಮಳವೇ ಆಹ್ಲಾದಕರವಾದದ್ದು. ಎಲ್ಲರಿಗೂ ಅದು ತುಂಬ ಪರಿಚಿತವಾಗಿರುತ್ತದೆ.

Wednesday, January 11, 2017

ರಾಹುಲ್ ದ್ರಾವಿಡ್ 45ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ರಾಹುಲ್ ಶರದ್ ದ್ರಾವಿಡ್ (ಜನನ: ಜನವರಿ 11, 1973) - ಭಾರತ ಕ್ರಿಕೆಟ್ ತಂಡದ ಆಟಗಾರರಲ್ಲೊಬ್ಬರು ಮತ್ತು ತಂಡದ ಮಾಜಿ ನಾಯಕ. ಮದ್ಯಪ್ರದೇಶ ಮೂಲದವರಾದ ದ್ರಾವಿಡ್ ಪೂರ್ಣ ಕನ್ನಡಿಗರು. ಟೆಸ್ಟ್ ಪಂದ್ಯಗಳಲ್ಲಿ 10,000೦ಕ್ಕೂ ಅಧಿಕ ರನ್ನುಗಳನ್ನು ಗಳಿಸುವುದರಲ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ನಂತರ ಮೂರನೇಯ ಭಾರತೀಯ. ಫೆಬ್ರುವರಿ 14, 2007 ರಂದು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 10,000ಕ್ಕೂ ಅಧಿಕ ರನ್ನುಗಳನ್ನು ಗಳಿಸಿದ ವಿಶ್ವದಲ್ಲಿ ೬ನೇ ಆಟಗಾರ,ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ನಂತರ ಮೂರನೇ ಭಾರತೀಯ. ಇವರು ಅಕ್ಟೋಬರ್ 2005 ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕನಾಗಿ, ಸೆಪ್ಟೆಂಬರ್ 2007 ರಲ್ಲಿ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ರಾಹುಲ್ ಡ್ರಾವಿಡ್ ಭಾರತೀಯ ಪ್ರಿಮಿಯರ್ ಲೀಗ್ ನ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ 2 ವರ್ಷ್ 'ಐಕಾನ್ ಆಟಗಾರ'ನಾಗಿ ಆಡಿ, ಈಗ ಜೈಪೂರದ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.