![]() |
P Sheshadri |
ಶೇಷಾದ್ರಿ ಅವರು ಹುಟ್ಟಿದ್ದು ತುಮಕೂರು ಜಿಲ್ಲೆ ದಂಡಿನಶಿವರದಲ್ಲಿ 1963 ನವೆಂಬರ್ 23ರಂದು.
ಇವರು ಈಗಾಗಲೇ ಏಳು ಚಿತ್ರಗಳನ್ನು ನಿರ್ದೇಶಿಸಿದ್ದು, ಈ ಏಳೂ ಚಿತ್ರಗಳೂ ರಾಷ್ಟ್ರಪ್ರಶಸ್ತಿ ಪಡೆದಿವೆ.
‘ಮುನ್ನುಡಿ' ಪಿ. ಶೇಷಾದ್ರಿ ಅವರು ನಿರ್ದೇಶಿಸಿದ ಮೊದಲ ಚಲನಚಿತ್ರ. 2000ದ ಇಸವಿಯಲ್ಲಿ ತೆರೆಗೆ ಬಂದ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಬಹು ಚರ್ಚಿತವಾದ ಚಿತ್ರ. ರಾಷ್ಟ್ರಮಟ್ಟದಲ್ಲಿ ಎರಡು, ರಾಜ್ಯಮಟ್ಟದಲ್ಲಿ ಆರು ಪ್ರಶಸ್ತಿಗಳನ್ನು ಪಡೆದು, ಹಲವಾರು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಯಿತು.
ಮರುವರ್ಷವೇ ಬಂದ ಪ್ರಕಾಶ್ ರೈ ಅಭಿನಯದ `ಅತಿಥಿ' ಮತ್ತೊಮ್ಮೆ ರಾಷ್ಟ್ರಪ್ರಶಸ್ತಿ ಪಡೆಯಿತು.
2004ರಲ್ಲಿ ಬಂದ `ಬೇರು' ಮೂರನೇ ರಾಷ್ಟ್ರಪ್ರಶಸಿ ಪಡೆದು, ಸತತ ಮೂರು ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ಎಂಬ ಖ್ಯಾತಿಗೆ ಕಾರಣವಾಯಿತು. ನಂತರ 2005ರಲ್ಲಿ ತೆರೆಗೆ ಬಂದ ಜಯಮಾಲ ನಿರ್ಮಾಣದ `ತುತ್ತೂರಿ' ಮಕ್ಕಳ ಚಿತ್ರ ಕೂಡ ರಾಷ್ಟ್ರಪ್ರಶಸ್ತಿ ಪಡೆಯಿತಲ್ಲದೆ, ಜಪಾನ್ ದೇಶದ ಟೋಕಿಯೋ ಚಿತ್ರೋತ್ಸವದಲ್ಲಿ `ಅರ್ಥ್ವಿಷನ್ ಪ್ರಶಸ್ತಿ' ಪಡೆಯಿತು.