Translate in your Language

Monday, November 28, 2011

ನಾನು ಕಂಡಂತೆ ಕಂಬಾರ !

ಚಂದ್ರಶೇಖರ  ಕಂಬಾರ
ನನ್ನ ತಕ್ಷಣದ  ಪ್ರತಿಕ್ರಿಯೆಯಾಗಿ ನಾನು ಹೇಳಿದ್ದು : ಕಂಬಾರ ಕನ್ನಡದ ಒಬ್ಬ ನೈಜ ,ಸಹಜ  ಬರಹಗಾರ .ಕನ್ನಡ  ನುಡಿಯ ಎಲ್ಲ  ಸೂಕ್ಷ್ಮಲಯಗಳನ್ನು ಹಿಡಿದು ಕಾವ್ಯ  ಬರೆಯಬಲ್ಲ  ಒಬ್ ಪ್ರತಿಭಾನ್ವಿತ .ಕಾವ್ಯದಲ್ಲಿ ಸಿಕ್ಕ  ಯಶಸ್ಸು  ಅವರಿಗೆ  ನಾಟಕದಲ್ಲಿ ಸಿಕ್ಕಿಲ್ಲ  ಎಂದು  ನನ್ನ  ಅನಿಸಿಕೆ  ಈ ಪ್ರಶಸ್ತಿಗೆ ಎಲ್ಲ ಬಗೆಯಿಂದಲೂ ಅವರು ಅರ್ಹರು ."
 ಮುಂಭಾರ, ಹಿಂಭಾರ  ಅಲ್ಲ -ಇವನು ಕಂಬಾರ


ನಾನು ಕಂಡಂತೆ  ನನಗೆ ಕಂಡಷ್ಟು -ಚಂದ್ರಶೇಖರ ಪಾಟೀಲ
ಕನ್ನಡಕ್ಕೆ ಎಂಟನೆಯ  ಜ್ಞಾನಪೀಠ ಪ್ರಶಸ್ತಿ ಗೆಳೆಯ ಚಂದ್ರಶೇಖರ  ಕಂಬಾರರಿಗೆ  ಲಭಿಸಿದ  ಸುದ್ಧಿ ನನಗೆ  ತಿಳಿದದ್ದು  ಪತ್ರಕರ್ತ ಮಿತ್ರರಿಂದ.  "ಇದಕ್ಕೆ  ನಿಮ್ಮ ತಕ್ಷಣದ ಪ್ರತಿಕ್ರಿಯೆ  ಏನು?"- ಅಂತ ಅವುರ ಕೇಳಿದಾಗ  ನನಗೆ  ತಕ್ಷಣದ  ಪ್ರತಿಕ್ರಿಯೆ  ಏನು?"-ಅಂತ  ಅವರು ಕೇಳಿದಾಗ  ನನಗೆ  ತಕ್ಷಣ ನೆನಪಾದದ್ದು  :ಕೆಲವು  ವರ್ಷಗಳಹಿಂದೆ ಇದೇ ಪ್ರಶಸ್ತಿ ಯು.ಆರ್.ಅನಂತಮೂರ್ತಿಯವರಿಗೆ  ಬಂದದ್ದು  ಟಿ.ವಿ. ಮೊಲಕ "ಬ್ರೇಕಿಂಗ್ ನ್ಯೂಸ್ "ಆಗಿ  ನನಗೆ ಅಪ್ಪಳಿಸಿದ  ಆ ಸಂಜೆ

Saturday, September 18, 2010

ಮುಗಿಲು ಮುಟ್ಟಿದ ಪುಟ್ಟಜ್ಜಯ್ಯ ಶಿಷ್ಯರ ಆಕ್ರಂದನ

ಗದಗ, ಸೆ. 18, 2010 : ಅಂಧರ ಬಾಳಿನ ಬೆಳಕಾಗಿದ್ದ, ಅನಾಥರ ಪಾಲಿನ ಆಶ್ರಯದಾತನಾಗಿದ್ದ ಎಲ್ಲರ ಮೆಚ್ಚಿನ 'ಪುಟ್ಟಜ್ಜಯ್ಯ' ಪಂಡಿತ ಪುಟ್ಟರಾಜ ಗವಾಯಿ (1914-2010) ಅವರ ಪಾರ್ಥೀವ ಶರೀರದ ಮೆರವಣಿಗೆ ಗದಗ ನಗರದಲ್ಲಿ ಆರಂಭವಾಗಿದೆ. ಇಂದು ಸಂಜೆ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಗವಾಯಿ ಅವರ ಅಂತಿಮ ಸಂಸ್ಕಾರ ನೆರವೇರಲಿದೆ. ಜಿಲ್ಲಾ ಕ್ರೀಡಾಂಗಣದಿಂದ ಬೆಳಿಗ್ಗೆ 11.30ಕ್ಕೆ ಆರಂಭವಾಗಿರುವ ಮೆರವಣಿಗೆ ಊರಿನ ಬೀದಿಬೀದಿ ಸಂಚರಿಸಿ ಸಂಜೆಯ ಹೊತ್ತಿಗೆ ಪುಣ್ಯಾಶ್ರಮ ತಲುಪಲಿದೆ. ದಾರಿಯುದ್ದಕ್ಕೂ ಲಕ್ಷಾಂತರ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಲು ನೆರೆದಿರುವುದು ಮತ್ತು ಶೋಕ ಸಾಗರದಂತಾಗಿರುವುದು ಪ್ರೀತಿಯ ಅಜ್ಜನ ಗೌರಿಶಿಖರದೆತ್ತರದ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಗವಾಯಿಗಳ ಶಿಷ್ಯಕೋಟಿ ಮಾತ್ರವಲ್ಲ, ಅವರನ್ನು ಬಲ್ಲ ಎಲ್ಲರೂ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. 

ಭಕ್ತಾದಿಗಳ ಆಕ್ರಂದನವಂತೂ ಮುಗಿಲು ಮುಟ್ಟಿದೆ. ಹುಯಿಲಗೋಳ ವೃತ್ತ, ಗಾಂಧಿ ವೃತ್ತ, ಜಿಲ್ಲಾ ನ್ಯಾಯಾಲಯ ಮುಖಾಂತರ ಮೆರವಣಿಗೆ ಸಾಗಿ ಪುಣ್ಯಾಶ್ರಮ ತಲುಪಲಿದೆ.