Translate in your Language

Friday, September 18, 2015

ವಿಷ್ಣುವರ್ಧನ್ ಅವರ 67ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಸಂಪಿಗೆ ಮೂಗಿನ ಸ್ಪುರದ್ರೂಪಿ ನಟ  ವಿಷ್ಣುವರ್ಧನ್ ನಮ್ಮ ಕಾಲಮಾನದ ಯುವಕ ಯುವತಿಯರಿಗೆ ಮೋಡಿ ಮಾಡಿದ ನಾಯಕನಟ.    ಸೆಪ್ಟೆಂಬರ್ 18, 1950,
ಅವರು ಹುಟ್ಟಿದ ದಿನ.  
ಚಿತ್ರರಂಗದಲ್ಲಿ  ತಮ್ಮ ಸೌಂಧರ್ಯ,  ಕೆಲವೊಂದು ವಿಶಿಷ್ಟ ಪಾತ್ರಗಳು ಮತ್ತು ಶಿಸ್ತಿನ ಕಾರ್ಯನಿರ್ವಹಣೆಗೆ ಅವರು ಹೆಸರಾಗಿದ್ದವರು.  ಚಿತ್ರರಂಗವೆಂಬ ಬಹುದೊಡ್ಡ ಸಾಗರದಲ್ಲಿ ಅನೇಕ ಜನ ತಮ್ಮ ಪ್ರತಿಭೆ ಮತ್ತು ಇನ್ನಿತರ ಸಾಮರ್ಥ್ಯಗಳಿಂದ ಹೆಸರು ಮಾಡಿದ್ದಾರೆ.  ಆದರೆ ಕೆಲವೊಂದು ಕಲಾವಿದರು ಯಾವುದೇ ರೀತಿಯ ಪ್ರಮುಖ ಪಾತ್ರಕ್ಕೂ ಹೊಂದಬಲ್ಲ  ವರ್ಚಸ್ಸನ್ನು ತಮಗೆ ಸ್ವಾಭಾವಿಕವೋ ಎಂಬಂತೆ  ಹೊತ್ತು ತಂದಂತಿರುತ್ತಾರೆ.    ಇಂತಹ ಕೆಲವೊಂದು ಅಪರೂಪದ ವರ್ಚಸ್ವಿ ಕಲಾವಿದರಲ್ಲಿ ವಿಷ್ಣುವರ್ಧನ್ ಒಬ್ಬರು. 

Tuesday, September 8, 2015

ಕೆ.ಪಿ.ಪೂರ್ಣಚಂದ್ರ ತೇಜಸ್ವಿಅವರ 77ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು 1938 ಸೆಪ್ಟೆಂಬರ್ 8 ರಂದು ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು. ತಂದೆ ಕೆ.ವಿ.ಪುಟ್ಟಪ್ಪ(ಕುವೆಂಪು), ತಾಯಿ ಹೇಮಾವತಿ. ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ ಇವರ ಪೂರ್ಣ ಹೆಸರು. ಶಿವಮೊಗ್ಗ ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಬಿ.ಎ. (ಅನರ‍್ಸ) ಹಾಘೂ ಎಂ.ಎ. ಪದವಿಗಳನ್ನು ಪಡೆದರು. ೧೯೬೬ ನವೆಂಬರ್ ೨೭ ರಂದು ರಾಜೇಶ್ವರಿ ಎಂಬುವರೊಡನೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ತೇಜಸ್ವಿಯವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನೆಲೆಸಿದ್ದರು. ಇವರು ಕೃಷಿಯ ಜೊತೆಗೆ ಸಾಹಿತ್ಯ ಕೃಷಿಯನ್ನು ನಡೆಸಿಕೊಂಡು ಬಂದಿದ್ದರು. 


Friday, September 4, 2015

ಅನಂತನಾಗ್ ಅವರಿಗೆ 68ನೇ ಹುಟ್ಟು ಹಬ್ಬದ ಶುಭಾಶಯಗಳು

ಸ್ಪುರದ್ರೂಪಿ ಸದಾ ಹಸನ್ಮುಖಿಯಾಗಿರುವ ಅನಂತನಾಗ್ ಅವರ 68ನೇ (ಜನನ: 4ನೇ ಸೆಪ್ಟೆಂಬರ್ 1948) ಹುಟ್ಟು ಹಬ್ಬದ ಶುಭಾಶಯಗಳು
ಈಗಿನ ಪೈಪೋಟಿ ಯುಗದಲ್ಲಿಯೂ ಯಾವ ಪಾತ್ರವಾದರೂ ಲೀಲಾಜಾಲವಾಗಿ ನಿಭಾಯಿಸುತ್ತ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ನಿಲ್ಲುವ ಸುಂದರ ನಟ ಅನಂತನಾಗರಕಟ್ಟೆ,