Translate in your Language

Tuesday, June 9, 2015

ಹೊಟ್ಟೆಗೆ ಏನು ತಿನ್ನುತ್ತಾರೆ...?

ಹೀಗೊಂದು ಪ್ರಶ್ನೆ ಕಟ್ಟ ಕಡೆಗೆ ಉಳಿಯುತ್ತದೆ, ಡಿ ಕೆ ರವಿಯವರ ಪ್ರಕರಣದಲ್ಲಿ ಇನ್ನಿಲ್ಲದ ಸುಳ್ಳು ಬರೆದ ಪ್ರಜಾವಾಣಿ, ಕರ್ನಾಟಕದ ಜನತೆಯ ಸಂಪೂರ್ಣ ವಿಶ್ವಾಸ ಕಳೆದುಕೊಂಡಿತು...!
೪೪ ಬಾರಿ ಡಿ ಕೆ ರವಿಯವರು ಒಬ್ಬ ಮಹಿಳಾ ಅಧಿಕಾರಿಗೆ ಕರೆ ಮಾಡಿದ್ದರಂತೆ...! ಹೀಗೆ ಹೇಳಿತ್ತು ಪ್ರಜಾವಾಣಿ....! ಯಾವಾಗ ಸಿ ಬಿ ಐ ಸತ್ಯ ಹೊರಹಾಕಲು ಶುರುವಿಟ್ಟುಕೊಂಡಿತೋ ,ಇವರ ಹಣೆಬರಹ ಒಂದೋಂದಾಗೆ ಬರಲು ಶುರುವಾಗಿದೆ.
ಈಗ ರಾ.ಮಠದ ಶ್ರೀಗಳ ವಿರುದ್ದ ವರದಿಯ ಸರದಿ.
ನೀರಿಗೆ ಇಳಿದ ಮೇಲೆ ಛಳಿಯೇನು ಮಳೆಯೇನು..? ವಿಶ್ವಾಸಾರ್ಹತೆ ಮಣ್ಣುಪಾಲಾದ ಮೇಲೆ ಗೌರವದ ಹಂಗೆನು...? ಹಾಗೊಂದು ಮನಸ್ತಿತಿಗೆ ಪ್ರಜಾವಾಣಿ ಬಂದು ನಿಂತಿದೆ...! ಇನ್ನಿಲ್ಲದ ಅಪಸವ್ಯಗಳ ಬರೆಯುತ್ತಿದೆ, ಸತ್ಯದ ತಲೆ ಮೇಲೆಯೇ ಪ್ರಹಾರ...!
ನಡೆದಿದ್ದು ಇಷ್ಟು ...
ರಾಮಚಂದ್ರಾಪುರ ಮಠದ ಶ್ರೀಗಳು , ಕೊಲ್ಲೂರಿನ ಮೂಕಾಂಬಿಕೆಗೆ ಸಲ್ಲಿಸುವ ಪೂಜೆಗೆ ತಡೆ ಒಡ್ಡುವಂತೆ ಶೃಂಗೇರಿ ಸ್ವಾಮಿಗಳು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು, ಸಂವಿಧಾನದ ಆಶಯದಂತೆ ನೆಡೆಯಬೇಕಾದ ಸರ್ಕಾರ ,ಎಲ್ಲಾ ಕಾನೂನಾತ್ಮಕ ಅಂಶಗಳ ಬದಿಗೊತ್ತಿ, ತಡೆ ನೀಡಿತ್ತು, ಆದರೆ ಇದನ್ನು ಪ್ರಶ್ನಿಸಿ ಕೊಲ್ಲೂರಿನ ಅರ್ಚಕ ಉಡುಪಿ ನ್ಯಾಯಲಯದಲ್ಲಿ, ಸರ್ಕಾರಿ ಆಜ್ನೆಗೆ ತಡೆ ತಂದರೆ, ಅದೇ ಸಮಯದಲ್ಲಿ ಕಾಂತರಾಜ್ ಎಂಬುವವರು ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ, ಮಠದ ಅಧಿಕೃತ ವ್ಯಕ್ತಿ ಅಲ್ಲ ಎಂಬ ಕಾರಣಕ್ಕೆ ವಜಾಗೊಂಡಿತು. ಸ್ವತಃ ಸ್ವಾಮೀಜಿಯವರು, ಅಥವಾ ಅಧಿಕೃತ ವ್ಯಕ್ತಿಗಳು ಅರ್ಜಿ ಸಲ್ಲಿಸಿದರೆ ಪರಿಶೀಲಿಸಬಹುದು ಎಂದು ಹೇಳಿತು.
ಆದರೇ ಇವನ್ನೆಲ್ಲಾ ಮುಚ್ಚಿಟ್ಟು ಪ್ರಜಾವಾಣಿ ತನ್ನದೇ ಹೊಸಕತೆ ಬರೆದಿದೆ....! ಡಿ ಕೆ ರವಿಯವರ ಬಗ್ಗೆ ಬರದಂತೆ....!
ಅರ್ಧ ಶತಮಾನ ಇತಿಹಾಸ ಇರುವ ಪತ್ರಿಕೆಯ ಗೌರವವನ್ನು ನಾಮಾರ್ಧಗೊಳಿಸಿದ್ದಾರೆ...!
-ಪ್ರಶಾಂತ್ ಹೆಗಡೆ

No comments:

Post a Comment